ಪಾಂಡವಪುರ: ನಾಪತ್ತೆಯಾಗಿದ್ದ ನವ ವಿವಾಹಿತೆಯೊಬ್ಬರ ಮೃತದೇಹ ವಿಶ್ವೇಶ್ವರಯ್ಯ ನಾಲೆಯಲ್ಲಿ ಪತ್ತೆಯಾಗಿದ್ದು, ಸಂಬಂಧಿಕರು ಕೊಲೆ ಶಂಕೆ ವ್ಯಕ್ತಪಡಿಸಿದ್ದಾರೆ.
ತಾಲೂಕಿನ ಎಲೆಕೆರೆ ಗ್ರಾಮದ ಮಧು ಎಂಬುವವರ ಪತ್ನಿ ಅಂಜಲಿ(19) ಮೃತರು.
ಡಿ.20ರಿಂದ ಅಂಜಲಿ ಮನೆಯಿಂದ ಕಾಣೆಯಾಗಿದ್ದರು. ಈ ವಿಷಯ ತಿಳಿದ ಅಂಜಲಿಯ ತಂದೆ ಆನುವಾಳು ಗ್ರಾಮದ ಕುಮಾರ್ ಅವರು ಪತಿ ಮಧು, ಅತ್ತೆ ಚಿಕ್ಕೋಳಮ್ಮ, ನಾದಿನಿ ಕಲ್ಪನಾ ವಿರುದ್ಧ ಶ್ರೀರಂಗಪಟ್ಟಣದ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ಈ ಸಂಬಂಧ ಪ್ರಕರಣವೂ ದಾಖಲಾಗಿತ್ತು.
''ಆನುವಾಳು ಗ್ರಾಮದ ಅಂಜಲಿಯವರನ್ನು 7 ತಿಂಗಳ ಹಿಂದೆಯಷ್ಟೇ ಎಲೆಕೆರೆಯ ಮಧು ಆಲಿಯಾಸ್ ವೈರಮುಡಿ ಜತೆ ವಿವಾಹ ಮಾಡಿಕೊಡಲಾಗಿತ್ತು. ಅಂಜಲಿ ಪತಿ ಮಧು, ಅತ್ತೆ , ನಾದಿನಿ ವರದಕ್ಷಿಣೆಗಾಗಿ ಕಿರುಕುಳ ನೀಡುತ್ತಿದ್ದರು. ಸಣ್ಣಪುಟ್ಟ ವಿಷಯಕ್ಕೂ ನನ್ನ ಮಗಳಿಗೆ ಮಾನಸಿಕ ಹಾಗೂ ದೈಹಿಕ ಹಿಂಸೆ ನೀಡುತ್ತಿದ್ದರು. ಅತ್ತೆ ಮನೆಯವರ ಕಿರುಕುಳ ತಾಳಲಾರದೆ ಮನೆಬಿಟ್ಟು ಹೋಗಿದ್ದಾಳೆ'' ಎಂದು ಡಿ. 21 ರಂದು ಶ್ರೀರಂಗಪಟ್ಟಣ ಗ್ರಾಮಾಂತರ ಪೊಲೀಸ್ ಠಾಣೆಗೆ ದೂರು ನೀಡಿದ್ದರು.
ಶನಿವಾರ ಅಂಜಲಿ ಮೃತದೇಹ ಶನಿವಾರ ವಿಶ್ವೇಶ್ವರಯ್ಯ ನಾಲೆ ಬನಘಟ್ಟದ ಬಳಿ ಪತ್ತೆಯಾಗಿತ್ತು. ವಿಷಯ ತಿಳಿದು ಸ್ಥಳಕ್ಕಾಗಿಸಿದ ಅಂಜಲಿ ಪೋಷಕರು ಆಕೆ ಗಂಡನ ಮನೆಯವರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ವಿಷಯ ತಿಳಿದ ಸ್ಥಳಕ್ಕಾಗಮಿಸಿದ ಶ್ರೀರಂಗಪಟ್ಟಣ ಡಿವೈಎಸ್ಪಿ ಪರಿಶೀಲನೆ ನಡೆಸಿದರು. ಈ ಸಂಬಂಧ ಶ್ರೀರಂಗಪಟ್ಟಣ ಗ್ರಾಮಾಂತರ ಪೊಲೀಸ್ ಠಾಣೆಗೆ ಈವರೆಗೆ ಯಾವುದೇ ದೂರು ನೀಡಿಲ್ಲ.
ತಾಲೂಕಿನ ಎಲೆಕೆರೆ ಗ್ರಾಮದ ಮಧು ಎಂಬುವವರ ಪತ್ನಿ ಅಂಜಲಿ(19) ಮೃತರು.
ಡಿ.20ರಿಂದ ಅಂಜಲಿ ಮನೆಯಿಂದ ಕಾಣೆಯಾಗಿದ್ದರು. ಈ ವಿಷಯ ತಿಳಿದ ಅಂಜಲಿಯ ತಂದೆ ಆನುವಾಳು ಗ್ರಾಮದ ಕುಮಾರ್ ಅವರು ಪತಿ ಮಧು, ಅತ್ತೆ ಚಿಕ್ಕೋಳಮ್ಮ, ನಾದಿನಿ ಕಲ್ಪನಾ ವಿರುದ್ಧ ಶ್ರೀರಂಗಪಟ್ಟಣದ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ಈ ಸಂಬಂಧ ಪ್ರಕರಣವೂ ದಾಖಲಾಗಿತ್ತು.
''ಆನುವಾಳು ಗ್ರಾಮದ ಅಂಜಲಿಯವರನ್ನು 7 ತಿಂಗಳ ಹಿಂದೆಯಷ್ಟೇ ಎಲೆಕೆರೆಯ ಮಧು ಆಲಿಯಾಸ್ ವೈರಮುಡಿ ಜತೆ ವಿವಾಹ ಮಾಡಿಕೊಡಲಾಗಿತ್ತು. ಅಂಜಲಿ ಪತಿ ಮಧು, ಅತ್ತೆ , ನಾದಿನಿ ವರದಕ್ಷಿಣೆಗಾಗಿ ಕಿರುಕುಳ ನೀಡುತ್ತಿದ್ದರು. ಸಣ್ಣಪುಟ್ಟ ವಿಷಯಕ್ಕೂ ನನ್ನ ಮಗಳಿಗೆ ಮಾನಸಿಕ ಹಾಗೂ ದೈಹಿಕ ಹಿಂಸೆ ನೀಡುತ್ತಿದ್ದರು. ಅತ್ತೆ ಮನೆಯವರ ಕಿರುಕುಳ ತಾಳಲಾರದೆ ಮನೆಬಿಟ್ಟು ಹೋಗಿದ್ದಾಳೆ'' ಎಂದು ಡಿ. 21 ರಂದು ಶ್ರೀರಂಗಪಟ್ಟಣ ಗ್ರಾಮಾಂತರ ಪೊಲೀಸ್ ಠಾಣೆಗೆ ದೂರು ನೀಡಿದ್ದರು.
ಶನಿವಾರ ಅಂಜಲಿ ಮೃತದೇಹ ಶನಿವಾರ ವಿಶ್ವೇಶ್ವರಯ್ಯ ನಾಲೆ ಬನಘಟ್ಟದ ಬಳಿ ಪತ್ತೆಯಾಗಿತ್ತು. ವಿಷಯ ತಿಳಿದು ಸ್ಥಳಕ್ಕಾಗಿಸಿದ ಅಂಜಲಿ ಪೋಷಕರು ಆಕೆ ಗಂಡನ ಮನೆಯವರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ವಿಷಯ ತಿಳಿದ ಸ್ಥಳಕ್ಕಾಗಮಿಸಿದ ಶ್ರೀರಂಗಪಟ್ಟಣ ಡಿವೈಎಸ್ಪಿ ಪರಿಶೀಲನೆ ನಡೆಸಿದರು. ಈ ಸಂಬಂಧ ಶ್ರೀರಂಗಪಟ್ಟಣ ಗ್ರಾಮಾಂತರ ಪೊಲೀಸ್ ಠಾಣೆಗೆ ಈವರೆಗೆ ಯಾವುದೇ ದೂರು ನೀಡಿಲ್ಲ.