ಆ್ಯಪ್ನಗರ

ಚಿರತೆಗಳು ಪ್ರತ್ಯಕ್ಷ: ಬೆಚ್ಚಿದ ಗ್ರಾಮಸ್ಥರು

ವಿಕ ಸುದ್ದಿಲೋಕ ಪಾಂಡವಪುರ ಪಟ್ಟಣದ ವಿಸಿ ಕಾಲನಿಯಲ್ಲಿ ಗುರುವಾರ ಬೆಳಗ್ಗೆ ಎರಡು ಚಿರತೆಗಳು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಸ್ಥಳೀಯ ನಿವಾಸಿಗಳಲ್ಲಿ ಆಂತಕಸೃಷ್ಠಿಯಾಗಿದೆ...

Vijaya Karnataka 5 Oct 2018, 5:00 am
ಪಾಂಡವಪುರ: ಪಟ್ಟಣದ ವಿಸಿ ಕಾಲನಿಯಲ್ಲಿ ಗುರುವಾರ ಬೆಳಗ್ಗೆ ಎರಡು ಚಿರತೆಗಳು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಸ್ಥಳೀಯ ನಿವಾಸಿಗಳಲ್ಲಿ ಆಂತಕಸೃಷ್ಠಿಯಾಗಿದೆ.
Vijaya Karnataka Web leopards attacking fear for pandavapura taluk villagers
ಚಿರತೆಗಳು ಪ್ರತ್ಯಕ್ಷ: ಬೆಚ್ಚಿದ ಗ್ರಾಮಸ್ಥರು


ಪಟ್ಟಣದ ವಿಸಿ ಕಾಲನಿಯ ರಾಮು ಎಂಬುವರ ಮನೆಯಲ್ಲಿ ನಸುಕಿನ ಜಾವ 3.30ರ ಸುಮಾರಿಗೆ ಎರಡು ಚಿರತೆ ಮರಿಗಳು ಕಾಣಿಸಿಕೊಂಡಿವೆ. ಅವನ್ನು ಕಂಡ ನಾಯಿಗಳು ಜೋರಾಗಿ ಕೂಗಿದ ಪರಿಣಾಮ ಏನಾಗಿದೆ ಎಂದು ಜನ ಕಿಟಕಿ ಬಾಗಿಲು ತೆಗೆದು ನೋಡಿದಾಗ ಎರಡು ಚಿರತೆಯ ಮರಿಗಳು ಕಾಣಿಸಿಕೊಂಡಿವೆ ಇದನ್ನು ಕಂಡ ರಾಮು ಮನೆಯವರು ಗಾಬರಿಯಾಗಿದ್ದಾರೆ.

ಇತ್ತೀಚಿನ ದಿನಗಳಲ್ಲಿ ಚಿರತೆಯ ಹಾವಳಿ ಹೆಚ್ಚಾಗಿವೆ, ಅಕ್ಕಪಕ್ಕದಲ್ಲಿ ಕಬ್ಬಿನಗದ್ದೆಗಳು ಹೆಚ್ಚಾಗಿರುವುದರಿಂದ ಚಿರತೆಗಳು ಆಗಿಂದಾಗ್ಗೆ ಪ್ರತ್ಯಕ್ಷ ಗೊಳ್ಳುತ್ತಿವೆ ಇದರಿಂದ ಸ್ಥಳೀಯರಲ್ಲಿ ಆತಂಕ ಹೆಚ್ಚಾಗಿದ್ದು ಸಂಬಂಧಪಟ್ಟ ಅರಣ್ಯಾಧಿಕಾರಿಗಳು ಬೋನ್‌ಗಳನ್ನು ಇಟ್ಟು ಚಿರತೆಗಳ ಸೆರೆಗೆ ಮುಂದಾಗಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ