ಆ್ಯಪ್ನಗರ

ತಂದೆ ಕೊಲೆ: ಮಗ, ಮೂವರು ಸ್ನೇಹಿತರ ಬಂಧನ

ತಾಲೂಕಿನ ಮೊಳೆಕೊಪ್ಪಲು ಗ್ರಾಮದಲ್ಲಿ ಏ. 21ರಂದು ನಡೆದಿದ್ದ ಅಂದಾನಿ(58) ಕೊಲೆ ಹಿನ್ನೆಲೆ ಅವರ ಮಗ ಮತ್ತು ಆತನ ಮೂವರು ಸ್ನೇಹಿತರನ್ನು ಮಂಡ್ಯ ಗ್ರಾಮಾಂತರ ಪೊಲೀಸರು ಬಂಧಿಸಿದ್ದಾರೆ.

Vijaya Karnataka 2 May 2019, 5:00 am
ಮಂಡ್ಯ: ತಾಲೂಕಿನ ಮೊಳೆಕೊಪ್ಪಲು ಗ್ರಾಮದಲ್ಲಿ ಏ. 21ರಂದು ನಡೆದಿದ್ದ ಅಂದಾನಿ(58) ಕೊಲೆ ಹಿನ್ನೆಲೆ ಅವರ ಮಗ ಮತ್ತು ಆತನ ಮೂವರು ಸ್ನೇಹಿತರನ್ನು ಮಂಡ್ಯ ಗ್ರಾಮಾಂತರ ಪೊಲೀಸರು ಬಂಧಿಸಿದ್ದಾರೆ.
Vijaya Karnataka Web murder of father son and three friends arrest
ತಂದೆ ಕೊಲೆ: ಮಗ, ಮೂವರು ಸ್ನೇಹಿತರ ಬಂಧನ


ಅಂದಾನಿ ಮಗ ಯೋಗೇಶ್‌(30), ಸ್ನೇಹಿತರಾದ ಪ್ರತಾಪ್‌(29), ಅರಕೇಶ(31), ಶಂಕರ(30) ಬಂಧಿತ ಆರೋಪಿಗಳಾಗಿದ್ದು, ಬುಧವಾರ ನ್ಯಾಯಾಧೀಶರ ಮುಂದೆ ಆರೋಪಿಗಳನ್ನು ಹಾಜರುಪಡಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ಅಂದಾನಿ ಅವರು ನಿತ್ಯ ಕುಡಿದು ಬಂದು ಜಗಳ ಮಾಡುತ್ತಿದ್ದರು. ಇದರಿಂದ ರೋಸಿದ್ದ ಯೋಗೇಶ ಏ. 21ರಂದು ರಾತ್ರಿ ಅಂದಾನಿ ಎಂದಿನಂತೆ ಕುಡಿದು ಬಂದು ಮನೆಯಲ್ಲಿ ಮಗನೊಂದಿಗೆ ಜಗಳವಾಡುತ್ತಿದ್ದಾಗ ಪ್ರತಾಪ್‌, ಅರಕೇಶ ಹಾಗೂ ಶಂಕರ ಅವರೊಂದಿಗೆ ತಂದೆಯನ್ನು ಗ್ರಾಮದ ಹೊರವಲಯದಲ್ಲಿರುವ ಕಬ್ಬಿನ ಗದ್ದೆಗೆ ಕರೆದೊಯ್ದು ಗುದ್ದಲಿ ಕಾವು ಹಾಗೂ ಮರದ ಕೋಲುಗಳಿಂದ ಹಲ್ಲೆ ನಡೆಸಿ ಕೊಲೆ ಮಾಡಿದ್ದರು. ಬಳಿಕ ಶವವನ್ನು ಸಮೀಪದಲ್ಲೇ ಬಿಸಾಡಿ ಮನೆಗೆ ತೆರಳಿದ್ದರು.

ಗ್ರಾಮದ ಹೊರಗೆ ಕುಡಿದು ಬಿದ್ದು ತಂದೆ ಮೃತಪಟ್ಟಿದ್ದಾನೆ ಎಂದು ಜನರಿಗೆ ತಿಳಿಸಿ, ಯಾರಿಗೂ ಸಂಶಯ ಬಾರದ ರೀತಿಯಲ್ಲಿ ಏ. 22ರಂದು ಅಂತ್ಯಕ್ರಿಯೆ ನಡೆಸಿದ್ದನು. ಅಂದಾನಿಯನ್ನು ಯಾರೋ ಹಲ್ಲೆ ಮಾಡಿ ಕೊಲೆ ಮಾಡಿರಬಹುದು ಎಂಬ ಸಂಶಯ ಗ್ರಾಮಸ್ಥರಿಗೆ ಮೂಡಿದ್ದು, ಈ ಬಗ್ಗೆ ಅಂದಾನಿ ಅಣ್ಣನ ಮಗ ಏ. 29ರಂದು ದೂರು ನೀಡಿದ್ದರು. ತನಿಖೆ ಆರಂಭಿಸಿದ ಪೊಲೀಸರು ಮಗನನ್ನು ತೀವ್ರ ವಿಚಾರಣೆಗೊಳಪಡಿಸಿದಾಗ ಸತ್ಯಾಂಶ ಹೊರಬಂದಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ