ಮಂಡ್ಯ: ಮರ ಕಡಿಯುವ ವ್ಯಕ್ತಿ ಮರ ಕಡಿಯುವುದಕ್ಕೆ ತೆಗೆದುಕೊಳ್ಳುವ ಸಮಯಕ್ಕಿಂತ ಹೆಚ್ಚಿನ ಸಮಯವನ್ನು ಕೊಡಲಿ ಹರಿತಗೊಳಿಸುವುದಕ್ಕೆ ತೆಗೆದುಕೊಳ್ಳುತ್ತಾನೆ. ಹಾಗೆಯೇ ಪರೀಕ್ಷೆ ಎಂಬ ಮರ ಕಡಿಯಲು ನೀವು ಕಲಿಕೆ ಎಂಬ ಕೊಡಲಿ ಹರಿತಗೊಳಿಸುವ ಪ್ರಕ್ರಿಯೆಯಲ್ಲಿ ಹೆಚ್ಚು ತೊಡಗಿಸಿಕೊಳ್ಳಬೇಕು ಎಂದು ಮದ್ದೂರು ತಾಲೂಕು ಚಂದೂಪುರ ಸರಕಾರಿ ಪದವಿ ಪೂರ್ವ ಕಾಲೇಜಿನ ಉಪ ಪ್ರಾಂಶುಪಾಲ ಎಸ್.ಲೋಕೇಶ್ ಹೇಳಿದರು.
ಪರೀಕ್ಷೆ ಮತ್ತು ಕಲಿಕೆಯ ಭಿನ್ನತೆಯನ್ನು ದೃಷ್ಟಾಂತದ ಮೂಲಕ ವಿವರಿಸಿ, ಪರೀಕ್ಷೆ ಬಗ್ಗೆ ವಿದ್ಯಾರ್ಥಿಗಳಲ್ಲಿನ ಭೈ ಹೋಗಲಾಡಿಸಿದರು. ''ಪಠ್ಯ ವಿಷಯಗಳ ಕಲಿಕೆ ಸಹಜ. ಆದರೆ, ಪರೀಕ್ಷಾ ಸಮಯದಲ್ಲಿನ ಭಯವು ಕಲಿಕೆಯನ್ನು ಮರೆಸುತ್ತದೆ. ಹೀಗಾಗಿ ಭಯ ಬಿಡಿ. ಕಲಿಕೆಯ ವಿಧಾನ ಬದಲಾವಣೆಯಿಂದಲೂ ನೀವು ರಿಲ್ಯಾಕ್ಸ್ ಆಗಬಹುದು'' ಎಂದು ಹೇಳಿದರು.
''ನಮಗಿಷ್ಟವಾದ ಕೆಲಸದಲ್ಲಿ ತೊಡಗಿದಾಗ ಸಮಯ ನಮಗೆ ಗೊತ್ತಿಲ್ಲದಂತೆ ಸಾಗುತ್ತದೆ. ಆದರೆ, ಇಷ್ಟವಿಲ್ಲದ ಕೆಲಸ ಮಾಡುವಾಗ ಸಮಯ ಭಾರವಾಗುತ್ತದೆ. ಹೀಗಾಗಿ ಕಲಿಕೆಯಲ್ಲಿ ಆಸಕ್ತಿ, ಸಮಯಪರಿಪಾಲನೆ ಮುಖ್ಯ. ಸ್ಮಾರ್ಟ್ ವರ್ಕ್ ನಿಮ್ಮದಾಗಲಿ. ಬುದ್ಧಿವಂತರಾರಯರೂ ಹೊಸ ಕೆಲಸ ಆರಂಭಿಸಿ ಯಶಸ್ಸು ಸಾಧಿಸಿಲ್ಲ. ಇರುವ ಕೆಲಸವನ್ನೇ ಹೊಸ ರೀತಿಯಲ್ಲಿ ಮಾಡಿದ್ದಾರೆ. ಹೀಗಾಗಿ ಯಾವುದನ್ನಾದರೂ ಮಾಡಿ, ಉತ್ಕೃಷ್ಟವಾದುದನ್ನು ಮಾಡಿ'' ಎಂದು ತಿಳಿಸಿದರು.
ಥಿಂಕ್ ಬಿಫೋರ ಇಂಕ್ ಎಂಬ ಮಾತನ್ನು ಸದಾ ನೆನಪಿಟ್ಟುಕೊಂಡು ಪರೀಕ್ಷೆಯಲ್ಲಿ ಪ್ರಶ್ನೆಗಳಿಗೆ ಉತ್ತರಿಸಿ. ನಿಮ್ಮ ಪಕ್ಕದಲ್ಲಿ ಕುಳಿತಿರುವವರು ಈಗ ನಿಮಗೆ ಸ್ನೇಹಿತರು. ಆದರೆ, ಪರೀಕ್ಷೆಯಲ್ಲಿ ಪ್ರತಿಸ್ಪರ್ಧಿಗಳು. ಹೀಗಾಗಿ ನಿಮ್ಮ ನಡೆ, ಕಲಿಕೆ ಸ್ಪರ್ಧಾತ್ಮಕವಾಗಿರಲಿ. ಎಂತಹ ಸಂದರ್ಭದಲ್ಲೂ ನಿರಾಸೆಗೊಳ್ಳಬೇಡಿ. ಆತ್ಮವಿಶ್ವಾಸದಿಂದಿರಿ. ಒಎಂಆರ್ ಮೇಲೆ ಕಣ್ಣಾಡಿಸಿ. ಗೊತ್ತಿರುವ ಪ್ರಶ್ನೆಗಳಿಗೆ ಮೊದಲು ಉತ್ತರಿಸಿ. ಹೆಡ್, ಹಾರ್ಟ್, ಹ್ಯಾಂಡ್ನ್ನು ಸಮತೋಲನವಾಗಿ ಬಳಸಿ'' ಎಂದು ಸಲಹೆ ನೀಡಿದರು.
''10-15 ಪ್ರಶ್ನೆಗಳಿಗೊಂದು ಪ್ರಶ್ನೆ ಡಿಫಿಕಲ್ಟ್ ಆಗಿರುತ್ತದೆ. ಕಷ್ಟದ ಪ್ರಶ್ನೆಗಳನ್ನು ಕೊನೆಯಲ್ಲಿ ಬರೆಯರಿ. ನಮಗೆ ಇನ್ನೊಬ್ಬರು ವಿಜಯವನ್ನು ತಂದುಕೊಡುವುದಿಲ್ಲ. ನಾವೇ ಗಳಿಸಿಕೊಳ್ಳಬೇಕು. ವಿಜಯೀಭವ ಎಂದಷ್ಟೇ ನಾವು ಹಾರೈಸಬಹುದು'' ಎಂದು ಹೇಳಿದರು.