ಆ್ಯಪ್ನಗರ

ಸಾಲ ಮನ್ನಾ ಆಗೇ ಆಗುತ್ತೆ, ನಿವ್ಯಾರೂ ಹೆದರಬೇಡಿ: ಪುಟ್ಟಣ್ಣಯ್ಯ

ಸಾಲ ಮನ್ನಾ ಆಗೇ ಆಗುತ್ತೆ, ನಿವ್ಯಾರೂ ಹೆದರಬೇಡಿ ಎಂದು ಶಾಸಕ ಕೆ.ಎಸ್.ಪುಟ್ಟಣ್ಣಯ್ಯ ರೈತರಿಗೆ ಭರವಸೆ ನೀಡಿದ್ದಾರೆ.

ವಿಕ ಸುದ್ದಿಲೋಕ 11 Jun 2017, 5:29 pm
ಮಂಡ್ಯ: ಸಾಲ ಮನ್ನಾ ಆಗೇ ಆಗುತ್ತೆ, ನಿವ್ಯಾರೂ ಹೆದರಬೇಡಿ ಎಂದು ಶಾಸಕ ಕೆ.ಎಸ್.ಪುಟ್ಟಣ್ಣಯ್ಯ ರೈತರಿಗೆ ಭರವಸೆ ನೀಡಿದ್ದಾರೆ.
Vijaya Karnataka Web mla puttannaiah expected farmers loan waiver
ಸಾಲ ಮನ್ನಾ ಆಗೇ ಆಗುತ್ತೆ, ನಿವ್ಯಾರೂ ಹೆದರಬೇಡಿ: ಪುಟ್ಟಣ್ಣಯ್ಯ


ರಾಜ್ಯದಲ್ಲಿ ಪ್ರಪ್ರಥಮವಾಗಿ 63 ಹಳ್ಳಿಗಳಿಗೆ ಶುದ್ಧ ಕುಡಿಯುವ ನೀರು ಒದಗಿಸಿದ ಹಿನ್ನೆಲೆಯಲ್ಲಿ ಮಂಡ್ಯ ಜಿಲ್ಲೆಯ ಪಾಂಡವಪುರ ತಾಲೂಕಿನ ಬನ್ನಂಗಾಡಿ ಗ್ರಾಮದಲ್ಲಿ ಶಾಸಕ ಪುಟ್ಟಣ್ಣಯ್ಯ ಅವರಿಗೆ ಜಲ ಕೃತಜ್ಙತಾ ಅಭಿನಂದನಾ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.

ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸಾಲ ಮನ್ನಾ ಆಗೇ ಆಗುತ್ತೆ, ನಿವ್ಯಾರೂ ಹೆದರಬೇಡಿ. ಆತ್ಮಹತ್ಯೆ ಅನಿವಾರ್ಯ ಎನಿಸಿದರೆ, ತಮ್ಮನ್ನು ಸಂಪರ್ಕಿಸಿ ಎಂದು ರೈತರಲ್ಲಿ ಮನವಿ ಮಾಡಿಕೊಂಡಿದ್ದಾರೆ.

'ನಿಮಗಿಂತ ಮೊದಲು ನಾನೇ ಆತ್ಮ ಹತ್ಯೆ ಮಾಡಿಕೊಳ್ಳಬೇಕಿತ್ತು. ಆದರೆ, ನಾನು ಬಂಡ ಅದಕ್ಕೆ ಇನ್ನೂ ಬದುಕಿದ್ದೀನಿ. ನಾನು ಮನಸ್ಸು ಮಾಡಿದ್ರೆ ಆರು ತಿಂಗಳ ಹಿಂದೆಯೇ ಜಿಲ್ಲಾ ಮಂತ್ರಿ ಆಗ್ತಿದ್ದೆ. ಆದರೆ, ನಾನು ಹಸಿರು ಟವಲ್ ಹಾಕಿದ್ದೇನಿ, ಅದರ ಗೌರವ ಉಳಿಸಿದ್ದೇನಿ. ಅಧಿಕಾರದ ಆಸೆಗೆ ಪಕ್ಷಾಂತರ ಮಾಡಲಿಲ್ಲ. ನನಗೆ ನಾನೇ ಮಂತ್ರಿ. ಈ ಗೌರವಕ್ಕೆಲ್ಲಾ ನೀವೇ ಕಾರಣ' ಎಂದು ಹೇಳಿದರು.

'ನನ್ನನ್ನು ಗೆಲ್ಲಿಸದಿದ್ದರೆ ರಾಜ್ಯದಲ್ಲಿ ರೈತ ಸಂಘವೇ ಇರುತ್ತಿರಲಿಲ್ಲ. ನಾನು ಇವತ್ತು ವಿಧಾನ ಸೌಧದಲ್ಲಿ ಏನೇ ಹೋರಾಟ ಮಾಡಿದ್ರೂ ಅದು ರೈತರಿಂದ. ಆದರ್ಶ ಗ್ರಾಮಕ್ಕೆ ಪೂಜೆ ಮಾಡಿ ಎರಡು ವರ್ಷ ಆಯ್ತು. ಆದರೆ, ಇನ್ನೂ ಒಂದು ಕಲ್ಲು ಹಾಕಿಲ್ಲ' ಎಂದು ಕಿಡಿಕಾರಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ