ಆ್ಯಪ್ನಗರ

ಅಪ್ರಾಪ್ತರ ಮದುವೆ: ಇಬ್ಬರು ಬಂಧನ

ಇಬ್ಬರು ಬಂಧನ ವಿಕ ಸುದ್ದಿಲೋಕ ಶ್ರೀರಂಗಪಟ್ಟಣ ತಾಲೂಕಿನ ಬೆಳಗೊಳ ಗ್ರಾಮದಲ್ಲಿ ಗಾರೆ ಕೆಲಸ ಮಾಡಲು ಬಂದು ಎದುರುಗಡೆ ಮನೆಯ ಬಾಲಕಿಯನ್ನು ಪ್ರೀತಿಸಿ ಮದುವೆಯಾಗಿದ್ದ ಅಪ್ರಾಪ್ತ ...

Vijaya Karnataka 7 Jul 2019, 5:00 am
ಶ್ರೀರಂಗಪಟ್ಟಣ: ತಾಲೂಕಿನ ಬೆಳಗೊಳ ಗ್ರಾಮದಲ್ಲಿ ಗಾರೆ ಕೆಲಸ ಮಾಡಲು ಬಂದು ಎದುರುಗಡೆ ಮನೆಯ ಬಾಲಕಿಯನ್ನು ಪ್ರೀತಿಸಿ ಮದುವೆಯಾಗಿದ್ದ ಅಪ್ರಾಪ್ತ ಯುವಕ ಹಾಗೂ ಆತನಿಗೆ ಮದುವೆಯಾಗಲು ಸಹಕರಿಸಿದ್ದ ಸ್ನೇಹಿತನÜನ್ನು ಕೆಆರ್‌ಎಸ್‌ ಪೊಲೀಸರು ಬಂಧಿಸಿ ಜಿಲ್ಲಾ ಪೋಕ್ಸೊ ನ್ಯಾಯಾಲಯದ ವಶಕ್ಕೆ ಒಪ್ಪಿಸಿದ್ದಾರೆ.
Vijaya Karnataka Web marriage of minors two arrested in srirangapattana taluk
ಅಪ್ರಾಪ್ತರ ಮದುವೆ: ಇಬ್ಬರು ಬಂಧನ


ತಾಲೂಕಿನ ಪಾಲಹಳ್ಳಿ ಗ್ರಾಮದ ನವೀನ್‌(20), ಆತನಿಗೆ ಸಹಾಯ ಮಾಡಿದ ಸ್ನೇಹಿತ ಮೈಸೂರು ಜಿಲ್ಲೆಯ ಬೆಳವಾಡಿ ಗ್ರಾಮದ ಸ್ವಾಮಿ(20) ಬಂಧಿತರು.

ಈ ಇಬ್ಬರು ಕೆಲವು ದಿನಗಳ ಹಿಂದ ಅದೇ ಗ್ರಾಮದಲ್ಲಿ ನೂತನವಾಗಿ ನಿರ್ಮಾಣ ಮಾಡುತ್ತಿದ್ದ ಮನೆಗೆ ಗಾರೆ ಕೆಲಸ ಮಾಡುತ್ತಿದ್ದರು. ಈ ವೇಳೆ ಎದುರುಗಡೆ ಮನೆಯ ಬಾಲಕಿಯನ್ನು ಪರಿಚಯ ಮಾಡಿಕೊಂಡಿದ್ದ ನವೀನ್‌, ಜೂ.28ರಂದು ಬೈಕ್‌ನಲ್ಲಿ ಮಡಿಕೇರಿಯ ಅಮ್ಮತಿ ಬಳಿ ದೇವಾಲಯವೊಂದಕ್ಕೆ ಕರೆದೊಯ್ದು ವಿವಾಹವಾಗಿದ್ದ. ಈ ಮದುವೆಗೆ ಆತನ ಸ್ನೇಹಿತ ಸಹಕರಿಸಿದ್ದ ಎನ್ನಲಾಗಿದೆ.

ವಿಷಯ ತಿಳಿದ ಬಾಲಕಿಯ ಪೋಷಕರು ಜೂ.29 ರಂದು ದೂರು ನೀಡಿದ ಹಿನ್ನೆಲೆಯಲ್ಲಿ ಕೆಆರ್‌ಎಸ್‌ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಿಸಿ ಇಬ್ಬರು ಆರೋಪಿಗಳನ್ನು ಬಂಧಿಸಿ, ನ್ಯಾಯಾಂಗ ವಶಕ್ಕೆ ಒಪ್ಪಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ