ಆ್ಯಪ್ನಗರ

ರಾಜಕೀಯದಿಂದ ನಿವೃತ್ತಿಯಾಗಲು ನಿರ್ಧರಿಸಿದ್ದೆ: ಕುಮಾರಸ್ವಾಮಿ

ಕೆ.ಆರ್‌.ಪೇಟೆ ಶಾಸಕರಾಗಿದ್ದ ನಾರಾಯಣಗೌಡ ನಮ್ಮ ಪಕ್ಷ ಕ್ಕೆ ದ್ರೋಹ ಮಾಡಿದ್ದು, ಅವರನ್ನು ಯಾವತ್ತೂ ಕ್ಷ ಮಿಸುವುದಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಹೇಳಿದರು.

Vijaya Karnataka 4 Aug 2019, 5:00 am
ಕೆಆರ್‌ ಪೇಟೆ: ಒಂದು ಹಂತದಲ್ಲಿ ಯಾಕೆ ರಾಜಕೀಯ ಬೇಕು ಎಂದು ತೀರ್ಮಾನ ಮಾಡಿದ್ದೆ‌‌. ಕಾರ್ಯಕರ್ತರಿಗಾಗಿ ಉಳಿದುಕೊಂಡಿದ್ದೇನೆ.. ಇಲ್ಲದಿದ್ರೆ ಇಷ್ಟೊತ್ತಿಗೆ ರಾಜಕೀಯ ನಿವೃತ್ತಿ ತೆಗೆದುಕೊಳ್ಳುತ್ತಿದ್ದೆ ಎಂದು ಮಾಜಿ ಮುಖ್ಯಮಂತ್ರಿ ಎಚ್‌ಡಿ ಕುಮಾರಸ್ವಾಮಿ ತಿಳಿಸಿದ್ದಾರೆ.
Vijaya Karnataka Web MDY-MDY03AUGKRP5


ಪಟ್ಟಣದ ಯಶಸ್ವಿನಿ ಕಲ್ಯಾಣ ಮಂಟಪದಲ್ಲಿ ತಾಲೂಕು ಜೆಡಿಎಸ್‌ ಪಕ್ಷ ವು ಆಯೋಜಿಸಿದ್ದ ಕಾರ‍್ಯಕರ್ತರ ಸಭೆಯಲ್ಲಿ ಮಾತನಾಡಿದರು.

ಕೆ.ಆರ್‌. ಪೇಟೆ ವಿಧಾನಸಭಾ ಕ್ಷೇತ್ರ ಉಪ ಚುನಾವಣೆಯಲ್ಲಿ ನಿಖಿಲ್‌ ಕುಮಾರಸ್ವಾಮಿ ಸ್ಪರ್ಧಿಸಲ್ಲ ಎಂದು ಕುಮಾರಸ್ವಾಮಿ ಸ್ಪಷ್ಟಪಡಿಸಿದರು.

ಕೆಆರ್ ಪೇಟೆಯವರನ್ನೇ ಒಮ್ಮತದ ಅಭ್ಯರ್ಥಿಯಾಗಿ ಆಯ್ಕೆ ಮಾಡುತ್ತೇವೆ. ನನ್ನ ಮಗನಿಗೆ ವಿಷ ಹಾಕಿದ ರೀತಿ ಮತ್ತೆ ಇನ್ನೊಬ್ಬ ಅಭ್ಯರ್ಥಿಗೆ ವಿಷ ಹಾಕಬೇಡಿ. ನಾನು ರಾಜಕೀಯ ಮಾಡಿದ್ದು ಕಷ್ಟದಲ್ಲಿರುವ ಜನರಿಗೆ ಸಹಾಯ ಮಾಡಲು ಎಂದರು.

ನಾರಾಯಣಗೌಡ ಪಕ್ಷಕ್ಕೆ ದ್ರೋಹ ಎಸಗಿದ್ದಾನೆ. ಚುನಾವಣಾ ವೆಚ್ಚಕ್ಕೆ ಕೆಆರ್ ಪೇಟೆ ಕ್ಷೇತ್ರಕ್ಕೆ ಬೇರೆ ಕ್ಷೇತ್ರಕ್ಕಿಂತ ಹೆಚ್ಚು ಹಣ ನಾನು ಕೊಟ್ಟಿದ್ದೇನೆ. ಬೋರ್‌ವೆಲ್‌ ಹಾಕಿಸಲು ಅನುದಾನ ಕೊಟ್ಟಿಲ್ಲ ಎನ್ನುತ್ತಾನೆ ಎಂದು ಏಕವಚನದಲ್ಲಿಯೇ ಕುಮಾರಸ್ವಾಮಿ ಟೀಕಿಸಿದರು.

ನನಗೆ ಮುಖ್ಯಮಂತ್ರಿ ಅಧಿಕಾರ ಮುಖ್ಯವಲ್ಲ. ರಾಜ್ಯದ ಜನರ ಹೃದಯದ ಸ್ಥಾನದಲ್ಲಿ ನಿಲ್ಲಬೇಕು ನನ್ನ ಆಸೆ. ಅತ್ಯಂತ ಸಂತೋಷದಿಂದ ಆ ಜಾಗದಿಂದ ನಿರ್ಗಮಿಸಿದೆ ಎಂದು ಕುಮಾರಸ್ವಾಮಿ ತಿಳಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ