ಮಂಡ್ಯ: ಮಂಡ್ಯದಲ್ಲಿ ಶನಿವಾರ ರಾತ್ರಿ ನಡೆದ ಅಂಬರೀಷ್ ಪುಣ್ಯಸ್ಮರಣೆ, ಶ್ರದ್ಧಾಂಜಲಿ ಮತ್ತು ನುಡಿನಮನ ಕಾರ್ಯಕ್ರಮದಲ್ಲಿ ಸುಮಲತಾ ಅವರು ಅಭಿಮಾನಿಗಳಿಗೆ ಆಗಸದಲ್ಲಿನ ಚಂದ್ರನಲ್ಲಿ ಅಂಬಿಯನ್ನು ತೋರಿಸಿ ಭಾವುಕರಾದರು.
ನಗರದ ಸರ್ಎಂವಿ ಕ್ರೀಡಾಂಗಣದಲ್ಲಿ ಅಖಿಲ ಕರ್ನಾಟಕ ಅಂಬರೀಷ್ ಅಭಿಮಾನಿಗಳ ಸಂಘವು ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಕಣ್ಣಾಲಿಗಳನ್ನು ತುಂಬಿಕೊಂಡೇ ಮಾತು ಆರಂಭಿಸಿದ ಅವರು, ''ಆಗಸದಲ್ಲಿ ಮಿನುಗುತ್ತಿರುವ ಚಂದ್ರನನ್ನು ನೀವೆಲ್ಲಾ ನೋಡಿ. ಚಂದ್ರನ ರೂಪದಲ್ಲಿ ಅಂಬರೀಷ್ ನಮ್ಮನ್ನು ನೋಡಿ ನಗುತ್ತಿರುವಂತಿದೆ. ಆಶೀರ್ವಾದ ಮಾಡುವಂತಿದೆ,''ಎನ್ನುವ ಮೂಲಕ ಅಭಿಮಾನಿಗಳೆಲ್ಲಾ ಆಗಸವನ್ನು ನೋಡುವಂತೆ ಮಾಡಿದರು.
''ಅಂಬಿ ಉಸಿರು ಮನಸ್ಸು, ಕನಸಲ್ಲೂ ಮಂಡ್ಯ ಇರುತ್ತಿತ್ತು. ಉಸಿರು ಇರುವವರೆಗೆ ಮಂಡ್ಯವನ್ನು ಬಿಟ್ಟು ಹೋಗಲ್ಲ ಎನ್ನುತ್ತಿದ್ದರು. ನ.25ರಂದು ನೀವು ಅವರನ್ನು ಕಳುಹಿಸಿಕೊಟ್ಟ ರೀತಿ, ಪ್ರೀತಿ, ವಿಶ್ವಾಸ, ಅಭಿಮಾನವನ್ನು ನಾನೆಂದೂ ಮರೆಯುವುದಿಲ್ಲ. ಈ ಮಣ್ಣಿನ ಮಗನಾಗಿ ಹುಟ್ಟಿದ್ದಕ್ಕೆ ಆ ಜೀವದ ಜೀವನ ಸಾರ್ಥಕವಾಯ್ತು,'' ಎಂದು ಕಣ್ಣೀರಿಟ್ಟರು.
''ಶತ್ರುಗಳನ್ನೂ ಪ್ರೀತಿಯಿಂದ ಸ್ವಾಗತಿಸುತ್ತಿದ್ದರು. ಅಂತಹ ದೊಡ್ಡ ವಿಶಾಲ ಮನಸ್ಸನ್ನು ದೇವರಿಗೆ ನಿಮ್ಮ ಅಂಬಿಗೆ ಕೊಟ್ಟಿದ್ದರು. ಆಮನಸ್ಸನ್ನು ಅರ್ಥ ಮಾಡಿಕೊಳ್ಳುವ ಇನ್ನೂ ದೊಡ್ಡ ಮನಸ್ಸು ನಿಮ್ಮದು. ನಿಮ್ಮ ಪ್ರೀತಿಯಲ್ಲಿ ಸಣ್ಣ ಭಾಗ ನಮಗೂ ಸಿಕ್ಕಿದ್ದಕ್ಕೆ ಧನ್ಯವಾದ. ನಿಮಗೆ ಧನ್ಯವಾದ ಹೇಳಲು ಪದಗಳೇ ಸಿಗುತ್ತಿಲ್ಲ. ಇನ್ನೇನು ಹೇಳಲು ಇಲ್ಲ. ಜೀವನದುದ್ದಕ್ಕೂ ನೀವಿದ್ದೀರಿ. ನನಗೆ ಅದೊಂದೇ ಸಾಕು,''ಎಂದು ಕೈಮುಗಿದರು.
''ನ.24ರಂದು ಬಸ್ ದುರಂತದಲ್ಲಿ 30 ಮಂದಿ ಪ್ರಾಣ ಕಳೆದುಕೊಂಡರು. ಆ ಕುಟುಂಬದವರಿಗೆ ಆಗಿರುವ ನೋವು, ದುಃಖ, ನಷ್ಟವನ್ನು ಹೇಳಲಾಗದು. ಅದೇ ನೋವಿನಲ್ಲಿ ಅಂಬಿ ನಮ್ಮನ್ನೆಲ್ಲಾ ಅಗಲಿದರು. ಬೆನ್ನಲ್ಲೆ ಅಂಬಿ ಅಭಿಮಾನಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡರು. ಇದು ಕೂಡ ನನಗೆ ಅತ್ಯಂತ ನೋವು ಕೊಟ್ಟಿತು. ದಯವಿಟ್ಟು ಯಾರೂ ದುಡುಕಬೇಡಿ. ಯಾವುದೇ ವ್ಯಕ್ತಿಯನ್ನು ಕಳೆದುಕೊಂಡ ನೋವು, ನಷ್ಟ ಕುಟುಂಬದವರಿಗೇ ಗೊತ್ತು. ಎಲ್ಲರೂ ಅಭಿಮಾನ, ಪ್ರೀತಿಯನ್ನು ಮನಸ್ಸಿನಲ್ಲಿ ಇಟ್ಟುಕೊಳ್ಳಿ. ಆತ್ಮಹತ್ಯೆ ಮೂಲಕ ತೋರಿಸಿದರೆ ಯಾರಿಗೂ ಉಪಯೋಗವಾಗಲ್ಲ,'' ಎಂದು ತಿಳಿಹೇಳಿದರು.
''ಮೂರು ಬಾರಿ ಸಂಸದ, ಒಮ್ಮೆ ಕೇಂದ್ರ ಸಚಿವ, ರಾಜ್ಯದಲ್ಲಿ ಶಾಸಕ, ಸಚಿವರಾಗಿದ್ದರು. ಮಂಡ್ಯದ ಜನರು ನನ್ನನ್ನು ಮಂಡ್ಯದಿಂದ ದಿಲ್ಲಿಗೆ ಕಳುಹಿಸಿದ್ದಾರೆಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತಿದ್ದರು. ನನ್ನ ಜನವೇ ನಾನಿಂದು ಈ ರೀತಿ ಇರಲು ಕಾರಣ ಎನ್ನುತ್ತಿದ್ದರು. ಮಂಡ್ಯದ ಜನರ ಪ್ರೀತಿ ವಿಶೇಷತೆ ಏನೆಂದು ನಾನು ಕೇಳಿದಾಗಲೆಲ್ಲಾ ಮುಂದೆ ಗೊತ್ತಾಗುತ್ತೆ, ನೋಡುತ್ತಿರು ಎನ್ನುತ್ತಿದ್ದರು. ಅದೇನೆಂದು ನ.25ರಂದು ಮತ್ತು ಇಂದು ನನಗೆ ಗೊತ್ತಾಗಿದೆ. ನಿಮ್ಮ ಪ್ರೀತಿಯಲ್ಲಿ ಸಣ್ಣ ಭಾಗ ಅಭಿಷೇಕ್ಗೂ ಇರಲಿ. ನಾನು ನಿಮಗೆಲ್ಲಾ ಚಿರಋುಣಿ,''ಎಂದು ಗದ್ಗದಿತರಾದರು.
ನಟ ಯಶ್ ಮಾತನಾಡಿ, ''ಜನ ಸಂಪಾದನೆಯನ್ನು ಹಲವರು ಮಾಡುತ್ತಾರೆ. ಆದರೆ, ಅಂಬರೀಶ್ ಅವರ ಮೇಲೆ ಜನ ಇಟ್ಟಿದ್ದ ಪ್ರೀತಿಯನ್ನು ಅವರ ಅಂತಿಮ ದರ್ಶನದ ವೇಳೆ ತಿಳಿಸಿಕೊಟ್ಟರು. ಮಂಡ್ಯದ ಗತ್ತು ಇಂಡಿಯಾಗೇ ಗೊತ್ತು. ಆ ಗತ್ತು ಅಂಬರೀಷಣ್ಣನ ಸ್ವತ್ತು. ನಾನು ಅವರ ಗತ್ತು ಕಲಿತಿದ್ದೇನೆ. ಅಂಬಿ ಇಲ್ಲ ಎಂದು ಹೇಳುವ ಬದಲು ಅಭಿಗೆ ಜಿಲ್ಲೆಯ ಜನ ಗೌರವ ನೀಡಬೇಕು,''ಎಂದು ಮನವಿ ಮಾಡಿದರು.
ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಮಾತನಾಡಿ, ''ರಾಜಕೀಯ, ಸಿನಿಮಾ ಕ್ಷೇತ್ರದಲ್ಲಿ ಅಂಬಿ ಅವರಂತಹ ಮತ್ತೊಬ್ಬ ವ್ಯಕ್ತಿ ಹುಟ್ಟಲು ಸಾಧ್ಯವಿಲ್ಲ. ಕಾಂಗ್ರೆಸ್ ಪಕ್ಷ ದ ಪ್ರಮುಖ ನಾಯಕರಾಗಿ ಜಿಲ್ಲೆಯನ್ನು ಯಶಸ್ವಿಯಾಗಿ ಮುನ್ನಡೆಸಿದ್ದಾರೆ. ಅಂಬರೀಷ್ ಅವರ ಮಗ ಚಿತ್ರರಂಗದಲ್ಲಿ ಬೆಳೆಯಲಿ,'' ಎಂದು ಹಾರೈಸಿದರು.
ನಟ ಜಗ್ಗೇಶ್ ಮಾತನಾಡಿ, ''ಎಂಟಾಣೆ ಕಾರ್ಯ ಮಾಡಿ ಪ್ರಚಾರ ಮಾಡುವ ಜನರ ನಡುವೆ ಅಂಬಿ ಬಲಗೈಯಲ್ಲಿ ಕೊಟ್ಟದ್ದು ಎಡಗೈಗೆ ತಿಳಿಯದಂತೆ ಕೆಲಸ ಮಾಡುತ್ತಿದ್ದರು. ಅಂಬರೀಷ್ ಸತ್ತಿಲ್ಲ. ನಮ್ಮೊಂದಿಗೆ ಇದ್ದಾರೆ,'' ಎಂದರು.
ಹಿರಿಯ ನಟಿ ಬಿ. ಸರೋಜಾದೇವಿ ಮಾತನಾಡಿ, ''ಮಂಡ್ಯದ ಬೀದಿಗಳ ತುಂಬೆಲ್ಲಾ ನನ್ನ ತಮ್ಮ ಅಂಬಿಯ ಪೋಟೋ ನೋಡಿ ಆತ ಎಲ್ಲೂ ಹೋಗಿಲ್ಲ ಅನಿಸುತ್ತಿದೆ. ನನ್ನ ಸಾವು ಮೊದಲು, ನಂತರ ನಿನ್ನದು ಎಂದು ಅಂಬಿಗೆ ನಾನು ಹೇಳುತ್ತಿದ್ದೆ. ಆದರೆ, ವಿಧಿ ಆಟವೇ ಬೇರೆಯಾಯಿತು,'' ಎಂದು ಭಾವುಕರಾದರು.
ಚಿತ್ರ ನಿರ್ದೇಶಕ ಯೋಗರಾಜ್ಭಟ್, ನಟ ಸಾಧುಕೋಕಿಲ, ಹಿರಿಯ ಪತ್ರಕರ್ತ ರಂಗನಾಥ್ ಮಾತನಾಡಿದರು.
ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ರಾಮನಗರ ಶಾಖೆಯ ಕಾರ್ಯದರ್ಶಿ ಶ್ರೀ ಅನ್ನದಾನೇಶ್ವರನಾಥ ಸ್ವಾಮೀಜಿ ಕಾರ್ಯಕ್ರಮ ಉದ್ಘಾಟಿಸಿದರು. ಚಿತ್ರ ನಿರ್ಮಾಪಕ ರಾಕ್ಲೈನ್ ವೆಂಕಟೇಶ್, ಚಿತ್ರನಟರಾದ ಯಶ್, ದೊಡ್ಡಣ್ಣ, ನಟಿ ಅಪರ್ಣಾ ಸೇರಿದಂತೆ ಚಿತ್ರರಂಗದ ಹಲವು ಗಣ್ಯರು ಭಾಗವಹಿಸಿದ್ದರು.
ಹಣವಲ್ಲ, ಜನ ಮುಖ್ಯ: ಅಭಿಷೇಕ್
ಅಂಬರೀಷ್ ಶೈಲಿಯಲ್ಲೇ ಮಾತು ಆರಂಭಿಸಿ ಅಭಿಮಾನಿಗಳ ಗಮನ ಸೆಳೆದ ಅಂಬಿ ಪುತ್ರ ಅಭಿಷೇಕ್, ''ಅಂಬರೀಷ್ ಇದ್ದದ್ದು ಹೋದದ್ದು ಎಲ್ಲರಿಗೂ ಗೊತ್ತು. ಹಣ ಮುಖ್ಯವಲ್ಲ ಜನ ಮುಖ್ಯ ಎಂದು ಅಪ್ಪ ಹೇಳುತ್ತಿದ್ದರು. ರಾಜನಂತೆ ಬಾಳಿದ ನಮ್ಮಪ್ಪ ಹಾಗೇ ಹೋದರು. ಅದಕ್ಕೆ ನೀವು ಕಾರಣ. ನಮ್ಮಪ್ಪನನ್ನು ರಾಜನಂತೆ ಮೆರೆಸಿದಿರಿ. ನಿಮಗೆ ನಾವು ಎಂದೆಂದೂ ಚಿರ ಋುಣಿಯಾಗಿದ್ದೇವೆ. ಹತ್ತು ಜನರಿಗೆ ಒಳ್ಳೆಯದು ಮಾಡು ಎಂದು ಅಪ್ಪ ಯಾವಾಗಲೂ ಹೇಳುತ್ತಿದ್ದರು. ಅದರಂತೆ ನಾವು ಮುಂದೆ ಒಳ್ಳೆಯ ಕೆಲಸವನ್ನೇ ಮಾಡುತ್ತೇವೆ,''ಎಂದು ಕೈಮುಗಿದರು.
''ನನಗಿದ್ದ ಧೈರ್ಯವೆಂದರೆ ಅದು ನಮ್ಮಪ್ಪ. ಅವರ ಸತ್ತ ದಿನ ಹೊಸ ಧೈರ್ಯ ಕೊಟ್ಟಿದ್ದು ನೀವೇ. ಅಪ್ಪನ ಪಾರ್ಥಿವ ಶರೀರ ದರ್ಶನ ಮಾಡಲು ಬರುತ್ತಿದ್ದವರು 'ಧಿಅಭಿ ಹೆದ್ರಬೇಡ. ನಾವಿದ್ದೇನೆ. ನಿನ್ನ ಹಿಂದೆ ಇಡೀ ಮಂಡ್ಯ ಇದೆ' ಎಂದು ಧೈರ್ಯದ ಮಾತುಗಳನ್ನಾಡುತ್ತಿದ್ದರು. ನಾನೂ ನಿಮ್ಮ ಪ್ರೀತಿಯನ್ನು ಗಳಿಸುವ ವಿಶ್ವಾಸ ನನಗಿದೆ,''ಎಂದರು.
ಅಪ್ಪಾಜಿಗೆ ಶನಿವಾರ ಬಾಡೂಟ ತಿನ್ನಿಸಿದ್ದರು!
ಹಿರಿಯ ನಟ ಶಿವರಾಜ್ಕುಮಾರ್ ಮಾತನಾಡಿ,''ಶನಿವಾರ, ಸೋಮವಾರ ಅಪ್ಪಾಜಿ ಮಾಂಸಾಹಾರ ಸೇವಿಸುತ್ತಿರಲಿಲ್ಲ. ಆದರೆ, ಅವರಿಗೆ ಅಂಬಿಮಾಮ ಮಾಂಸ ತಿನ್ನಿಸಿದ್ದರು. ಅಂಬಿ ಪ್ರೀತಿಗೆ ಕಟ್ಟುಬಿದ್ದು ಅಪ್ಪಾಜಿ ಮಾಂಸಾಹಾರ ಸೇವಿಸಿದ್ದರು. ಹೀಗೆ ಅಂಬಿಯ ಪ್ರೀತಿಗೆ ಮರುಳಾಗದವರೇ ಇಲ್ಲ. ಅವರು ನಮ್ಮೊಂದಿಗೆ ಈಗಲೂ ಇದ್ದಾರೆ. ಅವರು ಎಲ್ಲರಿಗೂ ಬೇಕು,''ಎಂದರು.
ಕಲಾವಿದರ ಸಂಘದ ಕಟ್ಟಡಕ್ಕೆ ರಾಜ್ ಹೆಸರಿಟ್ಟಿದ್ದೇ ಅಂಬಿ
ಕಲಾವಿದರ ಸಂಘದ ಕಟ್ಟಡವನ್ನು ಅತ್ಯುತ್ತಮವಾಗಿ ನಿರ್ಮಿಸಿದ ಹೆಗ್ಗಳಿಕೆ ಅಂಬರೀಷ್ ಅವರಿಗೆ ಸಲ್ಲುತ್ತದೆ. ಕಟ್ಟಡಕ್ಕೆ ಅಂಬರೀಷ್ ಹೆಸರು ಇಡಬೇಕೆಂಬುದು ನನ್ನ ಅಭಿಪ್ರಾಯವಾಗಿತ್ತು. ಆದರೆ ಅವರು ಡಾ.ರಾಜ್ಕುಮಾರ್ ಹೆಸರಿಡಲು ಸೂಚಿಸಿದರು ಎಂದು ಹಿರಿಯ ನಟ ದೊಡ್ಡಣ್ಣ ಸ್ಮರಿಸಿದರು.
ಕನಗನಮರಡಿ ದುರಂತ: ಮೃತರ ಕುಟುಂಬಕ್ಕೆ ಸಹಾಯಹಸ್ತ
ಪಾಂಡವಪುರ ತಾಲೂಕು ಕನಗನಮರಡಿ ಬಳಿ ವಿಶ್ವೇಶ್ವರಯ್ಯ ನಾಲೆಗೆ ಖಾಸಗಿ ಬಸ್ ಮಗುಚಿ ಬಿದ್ದು ಮೃತಪಟ್ಟಿದ್ದ 30 ಜನರ ಕುಟುಂಬದವರಿಗೆ ಸಮಾರಂಭದಲ್ಲಿ ಅಂಬರೀಷ್ ಅವರ ಪತ್ನಿ ಸುಮಲತಾ ಅವರು ಚೆಕ್ ಮೂಲಕ ಸಹಾಯಧನ ವಿತರಿಸಿದರು. ಮೃತ 30 ಕುಟುಂಬದವರನ್ನು ವೇದಿಕೆಗೆ ಆಹ್ವಾನಿಸಿ, ಎಲ್ಲರಿಗೂ ಚೆಕ್ಗಳನ್ನು ನೀಡಲಾಯಿತು.
ನಗರದ ಸರ್ಎಂವಿ ಕ್ರೀಡಾಂಗಣದಲ್ಲಿ ಅಖಿಲ ಕರ್ನಾಟಕ ಅಂಬರೀಷ್ ಅಭಿಮಾನಿಗಳ ಸಂಘವು ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಕಣ್ಣಾಲಿಗಳನ್ನು ತುಂಬಿಕೊಂಡೇ ಮಾತು ಆರಂಭಿಸಿದ ಅವರು, ''ಆಗಸದಲ್ಲಿ ಮಿನುಗುತ್ತಿರುವ ಚಂದ್ರನನ್ನು ನೀವೆಲ್ಲಾ ನೋಡಿ. ಚಂದ್ರನ ರೂಪದಲ್ಲಿ ಅಂಬರೀಷ್ ನಮ್ಮನ್ನು ನೋಡಿ ನಗುತ್ತಿರುವಂತಿದೆ. ಆಶೀರ್ವಾದ ಮಾಡುವಂತಿದೆ,''ಎನ್ನುವ ಮೂಲಕ ಅಭಿಮಾನಿಗಳೆಲ್ಲಾ ಆಗಸವನ್ನು ನೋಡುವಂತೆ ಮಾಡಿದರು.
''ಅಂಬಿ ಉಸಿರು ಮನಸ್ಸು, ಕನಸಲ್ಲೂ ಮಂಡ್ಯ ಇರುತ್ತಿತ್ತು. ಉಸಿರು ಇರುವವರೆಗೆ ಮಂಡ್ಯವನ್ನು ಬಿಟ್ಟು ಹೋಗಲ್ಲ ಎನ್ನುತ್ತಿದ್ದರು. ನ.25ರಂದು ನೀವು ಅವರನ್ನು ಕಳುಹಿಸಿಕೊಟ್ಟ ರೀತಿ, ಪ್ರೀತಿ, ವಿಶ್ವಾಸ, ಅಭಿಮಾನವನ್ನು ನಾನೆಂದೂ ಮರೆಯುವುದಿಲ್ಲ. ಈ ಮಣ್ಣಿನ ಮಗನಾಗಿ ಹುಟ್ಟಿದ್ದಕ್ಕೆ ಆ ಜೀವದ ಜೀವನ ಸಾರ್ಥಕವಾಯ್ತು,'' ಎಂದು ಕಣ್ಣೀರಿಟ್ಟರು.
''ಶತ್ರುಗಳನ್ನೂ ಪ್ರೀತಿಯಿಂದ ಸ್ವಾಗತಿಸುತ್ತಿದ್ದರು. ಅಂತಹ ದೊಡ್ಡ ವಿಶಾಲ ಮನಸ್ಸನ್ನು ದೇವರಿಗೆ ನಿಮ್ಮ ಅಂಬಿಗೆ ಕೊಟ್ಟಿದ್ದರು. ಆಮನಸ್ಸನ್ನು ಅರ್ಥ ಮಾಡಿಕೊಳ್ಳುವ ಇನ್ನೂ ದೊಡ್ಡ ಮನಸ್ಸು ನಿಮ್ಮದು. ನಿಮ್ಮ ಪ್ರೀತಿಯಲ್ಲಿ ಸಣ್ಣ ಭಾಗ ನಮಗೂ ಸಿಕ್ಕಿದ್ದಕ್ಕೆ ಧನ್ಯವಾದ. ನಿಮಗೆ ಧನ್ಯವಾದ ಹೇಳಲು ಪದಗಳೇ ಸಿಗುತ್ತಿಲ್ಲ. ಇನ್ನೇನು ಹೇಳಲು ಇಲ್ಲ. ಜೀವನದುದ್ದಕ್ಕೂ ನೀವಿದ್ದೀರಿ. ನನಗೆ ಅದೊಂದೇ ಸಾಕು,''ಎಂದು ಕೈಮುಗಿದರು.
''ನ.24ರಂದು ಬಸ್ ದುರಂತದಲ್ಲಿ 30 ಮಂದಿ ಪ್ರಾಣ ಕಳೆದುಕೊಂಡರು. ಆ ಕುಟುಂಬದವರಿಗೆ ಆಗಿರುವ ನೋವು, ದುಃಖ, ನಷ್ಟವನ್ನು ಹೇಳಲಾಗದು. ಅದೇ ನೋವಿನಲ್ಲಿ ಅಂಬಿ ನಮ್ಮನ್ನೆಲ್ಲಾ ಅಗಲಿದರು. ಬೆನ್ನಲ್ಲೆ ಅಂಬಿ ಅಭಿಮಾನಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡರು. ಇದು ಕೂಡ ನನಗೆ ಅತ್ಯಂತ ನೋವು ಕೊಟ್ಟಿತು. ದಯವಿಟ್ಟು ಯಾರೂ ದುಡುಕಬೇಡಿ. ಯಾವುದೇ ವ್ಯಕ್ತಿಯನ್ನು ಕಳೆದುಕೊಂಡ ನೋವು, ನಷ್ಟ ಕುಟುಂಬದವರಿಗೇ ಗೊತ್ತು. ಎಲ್ಲರೂ ಅಭಿಮಾನ, ಪ್ರೀತಿಯನ್ನು ಮನಸ್ಸಿನಲ್ಲಿ ಇಟ್ಟುಕೊಳ್ಳಿ. ಆತ್ಮಹತ್ಯೆ ಮೂಲಕ ತೋರಿಸಿದರೆ ಯಾರಿಗೂ ಉಪಯೋಗವಾಗಲ್ಲ,'' ಎಂದು ತಿಳಿಹೇಳಿದರು.
''ಮೂರು ಬಾರಿ ಸಂಸದ, ಒಮ್ಮೆ ಕೇಂದ್ರ ಸಚಿವ, ರಾಜ್ಯದಲ್ಲಿ ಶಾಸಕ, ಸಚಿವರಾಗಿದ್ದರು. ಮಂಡ್ಯದ ಜನರು ನನ್ನನ್ನು ಮಂಡ್ಯದಿಂದ ದಿಲ್ಲಿಗೆ ಕಳುಹಿಸಿದ್ದಾರೆಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತಿದ್ದರು. ನನ್ನ ಜನವೇ ನಾನಿಂದು ಈ ರೀತಿ ಇರಲು ಕಾರಣ ಎನ್ನುತ್ತಿದ್ದರು. ಮಂಡ್ಯದ ಜನರ ಪ್ರೀತಿ ವಿಶೇಷತೆ ಏನೆಂದು ನಾನು ಕೇಳಿದಾಗಲೆಲ್ಲಾ ಮುಂದೆ ಗೊತ್ತಾಗುತ್ತೆ, ನೋಡುತ್ತಿರು ಎನ್ನುತ್ತಿದ್ದರು. ಅದೇನೆಂದು ನ.25ರಂದು ಮತ್ತು ಇಂದು ನನಗೆ ಗೊತ್ತಾಗಿದೆ. ನಿಮ್ಮ ಪ್ರೀತಿಯಲ್ಲಿ ಸಣ್ಣ ಭಾಗ ಅಭಿಷೇಕ್ಗೂ ಇರಲಿ. ನಾನು ನಿಮಗೆಲ್ಲಾ ಚಿರಋುಣಿ,''ಎಂದು ಗದ್ಗದಿತರಾದರು.
ನಟ ಯಶ್ ಮಾತನಾಡಿ, ''ಜನ ಸಂಪಾದನೆಯನ್ನು ಹಲವರು ಮಾಡುತ್ತಾರೆ. ಆದರೆ, ಅಂಬರೀಶ್ ಅವರ ಮೇಲೆ ಜನ ಇಟ್ಟಿದ್ದ ಪ್ರೀತಿಯನ್ನು ಅವರ ಅಂತಿಮ ದರ್ಶನದ ವೇಳೆ ತಿಳಿಸಿಕೊಟ್ಟರು. ಮಂಡ್ಯದ ಗತ್ತು ಇಂಡಿಯಾಗೇ ಗೊತ್ತು. ಆ ಗತ್ತು ಅಂಬರೀಷಣ್ಣನ ಸ್ವತ್ತು. ನಾನು ಅವರ ಗತ್ತು ಕಲಿತಿದ್ದೇನೆ. ಅಂಬಿ ಇಲ್ಲ ಎಂದು ಹೇಳುವ ಬದಲು ಅಭಿಗೆ ಜಿಲ್ಲೆಯ ಜನ ಗೌರವ ನೀಡಬೇಕು,''ಎಂದು ಮನವಿ ಮಾಡಿದರು.
ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಮಾತನಾಡಿ, ''ರಾಜಕೀಯ, ಸಿನಿಮಾ ಕ್ಷೇತ್ರದಲ್ಲಿ ಅಂಬಿ ಅವರಂತಹ ಮತ್ತೊಬ್ಬ ವ್ಯಕ್ತಿ ಹುಟ್ಟಲು ಸಾಧ್ಯವಿಲ್ಲ. ಕಾಂಗ್ರೆಸ್ ಪಕ್ಷ ದ ಪ್ರಮುಖ ನಾಯಕರಾಗಿ ಜಿಲ್ಲೆಯನ್ನು ಯಶಸ್ವಿಯಾಗಿ ಮುನ್ನಡೆಸಿದ್ದಾರೆ. ಅಂಬರೀಷ್ ಅವರ ಮಗ ಚಿತ್ರರಂಗದಲ್ಲಿ ಬೆಳೆಯಲಿ,'' ಎಂದು ಹಾರೈಸಿದರು.
ನಟ ಜಗ್ಗೇಶ್ ಮಾತನಾಡಿ, ''ಎಂಟಾಣೆ ಕಾರ್ಯ ಮಾಡಿ ಪ್ರಚಾರ ಮಾಡುವ ಜನರ ನಡುವೆ ಅಂಬಿ ಬಲಗೈಯಲ್ಲಿ ಕೊಟ್ಟದ್ದು ಎಡಗೈಗೆ ತಿಳಿಯದಂತೆ ಕೆಲಸ ಮಾಡುತ್ತಿದ್ದರು. ಅಂಬರೀಷ್ ಸತ್ತಿಲ್ಲ. ನಮ್ಮೊಂದಿಗೆ ಇದ್ದಾರೆ,'' ಎಂದರು.
ಹಿರಿಯ ನಟಿ ಬಿ. ಸರೋಜಾದೇವಿ ಮಾತನಾಡಿ, ''ಮಂಡ್ಯದ ಬೀದಿಗಳ ತುಂಬೆಲ್ಲಾ ನನ್ನ ತಮ್ಮ ಅಂಬಿಯ ಪೋಟೋ ನೋಡಿ ಆತ ಎಲ್ಲೂ ಹೋಗಿಲ್ಲ ಅನಿಸುತ್ತಿದೆ. ನನ್ನ ಸಾವು ಮೊದಲು, ನಂತರ ನಿನ್ನದು ಎಂದು ಅಂಬಿಗೆ ನಾನು ಹೇಳುತ್ತಿದ್ದೆ. ಆದರೆ, ವಿಧಿ ಆಟವೇ ಬೇರೆಯಾಯಿತು,'' ಎಂದು ಭಾವುಕರಾದರು.
ಚಿತ್ರ ನಿರ್ದೇಶಕ ಯೋಗರಾಜ್ಭಟ್, ನಟ ಸಾಧುಕೋಕಿಲ, ಹಿರಿಯ ಪತ್ರಕರ್ತ ರಂಗನಾಥ್ ಮಾತನಾಡಿದರು.
ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ರಾಮನಗರ ಶಾಖೆಯ ಕಾರ್ಯದರ್ಶಿ ಶ್ರೀ ಅನ್ನದಾನೇಶ್ವರನಾಥ ಸ್ವಾಮೀಜಿ ಕಾರ್ಯಕ್ರಮ ಉದ್ಘಾಟಿಸಿದರು. ಚಿತ್ರ ನಿರ್ಮಾಪಕ ರಾಕ್ಲೈನ್ ವೆಂಕಟೇಶ್, ಚಿತ್ರನಟರಾದ ಯಶ್, ದೊಡ್ಡಣ್ಣ, ನಟಿ ಅಪರ್ಣಾ ಸೇರಿದಂತೆ ಚಿತ್ರರಂಗದ ಹಲವು ಗಣ್ಯರು ಭಾಗವಹಿಸಿದ್ದರು.
ಹಣವಲ್ಲ, ಜನ ಮುಖ್ಯ: ಅಭಿಷೇಕ್
ಅಂಬರೀಷ್ ಶೈಲಿಯಲ್ಲೇ ಮಾತು ಆರಂಭಿಸಿ ಅಭಿಮಾನಿಗಳ ಗಮನ ಸೆಳೆದ ಅಂಬಿ ಪುತ್ರ ಅಭಿಷೇಕ್, ''ಅಂಬರೀಷ್ ಇದ್ದದ್ದು ಹೋದದ್ದು ಎಲ್ಲರಿಗೂ ಗೊತ್ತು. ಹಣ ಮುಖ್ಯವಲ್ಲ ಜನ ಮುಖ್ಯ ಎಂದು ಅಪ್ಪ ಹೇಳುತ್ತಿದ್ದರು. ರಾಜನಂತೆ ಬಾಳಿದ ನಮ್ಮಪ್ಪ ಹಾಗೇ ಹೋದರು. ಅದಕ್ಕೆ ನೀವು ಕಾರಣ. ನಮ್ಮಪ್ಪನನ್ನು ರಾಜನಂತೆ ಮೆರೆಸಿದಿರಿ. ನಿಮಗೆ ನಾವು ಎಂದೆಂದೂ ಚಿರ ಋುಣಿಯಾಗಿದ್ದೇವೆ. ಹತ್ತು ಜನರಿಗೆ ಒಳ್ಳೆಯದು ಮಾಡು ಎಂದು ಅಪ್ಪ ಯಾವಾಗಲೂ ಹೇಳುತ್ತಿದ್ದರು. ಅದರಂತೆ ನಾವು ಮುಂದೆ ಒಳ್ಳೆಯ ಕೆಲಸವನ್ನೇ ಮಾಡುತ್ತೇವೆ,''ಎಂದು ಕೈಮುಗಿದರು.
''ನನಗಿದ್ದ ಧೈರ್ಯವೆಂದರೆ ಅದು ನಮ್ಮಪ್ಪ. ಅವರ ಸತ್ತ ದಿನ ಹೊಸ ಧೈರ್ಯ ಕೊಟ್ಟಿದ್ದು ನೀವೇ. ಅಪ್ಪನ ಪಾರ್ಥಿವ ಶರೀರ ದರ್ಶನ ಮಾಡಲು ಬರುತ್ತಿದ್ದವರು 'ಧಿಅಭಿ ಹೆದ್ರಬೇಡ. ನಾವಿದ್ದೇನೆ. ನಿನ್ನ ಹಿಂದೆ ಇಡೀ ಮಂಡ್ಯ ಇದೆ' ಎಂದು ಧೈರ್ಯದ ಮಾತುಗಳನ್ನಾಡುತ್ತಿದ್ದರು. ನಾನೂ ನಿಮ್ಮ ಪ್ರೀತಿಯನ್ನು ಗಳಿಸುವ ವಿಶ್ವಾಸ ನನಗಿದೆ,''ಎಂದರು.
ಅಪ್ಪಾಜಿಗೆ ಶನಿವಾರ ಬಾಡೂಟ ತಿನ್ನಿಸಿದ್ದರು!
ಹಿರಿಯ ನಟ ಶಿವರಾಜ್ಕುಮಾರ್ ಮಾತನಾಡಿ,''ಶನಿವಾರ, ಸೋಮವಾರ ಅಪ್ಪಾಜಿ ಮಾಂಸಾಹಾರ ಸೇವಿಸುತ್ತಿರಲಿಲ್ಲ. ಆದರೆ, ಅವರಿಗೆ ಅಂಬಿಮಾಮ ಮಾಂಸ ತಿನ್ನಿಸಿದ್ದರು. ಅಂಬಿ ಪ್ರೀತಿಗೆ ಕಟ್ಟುಬಿದ್ದು ಅಪ್ಪಾಜಿ ಮಾಂಸಾಹಾರ ಸೇವಿಸಿದ್ದರು. ಹೀಗೆ ಅಂಬಿಯ ಪ್ರೀತಿಗೆ ಮರುಳಾಗದವರೇ ಇಲ್ಲ. ಅವರು ನಮ್ಮೊಂದಿಗೆ ಈಗಲೂ ಇದ್ದಾರೆ. ಅವರು ಎಲ್ಲರಿಗೂ ಬೇಕು,''ಎಂದರು.
ಕಲಾವಿದರ ಸಂಘದ ಕಟ್ಟಡಕ್ಕೆ ರಾಜ್ ಹೆಸರಿಟ್ಟಿದ್ದೇ ಅಂಬಿ
ಕಲಾವಿದರ ಸಂಘದ ಕಟ್ಟಡವನ್ನು ಅತ್ಯುತ್ತಮವಾಗಿ ನಿರ್ಮಿಸಿದ ಹೆಗ್ಗಳಿಕೆ ಅಂಬರೀಷ್ ಅವರಿಗೆ ಸಲ್ಲುತ್ತದೆ. ಕಟ್ಟಡಕ್ಕೆ ಅಂಬರೀಷ್ ಹೆಸರು ಇಡಬೇಕೆಂಬುದು ನನ್ನ ಅಭಿಪ್ರಾಯವಾಗಿತ್ತು. ಆದರೆ ಅವರು ಡಾ.ರಾಜ್ಕುಮಾರ್ ಹೆಸರಿಡಲು ಸೂಚಿಸಿದರು ಎಂದು ಹಿರಿಯ ನಟ ದೊಡ್ಡಣ್ಣ ಸ್ಮರಿಸಿದರು.
ಕನಗನಮರಡಿ ದುರಂತ: ಮೃತರ ಕುಟುಂಬಕ್ಕೆ ಸಹಾಯಹಸ್ತ
ಪಾಂಡವಪುರ ತಾಲೂಕು ಕನಗನಮರಡಿ ಬಳಿ ವಿಶ್ವೇಶ್ವರಯ್ಯ ನಾಲೆಗೆ ಖಾಸಗಿ ಬಸ್ ಮಗುಚಿ ಬಿದ್ದು ಮೃತಪಟ್ಟಿದ್ದ 30 ಜನರ ಕುಟುಂಬದವರಿಗೆ ಸಮಾರಂಭದಲ್ಲಿ ಅಂಬರೀಷ್ ಅವರ ಪತ್ನಿ ಸುಮಲತಾ ಅವರು ಚೆಕ್ ಮೂಲಕ ಸಹಾಯಧನ ವಿತರಿಸಿದರು. ಮೃತ 30 ಕುಟುಂಬದವರನ್ನು ವೇದಿಕೆಗೆ ಆಹ್ವಾನಿಸಿ, ಎಲ್ಲರಿಗೂ ಚೆಕ್ಗಳನ್ನು ನೀಡಲಾಯಿತು.