ಆ್ಯಪ್ನಗರ

ಠಾಣೆಯಲ್ಲೇ ಯುವಕ‌ ಸಾವು: PSI ಸಹಿತ ನಾಲ್ವರ ಅಮಾನತು

ಠಾಣೆಯಲ್ಲೇ ಯುವಕ‌ ಮೃತಪಟ್ಟ ಪ್ರಕರಣಕ್ಕೆ ಸಂಬಂಧಿಸಿ PSI ಸಹಿತ ನಾಲ್ವರನ್ನು ಅಮಾನತು ಮಾಡಲಾಗಿದೆ. PSI ಆನಂದ್ ಕುಮಾರ್, ಠಾಣಾ ಸಿಬ್ಬಂದಿ ಮಾದೇಶ್, ಮಲ್ಲಿಕಾರ್ಜುನ ಚುಳಕೆ, ವರದರಾಜು ಅವರನ್ನು ಅಮಾನತುಗೊಳಿಸಿ ಮಂಡ್ಯ ಎಸ್ಪಿ ಜಿ. ರಾಧಿಕಾ ಆದೇಶ ಹೊರಡಿಸಿದ್ದಾರೆ.

Vijaya Karnataka Web 13 Jul 2018, 8:36 pm
ಮಂಡ್ಯ : ಠಾಣೆಯಲ್ಲೇ ಯುವಕ‌ ಮೃತಪಟ್ಟ ಪ್ರಕರಣಕ್ಕೆ ಸಂಬಂಧಿಸಿ PSI ಸಹಿತ ನಾಲ್ವರನ್ನು ಅಮಾನತು ಮಾಡಲಾಗಿದೆ. PSI ಆನಂದ್ ಕುಮಾರ್, ಠಾಣಾ ಸಿಬ್ಬಂದಿ ಮಾದೇಶ್, ಮಲ್ಲಿಕಾರ್ಜುನ ಚುಳಕೆ, ವರದರಾಜು ಅವರನ್ನು ಅಮಾನತುಗೊಳಿಸಿ ಮಂಡ್ಯ ಎಸ್ಪಿ ಜಿ. ರಾಧಿಕಾ ಆದೇಶ ಹೊರಡಿಸಿದ್ದಾರೆ.
Vijaya Karnataka Web protest1

ಪ್ರಕರಣದ ಸೂಕ್ತ ತನಿಖೆಗೆ ಆಗ್ರಹಿಸಿ ಪೊಲೀಸ್‌ ಠಾಣೆ ಬಳಿ ದಲಿತ ಮುಖಂಡರು ಶುಕ್ರವಾರ ಬೆಳಗ್ಗೆ ಪ್ರತಿಭಟನೆ ನಡೆಸಿದ್ದರು.

ಬೈಕ್ ಕಳ್ಳತನ ಆರೋಪದಡಿ ಮೂರು ದಿನಗಳ ಹಿಂದೆ ದಲಿತ ಯುವಕ ಬೆಳ್ತೂರು ಗ್ರಾಮದ ಮೂರ್ತಿಯನ್ನು ಪೊಲೀಸರು ಠಾಣೆಗೆ ಕರೆ ತಂದಿದ್ದರು. ಆದರೆ ಮನೆಯವರಿಗೆ ಮಾಹಿತಿ ನೀಡಿಲ್ಲ ಎಂದು ಪ್ರತಿಭಟನಾಕಾರರು ಆರೋಪಿಸಿದ್ದರು. ಪಶ್ಚಿಮ ಠಾಣೆ ಮುಂದೆ ಜಮಾಯಿಸಿದ ದಲಿತ ಮುಖಂಡರು, ಇದೊಂದು ಲಾಕಪ್‌ ಡೆತ್‌. ಪೊಲೀಸರು ಪ್ರಕರಣ ಮುಚ್ಚಿ ಹಾಕಲು ಯತ್ನಿಸುತ್ತಿದ್ದಾರೆ. ಪೊಲೀಸರು ಥಳಿಸಿದ್ದರಿಂದ ಯುವಕ ಮೃತಪಟ್ಟಿದ್ದಾನೆ ಎಂದು ಆರೋಪಿಸಲಾಗಿತ್ತು.

ಪ್ರಕರಣದ ಕುರಿತು ಉನ್ನತ ಮಟ್ಟದ ತನಿಖೆಯಾಗಬೇಕು. ನ್ಯಾಯಾಧೀಶರ ಸಮ್ಮುಖದಲ್ಲಿ‌ ಮೂವರು‌ ವೈದ್ಯರಿಂದ ಮರಣೋತ್ತರ ಪರೀಕ್ಷೆ ನಡೆಸಬೇಕು. ಮೃತನ ಕುಟುಂಬಕ್ಕೆ ದೊಡ್ಡ ಮೊತ್ತದ ಪರಿಹಾರ ನೀಡಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದ್ದರು. ಮೂರು ದಿನಗಳಿಂದಲೂ ಯುವಕನಿಗೆ ಠಾಣೆಯಲ್ಲಿ ಸರಿಯಾಗಿ ಊಟ ನೀಡಿಲ್ಲ ಎಂದು ಆರೋಪಿಸಿರುವ ಸಂಬಂಧಿಕರು ಸಾವಿನ ಕುರಿತು ಸಂಶಯ ವ್ಯಕ್ತಪಡಿಸಿದ್ದಾರೆ. ಆತ ಠಾಣೆಯಲ್ಲಿ ನೇಣಿಗೆ ಶರಣಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದರು.

ಜೆಎಂಎಫ್‌ಸಿ ಕೋರ್ಟ್ ನ್ಯಾಯಾಧೀಶರಾದ ಜ್ಯೋತಿ ಠಾಣೆಗೆ ಆಗಮಿಸಿ ಶವ ಪರಿಶೀಲಿಸಿ, ಪೊಲೀಸರಿಂದ ಮಾಹಿತಿ ಪಡೆದರು.

ವಿಚಾರಣೆ ವೇಳೆ ಪೊಲೀಸರಿಂದ ಚಿತ್ರಹಿಂಸೆ

ಠಾಣೆಯಲ್ಲಿ ವಿಚಾರಣೆ ವೇಳೆ ಪೊಲೀಸರು ಒದೆಯುತ್ತಿದ್ದರು ಎಂದು ಮೃತ ಯುವಕ ಮೂರ್ತಿ ಜತೆ ವಿಚಾರಣೆಗೆ ಒಳಪಟ್ಟಿದ್ದ ಅಂತರಹಳ್ಳಿ ನಿವಾಸಿ ನಾಗರಾಜು ಹೇಳಿದ್ದಾರೆ.

ಸೋಮವಾರ ಮೂವರನ್ನು ಪೊಲೀಸರು ವಿಚಾರಣೆಗೆಂದು ಕರೆತಂದಿದ್ದರು. ಠಾಣೆಯಲ್ಲಿ ವಿಚಾರಣೆ ವೇಳೆ ಒದೆಯುತ್ತಿದ್ದರು. ಮೂರ್ತಿ ನೇಣು ಹಾಕಿಕೊಂಡಿರುವ ಬಗ್ಗೆ ಗೊತ್ತಿಲ್ಲ. ನನ್ನನ್ನು ಕೋರ್ಟ್‌ಗೆ ಹಾಜರುಪಡಿಸಿದ್ದರು. ನಾನು ಬೇಲ್ ಮೇಲೆ ಹೊರ ಬಂದಿದ್ದೆ. ಠಾಣೆಯಲ್ಲಿ ಚಿತ್ರಹಿಂಸೆ ಕೊಡುತ್ತಿರುವುದು ಸತ್ಯ ಎಂದು ನಾಗರಾಜು ಹೇಳಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ