ಆ್ಯಪ್ನಗರ

ಮಂಡ್ಯ ನಗರಸಭೆ ಚುನಾವಣೆ: ಕಾಂಗ್ರೆಸ್‌ನ ಒಂದು ವಿಕೆಟ್‌ ಪತನ

ವಿಕ ಸುದ್ದಿಲೋಕ ಮಂಡ್ಯ ನಗರಸಭೆ ಚುನಾವಣೆಗೂ ಮುನ್ನವೇ ಸ್ವಯಂಕೃತ ಅಪರಾಧದಿಂದ ಕಾಂಗ್ರೆಸ್‌ನ ಒಂದು ವಿಕೆಟ್‌ ಪತನವಾಗಿದೆ ! ಮಂಡ್ಯ ಕೆರೆಯನ್ನೊಳಗೊಂಡ 3ನೇ ವಾರ್ಡ್‌ಗೆ ...

Vijaya Karnataka 21 Aug 2018, 5:00 am
ಮಂಡ್ಯ: ನಗರಸಭೆ ಚುನಾವಣೆಗೂ ಮುನ್ನವೇ ಸ್ವಯಂಕೃತ ಅಪರಾಧದಿಂದ ಕಾಂಗ್ರೆಸ್‌ನ ಒಂದು ವಿಕೆಟ್‌ ಪತನವಾಗಿದೆ !
Vijaya Karnataka Web mandya principle election congresss first wicket fall
ಮಂಡ್ಯ ನಗರಸಭೆ ಚುನಾವಣೆ: ಕಾಂಗ್ರೆಸ್‌ನ ಒಂದು ವಿಕೆಟ್‌ ಪತನ


ಮಂಡ್ಯ ಕೆರೆಯನ್ನೊಳಗೊಂಡ 3ನೇ ವಾರ್ಡ್‌ಗೆ ಕಾಂಗ್ರೆಸ್‌ ಹುರಿಯಾಳಾಗಿ ಅಲ್ತಾಫ್‌ ಅವರಿಗೆ ಭಿ ಫಾರಂ ನೀಡಲಾಗಿತ್ತು. ಪಕ್ಷೇತರರು ನಾಮಪತ್ರ ಸಲ್ಲಿಸುವಾಗ ನಾಮಪತ್ರದಲ್ಲಿ ಅದೇ ವಾರ್ಡ್‌ ಐವರು ಮತದಾರರು ಹಾಗೂ ರಾಷ್ಟ್ರೀಯ/ಮಾನ್ಯತೆ ಪಡೆದ ಪಕ್ಷದವರಿಗೆ ಒಬ್ಬರು ಮತದಾರರು ಸೂಚಕರಾಗಿ ಅನುಮೋದಿಸಬೇಕೆಂಬ ನಿಯಮಯವಿದೆ.

ಆದರೆ, ಕಾಂಗ್ರೆಸ್‌ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದ ಅಲ್ತಾಫ್‌ ಉಮೇದುವಾರಿಕೆ ತಿರಸ್ಕೃತಗೊಂಡಿದೆ. ಇವರ ನಾಮಪತ್ರದಲ್ಲಿ 1ನೇ ವಾರ್ಡ್‌ ಮತದಾರರೊಬ್ಬರು ಸೂಚಕರಾಗಿ ಸಹಿ ಹಾಕಿದ್ದ ಹಿನ್ನೆಲೆಯಲ್ಲಿ ಚುನಾವಣಾಧಿಕಾರಿ ನಾಮಪತ್ರ ಅಸಿಂಧುಗೊಳಿಸಿದ್ದಾರೆ. ಹೀಗಾಗಿ 3ನೇ ವಾರ್ಡ್‌ನಲ್ಲಿ ಕಾಂಗ್ರೆಸ್‌ ಪಕ್ಷದ ಅಭ್ಯರ್ಥಿ ಇಲ್ಲದಂತಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ