ಆ್ಯಪ್ನಗರ

ಚಿರತೆ ದಾಳಿ: ಯುವಕನಿಗೆ ಗಂಭೀರ ಗಾಯ

ತಾಲೂಕಿನ ರಾಯಸಮುದ್ರ ಗ್ರಾಮದ ಅರಣ್ಯದಂಚಿನಲ್ಲಿ ಕುರಿ ಮತ್ತು ದನಗಳನ್ನು ಮೇಯಿಸಲು ಹೋಗಿದ್ದ ಯುವಕನ ಮೇಲೆ ಚಿರತೆಯೊಂದು ಮಂಗಳವಾರ ಮಧ್ಯಾಹ್ನ ದಾಳಿ ನಡೆಸಿ, ಗಾಯಗೊಳಿಸಿದೆ.

Vijaya Karnataka 3 Oct 2018, 5:00 am
ಕೆ.ಆರ್‌.ಪೇಟೆ: ತಾಲೂಕಿನ ರಾಯಸಮುದ್ರ ಗ್ರಾಮದ ಅರಣ್ಯದಂಚಿನಲ್ಲಿ ಕುರಿ ಮತ್ತು ದನಗಳನ್ನು ಮೇಯಿಸಲು ಹೋಗಿದ್ದ ಯುವಕನ ಮೇಲೆ ಚಿರತೆಯೊಂದು ಮಂಗಳವಾರ ಮಧ್ಯಾಹ್ನ ದಾಳಿ ನಡೆಸಿ, ಗಾಯಗೊಳಿಸಿದೆ.
Vijaya Karnataka Web leopard attack a serious injury to a young man
ಚಿರತೆ ದಾಳಿ: ಯುವಕನಿಗೆ ಗಂಭೀರ ಗಾಯ


ರಾಯಸಮುದ್ರ ಗ್ರಾಮದ ರೈತ ಮಹೇಶ್‌ ಅವರ ಪುತ್ರನಾದ ವಿಜಯ್‌(19) ಗಾಯಾಳು. ಅರಣ್ಯದಂಚಿನಲ್ಲಿರುವ ಜಮೀನಿನಲ್ಲಿ ಚಿರತೆಯು ಕುರಿ ಮೇಲೆ ದಾಳಿ ಮಾಡಲೆತ್ನಿಸಿದಾಗ ತಡೆಯಲು ಮುಂದಾದ ವಿಜಯ್‌ ಮೇಲೆ ದಾಳಿ ನಡೆಸಿದೆ. ಬಲಗೈ, ಬೆನ್ನು ಮತ್ತು ಪಕ್ಕೆಗಳಿಗೆ ಪರಚಿದ್ದು, ಸಾಕು ನಾಯಿಗಳು ಬೊಗಳಲಾರಂಭಿಸಿವೆ. ಇತರೆ ರೈತರು ಸ್ಥಳಕ್ಕೆ ಬರುತ್ತಿದ್ದಂತೆ ಚಿರತೆ ಪರಾರಿಯಾಗಿದೆ. ವಿಜಯ್‌ ಅವರಿಗೆ ಸಾರ್ವಜನಿಕ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ಕೊಡಿಸಿ, ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿನ ಕೆ.ಆರ್‌.ಆಸ್ಪತ್ರೆಗೆ ಕರೆದೊಯ್ಯಲಾಗಿದೆ.

ಆಸ್ಪತ್ರೆಗೆ ಆಗಮಿಸಿದ ಅರಣ್ಯ ಇಲಾಖೆ ಉಪ ಸಂರಕ್ಷ ಣಾಧಿಕಾರಿ ರಾಘವೇಂದ್ರ, ಅರಣ್ಯ ವೀಕ್ಷ ಕ ಮೋಹನ್‌, ಮೇಲುಕೋಟೆ ವನ್ಯಜೀವಿ ಸಂರಕ್ಷ ಣಾ ವಿಭಾಗದ ಅರಣ್ಯ ವೀಕ್ಷ ಕ ಮಿತ್ರಾನಂದ ಗಾಯಾಳು ವಿಜಯ್‌ಗೆ ಧೈರ‍್ಯ ಹೇಳಿದರು. ಆಸ್ಪತ್ರೆಯ ಖರ್ಚನ್ನು ಇಲಾಖೆ ಭರಿಸಲಿದೆ ಎಂದು ಪೋಷಕರಿಗೆ ಭರವಸೆ ನೀಡಿದರು. ರಾಯಸಮುದ್ರದ ಬಳಿ ಬೋನಿರಿಸಿ ಚಿರತೆ ಸೆರೆಗೆ ಕಾರ್ಯಾಚರಣೆ ನಡೆಸುವುದಾಗಿ ತಿಳಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ