ನಾಗಮಂಗಲ: ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ದಿಂದ ಟಿಕೆಟ್ ನೀಡಲಿ, ನೀಡದಿರಲಿ ಚುನಾವಣೆಗೆ ಸ್ಪಧಿರ್ಧಿಸಲು ನಾನು ಸಿದ್ಧ ಎಂದು ಮಾಜಿ ಶಾಸಕ ಸುರೇಶ್ಗೌಡ ಹೇಳಿದರು.
ಪಟ್ಟಣದ ಎಸ್ಎಲ್ಎನ್ ಸಮುದಾಯ ಭವನದ ಆವರಣದಲ್ಲಿ ಶುಕ್ರವಾರ ಎಪಿಎಂಸಿ ಚುನಾವಣೆಯಲ್ಲಿ ವಿಜೇತರಾದ ಹಾಗೂ ಸ್ಪರ್ಧಿಸಿದ್ದ ಅಭ್ಯರ್ಥಿಗಳಿಗೆ ನಡೆದ ಅಭಿನಂದನಾ ಸಮಾರಂಭ ಹಾಗೂ ಕಾರ್ಯಕರ್ತರ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿ, ನಮ್ಮ ಪಕ್ಷ ದಲ್ಲಿರುವವರಿಗೆ ಅಧಿಧಿಕಾರದ ಮದ ತುಂಬಿ ತುಳುಕುತ್ತಿದೆ. ಮುಂದೆ ಏನಾಗುವುದೋ ಕಾದು ನೋಡುತ್ತೇನೆ. ನನ್ನನ್ನು ಯಾರೂ ಹೆದರಿಸಲು ಆಗುವುದಿಲ್ಲ. ಪ್ರೀತಿ- ವಿಶ್ವಾಸದಿಂದ ಮಾತ್ರ ನನ್ನನ್ನು ಗೆಲ್ಲಬಹುದೇ ವಿನಃ ದ್ವೇಷದಿಂದಲ್ಲ. ಮುಂದಿನ ದಿನಗಳಲ್ಲಿ ಪ್ರತಿ ಹಳ್ಳಿ-ಹಳ್ಳಿಗೂ ಬಂದು ಪಕ್ಷ ಸಂಘಟಿಸುತ್ತೇನೆ. ಜ.26ರಂದು ಕೊಪ್ಪ ಹೋಬಳಿಯಲ್ಲಿ ಕಾರ್ಯಕರ್ತರ ಸಭೆ, ಫೆಬ್ರವರಿಯಲ್ಲಿ ಬೆಳ್ಳೂರು ಹೋಬಳಿಯಲ್ಲಿ ಸಭೆ ನಡೆಸಲಿದ್ದೇನೆ ಎಂದರು.
ಹಿಂದಿನ ವಿಧಾನ ಪರಿಷತ್ ಚುನಾವಣೆಯಲ್ಲಿ ಇಂಧನ ಸಚಿವ ಡಿ.ಕೆ.ಶಿವ ಕುಮಾರ್ ಅವರು ಟಿಕೆಟ್ ಕೊಡುವುದಾಗಿ ಭರವಸೆ ನೀಡಿ ಕೊಡಲಿಲ್ಲ. ಮುಂಬರುವ ಚುನಾವಣೆಯಲ್ಲಿ ಪಕ್ಷ ದಿಂದ ಟಿಕೆಟ್ ನೀಡುವ ಭರವಸೆ ನೀಡಿದ್ದಾರೆ. ಒಂದು ವೇಳೆ ನೀಡದಿದ್ದರೂ ನಾನು ಅಭ್ಯರ್ಥಿಯಾಗುವುದು ಖಚಿತ. ಈವರೆಗೂ ಯಾರ ಮುಂದೆ ಕೈಯೊಡ್ಡಿಲ್ಲ. ಮುಂದೆಯೂ ಒಡ್ಡುವುದಿಲ್ಲ. ನಿಷ್ಠಾವಂತ ಕಾರ್ಯಕರ್ತರಿಗಾಗಿ ಟಿಕೆಟ್ ನೀಡುವಂತೆ ಒತ್ತಾಯಿಸಿದ್ದೇನೆ ಅಷ್ಟೆ. ಪಕ್ಷ ದಿಂದ ಜಿಪಂ ಚುನಾವಣೆಗೆ 2ಲಕ್ಷ , ತಾಪಂ ಚುನಾವಣೆಗೆ 50ಸಾವಿರ ಕೊಡುತ್ತಾರೆ. ಪಕ್ಷ ದ ಅಭ್ಯರ್ಥಿಗಳು ಗೆಲ್ಲಲೇಬೇಕು ಎಂಬ ಉದ್ದೇಶದಿಂದ ನನ್ನ ಕೈಯಿಂದ ಹಣ ನೀಡಿದ್ದೇನೆ. ಇತ್ತೀಚಿಗೆ ನಡೆದ ಎಪಿಎಂಸಿ ಚುನಾವಣೆಯಲ್ಲೂ ಸಹ ನಿಮ್ಮ ಕೈಯಿಂದ ಒಂದು ರೂಪಾಯಿ ಖರ್ಚು ಮಾಡಬೇಡಿ. ನಾನು ನಿಮಗೆ ಹಣ ಕೊಡುತ್ತೇನೆ ಎಂದು ಹೇಳಿ ಚುನಾವಣೆಗೆ ನಿಲ್ಲಿಸಿದ್ದೆ. 5 ಅಭ್ಯರ್ಥಿಗಳನ್ನು ಗೆಲ್ಲಿಸಿಕೊಂಡಿದ್ದೇವೆ ಎಂದು ಹೇಳಿದರು.
ಎಪಿಎಂಸಿ ಚುನಾವಣೆಯಲ್ಲಿ ದೇವೇಗೌಡರು ಹಾಗೂ ಕುಮಾರಸ್ವಾಮಿ ಅವರ ಭಾವಚಿತ್ರದೊಂದಿಗೆ ನನ್ನ ಭಾವಚಿತ್ರವನ್ನು ಹಾಕಿ ಯಾರೂ ಪ್ರಚಾರ ಮಾಡಿಲ್ಲ. ಆದರೆ ಅವರ ಭಾವಚಿತ್ರದೊಂದಿಗೆ ನನ್ನ ಭಾವಚಿತ್ರವನ್ನು ಹಾಕಿಸಿ ಮುಖ್ಯಮಂತ್ರಿಗಳ ಬಳಿ ಹೋಗಿ ಇಲ್ಲಸಲ್ಲದ ಆರೋಪ ಮಾಡುವ ಪಿತೂರಿ ನಡೆಸಿದ್ದಾರೆ. ಸುಳ್ಳು ಹೇಳಿಕೊಂಡು ಜೀವನ ನಡೆಸುವ ಬಾಳು ಏಕೆ? ಎಂದು ಸಿಟ್ಟಾದರು.
ಯಾರಿಗೂ ದ್ರೋಹ ಮಾಡಿಲ್ಲ:
ಪಕ್ಷ ಕ್ಕೆ ಸೇರ್ಪಡೆಗೊಂಡ ದಿನದಿಂದ ಈವರೆಗೂ ನಾನು ಯಾರಿಗೂ ದ್ರೋಹ ಮಾಡಿಲ್ಲ. ನನ್ನ ಜೊತೆಯಲ್ಲೇ ಇದ್ದ ಅನೇಕರು ನನಗೆ ದ್ರೋಹ ಮಾಡಿದ್ದಾರೆ. ಇನ್ನು ಮುಂದೆ ನಾನು ಮೋಸ ಹೋಗಲ್ಲ. ನಾನು ಏನೇ ತಪ್ಪು ಮಾಡಿದರೆ ನೇರವಾಗಿ ನನಗೆ ಹೇಳಿ. ಪಕ್ಷ ಸಂಘಟನೆಗೆ ಸಲಹೆ ನೀಡಿ. ನನ್ನ ಹಿಂದೆ ಮಾತನಾಡುವವರು ಯಾರೂ ನನ್ನ ಜೊತೆ ಇರಲೇ ಬೇಡಿ ಎಂದು ಹೇಳಿದರು.
ಎಲ್ಆರ್ಎಸ್ ಪರವಾಗಿದ್ದೆ:
ಕಳೆದ ವಿಧಾನಪರಿಷತ್ ಚುನಾವಣೆಯಲ್ಲಿ ಶಿವರಾಮೇ ಗೌಡರ ವಿರುದ್ಧ ಪ್ರಚಾರ ಮಾಡಿದ್ದೇನೆ ಎಂದು ಹೇಳುತ್ತಿದ್ದಾರೆ. ತಾಲೂಕಿನಲ್ಲಿ ನನ್ನ ಬೆಂಬಲಿಗರಾಗಲಿ, ನಾನಾಗಲಿ ಅವರ ವಿರುದ್ಧ ಪ್ರಚಾರ ಮಾಡಿದ್ದೇವೆ ಎಂಬುದನ್ನು ಯಾರಾದರೂ ಹೇಳಿದರೆ ಕೂಡಲೇ ಪಕ್ಷ ಕ್ಕೆ ರಾಜೀನಾಮೆ ನೀಡಿ ಹೊರ ಹೋಗುತ್ತೇನೆ. ಕಾಂಗ್ರೆಸ್ ಪಕ್ಷ ವನ್ನು ಕಟ್ಟಲು ಸಾಕಷ್ಟು ಶ್ರಮಿಸಿದ್ದೇನೆ. ಬೇರೆ ಪಕ್ಷ ದವರ ಬಳಿ ಹಣ ಪಡೆದು ಪಕ್ಷ ಕ್ಕೆ ದ್ರೋಹ ಬಗೆಯುವ ಕೆಲಸ ನಾನು ಎಂದೂ ಮಾಡಲ್ಲ ಎಂದು ಶಾಸಕ ಚಲುವರಾಯ ಸ್ವಾಮಿ ಅವರ ವಿರುದ್ಧ ಪರೋಕ್ಷವಾಗಿ ಹರಿಹಾಯ್ದರು.
ಪಕ್ಷ ದ ನಿಷ್ಠಾವಂತ ಕಾರ್ಯಕರ್ತನಾಗಿ ಶ್ರಮಿಸಿರುವ ನನ್ನನ್ನು ಬಿಟ್ಟು ಪಕ್ಷ ದ ವಿರುದ್ಧ ಮಾತನಾಡಿಕೊಂಡೆ ಬಂದ ಚಲುವರಾಯಸ್ವಾಮಿ ಅವರಿಗೆ ಯಾವ ಆಧಾರದ ಮೇಲೆ ಪಕ್ಷ ದ ಟಿಕೆಟ್ ನೀಡುತ್ತಾರೋ ನನಗಂತೂ ತಿಳಿಯುತ್ತಿಲ್ಲ. ನಾನು ಶಾಸಕನಾಗಿದ್ದ ವೇಳೆ ಬಿಜೆಪಿಯವರೊಂದಿಗೆ ಮಾತನಾಡಿ ತಂದ ಅನುದಾನವನ್ನೇ ಈವರೆಗೂ ಚಲುವರಾಯಸ್ವಾಮಿ ಅವರು ಗುದ್ದಲಿ ಪೂಜೆ ಮಾಡಿಕೊಂಡು ಬರುತ್ತಿದ್ದಾರೆ. ನಾಗಮಂಗಲದ ಅಭಿವಭಿದ್ಧಿಗೆ ಇವರ ಕೊಡುಗೆ ಏನು?. ಶಾಸಕರಾಗಿ ಎಲ್ಲ ಇಲಾಖೆಗಳಲ್ಲೂ ವಸೂಲಿ ಮಾಡಿಕೊಂಡು ಬರುತ್ತಿದ್ದಾರೆ. ಆದರೆ ನಮಗೆ ಆ ಬುದ್ಧಿ ಇಲ್ಲ. ಕೆಲವರು ಹಣ ಹಂಚಿ ಗೆದ್ದು ಬಂದಿದ್ದಾರೆ. ನಮ್ಮ ಕೈಯಲ್ಲಿ ಆ ಶಕ್ತಿ ಇಲ್ಲ ಎಂದರು.
------------------------------
ಚಲುವರಾಯಸ್ವಾಮಿ ಅವರನ್ನು ಪಕ್ಷ ಕ್ಕೆ ಸೇರಿಸಿಕೊಳ್ಳಲು ಬಿಡುವುದಿಲ್ಲ
ಬಾಕ್ಸ್ ಐಟಂಗೆ
ರಾಜ್ಯ ಸಭೆ ಚುನಾವಣೆ ವೇಳೆ ಕೆ.ಸಿ.ರಾಮಮೂರ್ತಿ ಅವರಿಗೆ ಮತ ನೀಡಲು ಶಾಸಕ ಎನ್.ಚಲುವರಾಯಸ್ವಾಮಿ ಕೋಟಿ ಗಟ್ಟಲೇ ಹಣ ಪಡೆದಿದ್ದಾರೆ ಎಂದು ಮಾಜಿ ಶಾಸಕ ಕೆ.ಸುರೇಶ್ಗೌಡ ಆರೋಪಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನನಗೆ ಬಲ್ಲ ಮೂಲಗಳಿಂದ ಬಂದ ಮಾಹಿತಿಯ ಪ್ರಕಾರ 2.40 ಕೋಟಿಯಿಂದ 5.40 ಕೋಟಿವರೆಗೆ ರಾಜ್ಯ ಸಭಾ ಚುನಾವಣೆಯಲ್ಲಿ ಮತ ನೀಡಲು ಹಣ ಪಡೆದಿದ್ದಾರೆ. ಶಾಸಕ, ಮಂತ್ರಿ, ಎಂಪಿಯಾಗಿದ್ದೋರು ಏನು ಸತ್ಯ ಹರಿಶ್ಚಂದ್ರರ ಸಮ್ಮನೆ ಬಂದು ಓಟು ಹಾಕಲು. ಇಲ್ಲ ಕಾಂಗ್ರೆಸ್ ಪಕ್ಷ ದ ನಮ್ಮ ನಾಯಕರು ಹೇಳಲಿ ಅವರು ಹಣ ಪಡೆಯದೇ ಆಸೆ ಅಮೀಷಗಳಿಗೆ ಒಳಗಾಗದೇ ಮತ ನೀಡಿದ್ದಾರೆ ಎಂದು ನಾನು ರಾಜಕೀಯ ನಿವೃತ್ತಿ ಪಡೆಯಲು ಸಿದ್ಧನಿದ್ದೇನೆ ಎಂದು ಪಕ್ಷ ದ ನಾಯಕರಿಗೆ ಸವಾಲು ಹಾಕಿದರು.
ನಾನು ಯಾವುದೇ ಕಾರಣಕ್ಕೂ ಕಾಂಗ್ರೆಸ್ ಪಕ್ಷ ವನ್ನು ಬಿಡುವುದಿಲ್ಲ. ಚಲುವರಾಯಸ್ವಾಮಿ ಅವರನ್ನು ಪಕ್ಷ ಕ್ಕೆ ಸೇರಿಸಿಕೊಳ್ಳಲು ಬಿಡುವುದಿಲ್ಲ. ನಾನು ನನ್ನ ಮನೆಯ ದುಡ್ಡು ತಂದು ಇಲ್ಲಿ ಪಕ್ಷ ಕಟ್ಟಿದ್ದೇನೆ. 2500 ಮತಗಳಿದ್ದ ಪಕ್ಷ ವನ್ನು ಮಾಜಿ ಶಾಸಕ ಶಿವರಾಮೇಗೌಡ 45 ಸಾವಿರಕ್ಕೆ ತಂದಿದ್ದರು. ಅದನ್ನು 71 ಸಾವಿರಕ್ಕೆ ಕೊಂಡೊಯ್ದಿದ್ದೇನೆ. ಎರಡು ಎಂಪಿ ಚುನಾವಣೆಯಲ್ಲಿ ತಾಲೂಕಿನಿಂದ ಕಾಂಗ್ರೆಸ್ ಪಕ್ಷ ಕ್ಕೆ ಲೀಡ್ ಕೊಟ್ಟಿದ್ದೇನೆ. ಇಂದು ರಾಜ್ಯದಲ್ಲಿ ನಮ್ಮ ಪಕ್ಷ ದ್ದೇ ಸರಕಾರವಿದ್ದು ನಾಗಮಂಗಲ ಕ್ಷೇತ್ರದಲ್ಲಿ ಚಲುವರಾಯಸ್ವಾಮಿ ದುಡ್ಡು ಮಾಡುತ್ತಿದ್ದಾರೆ. ಪ್ರತಿ ಚುನಾವಣೆಯಲ್ಲಿ ಅಧಿಧಿಕಾರಿಗಳಿಂದ ಹಣ ವಸೂಲಿ ಮಾಡುತ್ತಿದ್ದಾರೆ. ಇದನ್ನು ಸಹಿಸಿಕೊಂಡು ಸುಮ್ಮನಿರಲು ಸಿದ್ಧನಿಲ್ಲ. ಕಾರ್ಯಕರ್ತರಿಗೋಸ್ಕರ ಯಾವುದೇ ತೀರ್ಮಾನ ತೆಗೆದುಕೊಳ್ಳಲು ಸಿದ್ಧ.
-------------
ಮುಖ್ಯಮಂತ್ರಿಗಳೇ ಬೇರೆ ಪಕ್ಷ ದವರಿಗೆ ಮಣೆ
ನಮ್ಮದೇ ಸರಕಾರ ಅಧಿಧಿಕಾರದಲ್ಲಿದ್ದರೂ ಕಾರ್ಯಕರ್ತರ ಕೆಲಸಗಳು ಆಗುತ್ತಿಲ್ಲ. ಶಾಸಕ ಚಲುವರಾಯಸ್ವಾಮಿ ಅವರ ಕೆಲಸಗಳು ಸುಗಮವಾಗಿ ಆಗುತ್ತಿವೆ. ಇದರಿಂದ ಮುಖಂಡರು, ಕಾರ್ಯಕರ್ತರಿಗೆ ತುಂಬಾ ನೋವಾಗಿದೆ. ಮುಖ್ಯಮಂತ್ರಿಗಳು, ವರಿಷ್ಠರು ಬೇರೆ ಪಕ್ಷ ದವರಿಗೆ ಮಣೆ ಹಾಕುತ್ತಿದ್ದಾರೆ. ಮುಖ್ಯಮಂತ್ರಿಗಳು ಹಣ ಪಡೆದು ಅಡ್ಡ ಮತ ನೀಡಿದ ವ್ಯಕ್ತಿಯ ಪರವಾಗಿ ಕ್ಯಾಬಿನೇಟ್ ಮೀಟಿಂಗ್ನಲ್ಲಿ ಹೇಳುತ್ತಾರೆ. ನಮ್ಮ ಪರವಾಗಿ ಮತವನ್ನು ಶಾಸಕ ಎನ್.ಚಲುವರಾಯಸ್ವಾಮಿ ಹಾಕಿದ್ದಾರೆ. ಅವರ ಕ್ಷೇತ್ರದಲ್ಲಿ ಅವರು ಹೇಳಿದ ಕೆಲಸಗಳನ್ನು ಮಾಡಿಕೊಡಿ ಎಂದು ಮಂತ್ರಿಗಳಿಗೆ ಅವರೇ ಹೇಳಿದ್ದಾರೆ. ಪಕ್ಷ ಕಟ್ಟಿದವರಿಗೆ ಈ ಸರಕಾರದಲ್ಲಿ ಬೆಲೆ ಇಲ್ಲದಂತಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ತೃಣಕ್ಕೆ ಸಮಾನ:
ಸರಕಾರದ ನಾಮ ನಿರ್ದೇಶನಗಳನ್ನು ಕೆಪಿಸಿಸಿ ಅಧ್ಯಕ್ಷ ಜಿ.ಪರಮೇಶ್ವರ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಚಲುವರಾಯಸ್ವಾಮಿ ಬಣದವರಿಗೆ ಮಾಡುತ್ತಿದ್ದಾರೆ. ಇದು ನನಗೆ ತೃಣಕ್ಕೆ ಸಮಾನ. 20 ವರ್ಷಗಳಿಂದ ಕಾಂಗ್ರೆಸ್ ಪಕ್ಷ ದವರಿಗೆ ತೊಂದರೆ ನೀಡಿದ ವ್ಯಕ್ತಿಯ ಬೆಂಬಲಿಗರಿಗೆ ಸರಕಾರದ ನಾಮ ನಿರ್ದೇಶನ ಮಾಡುತ್ತಾರೆ ಎಂದರೆ ಕಾರ್ಯಕರ್ತರು ಅರ್ಥ ಮಾಡಿಕೊಳ್ಳಬೇಕು ಎಂದು ನುಡಿದರು.
------
ಇಲಾಖೆ ಅಧಿಕಾರಿಗಳಿಂದ ಹಣ ವಸೂಲಿ
ಎಪಿಎಂಸಿ ಚುನಾವಣೆಗೆ ತಾಲೂಕಿನ ಹಲವು ಇಲಾಖೆಗಳಲ್ಲಿ ಹಣ ವಸೂಲಿ ಮಾಡಿ ತಮ್ಮ ಬೆಂಬಲಿಗರನ್ನು ಗೆಲ್ಲಿಸಿಕೊಳ್ಳಲು ಹಣದ ಸುರಿಮಳೆ ಹರಿಸಿದ್ದಾರೆ. ತಾಲೂಕಿನ ಕಾವೇರಿ ನೀರಾವರಿ ಇಲಾಖೆ, ಜಿಪಂ, ಕುಡಿಯುವ ನೀರು ಸರಬರಾಜು, ಪಿಡಬ್ಲೂಡಿ, ಗಣಿ ಮತ್ತು ಭೂ ವಿಜ್ಞಾನ, ಪೊಲೀಸ್ ಇಲಾಖೆಯಿಂದ ಹಣ ವಸೂಲಿ ಮಾಡಿದ್ದಾರೆ ಎಂದು ನೇರ ಆರೋಪ ಮಾಡಿದರು.