ಆ್ಯಪ್ನಗರ

ಶಾಸಕರ ಬೆಂಬಲಿಗರಿಂದ ಮಹಿಳಾ ಪೇದೆ ಜತೆ ಗೂಂಡಾ ವರ್ತನೆ

ಶ್ರೀರಂಗಪಟ್ಟಣ ಜೆಡಿಎಸ್ ಶಾಸಕ ರವೀಂದ್ರ ಶ್ರೀಕಂಠಯ್ಯ ಬೆಂಬಲಿಗರು ಮಹಿಳಾ ಪೊಲೀಸ್‌ ಪೇದೆ ಬಳಿ ಗೂಂಡಾ ವರ್ತನೆ ತೋರಿದ್ದಾರೆ.

Vijaya Karnataka Web 18 Jul 2018, 9:12 pm
ಮಂಡ್ಯ: ಶ್ರೀರಂಗಪಟ್ಟಣ ಜೆಡಿಎಸ್ ಶಾಸಕ ರವೀಂದ್ರ ಶ್ರೀಕಂಠಯ್ಯ ಬೆಂಬಲಿಗರು ಮಹಿಳಾ ಪೊಲೀಸ್‌ ಪೇದೆ ಬಳಿ ಗೂಂಡಾ ವರ್ತನೆ ತೋರಿದ್ದಾರೆ.
Vijaya Karnataka Web KRS


ಕೆಆರ್‌ಎಸ್‌ ಡ್ಯಾಂ ಪ್ರವೇಶಿಸಿದಂತೆ ಬ್ಯಾರಿಕೇಡ್ ಹಾಕಿ, ಒಳ ಹೋಗದಂತೆ ತಡೆದ ಮಹಿಳಾ ಪೇದೆಯ ಜತೆ ವಾಗ್ವಾದಕ್ಕಿಳಿದ ಬೆಂಬಲಿಗರು ಬ್ಯಾರಿಗೇಟ್‌ಗಳನ್ನು ಕಿತ್ತು. ಮಹಿಳಾ ಪೇದೆಯನ್ನೂ ತಳ್ಳಾಡಿದ್ದಾರೆ.

ಶಾಸಕರ ಬೆಂಬಲಿಗರಾದ ರವೀಂದ್ರ, ಸಾಯಿ ಕುಮಾರ್ ಸೇರಿದಂತೆ ಮತ್ತಿತರನ್ನು ಗುರುತಿಸಲಾಗಿದೆ. 'ಏನಮ್ಮ ರೌಡಿ ಆಡಿದಂಗೆ ಆಡ್ತಿಯಾ? ಇದು ಯಾರ ತಾತ ಕಟ್ಟಿದ್ದಲ್ಲ. ನಮ್ಮ ತಾತ ಕಟ್ಟಿರೋ ಡ್ಯಾಂ. ನಿನಗೆ ಒಳ ಹೋಗಬೇಡಿ ಅನ್ನೋ ಹಕ್ಕಿಲ್ಲ. ಅದ್ಯಾರನ್ನ ಕರೆಸ್ತಿಯೋ ಕರೆಸಮ್ಮ ಎಂದು ಏರು ದನಿಯಲ್ಲಿ ಕುಮಾರ್‌ ಮಾತಿನ ಚಕಮಕಿ ನಡೆಸಿದ್ದಾರೆ. ಮಹಿಳಾ ಪೇದೆ ಜತೆಗಿನ ಶಾಸಕರ ಬೆಂಬಲಿಗರ ವಾಗ್ವಾದ ಮೊಬೈಲ್‌ನಲ್ಲಿ ಸೆರೆಯಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ