ಕೈಕೊಟ್ಟ ಮಳೆ, ಬರದ ಛಾಯೆ
ಕೈಕೊಟ್ಟ ಮಳೆ, ಬರದ ಛಾಯೆ -ಶೇ...
Vijaya Karnataka 24 Jul 2019, 8:04 pm
-ಶೇ.14ರಷ್ಟು ಮಳೆ ಕೊರತೆ: ಬರಪೀಡಿತ ಪಟ್ಟಿ ಸೇರಲಿದೆಯೇ ಮಂಡ್ಯ ಜಿಲ್ಲೆ?
-ಹೊಸ ಬೆಳೆ ಬೆಳೆಯದಂತೆ ಅಧಿಕಾರಿಗಳ ಕಟ್ಟಾಜ್ಞೆ
ನವೀನ್ ಮಂಡ್ಯ
ಮಳೆಗಾಲ ಶುರುವಾದರೂ ಕೂಡ ಜಿಲ್ಲೆಯಲ್ಲಿ ನಿರೀಕ್ಷಿತ ಪ್ರಮಾಣದ ಮಳೆಯಾಗಿಲ್ಲ. ಜತೆಗೆ ವಾಡಿಕೆಗಿಂತಲೂ ಕಡಿಮೆ ಮಳೆಯಾಗಿದ್ದು, ಸರಾಸರಿ ಶೇ.14ರಷ್ಟು ಕಡಿಮೆ ಮಳೆ ಕೊರತೆ ಕಂಡು ಬಂದಿದೆ. ಈ ಮಧ್ಯೆ ಮುಂಗಾರು ಹಂಗಾಮಿನ ಬೆಳೆಗಳಿಗೆ ನೀರು ಕೊಡುವುದಿಲ್ಲ. ರೈತರು ಹೊಸ ಬೆಳೆ ಬೆಳೆಯದಂತೆ ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳು ಕಟ್ಟಾಜ್ಞೆ ಹೊರಡಿಸಿದ್ದಾರೆ. ಇದು ಜಿಲ್ಲೆಯು ವರ್ಷದ ಬಳಿಕ ಮತ್ತೆ ಬರಗಾಲಕ್ಕೆ ತುತ್ತಾಗುವ ಸೂಚನೆ ನೀಡಿದೆ.
ಮಳೆ ಕೊರತೆಯಿಂದ ಜಿಲ್ಲೆಯು ಮುಂಗಾರು ಹಂಗಾಮಿನ ಭತ್ತದ ಬಿತ್ತನೆ, ನಾಟಿ ಅವಧಿಯೂ ಮುಗಿಯುತ್ತಾ ಬಂದಿದೆ. ಹೀಗಾಗಿ ಇನ್ನೇನಿದ್ದರೂ ರಾಗಿ ಬಿತ್ತನೆಯಷ್ಟೇ ಬಾಕಿ ಉಳಿದಿದೆ. ಅದೂ ಕೂಡ ಮುಂದಿನ ದಿನಗಳಲ್ಲಿ ಮಳೆಯಾದರೆ ಮಾತ್ರ. ಇಂತಹ ಪರಿಸ್ಥಿತಿಯಲ್ಲಿ ರಾಜ್ಯದ 65 ತಾಲೂಕುಗಳನ್ನು ಬರಪೀಡಿತವೆಂದು ಘೋಷಿಸಿ 2 ವಾರಗಳಲ್ಲಿ ಅಧಿಸೂಚನೆ ಹೊರಡಿಸುವಂತೆ ರಾಜ್ಯ ಸರಕಾರಕ್ಕೆ ಹೈಕೋರ್ಟ್ ಆದೇಶ ನೀಡಿದೆ. ಬರ ಪಟ್ಟಿಯಲ್ಲಿ ಜಿಲ್ಲೆಯ ತಾಲೂಕುಗಳೂ ಸೇರ್ಪಡೆಯಾಗುವ ಸಾಧ್ಯತೆ ಇದೆ.
2018ರ ಡಿಸೆಂಬರ್ನಲ್ಲಿ ಆರು ತಿಂಗಳ ಅವಧಿಗಾಗಿ ರಾಜ್ಯದ 156 ತಾಲೂಕುಗಳನ್ನು ಬರಪೀಡಿತ ಪ್ರದೇಶಗಳನ್ನು ಘೋಷಿಸಿ ರಾಜ್ಯ ಸರಕಾರ ಅಧಿಸೂಚನೆ ಹೊರಡಿಸಿತ್ತು. ಅದರಂತೆ ಈ ಅವಧಿಯು 2019ರ ಜೂ.30ಕ್ಕೆ ಮುಕ್ತಾಯಗೊಂಡಿದೆ. ಈ ಹಿನ್ನೆಲೆಯಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಆಲಿಸಿದ ನ್ಯಾ.ಎ.ಎಸ್.ಓಕ್ ಮತ್ತು ನ್ಯಾ.ಎಚ್.ಟಿ.ನರೇಂದ್ರಪ್ರಸಾದ್ ಅವರಿದ್ದ ವಿಭಾಗೀಯ ನ್ಯಾಯಪೀಠವು ಸೋಮವಾರ ಮಧ್ಯಾಂತರ ಆದೇಶ ನೀಡಿ, ವಾಡಿಕೆಗಿಂತಲೂ ಅತಿ ಕಡಿಮೆ ಮಳೆಯಾಗಿರುವ 65 ತಾಲೂಕುಗಳನ್ನು ಬರಪೀಡಿತ ಪ್ರದೇಶವೆಂದು ಘೋಷಿಸಬೇಕು. ಆ ಎಲ್ಲ ತಾಲೂಕುಗಳಲ್ಲೂ ಒಂದು ಗೋಶಾಲೆ ಸ್ಥಾಪಿಸಬೇಕೆಂದು ನಿರ್ದೇಶನ ನೀಡಿದೆ.
ಹೈಕೋರ್ಟ್ನ ಈ ಆದೇಶ ಜಿಲ್ಲೆಯ ರೈತರ ನೆರವಿಗೆ ಬರುವ ಸಾಧ್ಯತೆಯಿದೆ. ಈ ವರ್ಷ ಮುಂಗಾರು ಹಂಗಾಮಿನಲ್ಲಿ ಜಿಲ್ಲೆಯ ಎಲ್ಲ ತಾಲೂಕುಗಳಲ್ಲೂ ವಾಡಿಕೆಗಿಂತಲೂ ಸರಾಸರಿ ಶೇ.14ರಷ್ಟು ಕಡಿಮೆ ಪ್ರಮಾಣದ ಮಳೆಯಾಗಿದೆ. ಏಪ್ರಿಲ್ 1ರಿಂದ ಜುಲೈ 22ರವರೆಗಿನ ವಾಡಿಕೆ ಮಳೆಯ ಪ್ರಮಾಣವನ್ನು ಅವಲೋಕಿಸಿದಾಗ ವಾಡಿಕೆಗಿಂತಲೂ ಕಡಿಮೆ ಮಳೆಯಾಗಿರುವುದು ಸ್ಪಷ್ಟವಾಗಿದೆ. ಅದರಂತೆ ಕೆ.ಆರ್.ಪೇಟೆ ತಾಲೂಕಿನಲ್ಲಿ ಶೇ.28, ಮಂಡ್ಯದಲ್ಲಿ ಶೇ.19, ಮದ್ದೂರು, ಮಳವಳ್ಳಿಯಲ್ಲಿ ಶೇ.17, ನಾಗಮಂಗಲದಲ್ಲಿ ಶೇ.13, ಶ್ರೀರಂಗಪಟ್ಟಣದಲ್ಲಿ ಶೇ.7 ಹಾಗೂ ಪಾಂಡವಪುರ ತಾಲೂಕಿನಲ್ಲಿ ಶೇ.3ರಷ್ಟು ಮಳೆ ಕೊರತೆಯಾಗಿದೆ.
2019ರ ಜನವರಿ 1ರಿಂದ ಜುಲೈ 22ರವರೆಗಿನ ವಾಡಿಕೆ ಮಳೆಯ ಪ್ರಮಾಣವನ್ನು ಲೆಕ್ಕ ಹಾಕಿದರೂ ಸಹ ಶೇ.14ರಷ್ಟು ಮಳೆ ಕೊರತೆ ಕಂಡು ಬರುತ್ತದೆ. ಅದರಂತೆ ಕೆ.ಆರ್.ಪೇಟೆ ತಾಲೂಕಿನಲ್ಲಿ ಶೇ.27, ಮಂಡ್ಯ, ಮದ್ದೂರಿನಲ್ಲಿ ಶೇ.21, ಮಳವಳ್ಳಿಯಲ್ಲಿ ಶೇ.20, ನಾಗಮಂಗಲದಲ್ಲಿ ಶೇ.14, ಶ್ರೀರಂಗಪಟ್ಟಣದಲ್ಲಿ ಶೇ.11 ಹಾಗೂ ಪಾಂಡವಪುರದಲ್ಲಿ ಶೇ.6ರಷ್ಟು ಮಳೆ ಕೊರತೆಯಾಗಿರುವುದನ್ನು ಕೃಷಿ ಇಲಾಖೆಯ ಅಂಕಿಅಂಶಗಳು ಸ್ಪಷ್ಟಪಡಿಸಿವೆ.
ಈ ಹಿನ್ನೆಲೆಯಲ್ಲಿ ಹೈಕೋರ್ಟ್ ಆದೇಶದಂತೆ ಜಿಲ್ಲೆಯ ಎಲ್ಲ ತಾಲೂಕುಗಳ ಬರಪೀಡಿತ ಪ್ರದೇಶಗಳ ಪಟ್ಟಿ ಸೇರಿಸಲು ಮೇಲುನೋಟಕ್ಕೆ ಅರ್ಹವಾಗಿವೆ ಎನ್ನಲಾಗಿದೆ. ಕರ್ನಾಟಕ ರಾಜ್ಯ ಪ್ರಾಕೃತಿಕ ವಿಪತ್ತು ನಿರ್ವಹಣಾ ಮಂಡಳಿಯ(ಕೆಎಸ್ಎನ್ಡಿಎಂಸಿ) ನಿಯಮಾನುಸಾರ ಮಳೆ ಪ್ರಮಾಣ ಮತ್ತು ಬೆಳೆಗಳ ಸ್ಥಿತಿಗತಿಗಳನ್ನು ಪರಿಶೀಲಿಸಿ ನೀಡುವ ವರದಿ ಆಧರಿಸಿ ಬರಪೀಡಿತ ಪ್ರದೇಶಗಳ ಬಗ್ಗೆ ರಾಜ್ಯ ಸರಕಾರ ಅಧಿಸೂಚನೆ ಹೊರಡಿಸಲಿದೆ.
ನೀರು ಬಿಡಲಾಗಿದೆ, ಆದರೂ...
ರೈತರ ತೀವ್ರ ಒತ್ತಡದ ಪರಿಣಾಮ ಬೆಳೆದು ನಿಂತಿರುವ ಬೆಳೆಗಳ ರಕ್ಷಣೆ ಹಾಗೂ ಕುಡಿಯುವ ನೀರಿಗಾಗಿ ನಾಲೆಗಳಿಗೆ ನೀರು ಬಿಡಿಸಲಾಗುತ್ತದೆ. ಜು.16ರಿಂದ ಹರಿಯುತ್ತಿರುವ ನೀರು ಜು.25ರಂದು ಸ್ಥಗಿತಗೊಳ್ಳಲಿದೆ. ಈ ನೀರನ್ನು ಒಣಗುತ್ತಿರುವ ಕಬ್ಬು ಬೆಳೆಗಳ ರಕ್ಷಣೆಗೆ ಮಾತ್ರ ಬಳಸಿಕೊಳ್ಳಬೇಕು. ಇದರ ಹೊರತಾಗಿ ಯಾವುದೇ ಹೊಸ ಬೆಳೆಗಳನ್ನು ಹಾಕಬಾರದು. ನಿಯಮ ಮೀರಿ ಯಾವುದೇ ಹೊಸ ಬೆಳೆಗಳನ್ನು ಬೆಳೆದು ಹಾನಿಯಾದರೆ ಅದಕ್ಕೆ ನೀರಾವರಿ ಇಲಾಖೆ ಹೊಣೆಯಾಗುವುದಿಲ್ಲ ಎಂದು ಕೆಆರ್ಎಸ್(ಆಧುನೀಕರಣ ಮತ್ತು ಮಧ್ಯಮ) ನೀರಾವರಿ ಯೋಜನಾ ವೃತ್ತದ ಅಧೀಕ್ಷಕ ಎಂಜಿನಿಯರ್ ಬಿ.ಎನ್.ರಾಮಕೃಷ್ಣ ಎಚ್ಚರಿಸಿದ್ದಾರೆ.
ಒಂದ್ಕಡೆ ಮಳೆಯೂ ಇಲ್ಲ. ಮತ್ತೊಂದ್ಕಡೆ ನಾಲೆ ನೀರೂ ಇಲ್ಲ. ಈಗ ನಾಲೆಗೆ ನೀರ್ ಬುಟ್ಟಿದ್ರೂ ಕೂಡ ಅದನ್ನು ಇರೋ ಕಬ್ಬಿಗ್ ಮಾತ್ರ ಬಳಸ್ಕಬೇಕು. ಹೊಸ ಬೆಳೆ ಹಾಕ್ಬಾರ್ದು ಅಂತ ಅಧಿಕಾರಿಗಳು ಹೇಳವ್ರೆ. ಈಗಿನ್ ವಾತಾವರ್ಣ ನೋಡಿದ್ರೆ ಮಳೆ ಆಗೋದ್ ಕಷ್ಟ ಅನ್ನಿಸ್ತಿದೆ. ನಮ್ ಜಮೀನ್ ಸುಮ್ನೆ ತೆಕ್ಲು ಬಿದ್ದದೆ. ಇಂಗಾದ್ರೆ ನಾವ್ ಮುಂದಿನ್ ಜೀವ್ನಕ್ಕೆ ಏನ್ ಮಾಡ್ಬೇಕು?
- ಲಕ್ಷ್ಮಣಸ್ವಾಮಿ ಕೊಪ್ಪ, ಮದ್ದೂರು ತಾ.
ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಮಳೆ ಕಡಿಮೆಯಾಗಿದೆ. ಕೇಂದ್ರ ಸರಕಾರದ ನಿಯಮಾವಳಿಗಳ ಪ್ರಕಾರ ಕೆಎಸ್ಎನ್ಡಿಎಂಸಿ ನೀಡುವ ವರದಿ ಆಧರಿಸಿ ರಾಜ್ಯ ಸರಕಾರ ಬರಪೀಡಿತ ಪ್ರದೇಶಗಳನ್ನು ಘೋಷಿಸಲಿದೆ. ಜಿಲ್ಲೆಯಲ್ಲಿ ಮುಂದಿನ ದಿನಗಳಲ್ಲೂ ಮಳೆ ಬಾರದಿದ್ದರೆ ಕಂಟೆಂಜೆನ್ಸಿ ಪ್ಲಾನ್ ಪ್ರಕಾರ ಅಲ್ಪಾವಧಿ ತಳಿಯ ಬೆಳೆಗಳನ್ನು ಬೆಳೆಯುವಂತೆ ರೈತರಿಗೆ ಮಾಹಿತಿ ನೀಡಲಾಗುತ್ತದೆ.
- ಬಿ.ಎಸ್.ಚಂದ್ರಶೇಖರ್, ಜಂಟಿ ನಿರ್ದೇಶಕ, ಕೃಷಿ ಇಲಾಖೆ, ಮಂಡ್ಯ.
-ಹೊಸ ಬೆಳೆ ಬೆಳೆಯದಂತೆ ಅಧಿಕಾರಿಗಳ ಕಟ್ಟಾಜ್ಞೆ
ನವೀನ್ ಮಂಡ್ಯ
ಮಳೆಗಾಲ ಶುರುವಾದರೂ ಕೂಡ ಜಿಲ್ಲೆಯಲ್ಲಿ ನಿರೀಕ್ಷಿತ ಪ್ರಮಾಣದ ಮಳೆಯಾಗಿಲ್ಲ. ಜತೆಗೆ ವಾಡಿಕೆಗಿಂತಲೂ ಕಡಿಮೆ ಮಳೆಯಾಗಿದ್ದು, ಸರಾಸರಿ ಶೇ.14ರಷ್ಟು ಕಡಿಮೆ ಮಳೆ ಕೊರತೆ ಕಂಡು ಬಂದಿದೆ. ಈ ಮಧ್ಯೆ ಮುಂಗಾರು ಹಂಗಾಮಿನ ಬೆಳೆಗಳಿಗೆ ನೀರು ಕೊಡುವುದಿಲ್ಲ. ರೈತರು ಹೊಸ ಬೆಳೆ ಬೆಳೆಯದಂತೆ ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳು ಕಟ್ಟಾಜ್ಞೆ ಹೊರಡಿಸಿದ್ದಾರೆ. ಇದು ಜಿಲ್ಲೆಯು ವರ್ಷದ ಬಳಿಕ ಮತ್ತೆ ಬರಗಾಲಕ್ಕೆ ತುತ್ತಾಗುವ ಸೂಚನೆ ನೀಡಿದೆ.
ಮಳೆ ಕೊರತೆಯಿಂದ ಜಿಲ್ಲೆಯು ಮುಂಗಾರು ಹಂಗಾಮಿನ ಭತ್ತದ ಬಿತ್ತನೆ, ನಾಟಿ ಅವಧಿಯೂ ಮುಗಿಯುತ್ತಾ ಬಂದಿದೆ. ಹೀಗಾಗಿ ಇನ್ನೇನಿದ್ದರೂ ರಾಗಿ ಬಿತ್ತನೆಯಷ್ಟೇ ಬಾಕಿ ಉಳಿದಿದೆ. ಅದೂ ಕೂಡ ಮುಂದಿನ ದಿನಗಳಲ್ಲಿ ಮಳೆಯಾದರೆ ಮಾತ್ರ. ಇಂತಹ ಪರಿಸ್ಥಿತಿಯಲ್ಲಿ ರಾಜ್ಯದ 65 ತಾಲೂಕುಗಳನ್ನು ಬರಪೀಡಿತವೆಂದು ಘೋಷಿಸಿ 2 ವಾರಗಳಲ್ಲಿ ಅಧಿಸೂಚನೆ ಹೊರಡಿಸುವಂತೆ ರಾಜ್ಯ ಸರಕಾರಕ್ಕೆ ಹೈಕೋರ್ಟ್ ಆದೇಶ ನೀಡಿದೆ. ಬರ ಪಟ್ಟಿಯಲ್ಲಿ ಜಿಲ್ಲೆಯ ತಾಲೂಕುಗಳೂ ಸೇರ್ಪಡೆಯಾಗುವ ಸಾಧ್ಯತೆ ಇದೆ.
2018ರ ಡಿಸೆಂಬರ್ನಲ್ಲಿ ಆರು ತಿಂಗಳ ಅವಧಿಗಾಗಿ ರಾಜ್ಯದ 156 ತಾಲೂಕುಗಳನ್ನು ಬರಪೀಡಿತ ಪ್ರದೇಶಗಳನ್ನು ಘೋಷಿಸಿ ರಾಜ್ಯ ಸರಕಾರ ಅಧಿಸೂಚನೆ ಹೊರಡಿಸಿತ್ತು. ಅದರಂತೆ ಈ ಅವಧಿಯು 2019ರ ಜೂ.30ಕ್ಕೆ ಮುಕ್ತಾಯಗೊಂಡಿದೆ. ಈ ಹಿನ್ನೆಲೆಯಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಆಲಿಸಿದ ನ್ಯಾ.ಎ.ಎಸ್.ಓಕ್ ಮತ್ತು ನ್ಯಾ.ಎಚ್.ಟಿ.ನರೇಂದ್ರಪ್ರಸಾದ್ ಅವರಿದ್ದ ವಿಭಾಗೀಯ ನ್ಯಾಯಪೀಠವು ಸೋಮವಾರ ಮಧ್ಯಾಂತರ ಆದೇಶ ನೀಡಿ, ವಾಡಿಕೆಗಿಂತಲೂ ಅತಿ ಕಡಿಮೆ ಮಳೆಯಾಗಿರುವ 65 ತಾಲೂಕುಗಳನ್ನು ಬರಪೀಡಿತ ಪ್ರದೇಶವೆಂದು ಘೋಷಿಸಬೇಕು. ಆ ಎಲ್ಲ ತಾಲೂಕುಗಳಲ್ಲೂ ಒಂದು ಗೋಶಾಲೆ ಸ್ಥಾಪಿಸಬೇಕೆಂದು ನಿರ್ದೇಶನ ನೀಡಿದೆ.
ಹೈಕೋರ್ಟ್ನ ಈ ಆದೇಶ ಜಿಲ್ಲೆಯ ರೈತರ ನೆರವಿಗೆ ಬರುವ ಸಾಧ್ಯತೆಯಿದೆ. ಈ ವರ್ಷ ಮುಂಗಾರು ಹಂಗಾಮಿನಲ್ಲಿ ಜಿಲ್ಲೆಯ ಎಲ್ಲ ತಾಲೂಕುಗಳಲ್ಲೂ ವಾಡಿಕೆಗಿಂತಲೂ ಸರಾಸರಿ ಶೇ.14ರಷ್ಟು ಕಡಿಮೆ ಪ್ರಮಾಣದ ಮಳೆಯಾಗಿದೆ. ಏಪ್ರಿಲ್ 1ರಿಂದ ಜುಲೈ 22ರವರೆಗಿನ ವಾಡಿಕೆ ಮಳೆಯ ಪ್ರಮಾಣವನ್ನು ಅವಲೋಕಿಸಿದಾಗ ವಾಡಿಕೆಗಿಂತಲೂ ಕಡಿಮೆ ಮಳೆಯಾಗಿರುವುದು ಸ್ಪಷ್ಟವಾಗಿದೆ. ಅದರಂತೆ ಕೆ.ಆರ್.ಪೇಟೆ ತಾಲೂಕಿನಲ್ಲಿ ಶೇ.28, ಮಂಡ್ಯದಲ್ಲಿ ಶೇ.19, ಮದ್ದೂರು, ಮಳವಳ್ಳಿಯಲ್ಲಿ ಶೇ.17, ನಾಗಮಂಗಲದಲ್ಲಿ ಶೇ.13, ಶ್ರೀರಂಗಪಟ್ಟಣದಲ್ಲಿ ಶೇ.7 ಹಾಗೂ ಪಾಂಡವಪುರ ತಾಲೂಕಿನಲ್ಲಿ ಶೇ.3ರಷ್ಟು ಮಳೆ ಕೊರತೆಯಾಗಿದೆ.
2019ರ ಜನವರಿ 1ರಿಂದ ಜುಲೈ 22ರವರೆಗಿನ ವಾಡಿಕೆ ಮಳೆಯ ಪ್ರಮಾಣವನ್ನು ಲೆಕ್ಕ ಹಾಕಿದರೂ ಸಹ ಶೇ.14ರಷ್ಟು ಮಳೆ ಕೊರತೆ ಕಂಡು ಬರುತ್ತದೆ. ಅದರಂತೆ ಕೆ.ಆರ್.ಪೇಟೆ ತಾಲೂಕಿನಲ್ಲಿ ಶೇ.27, ಮಂಡ್ಯ, ಮದ್ದೂರಿನಲ್ಲಿ ಶೇ.21, ಮಳವಳ್ಳಿಯಲ್ಲಿ ಶೇ.20, ನಾಗಮಂಗಲದಲ್ಲಿ ಶೇ.14, ಶ್ರೀರಂಗಪಟ್ಟಣದಲ್ಲಿ ಶೇ.11 ಹಾಗೂ ಪಾಂಡವಪುರದಲ್ಲಿ ಶೇ.6ರಷ್ಟು ಮಳೆ ಕೊರತೆಯಾಗಿರುವುದನ್ನು ಕೃಷಿ ಇಲಾಖೆಯ ಅಂಕಿಅಂಶಗಳು ಸ್ಪಷ್ಟಪಡಿಸಿವೆ.
ಈ ಹಿನ್ನೆಲೆಯಲ್ಲಿ ಹೈಕೋರ್ಟ್ ಆದೇಶದಂತೆ ಜಿಲ್ಲೆಯ ಎಲ್ಲ ತಾಲೂಕುಗಳ ಬರಪೀಡಿತ ಪ್ರದೇಶಗಳ ಪಟ್ಟಿ ಸೇರಿಸಲು ಮೇಲುನೋಟಕ್ಕೆ ಅರ್ಹವಾಗಿವೆ ಎನ್ನಲಾಗಿದೆ. ಕರ್ನಾಟಕ ರಾಜ್ಯ ಪ್ರಾಕೃತಿಕ ವಿಪತ್ತು ನಿರ್ವಹಣಾ ಮಂಡಳಿಯ(ಕೆಎಸ್ಎನ್ಡಿಎಂಸಿ) ನಿಯಮಾನುಸಾರ ಮಳೆ ಪ್ರಮಾಣ ಮತ್ತು ಬೆಳೆಗಳ ಸ್ಥಿತಿಗತಿಗಳನ್ನು ಪರಿಶೀಲಿಸಿ ನೀಡುವ ವರದಿ ಆಧರಿಸಿ ಬರಪೀಡಿತ ಪ್ರದೇಶಗಳ ಬಗ್ಗೆ ರಾಜ್ಯ ಸರಕಾರ ಅಧಿಸೂಚನೆ ಹೊರಡಿಸಲಿದೆ.
ನೀರು ಬಿಡಲಾಗಿದೆ, ಆದರೂ...
ರೈತರ ತೀವ್ರ ಒತ್ತಡದ ಪರಿಣಾಮ ಬೆಳೆದು ನಿಂತಿರುವ ಬೆಳೆಗಳ ರಕ್ಷಣೆ ಹಾಗೂ ಕುಡಿಯುವ ನೀರಿಗಾಗಿ ನಾಲೆಗಳಿಗೆ ನೀರು ಬಿಡಿಸಲಾಗುತ್ತದೆ. ಜು.16ರಿಂದ ಹರಿಯುತ್ತಿರುವ ನೀರು ಜು.25ರಂದು ಸ್ಥಗಿತಗೊಳ್ಳಲಿದೆ. ಈ ನೀರನ್ನು ಒಣಗುತ್ತಿರುವ ಕಬ್ಬು ಬೆಳೆಗಳ ರಕ್ಷಣೆಗೆ ಮಾತ್ರ ಬಳಸಿಕೊಳ್ಳಬೇಕು. ಇದರ ಹೊರತಾಗಿ ಯಾವುದೇ ಹೊಸ ಬೆಳೆಗಳನ್ನು ಹಾಕಬಾರದು. ನಿಯಮ ಮೀರಿ ಯಾವುದೇ ಹೊಸ ಬೆಳೆಗಳನ್ನು ಬೆಳೆದು ಹಾನಿಯಾದರೆ ಅದಕ್ಕೆ ನೀರಾವರಿ ಇಲಾಖೆ ಹೊಣೆಯಾಗುವುದಿಲ್ಲ ಎಂದು ಕೆಆರ್ಎಸ್(ಆಧುನೀಕರಣ ಮತ್ತು ಮಧ್ಯಮ) ನೀರಾವರಿ ಯೋಜನಾ ವೃತ್ತದ ಅಧೀಕ್ಷಕ ಎಂಜಿನಿಯರ್ ಬಿ.ಎನ್.ರಾಮಕೃಷ್ಣ ಎಚ್ಚರಿಸಿದ್ದಾರೆ.
ಒಂದ್ಕಡೆ ಮಳೆಯೂ ಇಲ್ಲ. ಮತ್ತೊಂದ್ಕಡೆ ನಾಲೆ ನೀರೂ ಇಲ್ಲ. ಈಗ ನಾಲೆಗೆ ನೀರ್ ಬುಟ್ಟಿದ್ರೂ ಕೂಡ ಅದನ್ನು ಇರೋ ಕಬ್ಬಿಗ್ ಮಾತ್ರ ಬಳಸ್ಕಬೇಕು. ಹೊಸ ಬೆಳೆ ಹಾಕ್ಬಾರ್ದು ಅಂತ ಅಧಿಕಾರಿಗಳು ಹೇಳವ್ರೆ. ಈಗಿನ್ ವಾತಾವರ್ಣ ನೋಡಿದ್ರೆ ಮಳೆ ಆಗೋದ್ ಕಷ್ಟ ಅನ್ನಿಸ್ತಿದೆ. ನಮ್ ಜಮೀನ್ ಸುಮ್ನೆ ತೆಕ್ಲು ಬಿದ್ದದೆ. ಇಂಗಾದ್ರೆ ನಾವ್ ಮುಂದಿನ್ ಜೀವ್ನಕ್ಕೆ ಏನ್ ಮಾಡ್ಬೇಕು?
- ಲಕ್ಷ್ಮಣಸ್ವಾಮಿ ಕೊಪ್ಪ, ಮದ್ದೂರು ತಾ.
ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಮಳೆ ಕಡಿಮೆಯಾಗಿದೆ. ಕೇಂದ್ರ ಸರಕಾರದ ನಿಯಮಾವಳಿಗಳ ಪ್ರಕಾರ ಕೆಎಸ್ಎನ್ಡಿಎಂಸಿ ನೀಡುವ ವರದಿ ಆಧರಿಸಿ ರಾಜ್ಯ ಸರಕಾರ ಬರಪೀಡಿತ ಪ್ರದೇಶಗಳನ್ನು ಘೋಷಿಸಲಿದೆ. ಜಿಲ್ಲೆಯಲ್ಲಿ ಮುಂದಿನ ದಿನಗಳಲ್ಲೂ ಮಳೆ ಬಾರದಿದ್ದರೆ ಕಂಟೆಂಜೆನ್ಸಿ ಪ್ಲಾನ್ ಪ್ರಕಾರ ಅಲ್ಪಾವಧಿ ತಳಿಯ ಬೆಳೆಗಳನ್ನು ಬೆಳೆಯುವಂತೆ ರೈತರಿಗೆ ಮಾಹಿತಿ ನೀಡಲಾಗುತ್ತದೆ.
- ಬಿ.ಎಸ್.ಚಂದ್ರಶೇಖರ್, ಜಂಟಿ ನಿರ್ದೇಶಕ, ಕೃಷಿ ಇಲಾಖೆ, ಮಂಡ್ಯ.