ಆ್ಯಪ್ನಗರ

ಮೈತ್ರಿ ಮುಂದುವರಿಕೆ ವರಿಷ್ಠರಿಗೆ ಬಿಟ್ಟಿದ್ದು: ಸಿಆರ್‌ಎಸ್‌

ಒಂದೂವರೆ ವರ್ಷ ಒಳ್ಳೆಯದೋ ಕೆಟ್ಟದ್ದೋ ಮೈತ್ರಿ ಸರಕಾರದಲ್ಲಿ ಅಧಿಕಾರ ಅನುಭವಿಸಿದ್ದೇವೆ. ಮುಂದೆಯೂ ಮೈತ್ರಿ ಮಾಡಿಕೊಂಡರೂ ನಮ್ಮ ಅಸಮಾಧಾನವಿಲ್ಲ. ಯಾವುದೇ ವಿರೋಧವಿಲ್ಲ. ನಾವು ಮಧ್ಯೆ ಪ್ರವೇಶ ಮಾಡಿ ಬೇಡ ಎಂದು ಹೇಳುವುದು ಸೂಕ್ತವಲ್ಲ. ಮೈತ್ರಿ ಮಾಡಿಕೊಳ್ಳುವುದು ದೊಡ್ಡವರಿಗೆ ಬಿಟ್ಟ ವಿಚಾರ ಎಂದು ಮಾಜಿ ಸಚಿವ ಎನ್‌.ಚಲುವರಾಯಸ್ವಾಮಿ ಹೇಳಿದರು.

Vijaya Karnataka 4 Aug 2019, 5:00 am
ಮಂಡ್ಯ: ಒಂದೂವರೆ ವರ್ಷ ಒಳ್ಳೆಯದೋ ಕೆಟ್ಟದ್ದೋ ಮೈತ್ರಿ ಸರಕಾರದಲ್ಲಿ ಅಧಿಕಾರ ಅನುಭವಿಸಿದ್ದೇವೆ. ಮುಂದೆಯೂ ಮೈತ್ರಿ ಮಾಡಿಕೊಂಡರೂ ನಮ್ಮ ಅಸಮಾಧಾನವಿಲ್ಲ. ಯಾವುದೇ ವಿರೋಧವಿಲ್ಲ. ನಾವು ಮಧ್ಯೆ ಪ್ರವೇಶ ಮಾಡಿ ಬೇಡ ಎಂದು ಹೇಳುವುದು ಸೂಕ್ತವಲ್ಲ. ಮೈತ್ರಿ ಮಾಡಿಕೊಳ್ಳುವುದು ದೊಡ್ಡವರಿಗೆ ಬಿಟ್ಟ ವಿಚಾರ ಎಂದು ಮಾಜಿ ಸಚಿವ ಎನ್‌.ಚಲುವರಾಯಸ್ವಾಮಿ ಹೇಳಿದರು.
Vijaya Karnataka Web maitri munduvarike varistharige bittidducrs
ಮೈತ್ರಿ ಮುಂದುವರಿಕೆ ವರಿಷ್ಠರಿಗೆ ಬಿಟ್ಟಿದ್ದು: ಸಿಆರ್‌ಎಸ್‌


ಮಂಡ್ಯದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿ, ''ಕೆ.ಆರ್‌.ಪೇಟೆ ಕ್ಷೇತ್ರಕ್ಕೆ ನಡೆಯಲಿರುವ ಉಪ ಚುನಾವಣೆ ಹಿನ್ನೆಲೆಯಲ್ಲಿ ತಾವು ಕಾಂಗ್ರೆಸ್‌ ಉಸ್ತುವಾರಿಯಾಗಿ ನೇಮಕಗೊಂಡಿದ್ದು, ಒಂದು ವಾರದಲ್ಲಿ ಕೆ.ಆರ್‌.ಪೇಟೆಗೆ ಭೇಟಿ ನೀಡಿ ಸ್ಥಳೀಯ ಮುಖಂಡರ ಅಭಿಪ್ರಾಯ ಸಂಗ್ರಹಿಸಲಾಗುವುದು,'' ಎಂದು ತಿಳಿಸಿದರು.

''ಅನರ್ಹ ಶಾಸಕರ ವಿಚಾರವಾಗಿ ಸುಪ್ರಿಂಕೋರ್ಟ್‌ ತೀರ್ಪು ಏನೇ ಬರಲಿ ರಾಜಕೀಯ ಪಕ್ಷ ಗಳು ಉಪ ಚುನಾವಣೆ ಸಿದ್ಧತೆಯಲ್ಲಿವೆ. 17 ಕ್ಷೇತ್ರಗಳಿಗೆ ಕಾಂಗ್ರೆಸ್‌ ಉಸ್ತುವಾರಿಗಳನ್ನು ನೇಮಕ ಮಾಡಿದೆ. ನಮಗೂ ಉಸ್ತುವಾರಿ ನೀಡಲಾಗಿದೆ. ಒಂದು ವಾರದಲ್ಲಿ ಸಭೆ ಕರೆದು ಸ್ಥಳೀಯ ಕಾರ್ಯಕರ್ತರ ಅಭಿಪ್ರಾಯ ಸಂಗ್ರಹಿಸಲಾಗುವುದು,'' ಎಂದರು.

''ಜೆಡಿಎಸ್‌ ನಾಯಕರು ಜಿಲ್ಲೆಗೆ ಯಾವ ರೀತಿ ಅಭಿವೃದ್ಧಿ ಮಾಡಿದ್ದಾರೆ ಎಂಬುದು ಕಾವೇರಿ ನೀರು ಬಿಡುಗಡೆ ಸಂದರ್ಭವೇ ಸಾಕ್ಷಿ. ಚುನಾವಣೆ ಸಂದರ್ಭದಲ್ಲಿ ನೀರು ಬಿಟ್ಟರು. ಸೋಲಿನ ನಂತರ ಅಂದಿನ ಸಿಎಂ ಕುಮಾರಸ್ವಾಮಿ ಅವರು ಕೇಂದ್ರಕ್ಕೆ ಹೋಗಿ ಕೇಳಿ ಎಂದರು. ಇದರ ನಡುವೆ ಜಿಲ್ಲಾ ಉಸ್ತುವಾರಿ ಸಚಿವರು ಆಯೋಗದ ನಿರ್ಧಾರ ಕೇಳದೇ ನೀರನ್ನು ಬಿಟ್ಟರು. ಇದರಲ್ಲೇ ಗೊತ್ತಾಗುತ್ತೆ ಅವರಿಗೆ ಮಂಡ್ಯದ ಮೇಲೆ ಎಷ್ಟು ಸಿಟ್ಟಿದೆ ಅನ್ನೋದು,'' ಎಂದು ಕುಮಾರಸ್ವಾಮಿ ವಿರುದ್ಧ ಮತ್ತೆ ಅಸಮಾಧಾನ ಹೊರಹಾಕಿದರು.

ಬಿಎಸ್‌ವೈ ಬಗ್ಗೆ ಮೆಚ್ಚುಗೆ

ಯಡಿಯೂರಪ್ಪ ಒಬ್ಬ ಹೋರಾಟಗಾರ. ಹೋರಾಟ ಮಾಡಿಕೊಂಡು ಬಂದವರು. 105 ಸೀಟು ಗೆದ್ದರೂ ಸಿಎಂ ಆಗಲು ಸಾಧ್ಯವಾಗಲಿಲ್ಲ. 17 ಜನ ಯಾವ ಕಾರಣಕ್ಕೆ ಹೋದರೋ ಗೊತ್ತಿಲ್ಲ. ಈಗ ಯಡಿಯೂರಪ್ಪ ಅವರಿಗೆ ಮತ್ತೆ ಅವಕಾಶ ಸಿಕ್ಕಿದೆ. ನಮ್ಮ ಜಿಲ್ಲೆಯ ಮಗ ಸಿಎಂ ಆಗಿದ್ದಾರೆ. ಮತ್ತೊಮ್ಮೆ ಇಂತಹ ಅವಕಾಶ ಸಿಗೋದು ಕಡಿಮೆ. ಜಿಲ್ಲೆಯ ಅಭಿವೃದ್ಧಿ ವಿಚಾರವಾಗಿ ಯಡಿಯೂರಪ್ಪಗೆ ಮನವಿ ಮಾಡುವುದರಲ್ಲಿ ತಪ್ಪೇನಿದೆ ಎಂದು ಮಾಧ್ಯಮದವರನ್ನೇ ಪ್ರಶ್ನಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ