ಆ್ಯಪ್ನಗರ

RAIN: ಮನೆ ಮೇಲೆ ಮರ ಉರುಳಿ ಮಹಿಳೆ ಸಾವು

ತಾಲೂಕಿನ ಮಹದೇವಪುರ ಬೋರೆ ಗ್ರಾಮದಲ್ಲಿ ಸೋಮವಾರ ರಾತ್ರಿ ಸುರಿದ ಮಳೆಯಿಂದಾಗಿ ಮನೆ ಮೇಲೆ ಮರ ಉರುಳಿ ಪತ್ನಿ ಮೃತಪಟ್ಟು, ಪತಿ ಗಾಯಗೊಂಡಿದ್ದಾರೆ.

Vijaya Karnataka 30 May 2018, 5:00 am
ಶ್ರೀರಂಗಪಟ್ಟಣ: ತಾಲೂಕಿನ ಮಹದೇವಪುರ ಬೋರೆ ಗ್ರಾಮದಲ್ಲಿ ಸೋಮವಾರ ರಾತ್ರಿ ಸುರಿದ ಮಳೆಯಿಂದಾಗಿ ಮನೆ ಮೇಲೆ ಮರ ಉರುಳಿ ಪತ್ನಿ ಮೃತಪಟ್ಟು, ಪತಿ ಗಾಯಗೊಂಡಿದ್ದಾರೆ.
Vijaya Karnataka Web mandya shreerangapattana mahadevapura rain tree fall on home lady dead
RAIN: ಮನೆ ಮೇಲೆ ಮರ ಉರುಳಿ ಮಹಿಳೆ ಸಾವು


ಲಕ್ಷ ್ಮಮ್ಮ(55) ಮೃತರು. ರಾತ್ರಿ 10.30ರಲ್ಲಿ ಮನೆ ಗೋಡೆ ಕುಸಿದು ಗಾಯಗೊಂಡಿದ್ದ ಸೋಮಾಚಾರಿ ಹಾಗೂ ಅವರ ಪತ್ನಿ ಲಕ್ಷ ್ಮಮ್ಮ ಅವರನ್ನು ಮೈಸೂರಿನ ಕೆ.ಆರ್‌.ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಮಧ್ಯರಾತ್ರಿ ಲಕ್ಷ್ಮಮ್ಮ ಮೃತಪಟ್ಟಿದ್ದಾರೆ. ಸೋಮಾಚಾರಿ ಅವರಿಗೆ ಸಣ್ಣ ಪುಟ್ಟ ಗಾಯವಾಗಿದ್ದು, ಚಿಕಿತ್ಸೆ ಪಡೆದುಕೊಂಡಿದ್ದಾರೆ.

ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ ತಹಸೀಲ್ದಾರ್‌ ಡಿ. ನಾಗೇಶ್‌ ಮಾತನಾಡಿ, ಗೋಡೆ ಕುಸಿತದಿಂದ ಮೃತಪಟ್ಟ ಮಹಿಳೆ ಕುಟುಂಬಕ್ಕೆ ಸರಕಾರದ ವತಿಯಿಂದ ಪ್ರಕೃತಿ ವಿಕೋಪದಡಿ 4 ಲಕ್ಷ ರೂ. ಪರಿಹಾರ ನೀಡಲಾಗುವುದು. ಗಾಯಾಳುವಿನ ಸ್ಥಿತಿ, ಆಸ್ಪತ್ರೆ ವೆಚ್ಚ ಮಾಹಿತಿಯನ್ನು ಸರಕಾರಕ್ಕೆ ಕಳುಹಿಸಿಲಾಗುವುದು. ನಂತರ ಅಗತ್ಯ ಪರಿಹಾರ ನೀಡಲಾಗುವುದು ಎಂದು ತಿಳಿಸಿದ್ದಾರೆ.

ರಾಜಸ್ವ ನಿರೀಕ್ಷ ಕ ಪದ್ಮನಾಭ, ಗ್ರಾಪಂ ಪಿಡಿಒ ರಾಜೇಶ್ವರ್‌, ಗ್ರಾಪಂ ಸದಸ್ಯ ಎಂ.ವಿ ಕೃಷ್ಣ ಹಾಜರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ