ಉಗ್ರರ ಸಾವಿನ ಸಾಕ್ಷ್ಯ ಬೇಕಾ? ರಮ್ಯಾ ನೇತೃತ್ವದ ತಂಡ ರಚಿಸಿ: ಕಾಂಗ್ರೆಸ್ಗೆ ಟಾಂಗ್
ನಮ್ಮ ಸೈನಿಕರ ಬದ್ಧತೆ, ದೇಶಭಕ್ತಿಯನ್ನು ಕಾಂಗ್ರೆಸ್ನವರು ಅನುಮಾನದಿಂದ ನೋಡುತ್ತಿದ್ದಾರೆ. ನಿಮಗೆ ಸಾಕ್ಷಿ ಬೇಕಾದರೆ ಕಾಂಗ್ರೆಸ್ ಸಾಮಾಜಿಕ ಜಾಲ ತಾಣದ ಮುಖ್ಯಸ್ಥೆ ಕುಮಾರಿ ರಮ್ಯಾ ನೇತೃತ್ವದಲ್ಲಿ ಉನ್ನತಮಟ್ಟದ ತನಿಖಾ ತಂಡ ರಚಿಸಲಿ ಎಂದು ನರೇಂದ್ರ ಮೋದಿ ವಿಚಾರ ಮಂಚ್ನ ರಾಜ್ಯ ಕಾರ್ಯದರ್ಶಿ ಸಿ.ಟಿ.ಮಂಜುನಾಥ್ ಅವರು ಎಐಸಿಸಿ ಅಧ್ಯಕ್ಷರಿಗೆ ಸಲಹೆ ನೀಡಿದರು.
Vijaya Karnataka 8 Mar 2019, 8:25 am
ಮಂಡ್ಯ: ನಮ್ಮ ಸೈನಿಕರ ಬದ್ಧತೆ, ದೇಶಭಕ್ತಿಯನ್ನು ಕಾಂಗ್ರೆಸ್ನವರು ಅನುಮಾನದಿಂದ ನೋಡುತ್ತಿದ್ದಾರೆ. ನಿಮಗೆ ಸಾಕ್ಷಿ ಬೇಕಾದರೆ ಕಾಂಗ್ರೆಸ್ ಸಾಮಾಜಿಕ ಜಾಲ ತಾಣದ ಮುಖ್ಯಸ್ಥೆ ಕುಮಾರಿ ರಮ್ಯಾ ನೇತೃತ್ವದಲ್ಲಿ ಉನ್ನತಮಟ್ಟದ ತನಿಖಾ ತಂಡ ರಚಿಸಲಿ ಎಂದು ನರೇಂದ್ರ ಮೋದಿ ವಿಚಾರ ಮಂಚ್ನ ರಾಜ್ಯ ಕಾರ್ಯದರ್ಶಿ ಸಿ.ಟಿ.ಮಂಜುನಾಥ್ ಅವರು ಎಐಸಿಸಿ ಅಧ್ಯಕ್ಷರಿಗೆ ಸಲಹೆ ನೀಡಿದರು.
''ಪಾಕಿಸ್ತಾನ ನರಕವಲ್ಲ, ಅದು ಸ್ವರ್ಗ ಎಂದು ಕೊಂಡಾಡಿದ್ದ ಮಾಜಿ ಸಂಸದೆ ರಮ್ಯಾ ಅವರು ಪಾಕಿಸ್ತಾನವನ್ನು ಕೇಳಿದರೆ ವಾಯುಪಡೆ ಕಾರ್ಯಾಚರಣೆಯಲ್ಲಿ ಸತ್ತ ಉಗ್ರರ ವಿವರವನ್ನು ಕೊಡಬಹುದು. ಹೀಗಾಗಿ ರಮ್ಯಾ ಇನ್ವೆಸ್ಟಿಗೇಷನ್ ಬ್ಯೂರೋ (ಆರ್ಬಿಐ)ವನ್ನು ಪಾಕಿಸ್ತಾನಕ್ಕೆ ಕಳುಹಿಸಿದರೆ ನಿಜವಾಗಿಯೂ ನೀವು ಕೇಳಿದ ಸಾಕ್ಷ್ಯ ಸಿಕ್ಕರೂ ಸಿಗಬಹುದು,'' ಎಂದು ಪತ್ರದ ಮೂಲಕ ಅವರು ವ್ಯಂಗ್ಯವಾಡಿದ್ದಾರೆ.
''ಇದೇ ಪತ್ರದ ಪ್ರತಿಗಳನ್ನು ಕೆಪಿಸಿಸಿ ಅಧ್ಯಕ್ಷರು ಹಾಗೂ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರಿಗೂ ರವಾನಿಸಿದ್ದಾರೆ.
''ನಮ್ಮ ಸೈನಿಕರು ದೇಶಕ್ಕೆ ಹೆಮ್ಮೆ ತರುವ ಕೆಲಸ ಮಾಡಿದ್ದಾರೆ. ಉಗ್ರರ ವಿರುದ್ಧದ ಕಾರ್ಯಾಚರಣೆಯನ್ನು ಅನುಮಾನದ ದೃಷ್ಟಿಯಿಂದ ನೋಡುವುದು ಸೈನಿಕರಿಗೆ, ರಾಷ್ಟ್ರಕ್ಕೆ ಮಾಡುವ ಅವಮಾನ,''ಎಂದು ಕಿಡಿಕಾರಿದ್ದಾರೆ.
''ಪಾಕಿಸ್ತಾನ ನರಕವಲ್ಲ, ಅದು ಸ್ವರ್ಗ ಎಂದು ಕೊಂಡಾಡಿದ್ದ ಮಾಜಿ ಸಂಸದೆ ರಮ್ಯಾ ಅವರು ಪಾಕಿಸ್ತಾನವನ್ನು ಕೇಳಿದರೆ ವಾಯುಪಡೆ ಕಾರ್ಯಾಚರಣೆಯಲ್ಲಿ ಸತ್ತ ಉಗ್ರರ ವಿವರವನ್ನು ಕೊಡಬಹುದು. ಹೀಗಾಗಿ ರಮ್ಯಾ ಇನ್ವೆಸ್ಟಿಗೇಷನ್ ಬ್ಯೂರೋ (ಆರ್ಬಿಐ)ವನ್ನು ಪಾಕಿಸ್ತಾನಕ್ಕೆ ಕಳುಹಿಸಿದರೆ ನಿಜವಾಗಿಯೂ ನೀವು ಕೇಳಿದ ಸಾಕ್ಷ್ಯ ಸಿಕ್ಕರೂ ಸಿಗಬಹುದು,'' ಎಂದು ಪತ್ರದ ಮೂಲಕ ಅವರು ವ್ಯಂಗ್ಯವಾಡಿದ್ದಾರೆ.
''ಇದೇ ಪತ್ರದ ಪ್ರತಿಗಳನ್ನು ಕೆಪಿಸಿಸಿ ಅಧ್ಯಕ್ಷರು ಹಾಗೂ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರಿಗೂ ರವಾನಿಸಿದ್ದಾರೆ.
''ನಮ್ಮ ಸೈನಿಕರು ದೇಶಕ್ಕೆ ಹೆಮ್ಮೆ ತರುವ ಕೆಲಸ ಮಾಡಿದ್ದಾರೆ. ಉಗ್ರರ ವಿರುದ್ಧದ ಕಾರ್ಯಾಚರಣೆಯನ್ನು ಅನುಮಾನದ ದೃಷ್ಟಿಯಿಂದ ನೋಡುವುದು ಸೈನಿಕರಿಗೆ, ರಾಷ್ಟ್ರಕ್ಕೆ ಮಾಡುವ ಅವಮಾನ,''ಎಂದು ಕಿಡಿಕಾರಿದ್ದಾರೆ.