ಆ್ಯಪ್ನಗರ

ಸೇವಾ ಮನೋಭಾವ ರೂಢಿಸಿಕೊಳ್ಳಿ

ಪ್ರತಿಯೊಬ್ಬರು ಸೇವಾ ಮನೋಭಾವನೆಯನ್ನು ಮೈಗೂಡಿಸಿಕೊಂಡು ಸದಢ ಸಮಾಜ ನಿರ್ಮಾಣಕ್ಕೆ ಮುಂದಾಗಬೇಕು ಎಂದು ಹಿರಿಯ ವಕೀಲ ಎಚ್.ಮಾದೇಗೌಡ ತಿಳಿಸಿದರು.

Vijaya Karnataka 7 Feb 2018, 5:15 am
ಮದ್ದೂರು: ಪ್ರತಿಯೊಬ್ಬರು ಸೇವಾ ಮನೋಭಾವನೆಯನ್ನು ಮೈಗೂಡಿಸಿಕೊಂಡು ಸದಢ ಸಮಾಜ ನಿರ್ಮಾಣಕ್ಕೆ ಮುಂದಾಗಬೇಕು ಎಂದು ಹಿರಿಯ ವಕೀಲ ಎಚ್.ಮಾದೇಗೌಡ ತಿಳಿಸಿದರು.
Vijaya Karnataka Web make a service attitude
ಸೇವಾ ಮನೋಭಾವ ರೂಢಿಸಿಕೊಳ್ಳಿ


ಪಟ್ಟಣದ ಶಂಕರಪಾರ್ಟಿ ಹಾಲ್‌ನಲ್ಲಿ ಮದ್ದೂರು ಲಯನ್ಸ್ ಸಂಸ್ಥೆ ವತಿಯಿಂದ ಆಯೋಜಿಸಿದ್ದ ರೈತ, ವೈದ್ಯ, ಎಂಜಿನಿಯರ್ ಹಾಗೂ ಶಿಕ್ಷಕರ ದಿನಾಚರಣೆ ಕಾರ‌್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

ಲಯನ್ಸ್ ಸಂಸ್ಥೆಯು ದೇಶದಲ್ಲೇ ಅನೇಕ ಕೆಲಸಗಳನ್ನು ಹಿಂದುಳಿದ ವರ್ಗದ ಏಳಿಗೆಗೆ ಶ್ರಮಿಸುವ ಜತೆಗೆ ಬಡ ವಿದ್ಯಾರ್ಥಿಗಳಿಗೆ ಪುಸ್ತಕ ವಿತರಣೆ, ಶೌಚಾಲಯ ನಿರ್ಮಾಣ, ಬಸ್‌ತಂಗುದಾಣ, ಶುದ್ಧ ಕುಡಿಯುವ ನೀರಿನ ಘಟಕ ಹಾಗೂ ಸರಕಾರಿ ಶಾಲೆಗಳಿಗೆ ಬ್ಯಾಂಡ್‌ಸೆಟ್‌ಗಳನ್ನು ನೀಡುವ ಕಾರ್ಯಗಳನ್ನು ಕೈಗೊಂಡಿರುವುದು ಶ್ಲಾಘನೀಯ ಎಂದರು.

ಸ್ಥಳೀಯ ಸಂಘ್ಘ, ಸಂಸ್ಥೆಗಳ ಜತೆಗೂಡಿ ಲಯನ್ಸ್ ಸಂಸ್ಥೆಯು ಹಲವಾರು ಜನಪರ ಯೋಜನೆಗಳನ್ನು ಕೈಗೆತ್ತಿಕೊಂಡು ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಸಿಕೊಂಡಿರುವುದು ಉತ್ತಮ ಬೆಳವಣಿಗೆ ಎಂದರಲ್ಲದೇ ಮುಂದಿನ ದಿನಗಳಲ್ಲಿ ಅರಣ್ಯ ಸಂರಕ್ಷಣೆ, ನೀರಿನ ಬಗ್ಗೆ ಜಾಗತಿ ಹಾಗೂ ದೇಶಿಯ ಸಂಸ್ಕೃತಿ, ಕಲೆಗಳ ಉಳಿವಿಗೆ ವಿದ್ಯಾರ್ಥಿ ಗಳಿಲ್ಲಿ ಅರಿವು ಮೂಡಿಸುವ ಕಾರ‌್ಯಕ್ರಮಗಳನ್ನು ಆಯೋಜಿಸುವುದಾಗಿ ಹೇಳಿದರು.

ಅಭಿನಂದನೆ : ವೈದ್ಯ ಚಿಕ್ಕಬೋರೇಗೌಡ, ಮುಖ್ಯಶಿಕ್ಷಕ ಶಂಕರಯ್ಯ, ಎಂಜಿನಿಯರ್ ಲಿಂಗರಾಜು, ಪ್ರಗತಿಪರ ರೈತ ಶಿವಣ್ಣ ಅವರನ್ನು ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ವಿ.ಕೆ. ಜಗದೀಶ್ ಅಭಿನಂದಿಸಿ ಸನ್ಮಾನಿಸಿದರು.

ಪುರಸಭೆ ಸದಸ್ಯ ರಘು, ಮಾಜಿ ಅಧ್ಯಕ್ಷ ಎಂ.ಪಿ. ಅಮರ್‌ಬಾಬು, ಲಯನ್ಸ್ ಸಂಸ್ಥೆ ತಾಲೂಕು ಅಧ್ಯಕ್ಷ ನಾಗಭೂಷಣ್, ಉಪಾಧ್ಯಕ್ಷ ವಿ. ಹರ್ಷ, ಪದಾಧಿಕಾರಿಗಳಾದ ಪ್ರದೀಪ್‌ಕುಮಾರ್, ಪ್ರಕಾಶ್ ಮತ್ತಿತರರು ಹಾಜರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ