ಆ್ಯಪ್ನಗರ

ಮಂಡ್ಯದ ಮಹದೇಶ್ವರಪುರದಲ್ಲಿ ಜೋಡಿ ಕೊಲೆ, ಹತ್ಯೆ ಹಿಂದಿತ್ತಾ ಪ್ರೇಮ್‌ ಕಹಾನಿ..?

ಮಂಡ್ಯ ಜಿಲ್ಲೆಯ ​ಪಾಂಡವಪುರ ತಾಲೂಕಿನ ಮಹದೇಶ್ವರಪುರದಲ್ಲಿ ಕುಲ್ಲಕ ಕಾರಣಕ್ಕೆ ಜೋಡಿ ಕೊಲೆಯಾಗಿದೆ. ಅದೇ ಗ್ರಾಮದ ರೌಡಿಶೀಟರ್‌ ಕೃಷ್ಣ ಕೊಲೆ ಮಾಡಿ ಪೊಲೀಸರಿಗೆ ಶರಣಾಗಿದ್ದಾನೆ. ಮೃತರನ್ನು ಕೋಳಿ ಸುರೇಶ್ (40) ಹಾಗೂ ನಾಗರಾಜು (45) ಎಂದು ಗುರುತಿಸಲಾಗಿದೆ. ​ನಿನ್ನೆ ರಾತ್ರಿ ಮಹದೇಶ್ವರಪುರದ ಹೋಟೆಲ್‌ ಬಳಿ ಟೀ ಕುಡಿಯುವಾಗ ಮಾತಿಗೆ ಮಾತು ಬೆಳೆದು ಘಟನೆ ನಡೆದಿದೆ ಎನ್ನಲಾಗಿದೆ.

Vijaya Karnataka Web 22 Feb 2020, 2:27 pm
ಮಂಡ್ಯ: ಜಿಲ್ಲೆಯ ಪಾಂಡವಪುರ ತಾಲೂಕಿನ ಮಹದೇಶ್ವರಪುರದಲ್ಲಿ ಕುಲ್ಲಕ ಕಾರಣಕ್ಕೆ ಜೋಡಿ ಕೊಲೆಯಾಗಿದೆ. ಅದೇ ಗ್ರಾಮದ ರೌಡಿಶೀಟರ್‌ ಕೃಷ್ಣ ಕೊಲೆ ಮಾಡಿ ಪೊಲೀಸರಿಗೆ ಶರಣಾಗಿದ್ದಾನೆ. ಮೃತರನ್ನು ಕೋಳಿ ಸುರೇಶ್ (40) ಹಾಗೂ ನಾಗರಾಜು (45) ಎಂದು ಗುರುತಿಸಲಾಗಿದೆ.
Vijaya Karnataka Web CRIME


ನಿನ್ನೆ ರಾತ್ರಿ ಮಹದೇಶ್ವರಪುರದ ಹೋಟೆಲ್‌ ಬಳಿ ಟೀ ಕುಡಿಯುವಾಗ ಮಾತಿಗೆ ಮಾತು ಬೆಳೆದು ಘಟನೆ ನಡೆದಿದೆ ಎನ್ನಲಾಗಿದೆ. ಕೊಲೆ ಮಾಡಿದ ನಂತರ ಆರೋಪಿ ಕೃಷ್ಣ ನೇರವಾಗಿ ಮೇಲುಕೋಟೆ ಪೊಲೀಸ್ ಠಾಣೆಗೆ ಬಂದು ಶರಣಾಗಿದ್ದಾನೆ.

ಮೇಲುಕೋಟೆ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸ್ಥಳಕ್ಕೆ ಆಗಮಿಸಿ ಪೊಲೀಸರು ವಿಚಾರಣೆ ನಡೆಸಿದ್ದಾರೆ. ಎರಡು ಮೃತದೇಹಗಳನ್ನು ಪಾಂಡವಪುರ ಸಾರ್ವಜನಿಕ ಆಸ್ಪತ್ರೆಗೆ ರವಾನಿಸಿ ಶವಪರೀಕ್ಷೆ ನಡೆಸಲಾಗಿದೆ.

ಶ್ರೀರಂಗಪಟ್ಟಣದಲ್ಲಿ ಮತ್ತೊಂದು ಹಲ್ಲೆ ಪ್ರಕರಣ: ಯುವಕನನ್ನು ಕಾರಿನಲ್ಲಿ ಕರೆದೊಯ್ದು ಮೊಳೆಯಿಂದ ಚುಚ್ಚಿದ ದುಷ್ಕರ್ಮಿಗಳು

ಕೊಲೆ ಹಿಂದಿತ್ತಾ ಲವ್‌?
ಟೀ ಕುಡಿಯುವಾಗ ಮಾತಿಗೆ ಮಾತು ಬೆಳೆದು ಜೋಡಿ ಕೊಲೆಯಾಗಿದೆ ಎನ್ನಲಾಗುತ್ತಿದೆ. ಆದರೆ, ಈ ಕೊಲೆಗಳ ಹಿಂದೆ ಪ್ರೇಮ ಪ್ರಕರಣ ವಾಸನೆ ಪೊಲೀಸರಿಗೆ ಬಡಿಯುತ್ತಿದೆ. ಇದರ ಜೊತೆ ಹಣಕಾಸಿನ ವಿಚಾರವಾಗಿಯೂ ಜಗಳವಾಗಿದ್ದು, ಅದೇ ಜಗಳ ಕೊಲೆಗೆ ತಿರುಗಿದೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.

ಮಂಡ್ಯ ಗೋಮಾಳದಲ್ಲಿ ಅಪರೂಪದ ಲೀಥಿಯಂ ನಿಕ್ಷೇಪ ಪತ್ತೆ: ಖುದ್ದು ಜಿಲ್ಲಾಧಿಕಾರಿಯೇ ಸ್ಥಳಕ್ಕೆ ಭೇಟಿ!

ಬಿಗುವಿನ ವಾತಾವರಣ
ಜೋಡಿ ಕೊಲೆಯಿಂದ ಮಹದೇಶ್ವರಪುರದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ. ಪರಿಸ್ಥಿತಿ ತಿಳಿಗೊಳಿಸಲು ಶ್ರಮಿಸುತ್ತಿರುವ ಪೊಲೀಸರು ಸ್ಥಳದಲ್ಲಿಯೇ ಮೊಕ್ಕಾಂ ಹೂಡಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ