ಆ್ಯಪ್ನಗರ

ಬಿಜೆಪಿಗೆ ಮನ್‌ಮುಲ್‌ ಅಧಿಕಾರ: ವಿಶ್ವಾಸ

ಬಿಜೆಪಿ ಇದೇ ಮೊದಲ ಬಾರಿಗೆ ಮನ್‌ಮುಲ್‌ ಆಡಳಿತ ಮಂಡಳಿ ಅಧಿಕಾರ ಹಿಡಿಯಲಿದ್ದು, ಮುಖ್ಯಮಂತ್ರಿ ಯಡಿಯೂರಪ್ಪ ಅವರ ಕೈಬಲಪಡಿಸಲಾಗುವುದು ಎಂದು ಮನ್‌ಮುಲ್‌ ನಿರ್ದೇಶಕಿ ರೂಪ ತಿಳಿಸಿದರು.

Vijaya Karnataka 26 Sep 2019, 5:00 am
ಮದ್ದೂರು: ಬಿಜೆಪಿ ಇದೇ ಮೊದಲ ಬಾರಿಗೆ ಮನ್‌ಮುಲ್‌ ಆಡಳಿತ ಮಂಡಳಿ ಅಧಿಕಾರ ಹಿಡಿಯಲಿದ್ದು, ಮುಖ್ಯಮಂತ್ರಿ ಯಡಿಯೂರಪ್ಪ ಅವರ ಕೈಬಲಪಡಿಸಲಾಗುವುದು ಎಂದು ಮನ್‌ಮುಲ್‌ ನಿರ್ದೇಶಕಿ ರೂಪ ತಿಳಿಸಿದರು.
Vijaya Karnataka Web manmul powers for bjp confidence
ಬಿಜೆಪಿಗೆ ಮನ್‌ಮುಲ್‌ ಅಧಿಕಾರ: ವಿಶ್ವಾಸ


ಪಟ್ಟಣದಲ್ಲಿ ಸುದ್ದಿಗೋಷ್ಠಿ ಮಾತನಾಡಿ, ''ಮನ್‌ಮುಲ್‌ ಅಧಿಕಾರ ಬಿಜೆಪಿಗೆ ದಕ್ಕುವ ವಿಶ್ವಾಸದಿಂದ ಅಧ್ಯಕ್ಷ ಗಾದಿಗೆ ಇದ್ದ ಅವಕಾಶವನ್ನು ಪಕ್ಷದ ವರಿಷ್ಠರ ನಿರ್ದೇಶನದ ಮೇರೆಗೆ ತ್ಯಾಗ ಮಾಡಿದ್ದೇನೆ,'' ಎಂದರು.

''ಬಿಜೆಪಿಯಲ್ಲಿ16 ವರ್ಷಗಳಿಂದ ಸಾಮಾನ್ಯ ಕಾರ್ಯಕರ್ತೆಯಾಗಿ ಪಕ್ಷ ಕಟ್ಟುವ ಕೆಲಸ ಮಾಡಿದ್ದೇನೆ. ಸೋಮವಾರ ನಡೆದ ಅಧ್ಯಕ್ಷ, ಉಪಾಧ್ಯಕ್ಷ ಚುನಾವಣೆ ವೇಳೆ ತಮಗೆ ಹಣ ನೀಡಿ ಮತ ಪಡೆದಿರುವುದಾಗಿ ಕೇಳಿಬಂದ ಆರೋಪ ನಿರಾಧಾರ. ಬಿಜೆಪಿ ತಮಗೆ ಇಂತಹ ಸಂಸ್ಕೃತಿ ಕಲಿಸಿಲ್ಲ,'' ಎಂದು ಹೇಳಿದರು.

ಬಿಜೆಪಿ ಜಿಲ್ಲಾಘಟಕದ ಉಪಾಧ್ಯಕ್ಷ ಎಂ. ಸತೀಶ್‌, ಪಿಎಲ್‌ಡಿ ಬ್ಯಾಂಕ್‌ ಮಾಜಿ ಅಧ್ಯಕ್ಷ ಗೆಜ್ಜಲಗೆರೆ ಚಂದ್ರಶೇಖರ್‌ ಉಪಸ್ಥಿತರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ