ಆ್ಯಪ್ನಗರ

ಹುತಾತ್ಮ ಯೋಧನ ಮನೆಗೆ ಪ್ರಕಾಶ್‌ ರೈ ಭೇಟಿ ವೇಳೆ ಹಲ್ಲೆಗೆ ಯತ್ನ

ಇಂತಹ ಘಟನೆ ನಡೆದಾಗ ಮಾತ್ರ ನೀವು ಸೈನಿಕರ ಪರವಾಗಿ ಮಾತನಾಡಿ, ಉಳಿದ ವೇಳೆ ಪ್ರತಿದಿನ ಸೈನಿಕರ ವಿರುದ್ಧವಾಗಿ ಮಾತನಾಡಿ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಈ ಹೇಳಿಕೆಗೆ ಹಲವು ಮಂದಿ ದನಿಗೂಡಿಸಿದರು.

Vijaya Karnataka Web 17 Feb 2019, 7:41 am
ಮಂಡ್ಯ: ವೀರಯೋಧ ಗುರು ಅವರ ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳಲು ಆಗಮಿಸಿದ್ದ ನಟ ಪ್ರಕಾಶ್ ರೈ ವಿರುದ್ಧ ಘೋಷಣೆ ಕೂಗಿ ಹಲ್ಲೆಗೆ ಯತ್ನಿಸಿದ ಘಟನೆ ಮದ್ದೂರು ತಾಲೂಕು ಮೆಳ್ಳಹಳ್ಳಿ ಬಳಿ ಶನಿವಾರ ರಾತ್ರಿ ಸಂಭವಿಸಿದೆ.

ಜಮ್ಮು-ಕಾಶ್ಮೀರದ ಪುಲ್ವಾಮದಲ್ಲಿ ಉಗ್ರರ ದಾಳಿಗೆ ಬಲಿಯಾದ ವೀರಯೋಧ ಎಚ್. ಗುರು ಅವರ ಅಂತ್ಯಕ್ರಿಯೆ ಸ್ವಗ್ರಾಮ ಮದ್ದೂರಿನ ಗುಡಿಗೆರೆಯಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ ನೆರವೇರಿತು.

ಆದರೆ ಈ ಮಧ್ಯೆ ಅಂತ್ಯ ಸಂಸ್ಕಾರಕ್ಕೆ ಬಂದಿದ್ದ ನಟ ಪ್ರಕಾಶ್ ರೈ ಅವರ ವಿರುದ್ಧ ಕೆಲವು ಜನರು ಘೋಷಣೆ ಕೂಗಿ, ಹಲ್ಲೆಗೆ ಯತ್ನಿಸಿದ ಘಟನೆ ನಡೆಯಿತು.

ಶನಿವಾರ ಬೆಳಗ್ಗೆ ಮೃತ ಯೋಧ ಗುರು ಮನೆಗೆ ತೆರಳಿದ್ದ ಪ್ರಕಾಶ್ ರೈ ಕುಟುಂಬಸ್ಥರಿಗೆ ಸಾಂತ್ವನ ಹೇಳಿ, ನೆರವು ನೀಡುವುದಾಗಿ ತಿಳಿಸಿದ್ದರು.

ಮೃತ ಯೋಧನ ಅಂತಿಮ ದರ್ಶನ ಪಡೆದು, ಅಂತ್ಯಸಂಸ್ಕಾರದಲ್ಲಿ ಪಾಲ್ಗೊಳ್ಳಲು ಪ್ರಕಾಶ್ ರೈ ಸಂಜೆಯವರೆಗೂ ಅಲ್ಲಿಯೇ ಇದ್ದರು.

ನಂತರ ಕೆ.ಎಂ.ದೊಡ್ಡಿ ಬಳಿ ಮೆಳ್ಳಹಳ್ಳಿಯಲ್ಲಿ ಪ್ರಕಾಶ್ ರೈ ಸಾರ್ವಜನಿಕರನ್ನು ಉದ್ದೇಶಿಸಿ, ನಮ್ಮ ಮೇಲೆ ಇಂತಹ ದಬ್ಬಾಳಿಕೆ, ದಾಳಿಗಳು ನಡೆದಾಗ ನಾವು ನಮ್ಮೆಲ್ಲ ಭಿನ್ನಾಭಿಪ್ರಾಯಗಳನ್ನು ಮರೆತು ಒಟ್ಟಾಗಿ ನಿಂತು, ಇಂತಹ ದುಷ್ಟ ಶಕ್ತಿಗಳ ವಿರುದ್ಧ ಹೋರಾಡಬೇಕು ಎಂದು ಹೇಳಿದರು.

ಈ ವೇಳೆ ನೆರೆದಿದ್ದ ಜನರ ಮಧ್ಯೆ ಇದ್ದ ವ್ಯಕ್ತಿಯೊಬ್ಬ ಇಂತಹ ಘಟನೆ ನಡೆದಾಗ ಮಾತ್ರ ನೀವು ಸೈನಿಕರ ಪರವಾಗಿ ಮಾತನಾಡಿ, ಉಳಿದ ವೇಳೆ ಪ್ರತಿದಿನ ಸೈನಿಕರ ವಿರುದ್ಧವಾಗಿ ಮಾತನಾಡಿ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಈ ಹೇಳಿಕೆಗೆ ಹಲವು ಮಂದಿ ದನಿಗೂಡಿಸಿದರು.

ಪ್ರಕಾಶ್ ರೈ ಎಷ್ಟೇ ಮನವಿ ಮಾಡಿದರೂ ಗದ್ದಲ ಕಡಿಮೆಯಾಗಲಿಲ್ಲ. ಈ ವೇಳೆ ಕೆಲ ವ್ಯಕ್ತಿಗಳು ಪ್ರಕಾಶ್ ರೈ ಕಡೆಗೆ ನುಗ್ಗಿ, ಹಲ್ಲೆಗೆ ಮುಂದಾದರು. ತಕ್ಷಣ ಎಚ್ಚೆತ್ತ ಪೊಲೀಸರು ಅವರನ್ನು ಸುತ್ತುವರೆದು ಸುರಕ್ಷಿತವಾಗಿ ಅಲ್ಲಿಂದ ಕರೆದೊಯ್ದರು.

ಅಲ್ಲಿ ನೆರೆದಿದ್ದ ಯುವಕರ ಗುಂಪು ಮೋದಿ ಮೋದಿ ಮೋದಿ ಎಂದು ಮೋದಿ ಪರವಾಗಿ ಪರವಾಗಿ ಜಯಘೋಷ ಮೊಳಗಿಸಿದರೆ ಅದಕ್ಕೆ ಪ್ರತಿಯಾಗಿ ಪ್ರಕಾಶ್ ಅವರು ಭಾರತ ಭಾರತ ಭಾರತ ಎಂದು ಘೋಷಣೆ ಕೂಗುತ್ತಿದ್ದರು.

ಪ್ರಕಾಶ್ ರೈ ಅವರ ಬೆಂಬಲಿಗರು ಹಾಗೂ ಪೊಲೀಸರು ಪ್ರಕಾಶ್ ರೈ ಅವರನ್ನು ಯುವ ಜನರ ಗುಂಪಿನಿಂದ ರಕ್ಷಿಸಿ ಅವರನ್ನು ಕರೆದವರು ಈ ವೇಳೆ ಪ್ರಕಾಶ್ ರೈ ಅವರು ಎಡವಿ ಬೀಳುತ್ತಿದ್ದಾಗ ಅವರನ್ನು ಬೆಂಬಲಿಗರು ಬಿಡದಂತೆ ಹಿಡಿದುಕೊಂಡರು.

ಸ್ಥಳೀಯ ಯುವಕರ ಗುಂಪು ಪ್ರಕಾಶ್ ರೈ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿ ಹಲ್ಲೆಗೆ ಯತ್ನಿಸಿದ ಘಟನೆಗೆ ಪೊಲೀಸರು ಮೂಕ ಪ್ರೇಕ್ಷಕರಾಗಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ