ಆ್ಯಪ್ನಗರ

ಎರಡು ಕುಟುಂಬದವರ ನಡುವಿನ ಜಗಳ ಬಿಡಿಸಲು ಹೋದ ವ್ಯಕ್ತಿ ಸಾವು

ಬಿ.ಹಟ್ನ ಗ್ರಾಮದ ​ಸಂಪತ್ ಕುಮಾರ್ ಮತ್ತು ನಾಗರಾಜು ಎಂಬುವರ ಕುಟುಂಬದ ನಡುವೆ ಜಮೀನು ವಿಚಾರದಲ್ಲಿ ವ್ಯಾಜ್ಯ ನಡೆಯುತ್ತಿತ್ತು. ಕಲಹ ನಡೆಯುತ್ತಿದ್ದ ವೇಳೆ ಪಕ್ಕದ ಜಮೀನಿನ ರೈತ ಶಿವರುದ್ರಪ್ಪ ಕಲಹ ಬಿಡಿಸಲು ಹೋದಾಗ ಅವರಿಗೆ ಪೆಟ್ಟು ಬಿದ್ದು ಮೃತಪಟ್ಟಿದ್ದಾರೆ.

Vijaya Karnataka Web 9 May 2019, 9:02 pm
ಮಂಡ್ಯ: ಜಮೀನು ವ್ಯಾಜ್ಯ ವಿಚಾರದಲ್ಲಿ ಎರಡು ಕುಟುಂಬದವರ ನಡುವಿನ ಕಲಹ ಬಿಡಿಸಲು ಹೋದ ವ್ಯಕ್ತಿ ಮೃತಪಟ್ಟಿರುವ ಘಟನೆ ತಾಲೂಕಿನ ಬಿ.ಹಟ್ನ ಗ್ರಾಮದಲ್ಲಿ ನಡೆದಿದೆ. ಗ್ರಾಮದ ಶಿವರುದ್ರಪ್ಪ ಎಂಬುವವರು ಜಗಳ ಬಿಡಿಸಲು ಹೋಗಿ ಪೆಟ್ಟು ತಿಂದು ಮೃತಪಟ್ಟಿದ್ದಾರೆ.
Vijaya Karnataka Web lady death


ಬಿ.ಹಟ್ನ ಗ್ರಾಮದ ಸಂಪತ್ ಕುಮಾರ್ ಮತ್ತು ನಾಗರಾಜು ಎಂಬುವರ ಕುಟುಂಬದ ನಡುವೆ ಜಮೀನು ವಿಚಾರದಲ್ಲಿ ವ್ಯಾಜ್ಯ ನಡೆಯುತ್ತಿತ್ತು ಎಂದು ತಿಳಿದುಬಂದಿದೆ. ಗುರುವಾರ ಜಮೀನಿನ ಬಳಿ ಎರಡು ಕುಟುಂಬದ ನಡುವೆ ಕಲಹ ಆರಂಭವಾಗಿದೆ. ಕಲಹ ನಡೆಯುತ್ತಿದ್ದ ವೇಳೆ ಪಕ್ಕದ ಜಮೀನಿನ ರೈತ ಶಿವರುದ್ರಪ್ಪ ಕಲಹ ಬಿಡಿಸಲು ಹೋಗಿದ್ದಾರೆ. ಈ ವೇಳೆ ಕಲಹ ಬಿಡಿಸಲು ಬಂದ ಶಿರುದ್ರಪ್ಪಗೆ ಪೆಟ್ಟಾಗಿದೆ. ಮಾರಕಾಸ್ತ್ರದಿಂದ ಅವರ ಮೇಲೆ ಹಲ್ಲೆಯಾಗಿದ್ದು, ಈ ಹಿನ್ನೆಲೆ ಸ್ಥಳದಲ್ಲೇ ಕುಸಿದು ಬಿದ್ದ ಶಿವರುದ್ರಪ್ಪ ಸಾವಿಗೀಡಾಗಿದ್ದಾರೆ ಎಂದು ತಿಳಿದುಬಂದಿದೆ.

ಇನ್ನು, ಹಲ್ಲೆಯ ವೇಳೆ ಎರಡು ಗುಂಪಿನವರಿಗೂ ಗಾಯ‌ ಆಗಿದ್ದು, ಗಾಯಾಳುಗಳನ್ನು ಮಂಡ್ಯದ ಮಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿದ್ದು ಪರಿಶೀಲನೆ ನಡೆಸಿದ್ದಾರೆ. ಘಟನೆ ಸಂಬಂಧ ಶಿವಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ