ಆ್ಯಪ್ನಗರ

ಮಂಡ್ಯದ ಕಾಮೇಗೌಡರು ಶೀಘ್ರ ಗುಣಮುಖರಾಗುವಂತೆ ಸಂಸದೆ ಸುಮಲತಾ ಹಾರೈಕೆ

ಇಡೀ ದೇಶಕ್ಕೆ ಮಾದರಿಯಾಗಿ ಅವರ ನಿಸ್ವಾರ್ಥ ಕೆಲಸಕ್ಕೆ ಮೆಚ್ಚಿ ಸ್ವತಃ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರೇ ಕೊಂಡಾಡಿದ ನಮ್ಮ ಮಂಡ್ಯದ ಹೆಮ್ಮೆ ಶ್ರೀ ಕಾಮೇಗೌಡ ಅವರು ಕೊರೊನಾ ಸೋಂಕಿನಿಂದ ಬೇಗನೆ ಸಂಪೂರ್ಣ ಗುಣಮುಖರಾಗಲೆಂದು ಪ್ರಾರ್ಥಿಸುವೆ. ಮತ್ತೆ ಆರೋಗ್ಯದಿಂದ ಅವರ ಸಾರ್ಥಕ ಜೀವನ ಹೀಗೆಯೇ ನೂರು ಕಾಲ ಸಾಗಲಿ ಎಂದು ಆಶಿಸುತ್ತೇನೆ ಎಂದು ಸಂಸದೆ ಸುಮಲತಾ ಟ್ವೀಟ್ ಮಾಡಿದ್ದಾರೆ.

Vijaya Karnataka Web 25 Jul 2020, 4:55 pm
ಮಂಡ್ಯ: ಕೊರೊನಾ ಪಾಸಿಟಿವ್ ಕಾಣಿಸಿಕೊಂಡು ಆಸ್ಪತ್ರೆ ಸೇರಿರುವ ಮಂಡ್ಯದಲ್ಲಿ ಕೆರೆ ನಿರ್ಮಿಸಿದ ಕಾಮೇಗೌಡರು ಸೋಂಕಿನಿಂದ ಶೀಘ್ರ ಗುಣಮುಖರಾಗಬೇಕೆಂದು ಮಂಡ್ಯ ಸಂಸದೆ ಸುಮಲತಾ ಹಾರೈಸಿದ್ದಾರೆ.
Vijaya Karnataka Web Sumalatha


ಮಂಡ್ಯದ ಕೋವಿಡ್ ಆಸ್ಪತ್ರೆಯಲ್ಲೇ ನೇಣಿಗೆ ಶರಣಾದ ಕೊರೊನಾ ನೆಗೆಟಿವ್ ವ್ಯಕ್ತಿ..!

ಈ ಬಗ್ಗೆ ಟ್ವೀಟ್ ಮಾಡಿರುವ ಸುಮಲತಾ, ಇಡೀ ದೇಶಕ್ಕೆ ಮಾದರಿಯಾಗಿ ಅವರ ನಿಸ್ವಾರ್ಥ ಕೆಲಸಕ್ಕೆ ಮೆಚ್ಚಿ ಸ್ವತಃ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರೇ ಕೊಂಡಾಡಿದ ನಮ್ಮ ಮಂಡ್ಯದ ಹೆಮ್ಮೆ ಶ್ರೀ ಕಾಮೇಗೌಡ ಅವರು ಕೊರೊನಾ ಸೋಂಕಿನಿಂದ ಬೇಗನೆ ಸಂಪೂರ್ಣ ಗುಣಮುಖರಾಗಲೆಂದು ಪ್ರಾರ್ಥಿಸುವೆ. ಮತ್ತೆ ಆರೋಗ್ಯದಿಂದ ಅವರ ಸಾರ್ಥಕ ಜೀವನ ಹೀಗೆಯೇ ನೂರು ಕಾಲ ಸಾಗಲಿ ಎಂದು ಆಶಿಸುತ್ತೇನೆ ಎಂದು ಸಂಸದೆ ಸುಮಲತಾ ಟ್ವೀಟ್ ಮಾಡಿದ್ದಾರೆ.

ಮಂಡ್ಯ: ಆಧುನಿಕ ಭಗೀರಥ ಕಾಮೇಗೌಡರಿಗೆ ಕೊರೊನಾ, ಮನೆ ಸೀಲ್‌ ಡೌನ್‌

ಮಂಡ್ಯದಲ್ಲಿ ಬರಡು ಭೂಮಿಯಲ್ಲಿ ಕೆರೆ ನಿರ್ಮಿಸಿ ಆ ಪ್ರದೇಶ ಹಸಿರಾಗಿರಲು ಶ್ರಮ ಪಟ್ಟಿದ್ದಾರೆಂದು ಕಾಮೇಗೌಡರನ್ನು ಕಳೆದ ಬಾರಿ ಆಡಳಿತದಲ್ಲಿದ್ದ ಸಮ್ಮಿಶ್ರ ಸರ್ಕಾರ ಗೌರವಿಸಿತ್ತು. ಇತ್ತೀಚೆಗೆ ಮನ್‌ ಕಿ ಬಾತ್‌ನಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರೇ ಕಾಮೇ ಗೌಡರು ಕೆರೆ ನಿರ್ಮಿಸಿ ಸಮಾಜಕ್ಕೆ ಒಳ್ಳೆಯ ಕೆಲಸವನ್ನು ಮಾಡಿದ್ದಾರೆ. ಇಂತಹ ಮಾದರಿ ವ್ಯಕ್ತಿಗಳು ನಮ್ಮ ಪ್ರೇರಣೆಯಾಗಬೇಕು ಎಂದು ಕಾಮೇಗೌಡರನ್ನು ಕೊಂಡಾಡಿದ್ದರು.

ಕೊರೊನಾ ಗುಣಮುಖರಾದ ಮಂಡ್ಯ ಸಂಸದೆ ಸುಮಲತಾ

ಇನ್ನೊಂದೆಡೆ ಕಾಮೇಗೌಡರು ದೇಶಾದ್ಯಂತ ಪ್ರಶಂಸೆಗೆ ಒಳಗಾಗ್ತಿದ್ದಂತೆ ಅವರ ಮೇಲೆ ಕೆಲವೊಂದು ಆರೋಪಗಳು ಬಂದಿತ್ತು. ಸ್ಥಳೀಯರು ಸೇರಿ ಕಾಮೇಗೌಡರು ನಮಗೆ ತೊಂದರೆ ಉಂಟು ಮಾಡ್ತಿದ್ದಾರೆ ಎಂದು ಆರೋಪಿಸಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ