ಆ್ಯಪ್ನಗರ

ಚಿರತೆ ದಾಳಿಗೆ ಕರು ಬಲಿ; ಆಕಳ ಸ್ಥಿತಿ ಗಂಭೀರ

ಹಸು ಮತ್ತು ಕರು ಮೇಲೆ ದಾಳಿ ಚಿರತೆ ದಾಳಿ ಮಾಡಿದ ಪರಿಣಾಮ ಕರು ಸಾವನ್ನಪ್ಪಿ, ಹಸು ಗಂಭೀರವಾಗಿ ಗಾಯಗೊಂಡಿರುವ ಘಟನೆ ನಾಗಮಂಗಲ ತಾಲ್ಲೂಕಿನ ಕಲ್ಲಿನಾಥಪುರ ಗ್ರಾಮದಲ್ಲಿ ಸೋಮವಾರ ತಡರಾತ್ರಿ ನಡೆದಿದೆ.

Vijaya Karnataka Web 21 Aug 2018, 11:53 am
ಮಂಡ್ಯ: ಹಸು ಮತ್ತು ಕರು ಮೇಲೆ ದಾಳಿ ಚಿರತೆ ದಾಳಿ ಮಾಡಿದ ಪರಿಣಾಮ ಕರು ಸಾವನ್ನಪ್ಪಿ, ಹಸು ಗಂಭೀರವಾಗಿ ಗಾಯಗೊಂಡಿರುವ ಘಟನೆ ನಾಗಮಂಗಲ ತಾಲ್ಲೂಕಿನ ಕಲ್ಲಿನಾಥಪುರ ಗ್ರಾಮದಲ್ಲಿ ಸೋಮವಾರ ತಡರಾತ್ರಿ ನಡೆದಿದೆ.
Vijaya Karnataka Web Cow


ಹಸು ಮತ್ತು ಕರು ಗ್ರಾಮದ ರಾಮೇಗೌಡ ಎಂಬ ರೈತನಿಗೆ ಸೇರಿದ್ದಾಗಿವೆ. ಎಂದಿನಂತೆ ಕೊಟ್ಟಿಗೆಯಲ್ಲಿ ಕಟ್ಟಿಹಾಕಲಾಗಿದ್ದ ಜಾನುವಾರುಗಳ ಮೇಲೆರಗಿರುವ ಚಿರತೆ ಒಂದನ್ನು ಕೊಂದು ಇನ್ನೊಂದನ್ನು ಗಾಯಗೊಳಿಸಿದೆ.

ಕಳೆದ ಒಂದು ವಾರದಿಂದ ಚಿರತೆ ಆಗಾಗ ಕಾಣಿಸಿಕೊಳ್ಳುತ್ತಿದ್ದು, ಕಲ್ಲಿನಾಥಪುರ ಮತ್ತು ಗುರುಗಳಮಾದಿಹಳ್ಳಿ ಮಾರ್ಗದ ಹಳ್ಳದ ಸಾಲಿನಲ್ಲಿ ವಾಸವಿದೆ ಎಂದು ಗ್ರಾಮಸ್ಥರು ಶಂಕಿಸಿದ್ದಾರೆ.

ಅರಣ್ಯಾಧಿಕಾರಿಗಳಿಗೆ ಸೂಕ್ತ ಸೂಚನೆ ನೀಡುವ ಮೂಲಕ ಶಾಸಕರು ಚಿರತೆಯ ಬಂಧನಕ್ಕೆ ಕ್ರಮ ಕೈಗೊಳ್ಳಬೇಕು. ಈ ಮೂಲಕ ರೈತಾಪಿ ಜನರ ಹಿತ ಕಾಯಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ