ತಂತ್ರಜ್ಞಾನದ ಬೆಳವಣಿಗೆಗೆ ದೊರೆಯದ ನಿರೀಕ್ಷಿತ ಪ್ರೋತ್ಸಾಹ
ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ ವಿಜ್ಞಾನಿ ಸಿಡಿ...
Vijaya Karnataka 31 Jan 2019, 5:00 am
ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ ವಿಜ್ಞಾನಿ ಸಿ.ಡಿ.ಪ್ರಸಾದ್ ವಿಷಾದ
ಮಂಡ್ಯ: ನೆರೆಹೊರೆ ರಾಷ್ಟ್ರಗಳು ಗಮನ ಸೆಳೆಯುವ ರೀತಿಯಲ್ಲಿ ತಂತ್ರಜ್ಞಾನ ಕ್ಷೇತ್ರದಲ್ಲಿ ದೇಶ ಪ್ರಗತಿ ಸಾಧಿಸಿದೆ ಎಂದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ ವಿಜ್ಞಾನಿ ಸಿ.ಡಿ.ಪ್ರಸಾದ್ ಮೆಚ್ಚುಗೆ ವ್ಯಕ್ತಪಡಿಸಿದರು.
ನಗರದ ಅಂಬೇಡ್ಕರ್ ಭವನದಲ್ಲಿ ವಿಜ್ಞಾನ ಮತ್ತು ಪರಿಸರ ಶಿಕ್ಷಣ ಅಕಾಡೆಮಿ, ಜಿಲ್ಲಾ ಪ್ರೌಢಶಾಲಾ ಮುಖ್ಯೋಪಾಧ್ಯಾಯರ ಸಂಘದ ಸಹಯೋಗದಲ್ಲಿ ಆಯೋಜಿಸಿದ್ದ 'ಬಾಹ್ಯಾಕಾಶ ತಂತ್ರಜ್ಞಾನ' ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಬಾಹ್ಯಾಕಾಶ ತಂತ್ರಜ್ಞಾನ ಕ್ಷೇತ್ರದಲ್ಲಿ ಭಾರತ ಸ್ವಾವಲಂಬನೆ ಸಾಧಿಸಿದೆ ಎಂದು ಹೇಳಿದರು.
ಪ್ರಸ್ತುತ ದಿನಗಳಲ್ಲಿ ಬಲಿಷ್ಠ ರಾಷ್ಟ್ರಗಳಿಗೆ ಭಾರತವೇ ನೆರವಾಗುವ ರೀತಿಯಲ್ಲಿ ಬೆಳೆದು ನಿಂತಿದೆ. ಬಾಹ್ಯಾಕಾಶ ತಂತ್ರಜ್ಞಾನದಿಂದಾಗಿ ಇಂಟರ್ನೆಟ್ ಕ್ಷೇತ್ರದಲ್ಲಿ ಸಾಕಷ್ಟು ಮುಂದುವರೆಯಲು ಸಾಧ್ಯವಾಗಿದೆ. ಅಲ್ಲದೆ, ಮೊಬೈಲ್, ವೈದ್ಯಕೀಯ, ರಕ್ಷಣಾ ಕ್ಷೇತ್ರಕ್ಕೆ ನೆರವಾಗಿರುವುದಲ್ಲದೆ, ಹವಾಮಾನ ಬೆಳವಣಿಗೆಗಳನ್ನು ಅರಿಯುವುದಕ್ಕೆ ಸಹಕಾರಿಯಾಗಿದೆ. ಹಿಂದೆ ಹವಾಮಾನ ಬೆಳವಣಿಗೆಗಳನ್ನು ಅರಿಯಲು ಪ್ರತಿ ವರ್ಷ ನಾವು ಹೊರ ದೇಶಗಳಿಗೆ ಹಣ ಕೊಟ್ಟು ಮಾಹಿತಿ ಪಡೆಯುತ್ತಿದ್ದೆವು. ಆದರೆ, ಈಗ ಹವಾಮಾನ ವಿದ್ಯಮಾನಗಳನ್ನು ನಾವೇ ಅರಿಯುವಷ್ಟು ಶಕ್ತರಾಗಿದ್ದೇವೆ ಎಂದು ಹೇಳಿದರು.
ಕಳೆದ ವರ್ಷ ಕೇರಳದಲ್ಲಿ ಮೇಘ ಸ್ಫೋಟದಿಂದ ಉಂಟಾದ ಪ್ರವಾಹದ ಬಗ್ಗೆ ವಿಜ್ಞಾನಿಗಳು ಮೊದಲೇ ಎಚ್ಚರಿಕೆ ನೀಡಿದ್ದರು. ಆದರೆ, ಅದರ ಬಗ್ಗೆ ನಿರ್ಲಕ್ಷ್ಯ ವಹಿಸಿದ ಪರಿಣಾಮ ನೂರಾರು ಹಳ್ಳಿಗಳು ಕೊಚ್ಚಿ ಹೋಗಿ, ಸಾವಿರಾರು ಸಾವು-ನೋವುಗಳು ಸಂಭವಿಸಿತು. ಅದರ ಹಿಂದಿನ ವರ್ಷ ಕೇರಳದಲ್ಲಿ ಶೇ.65ರಷ್ಟು ಮಾತ್ರ ಮಳೆಯಾಗಿತ್ತು. ಕಳೆದ ವರ್ಷ ಶೇ.92ರಷ್ಟು ಮಳೆ ಸುರಿದಿದೆ. ಇದರ ಜತೆಯಲ್ಲೇ ಮೇಘ ಸ್ಫೋಟ ಸಂಭಸಿದ್ದರಿಂದ ಕೇರಳ ರಾಜ್ಯದ ಅಣೆಕಟ್ಟುಗಳ ಎಲ್ಲ ಗೇಟುಗಳನ್ನು ಒಮ್ಮೆಲೆ ತೆರೆದಿದ್ದರಿಂದ ಸಾಕಷ್ಟು ಹಾನಿ ಉಂಟಾಯಿತು. ಇದಕ್ಕೆಲ್ಲಾ ನಮ್ಮ ವಿಜ್ಞಾನಿಗಳು ನೀಡಿದ ಮುನ್ನೆಚ್ಚರಿಕೆ ನಿರ್ಲಕ್ಷಿಸಿದ್ದೇ ಕಾರಣ ಎಂದು ಹೇಳಿದರು.
ವಿಜ್ಞಾನ ಕ್ಷೇತ್ರಕ್ಕೆ ಬಲಿಷ್ಠ ರಾಷ್ಟ್ರಗಳು ಖರ್ಚು ಮಾಡುವಷ್ಟು ಹಣವನ್ನು ಭಾರತ ವೆಚ್ಚ ಮಾಡುತ್ತಿಲ್ಲ. ತಂತ್ರಜ್ಞಾನದ ಬೆಳವಣಿಗೆಗೆ ನಿರೀಕ್ಷಿತ ಪ್ರೋತ್ಸಾಹವೂ ದೊರೆಯುತ್ತಿಲ್ಲ. ನಮ್ಮಲ್ಲಿ ಪ್ರತಿಭಾವಂತ ಪ್ರೋತ್ಸಾಹಲ್ಲವಿದೆ ವಿಜ್ಞಾನಿಗಳು ದೇಶಗಳಿಗೆ ತೆರಳುತ್ತಿದ್ದಾರೆ. ಆದರೆ, ದೇಶಗಳಲ್ಲಿ ನಮ್ಮ ವಿಜ್ಞಾನಿಗಳನ್ನು ಸೇವಕರಂತೆ ಮಾಡಿಕೊಳ್ಳುತ್ತಿದ್ದಾರೆ. ಅದಕ್ಕಾಗಿ ವಿಜ್ಞಾನಕ್ಕೆ ಹೆಚ್ಚಿನ ರೀತಿಯ ಪ್ರೋತ್ಸಾಹ ನೆರವು ನೀಡಿದರೆ ಪ್ರತಿಭಾ ಪಲಾಯನ ತಡೆಯುವುದರ ಜತೆಗೆ ವಿಜ್ಞಾನ ಕ್ಷೇತ್ರದ ಬೆಳವಣಿಗೆಗೂ ಹೆಚ್ಚಿನ ನೆರವಾಗಲಿದೆ ಎಂದು ಹೇಳಿದರು.
ಜಿಲ್ಲಾ ಪಂಚಾಯಿತಿ ಸಿಇಒ ಕೆ.ಯಾಲಕ್ಕಿಗೌಡ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಸುಮಾರು 143 ದೇಶಗಳಿಗೆ ಭಾರತದ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ(ಇಸ್ರೊ) ಮಾರ್ಗದರ್ಶನ ಮಾಡುತ್ತಿರುವುದು ದೇಶದ ಹೆಮ್ಮೆಯ ಸಂಗತಿ ಎಂದು ಬಣ್ಣಿಸಿದರು.
ವಿಜ್ಞಾನ ಮತ್ತು ಪರಿಸರ ಶಿಕ್ಷಣ ಅಕಾಡೆಮಿ ಅಧ್ಯಕ್ಷ ಡಾ.ಎಂ.ಜಯರಾಮು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಆರ್.ರಘುನಂದನ್, ಡಯಟ್ ಉಪನಿರ್ದೇಶಕ ಎಂ.ಶಿವಮಾದಪ್ಪ, ವಿಜ್ಞಾನ ಮತ್ತು ಪರಿಸರ ಶಿಕ್ಷಣ ಅಕಾಡೆಮಿಯ ಗೌರವಾಧ್ಯಕ್ಷ ಡಾ.ಬಿ.ಕೆ.ಸುರೇಶ್ ಹಾಗೂ ಜಿಲ್ಲಾ ಪ್ರೌಢಶಾಲಾ ಮುಖ್ಯಶಿಕ್ಷಕರ ಸಂಘದ ಅಧ್ಯಕ್ಷ ದೇವರಾಜು, ಕಾರ್ಯದರ್ಶಿ ಶಿವರಾಮು, ಬಿಇಒಗಳಾದ ಶಿವಪ್ಪ, ವೆಂಕಟೇಶಯ್ಯ, ಶಿಕ್ಷಕರಾದ ಲೋಕೇಶ್, ನಂಜರಾಜು, ಕೆ.ಪಿ.ಬಾಬು ನಿರ್ಮಿತಿ ಕೇಂದ್ರದ ಯೋಜನಾ ವ್ಯವಸ್ಥಾಪಕ ಹೆಚ್.ನರೇಶ್ ಹಾಜರಿದ್ದರು.
ಮಂಡ್ಯ: ನೆರೆಹೊರೆ ರಾಷ್ಟ್ರಗಳು ಗಮನ ಸೆಳೆಯುವ ರೀತಿಯಲ್ಲಿ ತಂತ್ರಜ್ಞಾನ ಕ್ಷೇತ್ರದಲ್ಲಿ ದೇಶ ಪ್ರಗತಿ ಸಾಧಿಸಿದೆ ಎಂದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ ವಿಜ್ಞಾನಿ ಸಿ.ಡಿ.ಪ್ರಸಾದ್ ಮೆಚ್ಚುಗೆ ವ್ಯಕ್ತಪಡಿಸಿದರು.
ನಗರದ ಅಂಬೇಡ್ಕರ್ ಭವನದಲ್ಲಿ ವಿಜ್ಞಾನ ಮತ್ತು ಪರಿಸರ ಶಿಕ್ಷಣ ಅಕಾಡೆಮಿ, ಜಿಲ್ಲಾ ಪ್ರೌಢಶಾಲಾ ಮುಖ್ಯೋಪಾಧ್ಯಾಯರ ಸಂಘದ ಸಹಯೋಗದಲ್ಲಿ ಆಯೋಜಿಸಿದ್ದ 'ಬಾಹ್ಯಾಕಾಶ ತಂತ್ರಜ್ಞಾನ' ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಬಾಹ್ಯಾಕಾಶ ತಂತ್ರಜ್ಞಾನ ಕ್ಷೇತ್ರದಲ್ಲಿ ಭಾರತ ಸ್ವಾವಲಂಬನೆ ಸಾಧಿಸಿದೆ ಎಂದು ಹೇಳಿದರು.
ಪ್ರಸ್ತುತ ದಿನಗಳಲ್ಲಿ ಬಲಿಷ್ಠ ರಾಷ್ಟ್ರಗಳಿಗೆ ಭಾರತವೇ ನೆರವಾಗುವ ರೀತಿಯಲ್ಲಿ ಬೆಳೆದು ನಿಂತಿದೆ. ಬಾಹ್ಯಾಕಾಶ ತಂತ್ರಜ್ಞಾನದಿಂದಾಗಿ ಇಂಟರ್ನೆಟ್ ಕ್ಷೇತ್ರದಲ್ಲಿ ಸಾಕಷ್ಟು ಮುಂದುವರೆಯಲು ಸಾಧ್ಯವಾಗಿದೆ. ಅಲ್ಲದೆ, ಮೊಬೈಲ್, ವೈದ್ಯಕೀಯ, ರಕ್ಷಣಾ ಕ್ಷೇತ್ರಕ್ಕೆ ನೆರವಾಗಿರುವುದಲ್ಲದೆ, ಹವಾಮಾನ ಬೆಳವಣಿಗೆಗಳನ್ನು ಅರಿಯುವುದಕ್ಕೆ ಸಹಕಾರಿಯಾಗಿದೆ. ಹಿಂದೆ ಹವಾಮಾನ ಬೆಳವಣಿಗೆಗಳನ್ನು ಅರಿಯಲು ಪ್ರತಿ ವರ್ಷ ನಾವು ಹೊರ ದೇಶಗಳಿಗೆ ಹಣ ಕೊಟ್ಟು ಮಾಹಿತಿ ಪಡೆಯುತ್ತಿದ್ದೆವು. ಆದರೆ, ಈಗ ಹವಾಮಾನ ವಿದ್ಯಮಾನಗಳನ್ನು ನಾವೇ ಅರಿಯುವಷ್ಟು ಶಕ್ತರಾಗಿದ್ದೇವೆ ಎಂದು ಹೇಳಿದರು.
ಕಳೆದ ವರ್ಷ ಕೇರಳದಲ್ಲಿ ಮೇಘ ಸ್ಫೋಟದಿಂದ ಉಂಟಾದ ಪ್ರವಾಹದ ಬಗ್ಗೆ ವಿಜ್ಞಾನಿಗಳು ಮೊದಲೇ ಎಚ್ಚರಿಕೆ ನೀಡಿದ್ದರು. ಆದರೆ, ಅದರ ಬಗ್ಗೆ ನಿರ್ಲಕ್ಷ್ಯ ವಹಿಸಿದ ಪರಿಣಾಮ ನೂರಾರು ಹಳ್ಳಿಗಳು ಕೊಚ್ಚಿ ಹೋಗಿ, ಸಾವಿರಾರು ಸಾವು-ನೋವುಗಳು ಸಂಭವಿಸಿತು. ಅದರ ಹಿಂದಿನ ವರ್ಷ ಕೇರಳದಲ್ಲಿ ಶೇ.65ರಷ್ಟು ಮಾತ್ರ ಮಳೆಯಾಗಿತ್ತು. ಕಳೆದ ವರ್ಷ ಶೇ.92ರಷ್ಟು ಮಳೆ ಸುರಿದಿದೆ. ಇದರ ಜತೆಯಲ್ಲೇ ಮೇಘ ಸ್ಫೋಟ ಸಂಭಸಿದ್ದರಿಂದ ಕೇರಳ ರಾಜ್ಯದ ಅಣೆಕಟ್ಟುಗಳ ಎಲ್ಲ ಗೇಟುಗಳನ್ನು ಒಮ್ಮೆಲೆ ತೆರೆದಿದ್ದರಿಂದ ಸಾಕಷ್ಟು ಹಾನಿ ಉಂಟಾಯಿತು. ಇದಕ್ಕೆಲ್ಲಾ ನಮ್ಮ ವಿಜ್ಞಾನಿಗಳು ನೀಡಿದ ಮುನ್ನೆಚ್ಚರಿಕೆ ನಿರ್ಲಕ್ಷಿಸಿದ್ದೇ ಕಾರಣ ಎಂದು ಹೇಳಿದರು.
ವಿಜ್ಞಾನ ಕ್ಷೇತ್ರಕ್ಕೆ ಬಲಿಷ್ಠ ರಾಷ್ಟ್ರಗಳು ಖರ್ಚು ಮಾಡುವಷ್ಟು ಹಣವನ್ನು ಭಾರತ ವೆಚ್ಚ ಮಾಡುತ್ತಿಲ್ಲ. ತಂತ್ರಜ್ಞಾನದ ಬೆಳವಣಿಗೆಗೆ ನಿರೀಕ್ಷಿತ ಪ್ರೋತ್ಸಾಹವೂ ದೊರೆಯುತ್ತಿಲ್ಲ. ನಮ್ಮಲ್ಲಿ ಪ್ರತಿಭಾವಂತ ಪ್ರೋತ್ಸಾಹಲ್ಲವಿದೆ ವಿಜ್ಞಾನಿಗಳು ದೇಶಗಳಿಗೆ ತೆರಳುತ್ತಿದ್ದಾರೆ. ಆದರೆ, ದೇಶಗಳಲ್ಲಿ ನಮ್ಮ ವಿಜ್ಞಾನಿಗಳನ್ನು ಸೇವಕರಂತೆ ಮಾಡಿಕೊಳ್ಳುತ್ತಿದ್ದಾರೆ. ಅದಕ್ಕಾಗಿ ವಿಜ್ಞಾನಕ್ಕೆ ಹೆಚ್ಚಿನ ರೀತಿಯ ಪ್ರೋತ್ಸಾಹ ನೆರವು ನೀಡಿದರೆ ಪ್ರತಿಭಾ ಪಲಾಯನ ತಡೆಯುವುದರ ಜತೆಗೆ ವಿಜ್ಞಾನ ಕ್ಷೇತ್ರದ ಬೆಳವಣಿಗೆಗೂ ಹೆಚ್ಚಿನ ನೆರವಾಗಲಿದೆ ಎಂದು ಹೇಳಿದರು.
ಜಿಲ್ಲಾ ಪಂಚಾಯಿತಿ ಸಿಇಒ ಕೆ.ಯಾಲಕ್ಕಿಗೌಡ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಸುಮಾರು 143 ದೇಶಗಳಿಗೆ ಭಾರತದ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ(ಇಸ್ರೊ) ಮಾರ್ಗದರ್ಶನ ಮಾಡುತ್ತಿರುವುದು ದೇಶದ ಹೆಮ್ಮೆಯ ಸಂಗತಿ ಎಂದು ಬಣ್ಣಿಸಿದರು.
ವಿಜ್ಞಾನ ಮತ್ತು ಪರಿಸರ ಶಿಕ್ಷಣ ಅಕಾಡೆಮಿ ಅಧ್ಯಕ್ಷ ಡಾ.ಎಂ.ಜಯರಾಮು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಆರ್.ರಘುನಂದನ್, ಡಯಟ್ ಉಪನಿರ್ದೇಶಕ ಎಂ.ಶಿವಮಾದಪ್ಪ, ವಿಜ್ಞಾನ ಮತ್ತು ಪರಿಸರ ಶಿಕ್ಷಣ ಅಕಾಡೆಮಿಯ ಗೌರವಾಧ್ಯಕ್ಷ ಡಾ.ಬಿ.ಕೆ.ಸುರೇಶ್ ಹಾಗೂ ಜಿಲ್ಲಾ ಪ್ರೌಢಶಾಲಾ ಮುಖ್ಯಶಿಕ್ಷಕರ ಸಂಘದ ಅಧ್ಯಕ್ಷ ದೇವರಾಜು, ಕಾರ್ಯದರ್ಶಿ ಶಿವರಾಮು, ಬಿಇಒಗಳಾದ ಶಿವಪ್ಪ, ವೆಂಕಟೇಶಯ್ಯ, ಶಿಕ್ಷಕರಾದ ಲೋಕೇಶ್, ನಂಜರಾಜು, ಕೆ.ಪಿ.ಬಾಬು ನಿರ್ಮಿತಿ ಕೇಂದ್ರದ ಯೋಜನಾ ವ್ಯವಸ್ಥಾಪಕ ಹೆಚ್.ನರೇಶ್ ಹಾಜರಿದ್ದರು.