ಕಲಬುರಗಿಯ ಕೊತ್ತಪಲ್ಲಿ ತಾಂಡಾದಿಂದ ನಾಪತ್ತೆಯಾಗಿದ್ದ ಮಕ್ಕಳು ಮುಂಬೈನಲ್ಲಿ ಪತ್ತೆ
ಕಲಬುರಗಿ ಜಿಲ್ಲೆಯ ಗ್ರಾಮವೊಂದರಿಂದ ನಾಪತ್ತೆಯಾಗಿದ್ದ ಮಕ್ಕಳು ಕೊನೆಗೂ ಪತ್ತೆಯಾಗಿದ್ದಾರೆ. ಮುಂಬೈನ ತಮ್ಮ ಪರಿಚಯಸ್ಥರು ಇರುವ ಪ್ರದೇಶದಲ್ಲಿ ಮಕ್ಕಳನ್ನು ನೋಡಿದ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಶಾಲೆಯಲ್ಲಿ 8ನೇ ತರಗತಿ ಓದುತ್ತಿದ್ದ ಮಕ್ಕಳು ನಾಪತ್ತೆಯಾಗಿದ್ದರು.
Vijaya Karnataka Web 31 Oct 2019, 10:04 am
ಕಲಬುರಗಿ: ಜಿಲ್ಲೆಯ ಸೇಡಂ ತಾಲೂಕಿನ ಕೊತ್ತಪಲ್ಲಿ ತಾಂಡಾದಿಂದ ನಾಪತ್ತೆಯಾಗಿದ್ದ ಐದು ಜನ ಶಾಲಾ ಮಕ್ಕಳು ಮುಂಬೈನಲ್ಲಿ ಪತ್ತೆಯಾಗಿದ್ದಾರೆ. ಮುಂಬೈನ ತಮ್ಮ ಪರಿಚಯಸ್ಥರು ಇರುವ ಅಲಿಭಾಗ ಎಂಬ ಪ್ರದೇಶದಲ್ಲಿ ಹೋಟೆಲ್ವೊಂದರಲ್ಲಿ ಕೆಲಸ ಕೇಳಲು ತೆರಳಿದಾಗ ಅನುಮಾನಗೊಂಡ ಸ್ಥಳೀಯರು ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದಾರೆ.
ಬಾಲ ಮಂದಿರದ ಮಕ್ಕಳು ನಾಪತ್ತೆ
ಮುಧೋಳ ಗ್ರಾಮದ ಸರಕಾರಿ ಶಾಲೆಯಲ್ಲಿ 8ನೇ ತರಗತಿ ಓದುತ್ತಿದ್ದ ಅಂಕುಶ ಗಣೇಶ ಜಾಧವ (14), ಜೇತಲಾ ಚಂದಾ ರಾಠೋಡ (14), ಜೀತು ಬನ್ಸಿಲಾಲಾ ರಾಠೋಡ (16), ಅರ್ಜುನ ಬಾಡು ರಾಠೋಡ (14), ರವೀಂದ್ರ ಹಣಮಂತ ರಾಠೋಡ (14) ಮಂಗಳವಾರ ನಾಪತ್ತೆಯಾಗಿದ್ದರು. ನಂತರ ಪ್ರಕರಣ ದಾಖಲಿಸಿಕೊಂಡಿದ್ದ ಮುಧೋಳ ಪೊಲೀಸರು ತನಿಖೆ ಕೈಗೊಂಡಿದ್ದರು.
ಬಾಲ ಮಂದಿರದ ಮಕ್ಕಳು ನಾಪತ್ತೆ
ಪಿಐ ತಮ್ಮಾರಾಯ ಪಾಟೀಲ ನೇತೃತ್ವದಲ್ಲಿ ತನಿಖಾ ತಂಡ ರಚಿಸಿ ಬೆಂಗಳೂರು ಮತ್ತು ಮುಂಬೈನಲ್ಲಿ ನಾಪತ್ತೆಯಾದ ಮಕ್ಕಳಿಗಾಗಿ ಕಾರ್ಯಾಚರಣೆ ನಡೆಸಲಾಗಿತ್ತು. ನಾಪತ್ತೆಯಾದ ಮಕ್ಕಳು ಕೊನೆಗೂ ಮುಂಬೈನಲ್ಲಿ ಪತ್ತೆಯಾಗಿದ್ದಾರೆ.
7 ವರ್ಷದಲ್ಲಿ 311 ಮಕ್ಕಳು ನಾಪತ್ತೆ
ಬಾಲ ಮಂದಿರದ ಮಕ್ಕಳು ನಾಪತ್ತೆ
ಮುಧೋಳ ಗ್ರಾಮದ ಸರಕಾರಿ ಶಾಲೆಯಲ್ಲಿ 8ನೇ ತರಗತಿ ಓದುತ್ತಿದ್ದ ಅಂಕುಶ ಗಣೇಶ ಜಾಧವ (14), ಜೇತಲಾ ಚಂದಾ ರಾಠೋಡ (14), ಜೀತು ಬನ್ಸಿಲಾಲಾ ರಾಠೋಡ (16), ಅರ್ಜುನ ಬಾಡು ರಾಠೋಡ (14), ರವೀಂದ್ರ ಹಣಮಂತ ರಾಠೋಡ (14) ಮಂಗಳವಾರ ನಾಪತ್ತೆಯಾಗಿದ್ದರು. ನಂತರ ಪ್ರಕರಣ ದಾಖಲಿಸಿಕೊಂಡಿದ್ದ ಮುಧೋಳ ಪೊಲೀಸರು ತನಿಖೆ ಕೈಗೊಂಡಿದ್ದರು.
ಬಾಲ ಮಂದಿರದ ಮಕ್ಕಳು ನಾಪತ್ತೆ
ಪಿಐ ತಮ್ಮಾರಾಯ ಪಾಟೀಲ ನೇತೃತ್ವದಲ್ಲಿ ತನಿಖಾ ತಂಡ ರಚಿಸಿ ಬೆಂಗಳೂರು ಮತ್ತು ಮುಂಬೈನಲ್ಲಿ ನಾಪತ್ತೆಯಾದ ಮಕ್ಕಳಿಗಾಗಿ ಕಾರ್ಯಾಚರಣೆ ನಡೆಸಲಾಗಿತ್ತು. ನಾಪತ್ತೆಯಾದ ಮಕ್ಕಳು ಕೊನೆಗೂ ಮುಂಬೈನಲ್ಲಿ ಪತ್ತೆಯಾಗಿದ್ದಾರೆ.
7 ವರ್ಷದಲ್ಲಿ 311 ಮಕ್ಕಳು ನಾಪತ್ತೆ