ಆ್ಯಪ್ನಗರ

ಸುಮಲತಾ ಗೆಲುವು ಖಚಿತ: ಯಶ್‌

ವಿಕ ಸುದ್ದಿಲೋಕ ಮದ್ದೂರು ಮಂಡ್ಯ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿರುವ ಸುಮಲತಾ ಅಂಬರೀಷ್‌ ಗೆಲುವು ಖಚಿತ ಎಂದು ನಟ ಯಶ್‌ ವಿಶ್ವಾಸ ವ್ಯಕ್ತಪಡಿಸಿದರು...

Vijaya Karnataka 16 May 2019, 5:00 am
ಮದ್ದೂರು: ಮಂಡ್ಯ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿರುವ ಸುಮಲತಾ ಅಂಬರೀಷ್‌ ಗೆಲುವು ಖಚಿತ ಎಂದು ನಟ ಯಶ್‌ ವಿಶ್ವಾಸ ವ್ಯಕ್ತಪಡಿಸಿದರು.
Vijaya Karnataka Web mandya lok sabha election sumalatha will win says actor yash
ಸುಮಲತಾ ಗೆಲುವು ಖಚಿತ: ಯಶ್‌


ತಾಲೂಕಿನ ಕೆರೆಮೇಗಲದೊಡ್ಡಿ ಗ್ರಾಮದ ಖಾಸಗಿ ಕಾರ್ಯಕ್ರಮಕ್ಕೆ ಭೇಟಿ ನೀಡಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಚುನಾವಣೆಯಲ್ಲಿ ಸುಮಲತಾ ಅಂಬರೀಷ್‌ ಪರ ಅಲೆ ಇತ್ತು. ಈಗಾಗಲೇ ಗೆಲುವಿನ ಅಂತರ ಹೇಳಿದರೆ ಕೊಚ್ಚಿ ಕೊಂಡಂತಾಗುತ್ತದೆ. ಜಿಲ್ಲೆಯ ಮತದಾರರು ಯಾರನ್ನು ಕೈ ಹಿಡಿಯಲಿದ್ದಾರೆಂಬುದು ಮೇ 23ರಂದು ಗೊತ್ತಾಗಲಿದೆ ಎಂದರು.

ಚುನಾವಣೆ ಬಳಿಕ ಜೋಡೆತ್ತುಗಳು ಮಂಡ್ಯದಲ್ಲಿ ಕಾಣಿಸುತ್ತಿಲ್ಲ ಎಂಬ ಎದುರಾಳಿಗಳ ಟೀಕೆಗೆ ಪ್ರತಿಕ್ರಿಯಿಸಿದ ಅವರು, ಈಗಾಗಲೇ ಮಂಡ್ಯಕ್ಕೆ ಹಲವಾರು ಬಾರಿ ಭೇಟಿ ನೀಡಿದ್ದೇನೆ. ಇದರೊಟ್ಟಿಗೆ ಸುಮಲತಾ ಅಂಬರೀಷ್‌ ಕೂಡ ನಾನಾ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡಿದ್ದಾರೆ. ಮುಂದಿನ ದಿನಗಳಲ್ಲಿ ಜಿಲ್ಲೆಯ ಜನರ ಜತೆ ನಿಲ್ಲುವುದಾಗಿ ಹೇಳಿದರು.

ತಾವು ಮಂಡ್ಯ ರಾಜಕಾರಣಕ್ಕೆ ಬರುವ ಕುರಿತು ಎದ್ದಿರುವ ಊಹಾಪೋಹಗಳಿಗೆ ಉತ್ತರಿಸಿದ ಅವರು, ತಾವು ಸ್ಪರ್ಧೆ ಮಾಡುವ ಬಗ್ಗೆ ಯಾವುದೇ ಆಲೋಚನೆ ಮಾಡಿಲ್ಲ. ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಷ್‌ ಗೆಲುವು ಕಂಡಲ್ಲಿ ಉತ್ತಮ ಕೆಲಸ ಕಾರ್ಯಗಳನ್ನು ಕೈಗೊಂಡು ಜಿಲ್ಲೆಯ ಅಭಿವೃದ್ಧಿಗೆ ಶ್ರಮಿಸಲಿದ್ದಾರೆಂದರು.

ದರ್ಶನ್‌ ಜತೆ ಸಿನಿಮಾಗೆ ರೆಡಿ: ಜೋಡೆತ್ತು ಟೈಟಲ್‌ ರಿಜಿಸ್ಟರ್‌ ಆಗಿದ್ದು, ನಾನು ಆ ಸಿನಿಮಾದಲ್ಲಿ ನಟಿಸುತ್ತಿಲ್ಲ. ದರ್ಶನ್‌ ಪ್ರೀತಿಯಿಂದ ಜೋಡೆತ್ತೆಂದು ಬಣ್ಣಿಸಿದ್ದರು. ನನಗಿಂತ ಹಿರಿಯ ನಟರಾದ ದರ್ಶನ್‌ ಹೇಳಿದ ಟೈಟಲ್‌ ಎಲ್ಲೆಡೆ ಪ್ರಸಿದ್ಧ ಆಯಿತು. ದರ್ಶನ್‌ ಅವರಂತಹ ಸ್ಟಾರ್‌ ಜತೆ ಸಿನಿಮಾ ಮಾಡಬೇಕಾದರೆ ಒಳ್ಳೆಯ ಕಥೆ ಸಿಗಬೇಕು. ಉತ್ತಮ ಕಥೆ ಸಿಕ್ಕರೆ ದರ್ಶನ್‌ ಜತೆ ಸಿನಿಮಾ ಮಾಡುತ್ತೇನೆ ಎಂದರು.

''ನಿಖಿಲ್‌ ಎಲ್ಲಿದಿಯಪ್ಪಾ'' ಸಿನಿಮಾಗೆ ಈಗಲೇ ಶುಭ ಕೋರಿದ ಅವರು, ಕೆಜಿಎಫ್‌-2 ಸಿನಿಮಾ ಚಿತ್ರಿಕರಣ ಶುರುವಾಗಲಿದೆ ಎಂದರು.

ಪುರಸಭೆ ಸದಸ್ಯರಾದ ಸಚಿನ್‌, ನಂದೀಶ್‌, ಮಾಜಿ ಅಧ್ಯಕ್ಷ ಎಂ.ಪಿ. ಅಮರ್‌ಬಾಬು, ಮುಖಂಡರಾದ ಇಂಡುವಾಳ ಸಚ್ಚಿದಾನಂದ ಇತರರು ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ