ಆ್ಯಪ್ನಗರ

ಚಂದ್ರಗ್ರಹಣ: ಮೇಲುಕೋಟೆಯಲ್ಲಿ ಪೂಜಾ ಕೈಂಕರ್ಯ ರದ್ದು

ಮೇಲುಕೋಟೆಯಲ್ಲಿ ಪೂಜಾ ಕೈಂಕರ್ಯ ರದ್ದು ವಿಕ ಸುದ್ದಿಲೋಕ ಮೇಲುಕೋಟೆ ರಕ್ತಚಂದನ ಚಂದ್ರಗ್ರಹಣದ ಅಂಗವಾಗಿ ಚೆಲುವನಾರಾಯಣಸ್ವಾಮಿ ಮತ್ತು ಯೋಗನರಸಿಂಹಸ್ವಾಮಿ ದೇವಾಲಯದಲ್ಲಿ ಶುಕ್ರವಾರ ...

Vijaya Karnataka 27 Jul 2018, 5:00 am
ಮೇಲುಕೋಟೆ: ರಕ್ತಚಂದನ ಚಂದ್ರಗ್ರಹಣದ ಅಂಗವಾಗಿ ಚೆಲುವನಾರಾಯಣಸ್ವಾಮಿ ಮತ್ತು ಯೋಗನರಸಿಂಹಸ್ವಾಮಿ ದೇವಾಲಯದಲ್ಲಿ ಶುಕ್ರವಾರ ರಾತ್ರಿ ಪೂಜಾ ಕೈಂಕರ್ಯ ಇರುವುದಿಲ್ಲ .
Vijaya Karnataka Web lunar eclipse canceling the worship of the worship at malukote
ಚಂದ್ರಗ್ರಹಣ: ಮೇಲುಕೋಟೆಯಲ್ಲಿ ಪೂಜಾ ಕೈಂಕರ್ಯ ರದ್ದು


ಸೂರ್ಯಾಸ್ತವಾಗಿ ಚಂದ್ರೋದಯವಾಗುವ ಮುನ್ನವೇ ದೇವಾಲಯದ ಬಾಗಿಲುಗಳು ಬಂದ್‌ ಆಗಲಿದ್ದು, ಇಡೀ ದಿನದ ಕಾರ್ಯಕ್ರಮಗಳು ಸಂಜೆ 6.30ರ ವೇಳೆಗೆ ಮುಕ್ತಾಯವಾಗಲಿದೆ. ನಂತರ ಚಂದ್ರೋದಯವಾಗಲಿದ್ದು, ರಾತ್ರಿ ನಡೆಯಬೇಕಿದ್ದ ಉಯ್ಯಾಲೋತ್ಸವ ಮತ್ತು ಕೃಷ್ಣರಾಜಮುಡಿ ಜಾತ್ರಾ ಮಹೋತ್ಸವದ ಅಂಕುರಾರ್ಪಣೆ ಕಾರ್ಯಕ್ರಮಗಳು ಸಂಜೆಯೇ ನಡೆಯಲಿದೆ.
ಚಂದ್ರಗ್ರಹಣ ಮುಕ್ತಾಯವಾಗಿ ಮರುದಿನದ ಸೂರ್ಯೋದಯವಾದ ನಂತರ ಬೆಳಗ್ಗೆ 7.30ಕ್ಕೆ ಚೆಲುವನಾರಾಯಣಸ್ವಾಮಿ ಮತ್ತು ರಾಮಾನುಜಾಚಾರ್ಯರಿಗೆ ಅಭಿಷೇಕ ನಡೆದು ಗ್ರಹಣಶಾಂತಿ ಪರಿಹಾರ ನೆರವೇರುತ್ತದೆ ಎಂದು ಯತಿರಾಜದಾಸರ್‌ ಸ್ಥಾನೀಕ ಶ್ರೀನಿವಾಸನರಸಿಂಹನ್‌ ಗುರೂಜಿ ತಿಳಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ