ಆ್ಯಪ್ನಗರ

ಪೊಲೀಸರಿಂದ ದಬ್ಬಾಳಿಕೆ: ಆರೋಪ

ಪಟ್ಟಣ ಪೊಲೀಸರು ಮಾಂಗಲ್ಯ ಸರವನ್ನೇ ಲಂಚವಾಗಿ ಬಲವಂತವಾಗಿ ಪಡೆದುಕೊಂಡು ಹೋಗಿದ್ದಾರೆ ಎಂದು ಆರೋಪಿಸಿ ಮಿಮ್ಸ್‌ ಆಸ್ಪತ್ರೆ ಗುತ್ತಿಗೆ ನೌಕರರೊಬ್ಬರು ಮುಖ್ಯಮಂತ್ರಿ, ಸರಕಾರದ ಮುಖ್ಯ ಕಾರ್ಯದರ್ಶಿ, ಡಿಜಿ, ಐಜಿಪಿಗೆ ದೂರು ನೀಡಿದ್ದಾರೆ.

Vijaya Karnataka 31 May 2018, 5:00 am
ಮುಖ್ಯಮಂತ್ರಿ, ಸರಕಾರದ ಮುಖ್ಯ ಕಾರ್ಯದರ್ಶಿ, ಡಿಜಿ, ಐಜಿಪಿಗೆ ದೂರು
Vijaya Karnataka Web mandya malavally police arasement bribe
ಪೊಲೀಸರಿಂದ ದಬ್ಬಾಳಿಕೆ: ಆರೋಪ


ಮಳವಳ್ಳಿ: ಪಟ್ಟಣ ಪೊಲೀಸರು ಮಾಂಗಲ್ಯ ಸರವನ್ನೇ ಲಂಚವಾಗಿ ಬಲವಂತವಾಗಿ ಪಡೆದುಕೊಂಡು ಹೋಗಿದ್ದಾರೆ ಎಂದು ಆರೋಪಿಸಿ ಮಿಮ್ಸ್‌ ಆಸ್ಪತ್ರೆ ಗುತ್ತಿಗೆ ನೌಕರರೊಬ್ಬರು ಮುಖ್ಯಮಂತ್ರಿ, ಸರಕಾರದ ಮುಖ್ಯ ಕಾರ್ಯದರ್ಶಿ, ಡಿಜಿ, ಐಜಿಪಿಗೆ ದೂರು ನೀಡಿದ್ದಾರೆ.

ಮಂಡ್ಯ ನಿವಾಸಿ ಶರತ್‌ ದೂರು ನೀಡಿರುವವರು. ''ಮಳವಳ್ಳಿ ಪೊಲೀಸರು ಕಳ್ಳತನಕ್ಕೆ ಪ್ರಕರಣ ಸಂಬಂಧಿಸಿದಂತೆ ಆರೋಪಿಗಳನ್ನು ಜತೆಯಲ್ಲಿ ಕರೆದುಕೊಂಡು ನಮ್ಮ ಮನೆಗೆ ಬಂದಿದ್ದರು. ಅಲ್ಲಿ ಕಳ್ಳತನದ ಸಾಮಗ್ರಿಗಳನ್ನು ಕೊಂಡಿರುವ ಬಗ್ಗೆ ವಿಚಾರಿಸಿದರು. ಇದನ್ನು ನಿರಾಕರಿಸಿದಾಗ ಬೆದರಿಸಿ, ನಾನಾ ಪ್ರಕರಣಗಳಿಗೆ ನಿಮ್ಮನ್ನೂ ಸೇರಿಸುವುದಾಗಿ ಹೆದರಿಸಿದರು. ಬಳಿಕ ನನ್ನ ಪತ್ನಿಯ ಮಾಂಗಲ್ಯಸರವನ್ನು ಬಲವಂತವಾಗಿ ಕಸಿದುಕೊಂಡು ಹೋದರು'' ಎಂದು ಶರತ್‌ ದೂರಿನಲ್ಲಿ ತಿಳಿಸಿದ್ದಾರೆ.

-------------

ಪೊಲೀಸರೇ ದೌರ್ಜನ್ಯ ನಡೆಸಿ ಸರ ಕಸಿದುಕೊಂಡಿದ್ದಾರೆಂದು ಶರತ್‌ ಎಂಬುವರಿಂದ ತಮಗೆ ದೂರು ಬಂದಿದೆ. ಈ ಬಗ್ಗೆ ತನಿಖೆಗೆ ಕ್ರಮ ವಹಿಸಲಾಗಿದೆ. ಏ. 5ರಂದು ಸರಗಳ್ಳತನ ನಡೆದಿತ್ತು. ಸಿಕ್ಕಿಬಿದ್ದ ಕಳ್ಳ ಕೀರ್ತಿ ಎಂಬಾತ ಅಪ್ಪಿ ಮತ್ತು ಶರತ್‌ ಅವರಿಗೆ ಸರ ಕೊಟ್ಟಿದ್ದೇನೆ ಎಂದು ತಿಳಿಸಿದ್ದರು. ಈ ಹಿನ್ನೆಲೆಯಲ್ಲಿ ಶರತ್‌ ಅವರಿಂದ ಸರ ಪಡೆದಿರುವ ಪೊಲೀಸರು, ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ಒಂದೊಮ್ಮೆ ತನಿಖೆಯಲ್ಲಿ ಪೊಲೀಸರದ್ದು ತಪ್ಪಿದ್ದರೂ ಕ್ರಮ ವಹಿಸಲಾಗುವುದು. ಇಲ್ಲದಿದ್ದರೆ ದೂರುದಾರರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದು.

- ಜಿ.ರಾಧಿಕಾ, ಎಸ್ಪಿ, ಮಂಡ್ಯ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ