ಮಂಡ್ಯ/ಕೆ.ಆರ್.ಪೇಟೆ: ಅನುದಾನ ನೀಡಿಕೆ ಬಗ್ಗೆ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಮಂಡ್ಯ ಜನರಿಗೆ ತಪ್ಪು ಮಾಹಿತಿ ನೀಡುತ್ತಿದ್ದು, ಈ ಬಗ್ಗೆ ದಾಖಲೆ ನೀಡಲಿ ಎಂದು ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಷ್ ಆಗ್ರಹಿಸಿದರು.
ಕೆ.ಆರ್.ಪೇಟೆ ಪಟ್ಟಣದ ಅಗ್ರಹಾರ ಬಡಾವಣೆಯಲ್ಲಿ ಶುಕ್ರವಾರ ರಾತ್ರಿ ಪ್ರಚಾರ ಮಾಡಿದ ಅವರು, ''5500 ಕೋಟಿ ರೂ. ವೆಚ್ಚದ ಕಾಮಗಾರಿಗಳಿಗೆ ಚಾಲನೆ ನೀಡಿರುವ ಸಿಎಂ ಕುಮಾರಸ್ವಾಮಿ ಆ ಕಾಮಗಾರಿಗಳನ್ನು ಬಜೆಟ್ನಲ್ಲಿ ಸೇರಿಸಿದ್ದರೆ ಅದನ್ನು ದಾಖಲೆ ಸಹಿತ ಬಿಡುಗಡೆ ಮಾಡಲಿ,'' ಎಂದು ಸವಾಲು ಹಾಕಿದರು.
''ಕುಮಾರಸ್ವಾಮಿ ಅವರ ಅದೃಷ್ಟ, ಮಂಡ್ಯ ಜಿಲ್ಲೆಯಲ್ಲೇ ಒಬ್ಬರೇ ಒಬ್ಬ ಪ್ರತಿಪಕ್ಷದ ಶಾಸಕರಿಲ್ಲ. ಹೀಗಾಗಿ ಅವರು ಹೇಳಿದ್ದೇ ಆಟವಾಗಿದೆ. ಹೀಗಾಗಿ ನನ್ನ ಪ್ರಶ್ನೆಗೆ ಸ್ಪಷ್ಟವಾಗಿ ಉತ್ತರ ಕೊಡಬೇಕು. ಇಲ್ಲದಿದ್ದರೆ 5500 ಕೋಟಿ ರೂ. ಅನುದಾನ ನೀಡಲಾಗಿದೆ ಎಂಬ ಮಾತುಗಳನ್ನು ಪ್ರಚಾರದಲ್ಲಿ ಹೇಳುವುದನ್ನು ನಿಲ್ಲಿಸಬೇಕು. ಇದು ಮಂಡ್ಯ ಜಿಲ್ಲೆಯ ಜನರ ಪರವಾಗಿ ನನ್ನ ಒತ್ತಾಯ,'' ಎಂದು ಹೇಳಿದರು.
ಇದೇ ವೇಳೆ ನೆರೆದಿದ್ದ ಮಹಿಳೆಯರನ್ನು ಉದ್ದೇಶಿಸಿದ ಮಾತನಾಡಿದ ಸುಮಲತಾ ಅವರು, ''ಸಾಲ ಮನ್ನಾ ಬಗ್ಗೆ ಸಿಎಂ ಕುಮಾರಸ್ವಾಮಿ ಸ್ಪಷ್ಟ ಮಾಹಿತಿ ನೀಡುತ್ತಿಲ್ಲ. ನೀವೇ ಹೇಳಿ? ನಿಮ್ಮಲ್ಲಿ ಎಷ್ಟು ಮಂದಿ ಮಹಿಳೆಯ ಸಾಲ ಮನ್ನಾ ಆಗಿದೆ. ಎಷ್ಟು ಸ್ತ್ರೀಶಕ್ತಿ ಸ್ವಸಹಾಯ ಸಂಘಗಳಿಗೆ ಸಾಲ ಮನ್ನಾ ಹಣ ಬಿಡುಗಡೆಯಾಗಿದೆ. ವಯಸ್ಸಾದವರಿಗೆ ಪ್ರತಿ ತಿಂಗಳು 6000 ರೂ. ಪಿಂಚಣಿ ಬರುತ್ತಿದೆಯೇ? ಇಂತಹ ಸುಳ್ಳುಗಾರರಿಗೆ ನೀವು ಮತ ನೀಡುವುದು ಸರಿಯೇ,'' ಎಂದು ಪ್ರಶ್ನಿಸಿದರು.
ಕೆ.ಆರ್.ಪೇಟೆ ಪಟ್ಟಣದ ಅಗ್ರಹಾರ ಬಡಾವಣೆಯಲ್ಲಿ ಶುಕ್ರವಾರ ರಾತ್ರಿ ಪ್ರಚಾರ ಮಾಡಿದ ಅವರು, ''5500 ಕೋಟಿ ರೂ. ವೆಚ್ಚದ ಕಾಮಗಾರಿಗಳಿಗೆ ಚಾಲನೆ ನೀಡಿರುವ ಸಿಎಂ ಕುಮಾರಸ್ವಾಮಿ ಆ ಕಾಮಗಾರಿಗಳನ್ನು ಬಜೆಟ್ನಲ್ಲಿ ಸೇರಿಸಿದ್ದರೆ ಅದನ್ನು ದಾಖಲೆ ಸಹಿತ ಬಿಡುಗಡೆ ಮಾಡಲಿ,'' ಎಂದು ಸವಾಲು ಹಾಕಿದರು.
''ಕುಮಾರಸ್ವಾಮಿ ಅವರ ಅದೃಷ್ಟ, ಮಂಡ್ಯ ಜಿಲ್ಲೆಯಲ್ಲೇ ಒಬ್ಬರೇ ಒಬ್ಬ ಪ್ರತಿಪಕ್ಷದ ಶಾಸಕರಿಲ್ಲ. ಹೀಗಾಗಿ ಅವರು ಹೇಳಿದ್ದೇ ಆಟವಾಗಿದೆ. ಹೀಗಾಗಿ ನನ್ನ ಪ್ರಶ್ನೆಗೆ ಸ್ಪಷ್ಟವಾಗಿ ಉತ್ತರ ಕೊಡಬೇಕು. ಇಲ್ಲದಿದ್ದರೆ 5500 ಕೋಟಿ ರೂ. ಅನುದಾನ ನೀಡಲಾಗಿದೆ ಎಂಬ ಮಾತುಗಳನ್ನು ಪ್ರಚಾರದಲ್ಲಿ ಹೇಳುವುದನ್ನು ನಿಲ್ಲಿಸಬೇಕು. ಇದು ಮಂಡ್ಯ ಜಿಲ್ಲೆಯ ಜನರ ಪರವಾಗಿ ನನ್ನ ಒತ್ತಾಯ,'' ಎಂದು ಹೇಳಿದರು.
ಇದೇ ವೇಳೆ ನೆರೆದಿದ್ದ ಮಹಿಳೆಯರನ್ನು ಉದ್ದೇಶಿಸಿದ ಮಾತನಾಡಿದ ಸುಮಲತಾ ಅವರು, ''ಸಾಲ ಮನ್ನಾ ಬಗ್ಗೆ ಸಿಎಂ ಕುಮಾರಸ್ವಾಮಿ ಸ್ಪಷ್ಟ ಮಾಹಿತಿ ನೀಡುತ್ತಿಲ್ಲ. ನೀವೇ ಹೇಳಿ? ನಿಮ್ಮಲ್ಲಿ ಎಷ್ಟು ಮಂದಿ ಮಹಿಳೆಯ ಸಾಲ ಮನ್ನಾ ಆಗಿದೆ. ಎಷ್ಟು ಸ್ತ್ರೀಶಕ್ತಿ ಸ್ವಸಹಾಯ ಸಂಘಗಳಿಗೆ ಸಾಲ ಮನ್ನಾ ಹಣ ಬಿಡುಗಡೆಯಾಗಿದೆ. ವಯಸ್ಸಾದವರಿಗೆ ಪ್ರತಿ ತಿಂಗಳು 6000 ರೂ. ಪಿಂಚಣಿ ಬರುತ್ತಿದೆಯೇ? ಇಂತಹ ಸುಳ್ಳುಗಾರರಿಗೆ ನೀವು ಮತ ನೀಡುವುದು ಸರಿಯೇ,'' ಎಂದು ಪ್ರಶ್ನಿಸಿದರು.