Please enable javascript.ಮಹಾವೀರ ಜಯಂತಿ ಸಂಭ್ರಮ - Mahavir Jayanti celebrations - Vijay Karnataka

ಮಹಾವೀರ ಜಯಂತಿ ಸಂಭ್ರಮ

ವಿಕ ಸುದ್ದಿಲೋಕ 20 Apr 2016, 9:00 am
Subscribe

ಮಹಾವೀರ ಜಯಂತಿ ಪ್ರಯುಕ್ತ ಜೈನ ಸಮುದಾಯದವರು ನಗರದ ನಾನಾ ಬೀದಿಗಳಲ್ಲಿ ಮಹಾವೀರ ಪ್ರತಿಮೆಯನ್ನು ಹೂವಿನ ಪಲ್ಲಕ್ಕಿಯಲ್ಲಿ ಮೆರವಣಿಗೆ ಮಾಡುವ ಮೂಲಕ ಮಹಾವೀರ ಜಯಂತಿಯನ್ನು ಸಂಭ್ರಮದಿಂದ ಆಚರಿಸಿದರು.

mahavir jayanti celebrations
ಮಹಾವೀರ ಜಯಂತಿ ಸಂಭ್ರಮ

ಮಂಡ್ಯ: ಮಹಾವೀರ ಜಯಂತಿ ಪ್ರಯುಕ್ತ ಜೈನ ಸಮುದಾಯದವರು ನಗರದ ನಾನಾ ಬೀದಿಗಳಲ್ಲಿ ಮಹಾವೀರ ಪ್ರತಿಮೆಯನ್ನು ಹೂವಿನ ಪಲ್ಲಕ್ಕಿಯಲ್ಲಿ ಮೆರವಣಿಗೆ ಮಾಡುವ ಮೂಲಕ ಮಹಾವೀರ ಜಯಂತಿಯನ್ನು ಸಂಭ್ರಮದಿಂದ ಆಚರಿಸಿದರು.

ಜೈನರ ಬೀದಿಯಲ್ಲಿರುವ ಮಹಾವೀರ ಭವನದಿಂದ ಪ್ರತಿಮೆಯನ್ನು ಹೊತ್ತ ಹೂವಿನ ಪಲ್ಲಕ್ಕಿ ಮೆರವಣಿಗೆ ಜೈನರ ಬೀದಿಯಿಂದ ಮಹಾವೀರ ವೃತ್ತ, ವಿವಿ ರಸ್ತೆ, ಸಿಂಡಿಕೇಟ್‌ ಬ್ಯಾಂಕ್‌ ರಸ್ತೆ, ಎಂ.ಸಿ.ರಸ್ತೆ, ಹಳೇ ರೈಲ್ವೆ ನಿಲ್ದಾಣ ರಸ್ತೆ ಮೂಲಕ ಪೇಟೆಬೀದಿಯಲ್ಲಿ ಅಂತ್ಯಗೊಂಡಿತು.

ಜೈನ ಸಮುದಾಯದವರು ಮೆರವಣಿಗೆಗೂ ಮೊದಲು ಮಹಾವೀರನ ಭಾವಚಿತ್ರಕ್ಕೆ ಹೂವುಗಳಿಂದ ಪುಷ್ಪಾರ್ಚನೆ ಮಾಡಿ, ವಿಶೇಷ ಪೂಜೆ ಸಲ್ಲಿಸುವ ಮೂಲಕ ಮೆರವಣಿಗೆಗೆ ಚಾಲನೆ ನೀಡಿದರು. ಮಕ್ಕಳು ಸಮವಸ್ತ್ರದೊಂದಿಗೆ ಮೆರವಣಿಗೆಯಲ್ಲಿ ಪಾಲ್ಗೊಂಡು ಮೆರುಗು ನೀಡಿದರು. ಮಹಾವೀರ ಪ್ರತಿಮೆಯ ಮೆರವಣಿಗೆ ಸಂದರ್ಭದಲ್ಲಿ ಜೈನ ಸುಮದಾಯದ ಯುವಕ, ಯುವತಿಯರು ಬಿರುಬಿಸಿಲನ್ನು ಲೆಕ್ಕಿಸದೆ ಭಾಗವಹಿಸಿ ಕುಣಿದು ಕುಪ್ಪಳಿಸಿದರು. ರಸ್ತೆಯುದ್ದಕ್ಕೂ ಮಜ್ಜಿಗೆ ಪಾನಕ ವಿತರಿಸಿದರು. ಬ್ಯಾಂಡ್‌ಸೆಟ್‌ನ ತಾಳಕ್ಕೆ ಹೆಜ್ಜೆ ಹಾಕುವ ಮೂಲಕ ಮಹಾವೀರ ಜಯಂತಿಗೆ ಮತ್ತಷ್ಟು ಮೆರಗು ನೀಡಿದರು.

ಲೋಕದ ಜನತೆಗೆ ಶಾಂತಿ ನೆಮ್ಮದಿ ಸಿಗಲಿ ಎಂದು ಪ್ರಾರ್ಥಿಸಿದರು. ಭಗವಾನ್‌ ಮಹಾವೀರರು ಬೋಧಿಸಿದ ಪಂಚಾಮೃತ ತತ್ವಗಳಾದ ಸತ್ಯ, ಅಹಿಂಸೆ, ಅಪರಿಗೃಹ, ಅಶೌರ್ಯ, ಬ್ರಹ್ಮಚಾರ್ಯ ತತ್ವಗಳನ್ನು ಸಾರಲಾಯಿತು. ನೀನು ಬದುಕು ಬದುಕಲು ಬೀಡು. ಲೋಕಕಲ್ಯಾಣಕ್ಕೋಸ್ಕರ ಕಾಲ ಕಾಲಕ್ಕೆ ಮಳೆಯಾಗಿ ಬೆಳೆಯಾಗಲಿ ದುಷ್ಟಶಕ್ತಿಗಳೆಲ್ಲ ಹೋಗಲಿ ಎನ್ನುವ ತತ್ವಗಳನ್ನು ಸಾರಲಾಯಿತು.

ದಿಗಂಬರ ಜೈನ ಸಮುದಾಯದ ಅಧ್ಯಕ್ಷ ಪದ್ಮನಾಭಯ್ಯ, ಕಾರ‍್ಯದರ್ಶಿ ಶಾಂತಿಪ್ರಸಾದ್‌, ನಾಗರಾಜು, ಜಿಲ್ಲಾ ಕಾಸಪ ಮಾಜಿ ಅಧ್ಯಕ್ಷ ಎಂ.ವಿ.ಧರಣೇಂದ್ರಯ್ಯ, ರಾಖೇಶ್‌, ಡಾ.ವೃಷಬೇಂದ್ರ, ಮಹಾವೀರ, ನವೀನ್‌ ಸೇರಿದಂತೆ ಸಮುದಾಯದ ಪ್ರಮುಖರು ಮೆರವಣಿಗೆಯಲ್ಲಿ ಭಾಗವಹಿಸಿದ್ದರು.

ಮದ್ದೂರು : ಮಹಾವೀರ ಜಯಂತಿ ಅಂಗವಾಗಿ ಮದ್ದೂರು ಪಟ್ಟಣದಲ್ಲಿ ವಿಶೇಷ ಕಾರ‍್ಯಕ್ರಮಗಳು ಜರುಗಿದವು.

ಕೋಟೆ ಬೀದಿಯ ಶ್ರೀ ಸುಮತಿನಾಥ ಜೈನಮಂದಿರದಿಂದ ವಿವಿಧ ಕಲಾಪ್ರಕಾರಗಳ ಮೆರವಣಿಗೆಯಲ್ಲಿ ಮಹಾವೀರರ ಭಾವಚಿತ್ರವನ್ನು ಕೊಂಡೊಯ್ಯಲಾಯಿತು.

ಜೈನ ಸಂಘಟನೆಯ ಯುವಕರು, ಮಹಿಳೆಯರು ಮೆರವಣಿಗೆಯ ಮಾರ್ಗದುದ್ದಕ್ಕೂ ಮಹಾವೀರರ ಶಾಂತಿ ಮಂತ್ರ ಪಟಿಸುವ ಜತೆಗೆ ಭಜನೆಯಲ್ಲಿ ಪಾಲ್ಗೊಂಡರು.

ಶ್ರೀರಂಗಪಟ್ಟಣ : ಪಟ್ಟಣದ ಜೈನ ಬಸದಿ ದೇವಾಲಯದಲ್ಲಿ ಮಹಾವೀರ ಜಯಂತಿ ಅಂಗವಾಗಿ ವಿಶೇಷ ಪೂಜೆ ನಡೆದವು. ಜೈನ ಪಂಥದ ಸಮುದಾಯದವರು ಸಾಮೂಹಿಕವಾಗಿ ಪೂಜೆ ಕಾರ‍್ಯಕ್ರಮಗಳಲ್ಲಿ ಪಾಲ್ಗೊಂಡು ಮಹಾವೀರ ಜಯಂತಿ ಆಚರಿಸಿದರು.

ಜಯಂತಿ ಅಂಗವಾಗಿ ದೇವಾಲಯದ ಆವರಣವನ್ನು ಆಲಂಕರಿಸಲಾಯಿತು. ನಂತರ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಯಿತು.

ಕಾಮೆಂಟ್‌ ಮಾಡಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ