ಆ್ಯಪ್ನಗರ

23ಕ್ಕೆ ಕೃಷ್ಣರಾಜಮುಡಿ ಕಿರೀಟಧಾರಣ ಮಹೋತ್ಸವ

23ಕ್ಕೆ ಕೃಷ್ಣರಾಜಮುಡಿ ಕಿರೀಟಧಾರಣ ಮಹೋತ್ಸವ - ವಿಕ ಸುದ್ದಿಲೋಕ ಮೇಲುಕೋಟೆ ಚೆಲುವನಾರಾಯಣಸ್ವಾಮಿ ಕೃಷ್ಣರಾಜಮುಡಿ ಕಿರೀಟಧಾರಣ ಮಹೋತ್ಸವ ಜು23ರಂದು ನೆರವೇರಲಿದೆ...

Vijaya Karnataka 18 Jul 2019, 5:00 am
ಮೇಲುಕೋಟೆ: ಚೆಲುವನಾರಾಯಣಸ್ವಾಮಿ ಕೃಷ್ಣರಾಜಮುಡಿ ಕಿರೀಟಧಾರಣ ಮಹೋತ್ಸವ ಜು.23ರಂದು ನೆರವೇರಲಿದೆ.
Vijaya Karnataka Web melukote krishnarajamudi utsava on july 23
23ಕ್ಕೆ ಕೃಷ್ಣರಾಜಮುಡಿ ಕಿರೀಟಧಾರಣ ಮಹೋತ್ಸವ


ಇದಕ್ಕೂ ಮುನ್ನ ಆಷಾಢ ದ್ವಿತೀಯ ಶ್ರವಣ ನಕ್ಷ ತ್ರದ ದಿನವಾದ ಜು.18ರಂದು ಬೆಳಗ್ಗೆ ಮೂಲಮೂರ್ತಿ ತಿರುನಾರಾಯಣಸ್ವಾಮಿ, ಯೋಗನರಸಿಂಹಸ್ವಾಮಿ ಹಾಗೂ ರಾಮಾನುಜಾರ್ಯರಿಗೆ ಮಹಾಭಿಷೇಕ ನಡೆಯಲಿದೆ.

ಮೈಸೂರು ಮಹಾರಾಜ ಮುಮ್ಮಡಿ ಕೃಷ್ಣರಾಜ ಒಡೆಯರ್‌ ಹೆಸರಲ್ಲಿ ನಡೆಯುತ್ತಾ ಬಂದಿರುವ ಐತಿಹಾಸಿಕ ಕೃಷ್ಣರಾಜಮುಡಿ ಆಷಾಢÜ ಜಾತ್ರಾ ಮಹೋತ್ಸವ ಜು.20ರಿಂದ ಆರಂಭವಾಗಿ 29ರವರೆಗೆ ನಡೆಯಲಿದೆ. ಬ್ರಹ್ಮೋತ್ಸವದ ಪ್ರಮುಖ ದಿನವಾದ 23ರಂದು ರಾತ್ರಿ ಚೆಲುವನಾರಾಯಣಸ್ವಾಮಿಗೆ ವಜ್ರಖಚಿತ ಕೃಷ್ಣರಾಜಮುಡಿ ಕಿರೀಟಧಾರಣೆ ಮಾಡಿ ಉತ್ಸವ ನಡೆಸಲಾಗುತ್ತದೆ.

ಏನೇನು ಕಾರ್ಯಕ್ರಮ: ಜು.18 ರಂದು ಮುಮ್ಮಡಿ ಕೃಷ್ಣರಾಜ ಒಡೆಯರ್‌ ಜನ್ಮ ನಕ್ಷ ತ್ರದ ಅಂಗವಾಗಿ ಮಹಾಭಿಷೇಕ, ಸಂಜೆ ಕಲ್ಯಾಣೋತ್ಸವ, 19ರಂದು ರಕ್ಷಾಬಂಧನ, 20ರಂದು ಬೆಳಗ್ಗೆ 11ಕ್ಕೆ ಧ್ವಜಾರೋಹಣ, ರಾತ್ರಿ ಭೇರಿತಾಡನ, 21ರಂದು ಸಂಜೆ ನಾಗವಲ್ಲಿ ಮಹೋತ್ಸವ, ಶೇಷವಾಹನೋತ್ಸವ, 22ರಂದು ಚಂದ್ರಮಂಡಲ ವಾಹನೋತ್ಸವ, 24ರಂದು ಸಂಜೆ ಪ್ರಹ್ಲಾದ ಪರಿಪಾಲನ, 25ರಂದು ಸಂಜೆ ಗಜೇಂದ್ರಮೋಕ್ಷ ಅಶ್ವ ಹಾಗೂ ಗಜವಾಹನೋತ್ಸವ, 26ರಂದು ರಥೋತ್ಸವದ ಸಾಂಕೇತಿಕ ಉತ್ಸವ, 27ರಂದು ತೆಪೊ್ಪೕತ್ಸವದ ಸಾಂಕೇತಿಕ ಉತ್ಸವ, ಡೋಲೋತ್ಸವ, ಅಶ್ವವಾಹನೋತ್ಸವ, 28ರಂದು ರೋಹಿಣಿ ನಕ್ಷ ತ್ರ ಬೆಳಗ್ಗೆ 7ಕ್ಕೆ ಸಂಧಾನ ಸೇವೆ, ಚೂರ್ಣಾಭಿಷೇಕ ಮಧ್ಯಾಹ್ನ 11ಕ್ಕೆ ಅವಭೃತ, ಸಂಜೆ ಪರಕಾಲ ಮಠದಲ್ಲಿ ಪಟ್ಟಾಭಿಷೇಕ ಹಾಗೂ 29ರಂದು ಪುಷ್ಪಯಾಗದೊಂದಿಗೆ ಕೃಷ್ಣರಾಜಮುಡಿ ಬ್ರಹ್ಮೋತ್ಸವ ಸಂಪನ್ನಗೊಳ್ಳಲಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ