ಆ್ಯಪ್ನಗರ

ಮೇಲುಕೋಟೆಗೆ ಅಮಿತ್‌ ಶಾ: ಭಕ್ತರಿಗೆ ದೇಗುಲ ದರ್ಶನವಿಲ್ಲ

ಮೇಲುಕೋಟೆಗೆ ಬಿಜೆಪಿ ರಾಷ್ಟಾಧ್ಯಕ್ಷ ಅಮಿತ್ ಶಾ ಭೇಟಿ ನೀಡುತ್ತಿರುವ ಹಿನ್ನೆಲೆಯಲ್ಲಿ ಪೊಲೀಸರು ಭಕ್ತರಿಗೆ ದೇವರ ದರ್ಶನಕ್ಕೆ ಅವಕಾಶ ನೀಡುತ್ತಿಲ್ಲ.

Vijaya Karnataka Web 31 Mar 2018, 12:54 pm
ಮಂಡ್ಯ: ಮೇಲುಕೋಟೆಗೆ ಬಿಜೆಪಿ ರಾಷ್ಟಾಧ್ಯಕ್ಷ ಅಮಿತ್ ಶಾ ಭೇಟಿ ನೀಡುತ್ತಿರುವ ಹಿನ್ನೆಲೆಯಲ್ಲಿ ಪೊಲೀಸರು ಭಕ್ತರಿಗೆ ದೇವರ ದರ್ಶನಕ್ಕೆ ಅವಕಾಶ ನೀಡುತ್ತಿಲ್ಲ.
Vijaya Karnataka Web no entry devotees to melkote temple during shah visit
ಮೇಲುಕೋಟೆಗೆ ಅಮಿತ್‌ ಶಾ: ಭಕ್ತರಿಗೆ ದೇಗುಲ ದರ್ಶನವಿಲ್ಲ


ಚಲುವನಾರಾಯಣಸ್ವಾಮಿಗೆ ವೈರಮುಡಿ ಉತ್ಸವ ಆದ ಐದನೇ ದಿನಕ್ಕೆ ನಡೆಯುವ ತೀರ್ಥ ಸ್ನಾನದ ಹಿನ್ನೆಲೆಯಲ್ಲಿ ಮೇಲುಕೋಟೆಗೆ ಅಪಾರ ಸಂಖ್ಯೆಯಲ್ಲಿ ಭಕ್ತರು ಆಗಮಿಸುತ್ತಿದ್ದಾರೆ. ಆಗಮಿಸಿದ ಭಕ್ತರು ದೇವರ ದರ್ಶನವಿಲ್ಲದೆ ನಿರಾಸೆಯಿಂದ ವಾಪಸಾಗುತ್ತಿದ್ದು, ಭಕ್ತ ಸಮೂಹ ಮತ್ತು ಪೊಲೀಸರ ನಡುವೆ ಮಾತಿನ ಚಕಮಕಿ ಕೂಡ ನಡೆದಿದೆ.

ಶಾ ಭೇಟಿ ಹಿನ್ನಲೆಯಲ್ಲಿ ಮೇಲುಕೋಟೆ ದೇವಾಲಯಕ್ಕೆ ವಿಶೇಷ ಬಿಗಿ ಪೊಲೀಸ್ ಭದ್ರತೆ ಕಲ್ಪಿಸಲಾಗಿದೆ. ದೇವಾಲಯದ ಪ್ರವೇಶ ದ್ವಾರ ಸೇರಿದಂತೆ ಆವರಣದಲ್ಲಿ ಪೊಲೀಸರು ತಪಾಸಣೆ ನಡೆಸುವ ಜತೆಗೆ ಮೆಟಲ್ ಡಿಟೆಕ್ಟರ್, ಬಾಂಬ್ ಸ್ಕ್ವಾಡ್, ಶ್ವಾನ ದಳದಿಂದ ತೀವ್ರ ಶೋಧ ಮಾಡಲಾಗುತ್ತಿದೆ. ಎಸ್ಪಿಜಿ ಭದ್ರತಾ ತಂಡ ಸ್ಥಳದಲ್ಲಿದೆ. ದೇವಾಲಯದ ಆವರಣದಲ್ಲಿ ಶುಚಿತ್ವ ಕಾರ್ಯ ನಡೆಯುತ್ತಿದ್ದು, ಫಿನಾಯಿಲ್ ಹಾಕಿ ಗ್ರಾಮ ಪಂಚಾಯತ್‌ ಸಿಬ್ಬಂದಿ ಶುಚಿಗೊಳಿಸುತ್ತಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ