ಜೋಡಿ ಕೊಲೆಗೂ, ಪ್ರಕಾಶ್ ಹತ್ಯೆಗೂ ಸಂಬಂಧವಿದೆ: ಎಸ್ಪಿ
ಎಸ್ಪಿ -ನಾಲ್ವರು ಆರೋಪಿಗಳು ಜ...
Vijaya Karnataka 28 Dec 2018, 8:35 pm
-ನಾಲ್ವರು ಆರೋಪಿಗಳು ಜ.3ರವರೆಗೆ ಪೊಲೀಸ್ ಕಸ್ಟಡಿಗೆ
ಮಂಡ್ಯ: ಮದ್ದೂರು ತಾಲೂಕು ತೊಪ್ಪನಹಳ್ಳಿ ಗ್ರಾಮದಲ್ಲಿ ಎರಡು ವರ್ಷಗಳ ಹಿಂದೆ ಸಂಭವಿಸಿದ್ದ ಜೋಡಿ ಕೊಲೆಗೂ ಮೂರು ದಿನಗಳ ಹಿಂದೆ(ಡಿ.25) ನಡೆದ ಜೆಡಿಎಸ್ ಮುಖಂಡ ಪ್ರಕಾಶ್ ಕೊಲೆಗೂ ನೇರ ಸಂಬಂಧವಿದೆ. ಆದರೆ, ಕೊಲೆಗೆ ನಿರ್ದಿಷ್ಟ ಕಾರಣ ಸ್ಪಷ್ಟವಾಗಿಲ್ಲ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಿ.ಶಿವಪ್ರಕಾಶ್ ತಿಳಿಸಿದರು.
''ಜೋಡಿ ಕೊಲೆ ಪ್ರಕರಣದಡಿ ಬಂಧಿತರಾಗಿ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದ ತೊಪ್ಪನಹಳ್ಳಿ ಟಿ.ಎಸ್.ಪ್ರಸನ್ನ(31), ಮುತ್ತೇಶ್(29) ಹಾಗೂ ಮದ್ದೂರಿನ ಡಿ.ಸ್ವಾಮಿ(24) ಅವರು ಪ್ರಕಾಶ್ ಕೊಲೆ ಪ್ರಕರಣದಲ್ಲೂ ಭಾಗಿಯಾಗಿದ್ದಾರೆ. ಈ ಮೂವರೊಂದಿಗೆ ಯೋಗೇಶ್ ಅಲಿಯಾಸ್ ತಮಟೆ(22) ಎಂಬಾತನನ್ನೂ ಬಂಧಿಸಲಾಗಿದೆ,''ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ಅವರು ಹೇಳಿದರು.
''ಸ್ವಾಮಿಯನ್ನು ಮಂಡ್ಯದಲ್ಲಿ ಉಳಿದ ಮೂವರನ್ನು ಆಂಧ್ರಪ್ರದೇಶದ ಕಡಪ ಜಿಲ್ಲೆಯಲ್ಲಿ ಗುರುವಾರ ಬೆಳಗ್ಗೆ ಬಂಧಿಸಲಾಗಿದೆ. ಬಳಿಕ ಮದ್ದೂರಿನ ತಾಲೂಕು ಸಾರ್ವಜನಿಕ ಆಸ್ಪತ್ರೆಯಲ್ಲಿ ಆರೋಗ್ಯ ಪರೀಕ್ಷೆ ನಡೆಸಿದ ನಂತರ ಮದ್ದೂರು ಜೆಎಂಎಫ್ ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು. ನ್ಯಾಯಾಧೀಶರ ಅನುಮತಿ ಪಡೆದು ಜನವರಿ 3ರವರೆಗೆ ನಾಲ್ವರು ಆರೋಪಿಗಳನ್ನು ಪೊಲೀಸ್ ಕಸ್ಟಡಿಗೆ ಪಡೆಯಲಾಗಿದೆ,''ಎಂದು ತಿಳಿಸಿದರು.
''ಐದು ಮಂದಿ ಪ್ರಕಾಶ್ ಅವರ ಮೇಲೆ ದಾಳಿ ನಡೆಸಿ, ಕೊಲೆ ಮಾಡಿದ್ದು, ಇವರಲ್ಲಿ ನಾಲ್ವರನ್ನು ಬಂಧಿಸಲಾಗಿದೆ. ಒಟ್ಟು 7 ಮಂದಿ ವಿರುದ್ಧ ಪ್ರಕರಣ ದಾಖಲಾಗಿದೆ. ಇನ್ನೆಷ್ಟು ಮಂದಿ ಪ್ರಕರಣದಲ್ಲಿ ಭಾಗಿಯಾಗಿದ್ದಾರೆ ಹಾಗೂ ಕೊಲೆಗೆ ನಿರ್ದಿಷ್ಟ ಕಾರಣವೇನು ಎಂಬುದು ತನಿಖೆಯಿಂದ ತಿಳಿದು ಗೊತ್ತಾಗಬೇಕಿದೆ. ಮೇಲುನೋಟಕ್ಕೆ ಎರಡು ಗುಂಪುಗಳ ನಡುವಿನ ವೈಷಮ್ಯ ಮತ್ತು ಎರಡು ವರ್ಷಗಳ ಹಿಂದೆ ಸಂಭವಿಸಿದ್ದ ಜೋಡಿ ಕೊಲೆ ಪ್ರಕರಣವು ಪ್ರಕಾಶ್ ಕೊಲೆಗೆ ಕಾರಣವೆಂಬುದು,'' ತಿಳಿದು ಬಂದಿದೆ ಎಂದರು.
ತೊಪ್ಪನಹಳ್ಳಿಯಲ್ಲಿ ಪೊಲೀಸ್ ಭದ್ರತೆ: ''ತೊಪ್ಪನಹಳ್ಳಿ ಗ್ರಾಮದಲ್ಲಿ 50 ಮಂದಿ ಪೊಲೀಸ್ ಸಿಬ್ಬಂದಿ ಹಾಗೂ 2 ಕೆಎಸ್ಆರ್ಪಿ ತುಕಡಿಗಳ ನಿಯೋಜನೆಯೊಂದಿಗೆ ಪೊಲೀಸ್ ಬಿಗಿಭದ್ರತೆ ಹಾಕಲಾಗಿದೆ. ಇಡೀ ಗ್ರಾಮದ ಎಲ್ಲ ಮನೆಗಳಿಗೂ ರಕ್ಷಣೆ ನೀಡಲಾಗಿದೆ. ಅಧಿಕಾರಿಗಳು ರೌಂಡ್ಸ್ನಲ್ಲಿ ಆಗಾಗ್ಗೆ ಗ್ರಾಮಕ್ಕೆ ಭೇಟಿ ನೀಡುತ್ತಿದ್ದಾರೆ. ಪಿಕೆಟಿಂಗ್ ಕೂಡ ನಡೆಯುತ್ತಿದೆ. ಜತೆಗೆ, ಮದ್ದೂರಿನಲ್ಲೂ ಪೊಲೀಸ್ ಬಂದೋಬಸ್ತ್ ಹಾಕಲಾಗಿದೆ,''ಎಂದು ತಿಳಿಸಿದರು. ''ಪ್ರಕಾಶ್ ಕೊಲೆ ಹಿನ್ನೆಲೆಯಲ್ಲಿ ತೊಪ್ಪನಹಳ್ಳಿಯಲ್ಲಿ ಐದು ಮನೆಗಳ ಮೇಲೆ ನಡೆದ ದಾಳಿ, ಮನೆಗಳ ಧ್ವಂಸ ಸಂಬಂಧ ದೂರು ದಾಖಲಾಗಿದೆ. ಆದರೆ, ಯಾರನ್ನೂ ಇನ್ನೂ ಬಂಧಿಸಿಲ್ಲ,''ಎಂದು ಅವರು ಸ್ಪಷ್ಟಪಡಿಸಿದರು. ಗೋಷ್ಠಿಯಲ್ಲಿ ಎಎಸ್ಪಿ ಬಲರಾಮೇಗೌಡ, ಡಿವೈಎಸ್ಪಿ ಶೈಲೇಂದ್ರ ಹಾಜರಿದ್ದರು.
ಮಂಡ್ಯ: ಮದ್ದೂರು ತಾಲೂಕು ತೊಪ್ಪನಹಳ್ಳಿ ಗ್ರಾಮದಲ್ಲಿ ಎರಡು ವರ್ಷಗಳ ಹಿಂದೆ ಸಂಭವಿಸಿದ್ದ ಜೋಡಿ ಕೊಲೆಗೂ ಮೂರು ದಿನಗಳ ಹಿಂದೆ(ಡಿ.25) ನಡೆದ ಜೆಡಿಎಸ್ ಮುಖಂಡ ಪ್ರಕಾಶ್ ಕೊಲೆಗೂ ನೇರ ಸಂಬಂಧವಿದೆ. ಆದರೆ, ಕೊಲೆಗೆ ನಿರ್ದಿಷ್ಟ ಕಾರಣ ಸ್ಪಷ್ಟವಾಗಿಲ್ಲ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಿ.ಶಿವಪ್ರಕಾಶ್ ತಿಳಿಸಿದರು.
''ಜೋಡಿ ಕೊಲೆ ಪ್ರಕರಣದಡಿ ಬಂಧಿತರಾಗಿ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದ ತೊಪ್ಪನಹಳ್ಳಿ ಟಿ.ಎಸ್.ಪ್ರಸನ್ನ(31), ಮುತ್ತೇಶ್(29) ಹಾಗೂ ಮದ್ದೂರಿನ ಡಿ.ಸ್ವಾಮಿ(24) ಅವರು ಪ್ರಕಾಶ್ ಕೊಲೆ ಪ್ರಕರಣದಲ್ಲೂ ಭಾಗಿಯಾಗಿದ್ದಾರೆ. ಈ ಮೂವರೊಂದಿಗೆ ಯೋಗೇಶ್ ಅಲಿಯಾಸ್ ತಮಟೆ(22) ಎಂಬಾತನನ್ನೂ ಬಂಧಿಸಲಾಗಿದೆ,''ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ಅವರು ಹೇಳಿದರು.
''ಸ್ವಾಮಿಯನ್ನು ಮಂಡ್ಯದಲ್ಲಿ ಉಳಿದ ಮೂವರನ್ನು ಆಂಧ್ರಪ್ರದೇಶದ ಕಡಪ ಜಿಲ್ಲೆಯಲ್ಲಿ ಗುರುವಾರ ಬೆಳಗ್ಗೆ ಬಂಧಿಸಲಾಗಿದೆ. ಬಳಿಕ ಮದ್ದೂರಿನ ತಾಲೂಕು ಸಾರ್ವಜನಿಕ ಆಸ್ಪತ್ರೆಯಲ್ಲಿ ಆರೋಗ್ಯ ಪರೀಕ್ಷೆ ನಡೆಸಿದ ನಂತರ ಮದ್ದೂರು ಜೆಎಂಎಫ್ ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು. ನ್ಯಾಯಾಧೀಶರ ಅನುಮತಿ ಪಡೆದು ಜನವರಿ 3ರವರೆಗೆ ನಾಲ್ವರು ಆರೋಪಿಗಳನ್ನು ಪೊಲೀಸ್ ಕಸ್ಟಡಿಗೆ ಪಡೆಯಲಾಗಿದೆ,''ಎಂದು ತಿಳಿಸಿದರು.
''ಐದು ಮಂದಿ ಪ್ರಕಾಶ್ ಅವರ ಮೇಲೆ ದಾಳಿ ನಡೆಸಿ, ಕೊಲೆ ಮಾಡಿದ್ದು, ಇವರಲ್ಲಿ ನಾಲ್ವರನ್ನು ಬಂಧಿಸಲಾಗಿದೆ. ಒಟ್ಟು 7 ಮಂದಿ ವಿರುದ್ಧ ಪ್ರಕರಣ ದಾಖಲಾಗಿದೆ. ಇನ್ನೆಷ್ಟು ಮಂದಿ ಪ್ರಕರಣದಲ್ಲಿ ಭಾಗಿಯಾಗಿದ್ದಾರೆ ಹಾಗೂ ಕೊಲೆಗೆ ನಿರ್ದಿಷ್ಟ ಕಾರಣವೇನು ಎಂಬುದು ತನಿಖೆಯಿಂದ ತಿಳಿದು ಗೊತ್ತಾಗಬೇಕಿದೆ. ಮೇಲುನೋಟಕ್ಕೆ ಎರಡು ಗುಂಪುಗಳ ನಡುವಿನ ವೈಷಮ್ಯ ಮತ್ತು ಎರಡು ವರ್ಷಗಳ ಹಿಂದೆ ಸಂಭವಿಸಿದ್ದ ಜೋಡಿ ಕೊಲೆ ಪ್ರಕರಣವು ಪ್ರಕಾಶ್ ಕೊಲೆಗೆ ಕಾರಣವೆಂಬುದು,'' ತಿಳಿದು ಬಂದಿದೆ ಎಂದರು.
ತೊಪ್ಪನಹಳ್ಳಿಯಲ್ಲಿ ಪೊಲೀಸ್ ಭದ್ರತೆ: ''ತೊಪ್ಪನಹಳ್ಳಿ ಗ್ರಾಮದಲ್ಲಿ 50 ಮಂದಿ ಪೊಲೀಸ್ ಸಿಬ್ಬಂದಿ ಹಾಗೂ 2 ಕೆಎಸ್ಆರ್ಪಿ ತುಕಡಿಗಳ ನಿಯೋಜನೆಯೊಂದಿಗೆ ಪೊಲೀಸ್ ಬಿಗಿಭದ್ರತೆ ಹಾಕಲಾಗಿದೆ. ಇಡೀ ಗ್ರಾಮದ ಎಲ್ಲ ಮನೆಗಳಿಗೂ ರಕ್ಷಣೆ ನೀಡಲಾಗಿದೆ. ಅಧಿಕಾರಿಗಳು ರೌಂಡ್ಸ್ನಲ್ಲಿ ಆಗಾಗ್ಗೆ ಗ್ರಾಮಕ್ಕೆ ಭೇಟಿ ನೀಡುತ್ತಿದ್ದಾರೆ. ಪಿಕೆಟಿಂಗ್ ಕೂಡ ನಡೆಯುತ್ತಿದೆ. ಜತೆಗೆ, ಮದ್ದೂರಿನಲ್ಲೂ ಪೊಲೀಸ್ ಬಂದೋಬಸ್ತ್ ಹಾಕಲಾಗಿದೆ,''ಎಂದು ತಿಳಿಸಿದರು. ''ಪ್ರಕಾಶ್ ಕೊಲೆ ಹಿನ್ನೆಲೆಯಲ್ಲಿ ತೊಪ್ಪನಹಳ್ಳಿಯಲ್ಲಿ ಐದು ಮನೆಗಳ ಮೇಲೆ ನಡೆದ ದಾಳಿ, ಮನೆಗಳ ಧ್ವಂಸ ಸಂಬಂಧ ದೂರು ದಾಖಲಾಗಿದೆ. ಆದರೆ, ಯಾರನ್ನೂ ಇನ್ನೂ ಬಂಧಿಸಿಲ್ಲ,''ಎಂದು ಅವರು ಸ್ಪಷ್ಟಪಡಿಸಿದರು. ಗೋಷ್ಠಿಯಲ್ಲಿ ಎಎಸ್ಪಿ ಬಲರಾಮೇಗೌಡ, ಡಿವೈಎಸ್ಪಿ ಶೈಲೇಂದ್ರ ಹಾಜರಿದ್ದರು.