ಆ್ಯಪ್ನಗರ

ನಾವಿಕನಿಲ್ಲದ ನಾಗಮಂಗಲ ಕ್ಷೇತ್ರ

ನಾವಿಕನಿಲ್ಲದ ದೋಣಿಯಂತಾಗಿರುವ ನಾಗಮಂಗಲ ವಿಧಾನಸಭೆ ಕ್ಷೇತ್ರ ವ್ಯಾಪ್ತಿಯ ಕಾಂಗ್ರೆಸ್ ದುಸ್ಥಿತಿ ಪಕ್ಷದ ಸ್ಥಳೀಯ ಕಾರ್ಯಕರ್ತರನ್ನು ಹೈರಾಣಾಗಿಸಿದೆ.

ವಿಕ ಸುದ್ದಿಲೋಕ 7 Jul 2017, 4:08 pm
ಶಿವನಂಜಯ್ಯ, ಮದ್ದೂರು: ನಾವಿಕನಿಲ್ಲದ ದೋಣಿಯಂತಾಗಿರುವ ನಾಗಮಂಗಲ ವಿಧಾನಸಭೆ ಕ್ಷೇತ್ರ ವ್ಯಾಪ್ತಿಯ ಕಾಂಗ್ರೆಸ್ ದುಸ್ಥಿತಿ ಪಕ್ಷದ ಸ್ಥಳೀಯ ಕಾರ್ಯಕರ್ತರನ್ನು ಹೈರಾಣಾಗಿಸಿದೆ.
Vijaya Karnataka Web non navigable nagamangala field
ನಾವಿಕನಿಲ್ಲದ ನಾಗಮಂಗಲ ಕ್ಷೇತ್ರ


ಒಂದು ಕಾಲದಲ್ಲಿ ‘ಕುಚುಕು’ಗಳಾಗಿದ್ದ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಮತ್ತು ಶಾಸಕ ಎನ್. ಚಲುವರಾಯಸ್ವಾಮಿ ನಡುವೆ ವಿರಸ ಆರಂಭಗೊಂಡ ದಿನದಿಂದಲೂ ನಾಗಮಂಗಲ ಕ್ಷೇತ್ರದ ರಾಜಕೀಯ ಚಿತ್ರಣ ಬದಲಾಗಿದ್ದು, ಕಾಂಗ್ರೆಸ್ ಹಿಡಿತದಲ್ಲಿದ್ದ ಕೊಪ್ಪ ಜಿ.ಪಂ.ಕ್ಷೇತ್ರದಲ್ಲೀಗ ಜೆಡಿಎಸ್ ಪ್ರಾಬಲ್ಯ ಮೆರೆದಿದೆ.

ರಾಜ್ಯ ಸಭೆ ಚುನಾವಣೆ ವೇಳೆ ಜೆಡಿಎಸ್ ಪಕ್ಷದ ಅಧಿಕೃತ ಅಭ್ಯರ್ಥಿ ಎಂ.ಎನ್. ಫಾರುಕ್ ಅವರಿಗೆ ಮತ ನೀಡದೆ ಅಡ್ಡ ಮತದಾನ ಮಾಡುವ ಮೂಲಕ ಪಕ್ಷದ್ರೋಹದ ಹಣೆಪಟ್ಟಿ ಕಟ್ಟಿಕೊಂಡ ಶಾಸಕ ಎನ್.ಚಲುವರಾಯಸ್ವಾಮಿ ಬಳಿಕ ಪಕ್ಷದಿಂದ ಅಮಾನತು ಶಿಕ್ಷೆಗೆ ಗುರಿಯಾಗಿದ್ದು ಇತಿಹಾಸ. ಹೇಗಾದರೂ ಮಾಡಿ ಕಾಂಗ್ರೆಸ್ ಅಭ್ಯರ್ಥಿಯನ್ನು ಗೆಲ್ಲಿಸಲು ಚೆಲುವರಾಯ ಸ್ವಾಮಿ ಸೇರಿದಂತೆ ಕೈ ಮುಖಂಡರ ಪ್ರಯತ್ನ ಸಫಲವಾಗದೆ ತೀವ್ರ ಮುಖಭಂಗವಾಗಿದೆ.

ರಾಜಕೀಯ ದಾಳ: ಕಾಂಗ್ರೆಸ್ ಪಕ್ಷದ ಬಾಗಿಲಿನಲ್ಲಿರುವ ಚಲುವರಾಯಸ್ವಾಮಿ ಅವರಿಗೆ ಸೆಡ್ಡು ಹೊಡೆಯುವ ಉದ್ದೇಶದಿಂದ ಕಾಂಗ್ರೆಸ್‌ನ ಮಾಜಿ ಶಾಸಕರಾದ ಕೆ.ಸುರೇಶ್‌ಗೌಡ ಮತ್ತು ಎಲ್.ಆರ್. ಶಿವರಾಮೇಗೌಡ ಅವರನ್ನು ಪಕ್ಷಕ್ಕೆ ಬರಮಾಡಿಕೊಂಡ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರು ತಮ್ಮ ರಾಜಕೀಯ ದಾಳವನ್ನು ಈಗಾಗಲೇ ಉರುಳಿಸಿ ತಮ್ಮ ಪ್ರಭುತ್ವ ಮೆರೆ ದಿದ್ದಾರೆಂಬುದು ರಾಜಕೀಯ ಬಲ್ಲವರ ಅನಿಸಿಕೆಯಾಗಿದೆ.

ನವಚೇತನ: ಕಾಂಗ್ರೆಸ್ ತೆಕ್ಕೆಯಲ್ಲಿದ್ದ ಕೊಪ್ಪ ಜಿ.ಪಂ ಕ್ಷೇತ್ರವನ್ನು ಮರು ಚುನಾವಣೆ ವೇಳೆ ತಮ್ಮ ಅಭ್ಯರ್ಥಿಯ ಗೆಲುವಿನ ಮೂಲಕ ಪಡೆದ ಹುಮ್ಮಸ್ಸಿನಲ್ಲಿರುವ ದಳಪತಿಗಳ ರಣೋತ್ಸಾಹ ಫಲನೀಡಿದ್ದು ಯುದ್ಧ ಗೆದ್ದ ಉತ್ಸಾಹ ಪಕ್ಷದ ಕಾರ್ಯಕರ್ತರಲ್ಲಿ ನವಚೇತನ ತುಂಬಿದ್ದು ಅಚ್ಚರಿಯೇನಲ್ಲ.

ಫಲ ನೀಡಿದ ಫಾರುಕ್‌ಭೇಟಿ: ಗೆದ್ದು ತೀರಲೇಬೇಕೆಂಬ ಹಠಕ್ಕೆ ಬಿದ್ದು ಛಲದಲ್ಲಿ ಅಭ್ಯರ್ಥಿಯೊಡಗೂಡಿ ಅಖಾಡಕ್ಕಿಳಿದ ದಳಪತಿಗಳ ದಂಡು ಸಂಸದ ಸಿ.ಎಸ್.ಪುಟ್ಟರಾಜು, ಶಾಸಕದ್ವಯರಾದ ಕೆ.ಟಿ.ಶ್ರೀಕಂಠೇ ಗೌಡ, ಡಿ.ಸಿ.ತಮ್ಮಣ್ಣ, ಅಪ್ಪಾಜೀಗೌಡ, ಮಾಜಿ ಶಾಸಕಾರದ ಎಲ್.ಆರ್.ಶಿವರಾಮೇಗೌಡ, ಕೆ.ಸುರೇಶ್‌ಗೌಡ ಒಟ್ಟುಗೂಡಿ ಕಾರ್ಯತಂತ್ರ ರೂಪಿಸಿದರ ಜತೆಗೆ ರಾಜ್ಯಸಭೆ ಪರಾಜಿತ ಅಭ್ಯರ್ಥಿ, ಜೆಡಿಎಸ್ ಪ್ರಧಾನ ಕಾರ್ಯದರ್ಶಿ ಫಾರುಕ್ ಕೊಪ್ಪಕ್ಕೆ ಭೇಟಿ ನೀಡಿ ಆರ್ಥಿಕ ಸಹಾಯ ನೀಡಿದ್ದರ ಫಲ ಪಕ್ಷಕ್ಕೆ ಧಕ್ಕಿದೆ.
ಮಂಡ್ಯ ಜಿಲ್ಲೆ ಸೇರಿದಂತೆ ನಾಗಮಂಗಲ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಸ್ಥಿತಿ ನಾವಿಕನಿಲ್ಲದ ದೋಣಿಯಂತಾಗಿದ್ದು ಸಧ್ಯಕ್ಕೆ ಎದುರಾಗಿರುವ ಸಮಸ್ಯೆ ಎಂಬ ವ್ಯಾಖ್ಯಾನ ಪಕ್ಷದ ಕಾರ್ಯಕರ್ತರಲ್ಲೇ ಕೇಳಿಬರುತ್ತಿದ್ದು ಕೊಪ್ಪ ಜಿ.ಪಂ. ಹಾಗೂ ಮಂಡ್ಯ ನಗರಸಭೆ ಸ್ಥಾನದ ಮರುಚುನಾವಣೆ ಫಲಿತಾಂಶವೇ ಇದನ್ನು ಸಾಕ್ಷಿಕರಿಸಿದಂತಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ