ಆ್ಯಪ್ನಗರ

ತೇಜಸ್ವಿನಿ ಬಾಯಿಗೆ ಬೀಗ ಹಾಕಿ: ಬಿಜೆಪಿ ನಾಯಕರಿಗೆ ಸಂಸದ ಪುಟ್ಟರಾಜು ಸಲಹೆ

ಮಾಜಿ ಸಂಸದೆ ತೇಜಸ್ವಿನಿ ಅವರ ಬಾಯಿಗೆ ಬೀಗ ಹಾಕಬೇಕು. ಇಲ್ಲದಿದ್ದರೆ ಬಿಜೆಪಿ ನಾಯಕರು ಬಹಳಷ್ಟು ಬೆಲೆ ತೆರಬೇಕಾಗುತ್ತದೆ ಎಂದು ಜೆಡಿಎಸ್‌ ಸಂಸದ ಸಿ.ಎಸ್‌. ಪುಟ್ಟರಾಜು ಹೇಳಿದ್ದಾರೆ.

ವಿಕ ಸುದ್ದಿಲೋಕ 18 Jun 2017, 1:11 pm
ಮಂಡ್ಯ: ಮಾಜಿ ಸಂಸದೆ ತೇಜಸ್ವಿನಿ ಅವರ ಬಾಯಿಗೆ ಬೀಗ ಹಾಕಬೇಕು. ಇಲ್ಲದಿದ್ದರೆ ಬಿಜೆಪಿ ನಾಯಕರು ಬಹಳಷ್ಟು ಬೆಲೆ ತೆರಬೇಕಾಗುತ್ತದೆ ಎಂದು ಜೆಡಿಎಸ್‌ ಸಂಸದ ಸಿ.ಎಸ್‌. ಪುಟ್ಟರಾಜು ಹೇಳಿದ್ದಾರೆ.
Vijaya Karnataka Web mp puttaraju criticise to tejaswini
ತೇಜಸ್ವಿನಿ ಬಾಯಿಗೆ ಬೀಗ ಹಾಕಿ: ಬಿಜೆಪಿ ನಾಯಕರಿಗೆ ಸಂಸದ ಪುಟ್ಟರಾಜು ಸಲಹೆ


ಕುಮಾರಸ್ವಾಮಿ ಅವರು ಮನೆಯಲ್ಲಿ ಯಡಿಯೂರಪ್ಪ ಅವರ ಭಾವಚಿತ್ರ ಇಟ್ಟುಕೊಳ್ಳಬೇಕು ಎಂಬ ತೇಜಸ್ವಿನಿ ಅವರ ಹೇಳಿಕೆಗೆ ಈ ಪ್ರತಿಕ್ರಿಯೆ ನೀಡಿದ್ದಾರೆ.

ಮೊದಲು ಯಡಿಯೂರಪ್ಪ ಅವರನ್ನು ಕನ್ನಡಿ ಮುಂದೆ ನಿಲ್ಲಿಸಿ ಯಡಿಯೂರಪ್ಪ ಅವರು ಕುಮಾರಸ್ವಾಮಿಯವರ ಫೋಟೊ ಹಾಕೊಳ್ಳಬೇಕೇ ಅಥವಾ ಕುಮಾರಸ್ವಾಮಿ ಅವರು ಯಡಿಯೂರಪ್ಪರ ಫೋಟೊ ಹಾಕಿಕೊಳ್ಳಬೇಕೆ ಎಂಬುದನ್ನು ತೇಜಸ್ವಿನಿ ಕೇಳಿಕೊಳ್ಳಲಿ . ಏನು ಮಾಡಬೇಕು ಅನ್ನುವುದನ್ನು ಯಡಿಯೂರಪ್ಪ ಬಿಡಿಸಿ ಹೇಳುತ್ತಾರೆ ಎಂದು ಪುಟ್ಟರಾಜು ಹೇಳಿದ್ದಾರೆ.

ಏನೂ ಗೊತ್ತಿಲ್ಲದೆ ತೇಜಸ್ವಿನಿ ಬಾಯಿಗೆ ಬಂದಂತೆ ಮಾತಾಡಬಾರದು. ಹೀಗೆ ಮುಂದುವರಿದರೆ ಮಂಡ್ಯದ ಜನ ಬುದ್ಧಿ ಕಲಿಸುತ್ತಾರೆ. ಜಿಲ್ಲೆಯಲ್ಲಿ ನೆಮ್ಮದಿ ಕೆಡಿಸಿ, ಕಾರ್ಯಕರ್ತರನ್ನು ರೊಚ್ಚಿಗೇಳಿಸಿದರೆ ಬಿಜೆಪಿ ನಾಯಕರೇ ಹೊಣೆ ಆಗಬೇಕಾಗುತ್ತದೆ. ತೇಜಸ್ವಿನಿಗೆ ಹೆಚ್‌ಡಿಕೆ,ಹೆಚ್‌ಡಿಡಿ ಬಗ್ಗೆ ಮಾತನಾಡುವ ನೈತಿಕ ಹಕ್ಕಿಲ್ಲ ಎಂದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ