ಆ್ಯಪ್ನಗರ

ಮಂಡ್ಯ: ಅಜ್ಜಿ ಅಸ್ಥಿ ವಿಸರ್ಜನೆ ವೇಳೆ ಕಾವೇರಿ ನದಿ ನೀರು ಪಾಲಾದ ಬೆಂಗಳೂರಿನ ವ್ಯಕ್ತಿ !

ಬೆಂಗಳೂರು ಗವೀಪುರಂ ನಿವಾಸಿ ಶ್ರೀಪ್ರಸಾದ್‌(31) ಮೃತ ದುರ್ದೈವಿ. ಮೃತ ಶ್ರೀಪ್ರಸಾದ್‌‌ ಹಾಗೂ ಅವರ ಬಾವ ಮಯೂರ್‌ ಕಾವೇರಿ ನದಿಯಲ್ಲಿ ​ ಅಸ್ಥಿ ವಿಸರ್ಜನೆ ಮಾಡಲೆಂದು ಗೋಸಾಯ್‌ಘಾಟ್ ಬಳಿ ಬಂದಿದ್ದರು. ದಡದಲ್ಲಿ ವಿಧಿ ವಿಧಾನ ಮುಗಿಸಿ ಇಬ್ಬರು ಸೇರಿಕೊಂಡು ನೀರಿನಲ್ಲಿ ಅಸ್ಥಿ ವಿಸರ್ಜನೆ ಮಾಡಲೆಂದು ನೀರಿಗೆ ಇಳಿದಿದ್ದಾರೆ. ನದಿಯಲ್ಲಿ ನೀರಿನ ಪ್ರವಾಹ ಹೆಚ್ಚಿದ್ದರಿಂದ ಶ್ರೀಪ್ರಸಾದ್‌ ಕೊಚ್ಚಿ ಹೋಗಿದ್ದಾರೆ.

Vijaya Karnataka Web 19 Oct 2020, 9:18 am
ಶ್ರೀರಂಗಪಟ್ಟಣ: ಪಟ್ಟಣದ ಹೊರವಲಯದಲ್ಲಿರುವ ದೊಡ್ಡ ಗೋಸಾಯ್‌ಘಾಟ್‌ ಬಳಿ ಕಾವೇರಿ ನದಿಯಲ್ಲಿ ತಮ್ಮ ಅಜ್ಜಿ ಅಸ್ಥಿಯನ್ನು ವಿಸರ್ಜನೆ ಮಾಡುವ ವೇಳೆ ವ್ಯಕ್ತಿಯೊಬ್ಬರು ನೀರಿನಲ್ಲಿ ಕೊಚ್ಚಿ ಹೋಗಿರುವ ಘಟನೆ ನಡೆದಿದೆ. ಇನ್ನು ಇದೆ ವೇಳೆ ಮತ್ತೊಬ್ಬರು ಕೂಡ ನೀರಿನಲ್ಲಿ ಕೊಚ್ಚಿ ಹೋಗಿದ್ದು ಅವರನ್ನು ಸ್ಥಳೀಯರು ರಕ್ಷಣೆ ಮಾಡಿದ್ದಾರೆ.
Vijaya Karnataka Web kaveri


ಬೆಂಗಳೂರು ಗವೀಪುರಂ ನಿವಾಸಿ ಶ್ರೀಪ್ರಸಾದ್‌(31) ಮೃತ ದುರ್ದೈವಿ. ಮೃತ ಶ್ರೀಪ್ರಸಾದ್‌‌ ಹಾಗೂ ಅವರ ಬಾವ ಮಯೂರ್‌ ಕಾವೇರಿ ನದಿಯಲ್ಲಿ ಅಸ್ಥಿ ವಿಸರ್ಜನೆ ಮಾಡಲೆಂದು ಗೋಸಾಯ್‌ಘಾಟ್ ಬಳಿ ಬಂದಿದ್ದರು. ದಡದಲ್ಲಿ ವಿಧಿ ವಿಧಾನ ಮುಗಿಸಿ ಇಬ್ಬರು ಸೇರಿಕೊಂಡು ನೀರಿನಲ್ಲಿ ಅಸ್ಥಿ ವಿಸರ್ಜನೆ ಮಾಡಲೆಂದು ನೀರಿಗೆ ಇಳಿದಿದ್ದಾರೆ. ನದಿಯಲ್ಲಿ ನೀರಿನ ಪ್ರವಾಹ ಹೆಚ್ಚಿದ್ದರಿಂದ ಶ್ರೀಪ್ರಸಾದ್‌ ಕೊಚ್ಚಿ ಹೋಗಿದ್ದಾರೆ.

ಮಯೂರ್‌ ಕೂಡ ನೀರಿನಲ್ಲಿ ಮುಳುಗುತ್ತಿದ್ದುದನ್ನು ಕಂಡ ಸ್ಥಳೀಯರು ಆತನನ್ನು ರಕ್ಷಣೆ ಮಾಡಿ ದಡ ಸೇರಿಸಿದ್ದಾರೆ. ಶ್ರೀಪ್ರಸಾದ್‌ ಮೃತದೇಹವನ್ನು ಭಾನುವಾರ ನದಿಯಿಂದ ಹೊರ ತೆಗೆಯಲಾಯಿತು. ಶ್ರೀರಂಗಪಟ್ಟಣ ಟೌನ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ರಂಗನತಿಟ್ಟು, ಕೆಆರ್‌ಎಸ್‌ಗೆ ಪ್ರವಾಸಿಗರಿಗೆ ಮುಕ್ತ ಪ್ರವೇಶದ ಅವಕಾಶ: ಜಿಲ್ಲಾಡಳಿತ ಆದೇಶ!

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ