ಆ್ಯಪ್ನಗರ

By-Election Results: ಮಂಡ್ಯದಲ್ಲಿಲ್ಲ ಸಂಭ್ರಮ

ಮತ ಎಣಿಕೆ ಕಾರ್ಯದ ವೇಳೆ ಅಭ್ಯರ್ಥಿಗಳ ಪರ ಬೆಂಬಲಿಗರು ಗ್ಯಾಲರಿಯಲ್ಲಿ ಕಾಣಿಸಿಕೊಳ್ಳದಿರುವುದು ಇದಕ್ಕೆ ಸಾಕ್ಷಿ.

Vijaya Karnataka Web 6 Nov 2018, 9:56 am
ಮಂಡ್ಯ : ರಾಜಕೀಯಕ್ಕೆ ಹೆಸರಾದ ಮಂಡ್ಯ ಜಿಲ್ಲೆಯಲ್ಲಿ ಈ ಬಾರಿಯ ಲೋಕಸಭೆ ಉಪ ಚುನಾವಣೆ ಕಳೆಕಟ್ಟಲಿಲ್ಲ ಎಂಬುದು ಮತ್ತೊಮ್ಮೆ ಸಾಬೀತಾಗಿದೆ.
Vijaya Karnataka Web kar elections


ಮಂಗಳವಾರ ನಗರದ ಸರಕಾರಿ ಮಹಾ ವಿದ್ಯಾಲಯದಲ್ಲಿ ನಡೆದ ಮತ ಎಣಿಕೆ ಕಾರ್ಯದ ವೇಳೆ ಅಭ್ಯರ್ಥಿಗಳ ಪರ ಬೆಂಬಲಿಗರು ಗ್ಯಾಲರಿಯಲ್ಲಿ ಕಾಣಿಸಿಕೊಳ್ಳದಿರುವುದು ಇದಕ್ಕೆ ಸಾಕ್ಷಿಯಾಗಿದೆ.

ಬೆಳಗ್ಗೆ 9ಗಂಟೆಯಾದರೂ ಸಹ ಬೆಂಬಲಿಗರು ಮತ ಎಣಿಕೆ ಕೇಂದ್ರದತ್ತ ಮುಖ ಮಾಡಲಿಲ್ಲ.

ಕಳೆಗುಂದಿದ ಸಂಭ್ರಮ:
ಪ್ರತಿ ಸುತ್ತಿನ ಮತ ಎಣಿಕೆ ಮುಕ್ತಾಯಗೊಂಡು ತಮ್ಮ ಅಭ್ಯರ್ಥಿಗಳು ಮುನ್ನಡೆ ಸಾಧಿಸಿದ್ದಾರೆ ಎಂದು ಘೋಷಣೆಗಳು ಮೊಳಗುತ್ತಿದ್ದಂತೆ ಸಂಭ್ರಮಿಸಿ, ಶಿಳ್ಳೆ ಚಪ್ಪಾಳೆ ಹಾಕುತ್ತಿದ್ದ ಕಾರ್ಯಕರ್ತರು ಮತ ಎಣಿಕೆ ಕೇಂದ್ರದಲ್ಲಿ ಕಾಣಲೇ ಇಲ್ಲ.

ಮೊದಲ ಬಾರಿಗೆ ಜಿಲ್ಲೆಯ ಚುನಾವಣೆಯೊಂದರಲ್ಲಿ ಮೈತ್ರಿ ಅಭ್ಯರ್ಥಿ ಚುನಾವಣ ಕಣಕ್ಕಿಳಿದಿದ್ದಾರೆ. ಅಲ್ಲದೇ, ಪ್ರತಿ ಚುನಾವಣೆಗಳಲ್ಲೂ ಖಾತೆ ತೆರೆಯಲು ಹವಣಿಸುತ್ತಿರುವ ಬಿಜೆಪಿ ಪಕ್ಷಕ್ಕೆ ಈ ಉಪ ಚುನಾವಣೆ ಜೆಡಿಎಸ್-ಬಿಜೆಪಿ ಎಂಬ ನೇರ ಹಣಾಹಣಿಗೆ ಕಾರಣವಾಗಿದೆ. ಇಂತಹ ಅನೇಕ ವಿಶಿಷ್ಠತೆಗೆ ಕಾರಣವಾಗಿರುವ ಲೋಕಸಭೆ ಉಪ ಚುನಾವಣೆ ಮತ ಎಣಿಕೆ ಕಾರ್ಯದ ವೇಳೆ ಕಾರ್ಯಕರ್ತರಿಲ್ಲದೇ ಇರುವುದು ಮತ್ತು ಕಡಿಮೆ ಮತ ಚಲಾವಣೆಯಾಗಿರುವುದು ನೀರಸ ಪ್ರತಿಕ್ರಿಯೆಗೆ ಹಿಡಿದ ಕೈಗನ್ನಡಿಯಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ