ಆ್ಯಪ್ನಗರ

ಯೋಧ ಗುರು ಕುಟುಂಬಕ್ಕೆ ನೆರವಿನ ಮಹಾಪೂರ

ಯೋಧ ಗುರು ಕುಟುಂಬಕ್ಕೆ ನೆರವಿನ ಮಹಾಪೂರ ವಿಕ ಸುದ್ದಿಲೋಕ ಭಾರತೀನಗರ ಪುಲ್ವಾಮಾ ಉಗ್ರ ದಾಳಿಯಲ್ಲಿ ಹುತಾತ್ಮರಾದ ವೀರ ಯೋಧ ಎಚ್‌...

Vijaya Karnataka 20 Feb 2019, 5:00 am
ಭಾರತೀನಗರ: ಪುಲ್ವಾಮಾ ಉಗ್ರ ದಾಳಿಯಲ್ಲಿ ಹುತಾತ್ಮರಾದ ವೀರ ಯೋಧ ಎಚ್‌.ಗುರು ಕುಟುಂಬಕ್ಕೆ ಮಂಗಳವಾರವೂ ಹಲವಾರು ಮಂದಿ ಸಾಂತ್ವನ ಹೇಳಿದರಲ್ಲದೆ, ಧನ ಸಹಾಯವನ್ನು ಮಾಡಿದರು.
Vijaya Karnataka Web martyred soldiers mandya guru family some help from donors
ಯೋಧ ಗುರು ಕುಟುಂಬಕ್ಕೆ ನೆರವಿನ ಮಹಾಪೂರ


'ಕೆಮಿಸ್ಟ್ರಿ ಕರಿಯಪ್ಪ' ಚಿತ್ರ ತಂಡ ಗುರು ಮನೆಗೆ ಆಗಮಿಸಿ ಅವರ ತಂದೆ, ತಾಯಿ ಹಾಗೂ ಪತ್ನಿ ಸೇರಿದಂತೆ ಕುಟುಂಬದವರಿಗೆ ಸಾಂತ್ವನ ಹೇಳಿದರಲ್ಲದೆ, ಚಲನಚಿತ್ರದ ಒಂದು ದಿನದಲ್ಲಿ ಸಂಗ್ರಹವಾದ ಹಣವನ್ನು ನೆರವು ನೀಡಿದರು. ನಟ ತಬಲನಾಣಿ, ಚಿತ್ರದ ನಿರ್ಮಾಪಕ ಮಂಜುನಾಥ್‌, ನಿರ್ದೇಶಕ ಕುಮಾರ್‌, ನಾಯಕಿ ಸಂಜನಾ, ನಟಿ ಅಪೂರ್ವಶ್ರೀ, ಶ್ರೀನಿವಾಸ್‌ ಇತರರು ಇದ್ದರು.

ಸಿಎಸ್‌ಸಿ ಈ ಗೌರನೆನ್ಸ್‌ ಕಂಪನಿ ಸದಸ್ಯರು 30 ಸಾವಿರ ರೂ. ನೆರವು ನೀಡಿದರು. ಚಿಕ್ಕಮಗಳೂರು ಜಿಲ್ಲೆಯ ಬೀರೂರು ಸವಿತಾ ಸಮಾಜದಿಂದ ಒಂದು ದಿನದ ದುಡಿಮೆ ಹಣವನ್ನು ನೀಡಲಾಯಿತು. ಬೀರೂರು ಸವಿತಾ ಸಮಾಜದ ಅಧ್ಯಕ್ಷ ಜಿ.ದೇವರಾಜು, ಗೌರವಾಧ್ಯಕ್ಷ ಸುಬ್ರಮಣ್ಯ, ಕಾರ್ಯದರ್ಶಿ ಟಿ.ಎಂ.ಗಣೇಶ್‌, ಸಹ ಕಾರ್ಯದರ್ಶಿ ಎ.ಗಣೇಶ್‌, ಉಪಾಧ್ಯಕ್ಷ ನಾರಾಯಣ್‌ ಇತರರು ಇದ್ದರು. ರಾಮ್ಕೋ ಸಿಮೆಂಟ್‌ ಮುಖ್ಯಸ್ಥ ರಾಜ್‌ಕುಮಾರ್‌ ಗುರು ಕುಟುಂಬದವರಿಗೆ ಸಾಂತ್ವನ ಹೇಳಿದರಲ್ಲದೆ 5 ಲಕ್ಷ ರೂ. ನೆರವು ನೀಡುವುದಾಗಿ ತಿಳಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ