ಮದ್ದೂರು: ದ್ವಿಚಕ್ರ ವಾಹನ ತೊಳೆಯುವ ವೇಳೆ ವಿದ್ಯುತ್ ಪ್ರವಹಿಸಿ ವ್ಯಕ್ತಿಯೊಬ್ಬ ಮೃತಪಟ್ಟ ಘಟನೆ ಕೊಪ್ಪ ಪೊಲೀಸ್ ಠಾಣೆ ವ್ಯಾಪ್ತಿಯ ಉಜ್ಜನಿಚೆನ್ನನದೊಡ್ಡಿ ಗ್ರಾಮದಲ್ಲಿ ಗುರುವಾರ ಸಂಜೆ ಸಂಭವಿಸಿದೆ.
ಉಜ್ಜನಿಚೆನ್ನನದೊಡ್ಡಿ ಗ್ರಾಮದ ನಿಂಗೇಗೌಡ ಅವರ ಪುತ್ರ ರಮೇಶ್ (42) ಮೃತ.
ರಮೇಶ್ ಅವರು ಆಯುಧ ಪೂಜೆ ಹಿನ್ನೆಲೆಯಲ್ಲಿ ಮನೆಮುಂದೆ ಬೈಕ್ ತೊಳೆಯುತ್ತಿದ್ದರು. ನೀರು ಸಿಂಪಡಿಸುವ ವಿದ್ಯುತ್ ಚಾಲಿತ ಮೋಟಾರ್ನಲ್ಲಿ ವ್ಯತ್ಯಾಸವಾಗಿ ನೀರಿಗೆ ವಿದ್ಯುತ್ ಪ್ರವಹಿಸಿದ ಪರಿಣಾಮ ರಮೇಶ್ ಅಸ್ವಸ್ಥಗೊಂಡು ನೆಲಕ್ಕುರುಳಿದರು. ಮಂಡ್ಯ ಜಿಲ್ಲಾಸ್ಪತ್ರೆಗೆ ಕರೆದೊಯ್ಯುವ ಮಾರ್ಗಮಧ್ಯೆ ಅವರು ಮೃತಪಟ್ಟರು ಎಂದು ತಿಳಿದುಬಂದಿದೆ. ಮೃತರಿಗೆ ಪತ್ನಿ ಹಾಗೂ ಒಬ್ಬ ಇದ್ದಾರೆ.
ಘಟನೆ ಸಂಬಂಧ ಪತ್ನಿ ವೀಣಾ ನೀಡಿದ ದೂರಿನ ಮೇರೆಗೆ ಕೊಪ್ಪ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಉಜ್ಜನಿಚೆನ್ನನದೊಡ್ಡಿ ಗ್ರಾಮದ ನಿಂಗೇಗೌಡ ಅವರ ಪುತ್ರ ರಮೇಶ್ (42) ಮೃತ.
ರಮೇಶ್ ಅವರು ಆಯುಧ ಪೂಜೆ ಹಿನ್ನೆಲೆಯಲ್ಲಿ ಮನೆಮುಂದೆ ಬೈಕ್ ತೊಳೆಯುತ್ತಿದ್ದರು. ನೀರು ಸಿಂಪಡಿಸುವ ವಿದ್ಯುತ್ ಚಾಲಿತ ಮೋಟಾರ್ನಲ್ಲಿ ವ್ಯತ್ಯಾಸವಾಗಿ ನೀರಿಗೆ ವಿದ್ಯುತ್ ಪ್ರವಹಿಸಿದ ಪರಿಣಾಮ ರಮೇಶ್ ಅಸ್ವಸ್ಥಗೊಂಡು ನೆಲಕ್ಕುರುಳಿದರು. ಮಂಡ್ಯ ಜಿಲ್ಲಾಸ್ಪತ್ರೆಗೆ ಕರೆದೊಯ್ಯುವ ಮಾರ್ಗಮಧ್ಯೆ ಅವರು ಮೃತಪಟ್ಟರು ಎಂದು ತಿಳಿದುಬಂದಿದೆ. ಮೃತರಿಗೆ ಪತ್ನಿ ಹಾಗೂ ಒಬ್ಬ ಇದ್ದಾರೆ.
ಘಟನೆ ಸಂಬಂಧ ಪತ್ನಿ ವೀಣಾ ನೀಡಿದ ದೂರಿನ ಮೇರೆಗೆ ಕೊಪ್ಪ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.