ಆ್ಯಪ್ನಗರ

ಮದ್ದೂರು: 85 ಮಂದಿ ಸ್ಪರ್ಧಾ ಕಣದಲ್ಲಿ

ಜೆಡಿಎಸ್‌ ಅಭ್ಯರ್ಥಿ ಪ್ರಸನ್ನಕುಮಾರ್‌ ಅವಿರೋಧ ಆಯ್ಕೆ ಸಂಭವ ವಿಕ ಸುದ್ದಿಲೋಕ ಮದ್ದೂರು ಆ...

Vijaya Karnataka 21 Aug 2018, 5:00 am
ಜೆಡಿಎಸ್‌ ಅಭ್ಯರ್ಥಿ ಪ್ರಸನ್ನಕುಮಾರ್‌ ಅವಿರೋಧ ಆಯ್ಕೆ ಸಂಭವ
Vijaya Karnataka Web maddur purasabhe election 85 contestants
ಮದ್ದೂರು: 85 ಮಂದಿ ಸ್ಪರ್ಧಾ ಕಣದಲ್ಲಿ


ಮದ್ದೂರು : ಆ.31ರ ಶುಕ್ರವಾರ ನಡೆಯಲಿರುವ ಪುರಸಭೆ ಚುನಾವಣೆ ಹಿನ್ನೆಲೆಯಲ್ಲಿ ಚುನಾವಣಾಧಿಕಾರಿಗಳು ಸೋಮವಾರ ಅಭ್ಯರ್ಥಿಗಳ ನಾಮಪತ್ರ ಪರಿಶೀಲಿಸಿದರು.

ಪಟ್ಟಣದ ಪುರಸಭೆ ಸಿಡಿಎಸ್‌ ಭವನ, ತಾ.ಪಂ. ಹಾಗೂ ಲೋಕೋಪಯೋಗಿ ಇಲಾಖೆಯ ಮೂರು ಕೇಂದ್ರಗಳಲ್ಲಿ ಚುನಾವಣಾಧಿಕಾರಿಗಳು ನಾಮಪತ್ರಗಳನ್ನು ಪರಿಶೀಲನೆ ನಡೆಸಿದರಲ್ಲದೇ 91 ಅಭ್ಯರ್ಥಿಗಳ ಪೈಕಿ 5 ಮಂದಿ ಅಭ್ಯರ್ಥಿಗಳ ನಾಮಪತ್ರ ತಿರಸ್ಕೃತಗೊಂಡು ವಾರ್ಡ್‌ 20 ಕಾಂಗ್ರೆಸ್‌ ಪಕ್ಷ ದ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಅರುಣ್‌ಕುಮಾರ್‌ ತಮ್ಮ ನಾಮಪತ್ರ ವಾಪಸ್‌ ಪಡೆದು ಒಟ್ಟು 85 ಮಂದಿ ಅಭ್ಯರ್ಥಿಗಳು ಕಣದಲ್ಲಿದ್ದಾರೆ.

ಆ.23ರ ಗುರುವಾರ ನಾಮಪತ್ರ ವಾಪಸಿಗೆ ಕಡೇ ದಿನವಾಗಿದ್ದು, ಅಂದು ಅಂತಿಮವಾಗಿ ಕಣದಲ್ಲಿ ಉಳಿಯುವ ಅಭ್ಯರ್ಥಿಗಳ ಪಟ್ಟಿಯನ್ನು ಪ್ರಕಟಿಸುವುದಾಗಿ ಚುನಾವಣಾಧಿಕಾರಿ ಶಿವಪ್ಪ ಪತ್ರಿಕೆಗೆ ತಿಳಿಸಿದ್ದಾರೆ.

ಅವಿರೋಧ ಆಯ್ಕೆ : ಮದ್ದೂರು ಪುರಸಭೆ ಇತಿಹಾಸದಲ್ಲೇ ಇದೇ ಪ್ರಥಮ ಬಾರಿಗೆ ವಾರ್ಡ್‌ 20ರ ಜೆಡಿಎಸ್‌ ಅಭ್ಯರ್ಥಿ ಟಿ.ಆರ್‌.ಪ್ರಸನ್ನಕುಮಾರ್‌ ಅವಿರೋಧವಾಗಿ ಆಯ್ಕೆಯಾಗುವುದು ಬಹುತೇಕ ಖಚಿತವಾಗಿದೆ.

ವಾರ್ಡ್‌ 20ರ ಪ್ರತಿಸ್ಪರ್ಧಿ ಕಾಂಗ್ರೆಸ್‌ ಅಭ್ಯರ್ಥಿ ಅರುಣ್‌ಕುಮಾರ್‌ ನಾಮಪತ್ರ ಪರಿಶೀಲನೆ ದಿನದಂದೇ ತಮ್ಮ ಉಮೇದುವಾರಿಕೆಯನ್ನು ವಾಪಸ್‌ ಪಡೆದು ಕಣದಲ್ಲಿ ಉಳಿದಿರುವ ಏಕೈಕ ಜೆಡಿಎಸ್‌ ಅಭ್ಯರ್ಥಿ ಟಿ.ಆರ್‌.ಪ್ರಸನ್ನ ಅವರ ಅವಿರೋಧ ಆಯ್ಕೆ ಪ್ರಕಟಣೆ ಬಾಕಿ ಉಳಿದಿದೆ.

ನಾಮಪತ್ರ ವಾಪಸಿಗೆ ಅಂತಿಮ ದಿನವಾದ ಆ.23ರ ಗುರುವಾರದ ಅಂತ್ಯಕ್ಕೆ ಅವಿರೋಧ ಆಯ್ಕೆಯನ್ನು ಪ್ರಕಟಿಸುವುದಾಗಿ ಚುನಾವಣಾಧಿಕಾರಿ ಭಾನು ಪತ್ರಿಕೆಗೆ ತಿಳಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ