ಆ್ಯಪ್ನಗರ

ಅರ್ಚಕರ ಕೊಲೆ ಪ್ರಕರಣ: ಐಷಾರಾಮಿ ಜೀವನಕ್ಕಾಗಿ ದೇಗುಲಗಳೇ ಟಾರ್ಗೆಟ್‌

ಮಂಡ್ಯ, ಹಾಸನ, ರಾಮನಗರ, ಬೆಂಗಳೂರು ನಗರಗಳಲ್ಲಿ ಹಲವು ದೇಗುಲಗಳಲ್ಲಿಕಳ್ಳತನ ನಡೆಸಿರುವುದು ವಿಚಾರಣೆ ವೇಳೆ ತಿಳಿದುಬಂದಿದೆ. ಇನ್ನೂ ಹೆಚ್ಚಿನ ದೇವಾಲಯಗಳಲ್ಲಿಕಳ್ಳತನ ನಡೆಸಿರುವ ಬಗ್ಗೆ ತನಿಖೆಯಿಂದ ಹೊರಬೀಳಬೇಕಿದೆ

Vijaya Karnataka Web 15 Sep 2020, 7:30 pm
ಮಂಡ್ಯ: ಅರ್ಚಕರ ಕೊಲೆ ಪ್ರಕರಣದಲ್ಲಿ ಬಂಧಿತರಾಗಿರುವ ಐವರು ಆರೋಪಿಗಳು ಐಷಾರಾಮಿ ಜೀವನಕ್ಕಾಗಿ ಹೆಚ್ಚು ಹಣ ಸಂಗ್ರಹವಾಗುವ ದೇಗುಲಗಳನ್ನೇ ಟಾರ್ಗೆಟ್‌ ಮಾಡುತ್ತಿದ್ದರು.
Vijaya Karnataka Web ಮಂಡ್ಯ
ಮಂಡ್ಯ


ಕೂಲಿ ಹಾಗೂ ಕಾರ್ಖಾನೆಗಳಲ್ಲಿಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದ ಮಂಜು, ವಿಜಯ್‌ , ಚಂದ್ರ ಅಲಿಯಾಸ್‌ ಗಾಂಧಿ, ಅಭಿಷೇಕ್‌ ಅಲಿಯಾಸ್‌ ಅಭಿ ಹಾಗೂ ರಘು ಅವರು ಇತ್ತೀಚೆಗೆ ಕಳ್ಳತನವನ್ನೇ ವೃತ್ತಿಯಾಗಿಸಿಕೊಂಡಿದ್ದರು. ಕೂಲಿ ಕೆಲಸಕ್ಕಾಗಿ ಬೇರೆ ಬೇರೆ ಗ್ರಾಮಗಳಲ್ಲಿವಾಸವಿದ್ದರೂ ಕಳವು ಯೋಜನೆ ರೂಪಿಸಲು ಎಲ್ಲರೂ ಒಂದೆಡೆ ಸೇರುತ್ತಿದ್ದರು.

ಇವರ ತಂಡದಲ್ಲಿ 10-15 ಮಂದಿಯಿದ್ದು, ಎಲ್ಲರೂ 20 ರಿಂದ 28 ವರ್ಷದೊಳಗಿನ ಯುವಕರಾಗಿದ್ದಾರೆ. ಇದೇ ತಂಡ ಮಂಡ್ಯ, ಹಾಸನ, ರಾಮನಗರ, ಬೆಂಗಳೂರು ನಗರಗಳಲ್ಲಿ ಹಲವು ದೇಗುಲಗಳಲ್ಲಿಕಳ್ಳತನ ನಡೆಸಿರುವುದು ವಿಚಾರಣೆ ವೇಳೆ ತಿಳಿದುಬಂದಿದೆ. ಇನ್ನೂ ಹೆಚ್ಚಿನ ದೇವಾಲಯಗಳಲ್ಲಿಕಳ್ಳತನ ನಡೆಸಿರುವ ಬಗ್ಗೆ ತನಿಖೆಯಿಂದ ಹೊರಬೀಳಬೇಕಿದೆ ಎಂದು ಪೊಲೀಸ್‌ ಅಧಿಕಾರಿಗಳು ತಿಳಿಸಿದ್ದಾರೆ.

ಮಂಡ್ಯದ ಶ್ರೀ ಅರ್ಕೇಶ್ವರ ದೇವಾಲಯದಲ್ಲಿನಡೆದ ದರೋಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾರ್ವಜನಿಕರು ನೀಡಿದ ಮಾಹಿತಿಯನ್ನೇ ಆಧರಿಸಿ ಪೊಲೀಸರು ತನಿಖೆ ನಡೆಸಿದ ಪರಿಣಾಮ ಆರೋಪಿಗಳ ಶೀಘ್ರ ಬಂಧನ ಸಾಧ್ಯವಾಗಿದೆ ಎಂದು ಪೊಲೀಸ್‌ ವರಿಷ್ಠಾಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ