ಆ್ಯಪ್ನಗರ

ನಾಗಮಂಗಲ: ಚಿರತೆ ದಾಳಿಗೆ ಬಲಿಯಾಯ್ತು ಹತ್ತು ಕುರಿ

ಚಿರತೆ ದಾಳಿಯಿಂದ 10 ಕುರಿಗಳು ಮೃತಪಟ್ಟಿ ಘಟನೆ ದೇವಲಾಪುರದಲ್ಲಿ ನಡೆದಿದೆ. ಈ ಭಾಗದಲ್ಲಿಆಗಾಗ ಚಿರತೆ ದಾಳಿ ನಡೆಸುತ್ತಿದೆ. ಆದರೆ ಸಂಬಂಧಪಟ್ಟ ಇಲಾಖೆ ಇತ್ತ ಗಮನ ಹರಿಸುತ್ತಿಲ್ಲ ಎಂಬುದು ಗ್ರಾಮಸ್ಥರ ಆರೋಪ

Vijaya Karnataka Web 26 Oct 2019, 3:05 pm
ದೇವಲಾಪುರ/ನಾಗಮಂಗಲ: ಚಿರತೆ ದಾಳಿಯಿಂದ 10 ಕುರಿಗಳು ಮೃತಪಟ್ಟಿದ್ದು, 2 ಕುರಿಗಳನ್ನು ಚಿರತೆ ಹೊತ್ತೊಯ್ದ ಘಟನೆ ತಾಲೂಕಿನ ದೇವಲಾಪುರ ಹೋಬಳಿ ಬೋರಿಕೊಪ್ಪಲಲ್ಲಿನಡೆದಿದೆ.
Vijaya Karnataka Web leopard


ಗ್ರಾಮದ ರೈತ ಸುರೇಶ್‌ ಎಂಬುವರಿಗೆ ಸೇರಿದ ಕುರಿಗಳು ಮೃತಪಟ್ಟಿವೆ. ಗ್ರಾಮದ ಹೊರ ವಲಯದ ಕಬ್ಬಾಳಮ್ಮ ದೇವಾಲಯ ಸಮೀಪವಿದ್ದ ಕುರಿ ಕೊಟ್ಟಿಗೆಗೆ ಗುರುವಾರ ಮಧ್ಯರಾತ್ರಿ ದಾಳಿ ನಡೆಸಿರುವ ಚಿರತೆ ಕೊಟ್ಟಿಗೆಯಲ್ಲಿದ್ದ 10 ಕುರಿಗಳನ್ನು ಸಾಯಿಸಿ, ಎರಡು ಕುರಿಗಳನ್ನು ಹೊತ್ತೊಯ್ದಿದೆ. ಚಿರತೆ ದಾಳಿ ವೇಳೆ ಕೊಟ್ಟಿಗೆಯಲ್ಲಿದ್ದ ಕುರಿಗಳು ಅರಚಲಾರಂಬಿಸಿದ್ದವು. ಇದನ್ನು ಕೇಳಿ ಎಚ್ಚರಗೊಂಡ ಗ್ರಾಮಸ್ಥರು ಬಂದು ನೋಡುವಷ್ಟರಲ್ಲಿ ಹತ್ತು ಕುರಿಗಳು ಮೃತಪಟ್ಟಿದ್ದರು.

ಎರಡು ಕುರಿಗಳು ಮಾಯವಾಗಿದ್ದವು. ಈ ಭಾಗದಲ್ಲಿಆಗಾಗ ಚಿರತೆ ದಾಳಿ ನಡೆಸುತ್ತಿದೆ. ಆದರೆ ಸಂಬಂಧಪಟ್ಟ ಇಲಾಖೆ ಇತ್ತ ಗಮನ ಹರಿಸುತ್ತಿಲ್ಲ. ಇದರಿಂದಾಗಿ ಈ ಭಾಗದ ರೈತರು ಸಾಕಷ್ಟು ಸಮಸ್ಯೆ ಅನುಭವಿಸಬೇಕಾಗಿದೆ ಎಂದು ಗ್ರಾಮಸ್ಥರು ದೂರಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ