ಮಂಡ್ಯ: ಕೋವಿಡ್ಗೆ ನ್ಯಾಯವಾದಿ ಬಲಿ
ಜ್ವರದಿಂದಾಗಿ ಜ.13ರಂದು ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದ ಇವರಿಗೆ ಕೊರೊನಾ ಟೆಸ್ಟ್ ಮಾಡಿದ ನಂತರ ಪಾಸಿಟಿವ್ ವರದಿ ಬಂದಿತ್ತು. ಜ್ವರ ಹೆಚ್ಚಾಗಿ ನ್ಯೂಮೊನಿಯಾ ಕೂಡ ಆಗಿತ್ತು. ಸಕ್ಕರೆಕಾಯಿಲೆ ಮತ್ತು ಉಸಿರಾಟದ ತೊಂದರೆ ಬಳಲುತ್ತಿದ್ದ ಇವರು ಚಿಕಿತ್ಸೆ ಫಲಿಸದೆ ಶುಕ್ರವಾರ ಕೊನೆಯುಸಿರೆಳೆದರು.
Vijaya Karnataka Web 15 Jan 2021, 10:37 pm
ಮಂಡ್ಯ: ಎರಡು ತಿಂಗಳ ಬಳಿಕ ಜಿಲ್ಲೆಯಲ್ಲಿ ಶುಕ್ರವಾರ ಕೊರೊನ ವೈರಸ್ಗೆ ಮಹಿಳೆಯೊಬ್ಬರು ಬಲಿಯಾಗಿದ್ದಾರೆ. ಇದರೊಂದಿಗೆ ಜಿಲ್ಲೆಯಲ್ಲಿ ಕೋವಿಡ್ನಿಂದಾದ ಸಾವಿನ ಪ್ರಕರಣಗಳ ಸಂಖ್ಯೆ 149ಕ್ಕೇರಿದೆ.
ನಗರದ ಅನ್ನಪೂರ್ಣೇಶ್ವರನಗರ ನಿವಾಸಿ, ನ್ಯಾಯವಾದಿ ಇ.ಎಸ್.ದೇವಯಾನಿ (44) ಮೃತರು.
ಕಳೆದ 17 ವರ್ಷಗಳಿಂದ ಮಂಡ್ಯದಲ್ಲಿ ವಕೀಲರಾಗಿ ಕೆಲಸ ಮಾಡುತ್ತಿದ್ದ ದೇವಯಾನಿ ಅವರು, ನಾನಾ ವಿಮಾ ಕಂಪನಿಗಳಿಗೆ ಪ್ಯಾನಲ್ ಅಡ್ವೋಕೇಟ್ ಆಗಿದ್ದರು. ಅವಿವಾಹಿತೆಯಾಗಿ ಉಳಿದಿದ್ದ ಇವರು, ಕುಟುಂಬದ ಜವಾಬ್ದಾರಿ ಹೊತ್ತುಕೊಂಡು ಸಹೋದರಿಯ ವಿವಾಹವನ್ನು ಮಾಡಿದ್ದರು.
ಜ್ವರದಿಂದಾಗಿ ಜ.13ರಂದು ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದ ಇವರಿಗೆ ಕೊರೊನಾ ಟೆಸ್ಟ್ ಮಾಡಿದ ನಂತರ ಪಾಸಿಟಿವ್ ವರದಿ ಬಂದಿತ್ತು. ಜ್ವರ ಹೆಚ್ಚಾಗಿ ನ್ಯೂಮೊನಿಯಾ ಕೂಡ ಆಗಿತ್ತು. ಸಕ್ಕರೆಕಾಯಿಲೆ ಮತ್ತು ಉಸಿರಾಟದ ತೊಂದರೆ ಬಳಲುತ್ತಿದ್ದ ಇವರು ಚಿಕಿತ್ಸೆ ಫಲಿಸದೆ ಶುಕ್ರವಾರ ಕೊನೆಯುಸಿರೆಳೆದರು.
ಮತ್ತೊಬ್ಬ ಸಾವು?
ಕೊರೊನಾದಿಂದ ಮಂಡ್ಯ ಜಿಲ್ಲಾಸ್ಪತ್ರೆಯಲ್ಲಿ ಮತ್ತೊಬ್ಬ ವ್ಯಕ್ತಿ ಮೃತಪಟ್ಟಿದ್ದಾನೆ. ಮೈಸೂರು ಜಿಲ್ಲೆ ಹುಣಸೂರು ತಾಲೂಕು ಬಿಳಿಕೆರೆ ನಿವಾಸಿ ಸುಬ್ಬೇಗೌಡ ಮೃತ ವ್ಯಕ್ತಿ. ಹೃದಯಾಘಾತದಿಂದ ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದ ಈತ ಚಿಕಿತ್ಸೆ ಲಿಸದೆ ಶುಕ್ರವಾರ ಕೊನೆಯುಸಿರೆಳೆದಿದ್ದಾನೆ. ಆದರೆ, ಸಾವಿನ ಬಳಿಕ ಆತನಿಗೆ ಕೊರೊನಾ ಪಾಸಿಟಿವ್ ಇರುವುದು ದೃಢಪಟ್ಟಿದೆ. ಹೀಗಾಗಿ ಈ ಪ್ರಕರಣವನ್ನು ಕೊರೊನಾ ಸಾವಿನ ಪ್ರಕರಣಗಳ ಸಂಖ್ಯೆಗೆ ಸೇರಿಸಬೇಕೋ? ಬೇಡವೊ ಎನ್ನುವುದು ಡೆತ್ ಆಡಿಟ್ನಲ್ಲಿ ನಿರ್ಧಾರವಾಗಲಿದೆ ಎಂದು ಮಿಮ್ಸ್ ಪ್ರಭಾರ ನಿರ್ದೇಶಕ ಡಾ.ಎಂ.ಆರ್. ಹರೀಶ್ ‘ವಿಜಯ ಕರ್ನಾಟಕ’ಕ್ಕೆ ತಿಳಿಸಿದರು.
ನಗರದ ಅನ್ನಪೂರ್ಣೇಶ್ವರನಗರ ನಿವಾಸಿ, ನ್ಯಾಯವಾದಿ ಇ.ಎಸ್.ದೇವಯಾನಿ (44) ಮೃತರು.
ಕಳೆದ 17 ವರ್ಷಗಳಿಂದ ಮಂಡ್ಯದಲ್ಲಿ ವಕೀಲರಾಗಿ ಕೆಲಸ ಮಾಡುತ್ತಿದ್ದ ದೇವಯಾನಿ ಅವರು, ನಾನಾ ವಿಮಾ ಕಂಪನಿಗಳಿಗೆ ಪ್ಯಾನಲ್ ಅಡ್ವೋಕೇಟ್ ಆಗಿದ್ದರು. ಅವಿವಾಹಿತೆಯಾಗಿ ಉಳಿದಿದ್ದ ಇವರು, ಕುಟುಂಬದ ಜವಾಬ್ದಾರಿ ಹೊತ್ತುಕೊಂಡು ಸಹೋದರಿಯ ವಿವಾಹವನ್ನು ಮಾಡಿದ್ದರು.
ಜ್ವರದಿಂದಾಗಿ ಜ.13ರಂದು ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದ ಇವರಿಗೆ ಕೊರೊನಾ ಟೆಸ್ಟ್ ಮಾಡಿದ ನಂತರ ಪಾಸಿಟಿವ್ ವರದಿ ಬಂದಿತ್ತು. ಜ್ವರ ಹೆಚ್ಚಾಗಿ ನ್ಯೂಮೊನಿಯಾ ಕೂಡ ಆಗಿತ್ತು. ಸಕ್ಕರೆಕಾಯಿಲೆ ಮತ್ತು ಉಸಿರಾಟದ ತೊಂದರೆ ಬಳಲುತ್ತಿದ್ದ ಇವರು ಚಿಕಿತ್ಸೆ ಫಲಿಸದೆ ಶುಕ್ರವಾರ ಕೊನೆಯುಸಿರೆಳೆದರು.
ಮತ್ತೊಬ್ಬ ಸಾವು?
ಕೊರೊನಾದಿಂದ ಮಂಡ್ಯ ಜಿಲ್ಲಾಸ್ಪತ್ರೆಯಲ್ಲಿ ಮತ್ತೊಬ್ಬ ವ್ಯಕ್ತಿ ಮೃತಪಟ್ಟಿದ್ದಾನೆ. ಮೈಸೂರು ಜಿಲ್ಲೆ ಹುಣಸೂರು ತಾಲೂಕು ಬಿಳಿಕೆರೆ ನಿವಾಸಿ ಸುಬ್ಬೇಗೌಡ ಮೃತ ವ್ಯಕ್ತಿ. ಹೃದಯಾಘಾತದಿಂದ ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದ ಈತ ಚಿಕಿತ್ಸೆ ಲಿಸದೆ ಶುಕ್ರವಾರ ಕೊನೆಯುಸಿರೆಳೆದಿದ್ದಾನೆ. ಆದರೆ, ಸಾವಿನ ಬಳಿಕ ಆತನಿಗೆ ಕೊರೊನಾ ಪಾಸಿಟಿವ್ ಇರುವುದು ದೃಢಪಟ್ಟಿದೆ. ಹೀಗಾಗಿ ಈ ಪ್ರಕರಣವನ್ನು ಕೊರೊನಾ ಸಾವಿನ ಪ್ರಕರಣಗಳ ಸಂಖ್ಯೆಗೆ ಸೇರಿಸಬೇಕೋ? ಬೇಡವೊ ಎನ್ನುವುದು ಡೆತ್ ಆಡಿಟ್ನಲ್ಲಿ ನಿರ್ಧಾರವಾಗಲಿದೆ ಎಂದು ಮಿಮ್ಸ್ ಪ್ರಭಾರ ನಿರ್ದೇಶಕ ಡಾ.ಎಂ.ಆರ್. ಹರೀಶ್ ‘ವಿಜಯ ಕರ್ನಾಟಕ’ಕ್ಕೆ ತಿಳಿಸಿದರು.