ಆ್ಯಪ್ನಗರ

ಭಾರಿ ಮಳೆಗೆ ಒಡೆದ ಕೆರೆ ಏರಿ

ತಾಲೂಕಿನಲ್ಲಿ ಶನಿವಾರ ಸುರಿದ ಭಾರಿ ಮಳೆಯಿಂದಾಗಿ ಸಂತೇಬಾಚಹಳ್ಳಿ ಹೋಬಳಿಯ ನಾಯಕನಹಳ್ಳಿ ಗ್ರಾಮದ ಕೆರೆಯ ಏರಿ ಒಡೆದು 20 ಎಕರೆ ಬೆಳೆ ನಾಶವಾಗಿದೆ. ಅಲ್ಲದೆ, ಸಿಡಿಲು ಬಡಿಲು ಮನೆ ಸಂಪೂರ್ಣ ಹಾನಿಯಾಗಿದೆ.

Vijaya Karnataka 3 Jun 2018, 5:00 am
ಕೆ.ಆರ್‌.ಪೇಟೆ: ತಾಲೂಕಿನಲ್ಲಿ ಶನಿವಾರ ಸುರಿದ ಭಾರಿ ಮಳೆಯಿಂದಾಗಿ ಸಂತೇಬಾಚಹಳ್ಳಿ ಹೋಬಳಿಯ ನಾಯಕನಹಳ್ಳಿ ಗ್ರಾಮದ ಕೆರೆಯ ಏರಿ ಒಡೆದು 20 ಎಕರೆ ಬೆಳೆ ನಾಶವಾಗಿದೆ. ಅಲ್ಲದೆ, ಸಿಡಿಲು ಬಡಿಲು ಮನೆ ಸಂಪೂರ್ಣ ಹಾನಿಯಾಗಿದೆ.
Vijaya Karnataka Web mandya krpete heavy rain lake break corp waste
ಭಾರಿ ಮಳೆಗೆ ಒಡೆದ ಕೆರೆ ಏರಿ


ನಾಯಕನಹಳ್ಳಿಯ ಎನ್‌.ಮಂಜೇಗೌಡ ಮನೆಗೆ ಸಿಡಲು ಬಡಿದ ಪರಿಣಾಮ ಚಾವಣಿ, ಗೋಡೆ ಕುಸಿದಿದೆ. ಅದೃಷ್ಟವಶಾತ್‌ ಮನೆಯಲ್ಲಿ ಯಾರೂ ಇಲ್ಲದ ಕಾರಣ ಪ್ರಾಣ ಹಾನಿಯಾಗಿಲ್ಲ. ಮನೆಯಲ್ಲಿದ್ದ ದಿನಬಳಕೆಯ ವಸ್ತುಗಳು, ಬಟ್ಟೆಗಳು, ಪಾತ್ರೆ ಮತ್ತಿತರರ ವಸ್ತುಗಳು ಗೋಡೆಯಡಿಗೆ ಸಿಲುಕಿ ನಾಶವಾಗಿವೆ.

ಒಡೆದ ಕೆರೆ ಏರಿ: ನಾಯಕನಹಳ್ಳಿಯ ಕೆರೆ ಏರಿಯು ಒಡೆದ ಪರಿಣಾಮ ಕೆರೆಯಲ್ಲಿ ಸಂಗ್ರಹಗೊಂಡಿದ್ದ ಮಳೆ ನೀರು ವ್ಯರ್ಥವಾಗಿ ಹರಿದುಹೋಗಿ ಕೆರೆ ಬಯಲಿನಲ್ಲಿ ಬೆಳೆದಿದ್ದ 20 ಎಕರೆ ಭತ್ತದ ಬೆಳೆ ನಾಶವಾಗಿದೆ. ಒಂದು ವಾರದಿಂದ ಸುರಿದಿದ್ದ ಮಳೆಯಿಂದಾಗಿ ಕೆರೆಯಲ್ಲಿ ಸಾಕಷ್ಟು ನೀರು ಸಂಗ್ರಹವಾಗಿತ್ತು. ಇದು ಈ ಭಾಗದ ಜಾನುವಾರುಗಳಿಗೂ ಆಸರೆಯಾಗಿತ್ತು.

ಕೆರೆ ಏರಿ ಒಡೆದ ಪರಿಣಾಮ ನಾಯಕನಹಳ್ಳಿಗೆ ಸಂಪರ್ಕ ಕಲ್ಪಿಸುವ ಸಂಚಾರ ಬಂದ್‌ ಆಗಿದ್ದು, ಜನರು ಪರದಾಡುವಂತಾಗಿದೆ. ಮಳೆಯಿಂದಾಗಿ ತಾಲೂಕಿನ ಹಲವೆಡೆ ಮರಗಳು ಧರೆಗುರುಳಿವೆ. ಪಟ್ಟಣದ ಪಶುವೈದ್ಯ ಇಲಾಖಾ ಕಚೇರಿ ಮುಂದಿನ ಮರವೊಂದು ಬುಡಸಮೇತ ಮುಖ್ಯರಸ್ತೆಗೆ ಉರುಳಿ ಬಿದ್ದಿದೆ. ಆದರೆ ಯಾವುದೇ ಅಪಾಯ ಸಂಭವಿಸಿಲ್ಲ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ