ಆ್ಯಪ್ನಗರ

ವಿದುಷಿ ಡಾ.ಚೇತನಾ ರಾಧಾಕೃಷ್ಣಗೆ ರಾಷ್ಟ್ರೀಯ ನೃತ್ಯಕಲಾ ಶ್ರೀ ಪ್ರಶಸ್ತಿ

ವಿದುಷಿ ಡಾ...

Vijaya Karnataka 25 Apr 2019, 5:00 am
ಮಂಡ್ಯ : ಗ್ಲೋಬಲ್‌ ಥಿಯೇಟರ್‌ ಆರ್ಟ್ಸ್ ಒಡಿಸ್ಸಾದ ಕಟಕ್‌ನಲ್ಲಿ ಇತ್ತೀಚೆಗೆ ಆಯೋಜಿಸಿದ್ದ ರಾಷ್ಟ್ರೀಯ ನೃತ್ಯ ಉತ್ಸವದಲ್ಲಿ ನಗರದ ಗುರುದೇವ ಲಲಿತಕಲಾ ಅಕಾಡೆಮಿ ನಿರ್ದೇಶಕಿ, ವಿದುಷಿ ಡಾ.ಚೇತನಾ ರಾಧಾಕೃಷ್ಣ ಅವರಿಗೆ ರಾಷ್ಟ್ರೀಯ ನೃತ್ಯಕಲಾ ಶ್ರೀ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.
Vijaya Karnataka Web mandya chetana radhakrishna get national dance award
ವಿದುಷಿ ಡಾ.ಚೇತನಾ ರಾಧಾಕೃಷ್ಣಗೆ ರಾಷ್ಟ್ರೀಯ ನೃತ್ಯಕಲಾ ಶ್ರೀ ಪ್ರಶಸ್ತಿ


ಇದೇ ವೇಳೆಯಲ್ಲಿ ರಾಷ್ಟ್ರೀಯ ನೃತ್ಯ ಸ್ಪರ್ಧೆಯ ನಾನಾ ವಿಭಾಗಗಳಲ್ಲಿ ಅಕಾಡೆಮಿಯ ವಿದ್ಯಾರ್ಥಿಗಳು ಸಮೂಹ ನೃತ್ಯದಲ್ಲಿ ಪ್ರಥಮ ಮತ್ತು ದ್ವಿತೀಯ ಸ್ಥಾನ ಗಳಿಸಿದ್ದು, ಏಕವ್ಯಕ್ತಿ ನೃತ್ಯ ಸ್ಪರ್ಧೆಯಲ್ಲಿ ಭಾವನ(ದ್ವಿತೀಯ), ಜಿ.ಪ್ರಜ್ಞಾ (ತೃತೀಯ), ಕೆ.ಎಸ್‌.ಜೀವಿತ(ಚತುರ್ಥ) ಹಾಗೂ ಎಂ.ಸಿ.ಲಾವಣ್ಯ, ದೀಕ್ಷಾ ಶೆಟ್ಟಿ, ಶಮಿತ ಅವರು ಕಿರಿಯ ವಿಭಾಗದಲ್ಲಿ ಭಾಗವಹಿಸಿ ವಿಜೇತರಾಗಿದ್ದಾರೆ.

ಈ ನೃತ್ಯೋತ್ಸವದಲ್ಲಿ ಕೆ.ಎಸ್‌.ಕೃಷ್ಣವೇಣಿ ಜೀವಿತ, ಎಸ್‌.ವಿಸ್ಮಯ, ಎಂ.ಸಿ.ಲಾವಣ್ಯ, ಪುಣ್ಯ ಐ ಭಟ್‌, ಖುಷಿ ಜೆ.ರಾಮ್‌, ಎಚ್‌.ಆರ್‌.ಭವನ, ವಿಸ್ಮಯ ಎಸ್‌.ಕುಮಾರ್‌ ಭಾಗವಹಿಸಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ