ವ್ಯಾಪಾರಿಗಳ ಆಕ್ರೋಶ | ಪರ್ಯಾಯ ವ್ಯವಸ್ಥೆ ಕಲ್ಪಿಸುವಂತೆ ಒತ್ತಾಯ
ಮೇಲುಕೋಟೆ: ಪಂಚಕಲ್ಯಾಣಿ ಸುತ್ತಮುತ್ತ ಇನ್ಫೋಸಿಸ್ ಪ್ರತಿಷ್ಠಾನ ನಡೆಸುತ್ತಿರುವ ಜೀರ್ಣೋದ್ಧಾರ ಕಾಮಗಾರಿಗೆ ಸಹಕಾರ ನೀಡುವ ನೆಪದಲ್ಲಿ ಸ್ಥಳೀಯ ಅಧಿಕಾರಿಗಳು ಬೀದಿ ಬದಿ ಬಡವ್ಯಾಪಾರಿಗಳ ಮೇಲೆ ಗದಾ ಪ್ರಹಾರ ಮಾಡುತ್ತಿರುವ ಆರೋಪ ಕೇಳಿಬಂದಿದೆ.
ವೈರಮುಡಿ ಜಾತ್ರೆ ಸಮೀಪದಲ್ಲಿರುವಾಗ ಸಂದರ್ಭದಲ್ಲಿ ಪರ್ಯಾಯ ವ್ಯವಸ್ಥೆ ಮಾಡದೆ ಏಕಾಏಕಿ ಅಧಿಕಾರಿಗಳು ಬೀದಿ ಬದಿ ವ್ಯಾಪಾರಿಗಳನ್ನು ತೆರವುಗೊಳಿಸುತ್ತಿರುವ ಕ್ರಮ ಆಕ್ರೋಶಕ್ಕೆ ಕಾರಣವಾಗಿದೆ. ಮೇಲುಕೋಟೆ ಕಲ್ಯಾಣಿ, ಬಸ್ ನಿಲ್ದಾಣ, ದೇವಾಲಯದ ಅಕ್ಕಪಕ್ಕ ಕೆಲವು ವ್ಯಾಪಾರಿಗಳು ಗ್ರಾಮ ಪಂಚಾಯಿತಿ ಅನುಮತಿ ಪಡೆದು, ಕೆಲವರು ಮೌಖಿಕ ಅನುಮತಿಯಂತೆ ಅಂಗಡಿ ನಿರ್ಮಾಣ ಮಾಡಿಕೊಂಡು ವ್ಯಾಪಾರ ಮಾಡುತ್ತಿದ್ದರು. ಆದರೆ ಕಳೆದೆರಡು ದಿನಗಳಿಂದ ಅಧಿಕಾರಿಗಳು ಅಂಗಡಿ ಮುಂಗಟ್ಟುಗಳನ್ನು ತೆರವುಗೊಳಿಸುವ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಇದು ಬಡವ್ಯಾಪಾರಿಗಳ ಆಕ್ರೋಶ, ಅಳಲಿಗೆ ಕಾರಣವಾಗಿದೆ.
ಉಪತಹಸೀಲ್ದಾರ್ ರಾಜೇಶ್, ಪಿಡಿಒ ತಮ್ಮೇಗೌಡ ಮತ್ತಿತರ ಅಧಿಕಾರಿಗಳ ತಂಡ ಮಂಗಳವಾರ ಹಲವು ವರ್ಷಗಳಿಂದ ಬೀದಿ ಬದಿಯಲ್ಲಿ ಹಾಗೂ ಗ್ರಾಮ ಪಂಚಾಯಿತಿ ಸ್ಥಳದಲ್ಲಿ ಅನುಮತಿ ಪಡೆದು ಅಂಗಡಿ ಇಟ್ಟುಕೊಂಡು ಜೀವನ ನಿರ್ವಹಿಸುತ್ತಿದ್ದ ಬಡವ್ಯಾಪಾರಿಗಳ ಬಳಿಗೆ ತರಳಿ ಮಧ್ಯಾಹ್ನದ ವೇಳೆಗೆ ನಿಮ್ಮ ಸಾಮಗ್ರಿಗಳನ್ನು ತೆರವು ಮಾಡಿ, ಇಲ್ಲವಾದರೆ ಜೆಸಿಬಿ ಮೂಲಕ ನೆಲಸಮ ಮಾಡಲಾಗುತ್ತದೆ ಎಂದು ಎಚ್ಚರಿಸಿದರು.
ಈ ವೇಳೆ ಅಧಿಕಾರಿಗಳೊಂದಿಗೆ ವಾಗ್ವಾದ ನಡೆಸಿದ ವ್ಯಾಪಾರಿಗಳು 20 ದಿನದಲ್ಲಿ ವೈರಮುಡಿ ಬ್ರಹ್ಮೋತ್ಸವ ಆರಂಭವಾಗುತ್ತಿದೆ. ಸಾಲ ಮಾಡಿ ಈಗಾಗಲೇ ನಾವು ಸಾವಿರಾರೂ ಬಂಡವಾಳ ಹಾಕಿದ್ದೇವೆ. ರಾಜ್ಯ ಸರಕಾರವೇ ಬಡವರ ಬಂಧು ಯೋಜನೆ ಜಾರಿ ಮಾಡಿದೆ. ಆದರೀಗ ಪರ್ಯಾಯ ಸ್ಥಳ ನೀಡದೆ ಓಕ್ಕಲೆಬ್ಬಿಸುವುದು ಯಾವ ನ್ಯಾಯ? ಮೊದಲು ದೇವಾಲಯದ ಹೆಸರಲ್ಲಿ ಖಾತೆಯಿದ್ದರೂ ಖಾಸಗಿ ವ್ಯಕ್ತಿಗಳ ಸುಪರ್ದಿಯಲ್ಲಿರುವ ಕೋಟ್ಯಂತರ ರೂ. ಮೌಲ್ಯದ ದೇವಾಲಯದ ಜಮೀನು ಹಾಗೂ ಸರಕಾರಿ ಜಾಗವನ್ನು ವಶಪಡಿಸಿಕೊಂಡು ಅಭಿವೃದ್ಧಿ ಮಾಡಿ. ದೇವಾಲಯದ ಜಾಗವನ್ನೇ ಖಾಸಗಿ ವ್ಯಕ್ತಿಗಳು ಮಾಂಸಾಹಾರದ ಪರ ಮಾಡಲು ಬಾಡಿಗೆ ನೀಡುತ್ತಿರುವುದನ್ನು ಮೊದಲು ತಪ್ಪಿಸಿ. ಪ್ರವಾಸೋದ್ಯಮ ಚಟುವಟಿಕೆ ಸ್ಥಳೀಯರಿಗೆ ಉದ್ಯೋಗಾವಕಾಶ ಕಲ್ಪಿಸಬೇಕೆ ಹೊರತು ಬಡವರ ಬದುಕನ್ನು ಬೀದಿಗೆ ತಳ್ಳಬಾರದು ಎಂದು ಆಕ್ರೋಶ ವ್ಯಕ್ತಪಡಿಸಿದರು. ಆದರೆ ಅಧಿಕಾರಿಗಳು ಪರ್ಯಾಯ ವ್ಯವಸ್ಥೆಗೆ ಯಾವ ಭರವಸೆ ನೀಡದೆ, ಅಂಗಡಿ ಮಾಲೀಕರ ದಾಖಲತಿಗಳನ್ನು ಪರಿಶಿಲಿಸದೇ ತೆರವಿಗೆ ಮುಂದಾಗಿದ್ದಾರೆ. ಗ್ರಾಮ ಪಂಚಾಯಿತಿಗೆ ಸೇರಿದ ಸ್ಥಳಗಳಲ್ಲಿ ಅನುಮತಿ ಪಡೆದು ಅಂಗಡಿ ಇಟ್ಟುಕೊಂಡಿದ್ದ ಅಂಗಡಿಗಳಿಗೆ ಕಲ್ಪಿಸಿದ್ದ ವಿದ್ಯುತ್ ಸಂಪರ್ಕವನ್ನು ಉಪ ತಹಸೀಲ್ದಾರ್ ರಾಜೇಶ್ ಸೂಚನೆ ಮೇರೆಗೆ ಸೆಸ್ಕ್ ಸಿಬ್ಬಂದಿ ಕಡಿತಗೊಳಿಸಿದ್ದಾರೆ. ಇದು ವ್ಯಾಪಾರಿಗಳ ಅಸಮಾಧಾನಕ್ಕೆ ಕಾರಣವಾಗಿದೆ.
ಬಂಡವಾಳ ಹೂಡಲು ಸಾಲ ಮಾಡಿದ ನಾವು ಅದನ್ನು ತೀರಿಸಲಾಗದೆ ಕುಟುಂಬ ಸಮೇತ ಸಾಮೂಹಿಕವಾಗಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಳ್ಳಬೇಕಾಗುತ್ತದೆ. ಇನ್ಫೋಸಿಸ್ ಸುಧಾಮೂರ್ತಿ ಅವರು ಬಡ ವ್ಯಾಪಾರಿಗಳಿಗೆ ಪರ್ಯಾಯ ವ್ಯವಸ್ಥೆ ಮಾಡದೇ ಕಿರುಕುಳ ನೀಡಿ ಎಂದು ಅಧಿಕಾರಿಗಳಿಗೆ ಸೂಚಿಸಿದ್ದಾರಾ? ನಮಗೆ ಪರ್ಯಾಯ ಮಾರ್ಗ ಕಲ್ಪಿಸಿ ತೆರವು ಕಾರ್ಯಾಚರಣೆ ಮಾಡಬೇಕು. ಜತೆಗೆ ವೈರಮುಡಿ ಬ್ರಹ್ಮೋತ್ಸವ ಮುಗಿಯುವವರೆಗೆ ವ್ಯಾಪಾರಕ್ಕೆ ಅವಕಾಶ ಕಲ್ಪಿಸಬೇಕು.
-ಬೀದಿ ಬದಿ ವ್ಯಾಪಾರಿಗಳು ಮೇಲುಕೋಟೆ
ಇನ್ಫೋಸಿಸ್ ಪ್ರತಿಷ್ಠಾನ ಮೇಲುಕೋಟೆ ಅಭಿವೃದ್ಧಿಗೆ ಕೋಟ್ಯಂತರ ರೂ. ವ್ಯಯಿಸುತ್ತಿದೆ. ಇದಕ್ಕೆ ಸ್ಥಳೀಯರು ಹಾಗೂ ವ್ಯಾಪಾರಿಗಳು ಸಹಕರಿಸಬೇಕು. ತೆರವುಗೊಂಡ ಅಂಗಡಿಗಳ ವ್ಯಾಪಾರಸ್ಥರಿಗೆ ಪರ್ಯಾಯ ವ್ಯವಸ್ಥೆಮಾಡಲು ಜಿಲ್ಲಾಧಿಕಾರಿಗಳು ಹಾಗೂ ಉಸ್ತುವಾರಿ ಸಚಿವರ ಜತೆ ಚರ್ಚಿಸಿ ಅಗತ್ಯ ವ್ಯವಸ್ಥೆ ಮಾಡಲಾಗುವುದು.
- ಶೈಲಜಾ ಉಪವಿಭಾಗಾಧಿಕಾರಿ
ಮೇಲುಕೋಟೆ: ಪಂಚಕಲ್ಯಾಣಿ ಸುತ್ತಮುತ್ತ ಇನ್ಫೋಸಿಸ್ ಪ್ರತಿಷ್ಠಾನ ನಡೆಸುತ್ತಿರುವ ಜೀರ್ಣೋದ್ಧಾರ ಕಾಮಗಾರಿಗೆ ಸಹಕಾರ ನೀಡುವ ನೆಪದಲ್ಲಿ ಸ್ಥಳೀಯ ಅಧಿಕಾರಿಗಳು ಬೀದಿ ಬದಿ ಬಡವ್ಯಾಪಾರಿಗಳ ಮೇಲೆ ಗದಾ ಪ್ರಹಾರ ಮಾಡುತ್ತಿರುವ ಆರೋಪ ಕೇಳಿಬಂದಿದೆ.
ವೈರಮುಡಿ ಜಾತ್ರೆ ಸಮೀಪದಲ್ಲಿರುವಾಗ ಸಂದರ್ಭದಲ್ಲಿ ಪರ್ಯಾಯ ವ್ಯವಸ್ಥೆ ಮಾಡದೆ ಏಕಾಏಕಿ ಅಧಿಕಾರಿಗಳು ಬೀದಿ ಬದಿ ವ್ಯಾಪಾರಿಗಳನ್ನು ತೆರವುಗೊಳಿಸುತ್ತಿರುವ ಕ್ರಮ ಆಕ್ರೋಶಕ್ಕೆ ಕಾರಣವಾಗಿದೆ. ಮೇಲುಕೋಟೆ ಕಲ್ಯಾಣಿ, ಬಸ್ ನಿಲ್ದಾಣ, ದೇವಾಲಯದ ಅಕ್ಕಪಕ್ಕ ಕೆಲವು ವ್ಯಾಪಾರಿಗಳು ಗ್ರಾಮ ಪಂಚಾಯಿತಿ ಅನುಮತಿ ಪಡೆದು, ಕೆಲವರು ಮೌಖಿಕ ಅನುಮತಿಯಂತೆ ಅಂಗಡಿ ನಿರ್ಮಾಣ ಮಾಡಿಕೊಂಡು ವ್ಯಾಪಾರ ಮಾಡುತ್ತಿದ್ದರು. ಆದರೆ ಕಳೆದೆರಡು ದಿನಗಳಿಂದ ಅಧಿಕಾರಿಗಳು ಅಂಗಡಿ ಮುಂಗಟ್ಟುಗಳನ್ನು ತೆರವುಗೊಳಿಸುವ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಇದು ಬಡವ್ಯಾಪಾರಿಗಳ ಆಕ್ರೋಶ, ಅಳಲಿಗೆ ಕಾರಣವಾಗಿದೆ.
ಉಪತಹಸೀಲ್ದಾರ್ ರಾಜೇಶ್, ಪಿಡಿಒ ತಮ್ಮೇಗೌಡ ಮತ್ತಿತರ ಅಧಿಕಾರಿಗಳ ತಂಡ ಮಂಗಳವಾರ ಹಲವು ವರ್ಷಗಳಿಂದ ಬೀದಿ ಬದಿಯಲ್ಲಿ ಹಾಗೂ ಗ್ರಾಮ ಪಂಚಾಯಿತಿ ಸ್ಥಳದಲ್ಲಿ ಅನುಮತಿ ಪಡೆದು ಅಂಗಡಿ ಇಟ್ಟುಕೊಂಡು ಜೀವನ ನಿರ್ವಹಿಸುತ್ತಿದ್ದ ಬಡವ್ಯಾಪಾರಿಗಳ ಬಳಿಗೆ ತರಳಿ ಮಧ್ಯಾಹ್ನದ ವೇಳೆಗೆ ನಿಮ್ಮ ಸಾಮಗ್ರಿಗಳನ್ನು ತೆರವು ಮಾಡಿ, ಇಲ್ಲವಾದರೆ ಜೆಸಿಬಿ ಮೂಲಕ ನೆಲಸಮ ಮಾಡಲಾಗುತ್ತದೆ ಎಂದು ಎಚ್ಚರಿಸಿದರು.
ಈ ವೇಳೆ ಅಧಿಕಾರಿಗಳೊಂದಿಗೆ ವಾಗ್ವಾದ ನಡೆಸಿದ ವ್ಯಾಪಾರಿಗಳು 20 ದಿನದಲ್ಲಿ ವೈರಮುಡಿ ಬ್ರಹ್ಮೋತ್ಸವ ಆರಂಭವಾಗುತ್ತಿದೆ. ಸಾಲ ಮಾಡಿ ಈಗಾಗಲೇ ನಾವು ಸಾವಿರಾರೂ ಬಂಡವಾಳ ಹಾಕಿದ್ದೇವೆ. ರಾಜ್ಯ ಸರಕಾರವೇ ಬಡವರ ಬಂಧು ಯೋಜನೆ ಜಾರಿ ಮಾಡಿದೆ. ಆದರೀಗ ಪರ್ಯಾಯ ಸ್ಥಳ ನೀಡದೆ ಓಕ್ಕಲೆಬ್ಬಿಸುವುದು ಯಾವ ನ್ಯಾಯ? ಮೊದಲು ದೇವಾಲಯದ ಹೆಸರಲ್ಲಿ ಖಾತೆಯಿದ್ದರೂ ಖಾಸಗಿ ವ್ಯಕ್ತಿಗಳ ಸುಪರ್ದಿಯಲ್ಲಿರುವ ಕೋಟ್ಯಂತರ ರೂ. ಮೌಲ್ಯದ ದೇವಾಲಯದ ಜಮೀನು ಹಾಗೂ ಸರಕಾರಿ ಜಾಗವನ್ನು ವಶಪಡಿಸಿಕೊಂಡು ಅಭಿವೃದ್ಧಿ ಮಾಡಿ. ದೇವಾಲಯದ ಜಾಗವನ್ನೇ ಖಾಸಗಿ ವ್ಯಕ್ತಿಗಳು ಮಾಂಸಾಹಾರದ ಪರ ಮಾಡಲು ಬಾಡಿಗೆ ನೀಡುತ್ತಿರುವುದನ್ನು ಮೊದಲು ತಪ್ಪಿಸಿ. ಪ್ರವಾಸೋದ್ಯಮ ಚಟುವಟಿಕೆ ಸ್ಥಳೀಯರಿಗೆ ಉದ್ಯೋಗಾವಕಾಶ ಕಲ್ಪಿಸಬೇಕೆ ಹೊರತು ಬಡವರ ಬದುಕನ್ನು ಬೀದಿಗೆ ತಳ್ಳಬಾರದು ಎಂದು ಆಕ್ರೋಶ ವ್ಯಕ್ತಪಡಿಸಿದರು. ಆದರೆ ಅಧಿಕಾರಿಗಳು ಪರ್ಯಾಯ ವ್ಯವಸ್ಥೆಗೆ ಯಾವ ಭರವಸೆ ನೀಡದೆ, ಅಂಗಡಿ ಮಾಲೀಕರ ದಾಖಲತಿಗಳನ್ನು ಪರಿಶಿಲಿಸದೇ ತೆರವಿಗೆ ಮುಂದಾಗಿದ್ದಾರೆ. ಗ್ರಾಮ ಪಂಚಾಯಿತಿಗೆ ಸೇರಿದ ಸ್ಥಳಗಳಲ್ಲಿ ಅನುಮತಿ ಪಡೆದು ಅಂಗಡಿ ಇಟ್ಟುಕೊಂಡಿದ್ದ ಅಂಗಡಿಗಳಿಗೆ ಕಲ್ಪಿಸಿದ್ದ ವಿದ್ಯುತ್ ಸಂಪರ್ಕವನ್ನು ಉಪ ತಹಸೀಲ್ದಾರ್ ರಾಜೇಶ್ ಸೂಚನೆ ಮೇರೆಗೆ ಸೆಸ್ಕ್ ಸಿಬ್ಬಂದಿ ಕಡಿತಗೊಳಿಸಿದ್ದಾರೆ. ಇದು ವ್ಯಾಪಾರಿಗಳ ಅಸಮಾಧಾನಕ್ಕೆ ಕಾರಣವಾಗಿದೆ.
ಬಂಡವಾಳ ಹೂಡಲು ಸಾಲ ಮಾಡಿದ ನಾವು ಅದನ್ನು ತೀರಿಸಲಾಗದೆ ಕುಟುಂಬ ಸಮೇತ ಸಾಮೂಹಿಕವಾಗಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಳ್ಳಬೇಕಾಗುತ್ತದೆ. ಇನ್ಫೋಸಿಸ್ ಸುಧಾಮೂರ್ತಿ ಅವರು ಬಡ ವ್ಯಾಪಾರಿಗಳಿಗೆ ಪರ್ಯಾಯ ವ್ಯವಸ್ಥೆ ಮಾಡದೇ ಕಿರುಕುಳ ನೀಡಿ ಎಂದು ಅಧಿಕಾರಿಗಳಿಗೆ ಸೂಚಿಸಿದ್ದಾರಾ? ನಮಗೆ ಪರ್ಯಾಯ ಮಾರ್ಗ ಕಲ್ಪಿಸಿ ತೆರವು ಕಾರ್ಯಾಚರಣೆ ಮಾಡಬೇಕು. ಜತೆಗೆ ವೈರಮುಡಿ ಬ್ರಹ್ಮೋತ್ಸವ ಮುಗಿಯುವವರೆಗೆ ವ್ಯಾಪಾರಕ್ಕೆ ಅವಕಾಶ ಕಲ್ಪಿಸಬೇಕು.
-ಬೀದಿ ಬದಿ ವ್ಯಾಪಾರಿಗಳು ಮೇಲುಕೋಟೆ
ಇನ್ಫೋಸಿಸ್ ಪ್ರತಿಷ್ಠಾನ ಮೇಲುಕೋಟೆ ಅಭಿವೃದ್ಧಿಗೆ ಕೋಟ್ಯಂತರ ರೂ. ವ್ಯಯಿಸುತ್ತಿದೆ. ಇದಕ್ಕೆ ಸ್ಥಳೀಯರು ಹಾಗೂ ವ್ಯಾಪಾರಿಗಳು ಸಹಕರಿಸಬೇಕು. ತೆರವುಗೊಂಡ ಅಂಗಡಿಗಳ ವ್ಯಾಪಾರಸ್ಥರಿಗೆ ಪರ್ಯಾಯ ವ್ಯವಸ್ಥೆಮಾಡಲು ಜಿಲ್ಲಾಧಿಕಾರಿಗಳು ಹಾಗೂ ಉಸ್ತುವಾರಿ ಸಚಿವರ ಜತೆ ಚರ್ಚಿಸಿ ಅಗತ್ಯ ವ್ಯವಸ್ಥೆ ಮಾಡಲಾಗುವುದು.
- ಶೈಲಜಾ ಉಪವಿಭಾಗಾಧಿಕಾರಿ