ಮದ್ದೂರು: ವರ್ಷದಿಂದೀಚೆಗೆ 40ಕ್ಕೂ ಹೆಚ್ಚು ಕೊಳವೆ ಬಾವಿ ಕೊರೆದರೂ ಕುಡಿಯುವ ನೀರಿಲ್ಲ. ಮಳೆಗಾಲ ಬಂದರೂ ನೀಗದ ನೀರಿನ ಸಮಸ್ಯೆ, ಕೊಡ ಹೊತ್ತು ಪಂಪ್ಸೆಟ್ಗಳತ್ತ ಮುಖ ಮಾಡಬೇಕಾದ ಸ್ಥಿತಿ...
ಇದು ತಾಲೂಕಿನ ಆತಗೂರು ಹೋಬಳಿ ಗಡಿ ಭಾಗದ ಗ್ರಾಮವಾದ ಮಲ್ಲನಕುಪ್ಪೆ ಗ್ರಾಪಂ ವ್ಯಾಪ್ತಿಯ 14 ಹಳ್ಳಿಗಳ ನಿವಾಸಿಗಳು ಎದುರಿಸುತ್ತಿರುವ ಕುಡಿಯುವ ನೀರಿನ ಸಮಸ್ಯೆ. ಮಳೆಗಾಲ ಆರಂಭವಾದರೂ ಇಲ್ಲಿನ ಜನರಿಗೆ ಇನ್ನೂ ಜೀವ ಜಲದ ಚಿಂತೆ. ಇದೀಗ ಬೇಸಿಗೆಯಿಂದ ಹೊರ ಬಂದಿರುವ ನಾವು ಮಳೆಗಾಲದಲ್ಲೂ ನೀರಿಗೆ ಪರದಾಡಬೇಕಾಗಿದೆ ಎಂಬುದು ಸ್ಥಳೀಯರ ಮಾತು.
ಸಾವಿರ ಅಡಿಗೂ ನೀರಿಲ್ಲ:
ಸುತ್ತಲ 14 ಹಳ್ಳಿಗಳ ವ್ಯಾಪ್ತಿಯಲ್ಲಿ ವರ್ಷದಿಂದ ಈಚೆಗೆ 40 ಬೋರ್ವೆಲ್ಗಳನ್ನು ಕೊರೆಸಲಾಗಿದೆ. ಇಲ್ಲಿನ ನೀರು ಸಿಗಬೇಕಾದರೆ ಕನಿಷ್ಠ ಒಂದು ಸಾವಿರ ಅಡಿ ಕೊರೆಯಬೇಕು. ತಜ್ಞರ ಪ್ರಕಾರ ಆ ನೀರು ಕೊಡಲು ಯೋಗ್ಯವಲ್ಲ. ಮೊದ ಮೊದಲು ನೀರು ಬಂದ ನಂತರ ಈಗ ಅಂತರ್ಜಲ ಕಡಿಮೆಯಾಗಿ ಬಾವಿಯಲ್ಲಿ ಪೂರ್ಣ ನೀರಿಲ್ಲದಂತಾಗಿದೆ. ಅಲ್ಪ ಸ್ವಲ್ಪ ನೀರು ಬರುವ ಕೃಷಿ ಪಂಪ್ಸೆಟ್ಗಳಿಗೆ ಮನೆ ಮಂದಿಯೆಲ್ಲಾ ಬಿಂದಿಗೆ ಹೊತ್ತು ಹೋಗಬೇಕಾಗಿದೆ. ಜಾನುವಾರುಗಳಿಗೆ ನೀರಿನ ಸಮಸ್ಯೆ ಹೇಳ ತೀರದು.
ಒಂದೇ ಬೋರ್ವೆಲ್:
ಸಿದ್ದೇಗೌಡನದೊಡ್ಡಿಯಲ್ಲಿ ಒಂದು ಬೋರ್ವೆಲ್ ಕೊರೆಸಲಾಗಿದೆ. ಇಲ್ಲಿಂದಲೇ ಮಲ್ಲನಕುಪ್ಪೆ, ಮಲ್ಲನಾಯಕನಹಳ್ಳಿ ಹಾಗೂ ಸಿದ್ದೇಗೌಡನದೊಡ್ಡಿ ಮೂರು ಗ್ರಾಮಗಳಿಗೆ ಇಲ್ಲಿಂದಲೇ ನೀರು ಪೂರೈಕೆ ಮಾಡಲಾಗುತ್ತಿದೆ. ಯಾವ ಮನೆಗಳಿಗೂ ಪ್ರತ್ಯೇಕ ನಲ್ಲಿ ಸಂಪರ್ಕ ನೀಡಿಲ್ಲ. ಗ್ರಾಮಗಳ ಬೀದಿಗಳಲ್ಲಿರುವ ತೊಂಬೆ ನಲ್ಲಿಗಳಿಗೆ ಮಾತ್ರ ನೀರು ಬಿಡಲಾಗುತ್ತದೆ. ಇಲ್ಲಿಂದಲೇ ಎಲ್ಲರೂ ನೀರು ಸಂಗ್ರಹ ಮಾಡಿಕೊಳ್ಳಬೇಕು.
ಕೂಲಿಗೆ ಹೋಗೋದು, ನೀರು ಹಿಡಿಯೋದು: ಮಲ್ಲನಕುಪ್ಪೆ ಗ್ರಾಪಂ ವ್ಯಾಪ್ತಿಯ ಛತ್ರಲಿಂಗನದೊಡ್ಡಿ, ಮಲ್ಲನಾಯಕನಹಳ್ಳಿ ಕುಂದನಕುಪ್ಪೆ, ಲಿಂಗಸಂದ್ರ, ಹರಕನಹಳ್ಳಿ, ಗೊಲ್ಲರದೊಡ್ಡಿ, ಚಾಕನಕೆರೆ, ದುಂಡನಹಳ್ಳಿ, ಬೆಟ್ಟದಾಸನಹಳ್ಳಿ, ನಾಗನಹಳ್ಳಿ, ಈಡಿಗರದೊಡ್ಡಿ ಗ್ರಾಮಗಳಲ್ಲಿ ನೀರಿನ ಕೊರತೆ ಇದೆ.
ಮುಖ್ಯವಾಗಿ ಮಲ್ಲನಾಯಕನಹಳ್ಳಿ, ಮಲ್ಲನಕುಪ್ಪೆ, ಛತ್ರಲಿಂಗನದೊಡ್ಡಿ ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಹೆಚ್ಚಾಗಿದೆ. ಈ ಗ್ರಾಮಗಳಲ್ಲಿ ಬಹುತೇಕ ಮಂದಿ ಕೂಲಿ ಕಾರ್ಮಿಕರು. ಬೆಳಗ್ಗೆ ಮನೆಯಿಂದ ಹೊರಟರೆ ಸಂಜೆ ವಾಪಸ್. ಯಾವ ಸಮಯದಲ್ಲಿ ನೀರು ಬಿಡುತ್ತಾರೆ ಎಂಬುದೇ ಗೊತ್ತಾಗುವುದಿಲ್ಲ. ಇದರೊಂದಿಗೆ ವಿದ್ಯುತ್ ಸಮಸ್ಯೆ. ನೀರು ಹಿಡಿಯುವುದೋ, ಕೂಲಿಗೆ ಹೋಗುವುದೋ ನೀವೇ ಹೇಳಿ ಎನ್ನುತ್ತಾರೆ ಕೂಲಿ ಕಾರ್ಮಿಕರಾದ ಮಂಜಮ್ಮ.
ನೀರಿಗೆ ಜಗಳ:
ಮೂರು ಗ್ರಾಮಗಳಿಗೆ ನೀರು ಹಂಚಿಕೆ ಮಾಡಿ ಬಿಡಬೇಕು. ಮೂರು ದಿನಗಳಿಗೊಮ್ಮೆ ಮಾತ್ರ ಊರುಗಳ ತೊಂಬೆಯಲ್ಲಿ ನೀರು ಕಾಣುವುದು. ನೀರು ಪಡೆಯಲು ಮನೆ ಮಂದಿಯೆಲ್ಲಾ ಕೊಡ, ಪಾತ್ರೆ ಹಿಡಿದು ಸಾಲುಗಟ್ಟಿ ನಿಲ್ಲಬೇಕು. ಎಲ್ಲರೂ ಮುಗಿ ಬೀಳುವುದರಿಂದ ಸಣ್ಣ ಪುಟ್ಟ ಜಗಳಗಳಾಗುತ್ತವೆ ಎನ್ನುತ್ತಾರೆ ಸ್ಥಳೀಯರಾದ ಕುಮಾರ್.
ಮಲ್ಲನಕುಪ್ಪೆ ಗೇಟ್ನ ಮೂರಕ್ಕೂ ಹೆಚ್ಚು ಹೋಟೆಲ್ಗಳಿದ್ದವು. ನೀರಿನ ಸಮಸ್ಯೆಯಿಂದಾಗಿ ಎಲ್ಲವೂ ಬಂದ್ ಆಗಿವೆ. ಮಾರ್ಗದಲ್ಲಿನ ಪ್ರಯಾಣಿಕರು ಚಹಾ, ತಿಂಡಿಗೆ ದೂರ ಹೋಗಬೇಕಿದೆ. 14 ಗ್ರಾಮಗಳಿಂದ ಮೂರು ವರ್ಷದಿಂದ ಈಚೆಗೆ 40 ಕೊಳವೆ ಬಾವಿ ಕೊರೆದರೂ ಬೆರಳೆಣಿಕೆಯಷ್ಟರಲ್ಲಿ ಮಾತ್ರ ನೀರು ಬಂದವು. ಬಳಿಕ ಅಂತರ್ಜಲ ಕುಸಿತದಿಂದ ಎಲ್ಲವೂ ಬತ್ತಿ ಹೋಗಿವೆ.
ಶುದ್ಧ ನೀರಿಗೆ 5 ಕಿಮೀ:
ಮಲ್ಲನಾಯಕನಹಳ್ಳಿ, ಮಲ್ಲನಕುಪ್ಪೆ, ಛತ್ರಲಿಂಗನದೊಡ್ಡಿ ಭಾಗದ ಜನರು ಶುದ್ದ ಕುಡಿಯುವ ನೀರಿಗಾಗಿ 5 ಕಿ.ಮೀ ದೂರ ಹೋಗಬೇಕು. ಬೊಮ್ಮನಾಯಕನಹಳ್ಳಿಯಲ್ಲಿ ಸರಕಾರದಿಂದ ಆರಂಭಿಸಿರುವ ಶುದ್ಧ ಕುಡಿಯುವ ನೀರು ಘಟಕದಿಂದಲೇ ಕುಡಿಯುವ ಶುದ್ಧ ನೀರು ತರಬೇಕು. ಪಕ್ಕದ ಕುಣಿಗಲ್ ತಾಲೂಕಿನ ನಿಡಸಾಲೆ ಗ್ರಾಮದಲ್ಲಿ ಎರಡು ಶುದ್ಧ ನೀರಿನ ಘಟಕವನ್ನು ಮಂಜೂರು ಮಾಡಿ ಕಾರಾರಯರಂಭ ಮಾಡಲಾಗಿದೆ. ಒಂದನ್ನಾದರೂ ಯಾವುದಾದರೂ ಒಂದು ಹಳ್ಳಿಗಳಿಗೆ ನೀಡಿದ್ದರೆ ನೀರಿನ ಸಮಸ್ಯೆ ನೀಗುತ್ತಿತ್ತು ಎನ್ನುತ್ತಾರೆ ಸ್ಥಳೀಯರು.
ಮಳೆ ನೀರೆ ಗತಿ:
ಬೇಸಿಗೆ ಮುಗಿದು ಮಳೆಗಾಲ ಆರಂಭವಾಗಿದೆ. ಸದಸ್ಯ ಮಳೆ ನೀರನ್ನಾದರೂ ಸಂಗ್ರಹಿಸಿಟ್ಟುಕೊಳ್ಳಬಹುದು. ಕೆಲ ದಿನಗಳ ಹಿಂದೆ ಅಡುಗೆಗೂ ನೀರಿರಲಿಲ್ಲ. ಸದ್ಯ ಮನೆ ಮುಂದೆ ಪತ್ರೆ ಇಟ್ಟು ನೀರು ಹಿಡಿದುಕೊಂಡು ಅಡುಗೆ ಮಾಡಿದೆವು ಎಂಬುದು ಕುಮಾರ್ ಅವರ ಮಾತು.
ಸರ್ವೇ ಮಾತ್ರ ಮುಗಿತು:
ಸಮೀಪದಲ್ಲೇ ಶಿಂಷಾ ನದಿ ಹರಿದರೂ ನೀರಿನ ಭಾಗ್ಯವಿಲ್ಲ. ಆತಗೂರು ಹೋಬಳಿಯ 50ಕ್ಕೂ ಹೆಚ್ಚು ಹಳ್ಳಿಗಳಿಗೆ 'ಬಹುಗ್ರಾಮ ಕುಡಿಯುವ ನೀರು' ಯೋಜನೆಯಡಿ ಮೂರು ವರ್ಷಗಳ ಹಿಂದೆ ಸರ್ವೇ ಕಾರ್ಯ ನಡೆಸಲಾಗಿದೆ. ಆದರೆ, ಯೋಜನೆ ಜಾರಿ ವಿಷಯ ಇನ್ನೂ ಪ್ರಸ್ತಾಪವಾಗಿಲ್ಲ. ಕೆಲ ತಿಂಗಳ ಹಿಂದೆ ಸರಕಾರದ ಬರ ಅಧ್ಯಯನ ತಂಡ ಪ್ರವಾಸ ಮಾಡಿದ್ದು ಬಿಟ್ಟರೆ ಯಾವುದೇ ಪ್ರಯೋಜನವಾಗಿಲ್ಲ ಎಂಬುದು ಸ್ಥಳೀಯರ ದೂರು.
-------------
--ಕೋಟ್--
ಶಿಂಷಾ ನದಿಯ ದೊಡ್ಡ ಅಂಕನಹಳ್ಳಿ ಬಳಿ ತಗ್ಗಹಳ್ಳಿ ಅಣೆæಯಿಂದ ಬಹುಗ್ರಾಮ ಕುಡಿಯುವ ನೀರು ಯೋಜನೆಯಡಿ ಕಾಮಗಾರಿ ಆರಂಭಿಸಲು 30 ಕೋಟಿ ರೂ. ಟೆಂಡರ್ ಅನುಮೋದನೆ ಸರಕಾರದ ಮುಂದಿದೆ. 55 ಹಳ್ಳಿಗಳ ಶಾಶ್ವತ ಕುಡಿಯುವ ನೀರು ಯೋಜನೆ ಕಾಮಗಾರಿ ಶೀಘ್ರದಲ್ಲೇ ಕಾರಾರಯರಂಭವಾಗಲಿದೆ.
-ಕೆಂಪೇಗೌಡ, ಎಇಇ, ಜಿಪಂ ಗ್ರಾಮೀಣ ನೀರು ಸರಬರಾಜು ವಿಭಾಗ
----------
ಕುಡಿಯುವ ನೀರು ಸಮಸ್ಯೆಯಿಂದ ಜಾನುವಾರುಗಳನ್ನು ಸಿಕ್ಕಷ್ಟು ಬೆಲೆಗೆ ಈಗಾಗಲೇ ಮಾರಾಟ ಮಾಡಿದ್ದೇವೆ. ಇಲ್ಲಿನ ನಿವಾಸಿಗಳಿಗೆ ಫ್ಲೋರೈಡ್ ಮಿಶ್ರಿತ ನೀರು ಸೇವನೆಯಿಂದ ನಾನಾ ರೋಗ ರುಜಿನಗಳು ಕಾಡುತ್ತಿವೆ. ಹಲವು ಬಾರಿ ಪ್ರತಿಭಟನೆ, ಮನವಿ ಸಲ್ಲಿಸಿದ್ದರೂ ಚುನಾಯಿತ ಪ್ರತಿನಿಧಿಗಳ ನಿರ್ಲಕ್ಷ ್ಯ ತೋರುತ್ತಿದ್ದಾರೆ.
-ಎಂ.ಸಿ. ಸಿದ್ದರಾಜು, ಮಲ್ಲನಾಯಕನಹಳ್ಳಿ.
ಧಿಧಿಧಿ-
ಪೋಟೋ ಶೀರ್ಷಿಕೆಗಳು
ಎಂಡಿವೈ 30ಎಂಡಿಆರ್ 1ಸಿ
ಕುಡಿಯುವ ನೀರನ್ನು ಬಾಲಕನೋರ್ವ ಸಂಗ್ರಹಿಸುತ್ತಿರುವುದು.
ಧಿಧಿಧಿಧಿ
ಪೋಟೋ ಶೀರ್ಷಿಕೆಗಳು
ಎಂಡಿವೈ 30ಎಂಡಿಆರ್ 2ಸಿ
ವ್ಯಕ್ತಿಯೋರ್ವರು ಗ್ರಾಮದ ಹೊರ ವಲಯದಿಂದ ನೀರನ್ನು ಸಂಗ್ರಹಿಸುತ್ತಿರುವುದು.
ಧಿಧಿಧಿಧಿ
ಪೋಟೋ ಶೀರ್ಷಿಕೆಗಳು
ಎಂಡಿವೈ 30ಎಂಡಿಆರ್ 3ಸಿ
ಅಗತ್ಯ ನೀರನ್ನು ಎತ್ತಿನ ಗಾಡಿಯ ಮೂಲಕ ಕೊಂಡೋಯ್ಯುತ್ತಿರುವುದು.
ಧಿಧಿಧಿಧಿ
ಎಂಡಿವೈ 30ಎಂಡಿಆರ್ 4ಸಿ: ಎಂ.ಸಿ. ಸಿದ್ದರಾಜು, ಮಲ್ಲನಾಯಕನಹಳ್ಳಿ.