ಆ್ಯಪ್ನಗರ

ಕಂಪ್ಯೂಟರ್‌ ಕೊಡುಗೆಯಾಗಿ ನೀಡಿದ ಹಳೆಯ ವಿದ್ಯಾರ್ಥಿಗಳು

ವಿಕ ಸುದ್ದಿಲೋಕ ಕೆಆರ್‌ಪೇಟೆ ತಾಲೂಕಿನ ಬೀರುವಳ್ಳಿ ಶ್ರೀ ಬಾಬು ರಾಜೇಂದ್ರಪ್ರಸಾದ್‌ ಸ್ಮಾರಕ ಅನುದಾನಿತ ಪ್ರೌಢಶಾಲೆಗೆ ಹಳೆಯ ವಿದ್ಯಾರ್ಥಿಗಳ ಸಂಘದ ಸದಸ್ಯರು 3ಲಕ್ಷ ರೂ...

Vijaya Karnataka 13 Jun 2018, 5:00 am
ಕೆ.ಆರ್‌.ಪೇಟೆ: ತಾಲೂಕಿನ ಬೀರುವಳ್ಳಿ ಶ್ರೀ ಬಾಬು ರಾಜೇಂದ್ರಪ್ರಸಾದ್‌ ಸ್ಮಾರಕ ಅನುದಾನಿತ ಪ್ರೌಢಶಾಲೆಗೆ ಹಳೆಯ ವಿದ್ಯಾರ್ಥಿಗಳ ಸಂಘದ ಸದಸ್ಯರು 3ಲಕ್ಷ ರೂ. ಮೌಲ್ಯದ ಕಂಪ್ಯೂಟರ್‌ ಹಾಗೂ ಲ್ಯಾಪ್‌ಟ್ಯಾಪ್‌ಗಳನ್ನು ಕೊಡುಗೆಯಾಗಿ ನೀಡಲಾಯಿತು.
Vijaya Karnataka Web older students provided a computer to school in kr pete taluk
ಕಂಪ್ಯೂಟರ್‌ ಕೊಡುಗೆಯಾಗಿ ನೀಡಿದ ಹಳೆಯ ವಿದ್ಯಾರ್ಥಿಗಳು


ಶಾಲೆಯ ಹಳೆಯ ವಿದ್ಯಾರ್ಥಿಗಳ ಸಂಘದ ಸಂಚಾಲಕ ಎಂ.ವಿ.ಹೇಮಂತ್‌ಕುಮಾರ್‌, ಎಸ್‌.ಡಿ.ರವಿಕುಮಾರ್‌, ಬಿ.ಡಿ.ವೆಂಕಟೇಶ್‌, ಯೋಗೇಶ್‌, ರವಿ, ದಿಲೀಪ್‌, ಯತೀಶ್‌ ಸೇರಿದಂತೆ ಹಲವರ ನೇತೃತ್ವದಲ್ಲಿ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಏಳು ಕಂಪ್ಯೂಟರ್‌ ಹಾಗೂಎರಡು ಲ್ಯಾಪ್‌ಟ್ಯಾಪ್‌ಗಳನ್ನು ಕೊಡುಗೆಯಾಗಿ ನೀಡುವ ಮೂಲಕ ಶೈಕ್ಷ ಣಿಕ ಅಭಿವೃದ್ಧಿಗೆ ನೆರವು ನೀಡಲಾಯಿತು.

ನಿವೃತ್ತ ಶಿಕ್ಷ ಕರಾದ ರಂಗರಾಮಯ್ಯ, ವೈ.ಕೆ.ಶ್ರೀಕಂಠಮೂರ್ತಿ, ಕೆ.ಆರ್‌.ಶ್ರೀನಿವಾಸನ್‌, ಸಂಸ್ಥೆ ಅಧ್ಯಕ್ಷ ಬಿ.ಎಚ್‌.ತಿಮ್ಮೇಗೌಡ, ಮುಖ್ಯ ಶಿಕ್ಷ ಕ ನಿಂಗನಾಯಕ್‌ ಸಮ್ಮುಖದಲ್ಲಿ ಕಂಪ್ಯೂಟರ್‌ಗಳನ್ನು ಹಸ್ತಾಂತರ ಮಾಡಲಾಯಿತು.

ತಮಗೆ ಉತ್ತಮ ಶಿಕ್ಷ ಣ ನೀಡಿ ಉನ್ನತ ಸ್ಥಾನಮಾನ ಪಡೆಯಲು ಕಾರಣವಾದ ಶಾಲೆ ಪರಿಸರ ಹಾಗೂ ಶಿಕ್ಷ ಕರನ್ನು ಹಳೆಯ ವಿದ್ಯಾರ್ಥಿಗಳು ಸ್ಮರಿಸಿದರು. ''ಈ ಶಾಲೆಯಲ್ಲಿ ಓದಿದವರು ತಹಸೀಲ್ದಾರ್‌, ಕೆ.ಎ.ಎಸ್‌ ಅಧಿಕಾರಿ, ಐಪಿಎಸ್‌ ಅಧಿಕಾರಿ, ಎಂಜಿನಿಯರ್‌ ಸೇರಿದಂತೆ ನಾನಾ ಉನ್ನತ ಹುದ್ದೆಗಳನ್ನು ಅಲಂಕರಿಸಿದ್ದಾರೆ. ಇದಕ್ಕೆ ಶಿಕ್ಷ ಕರು ಕಾರಣರಾಗಿದ್ದಾರೆ. ಹೀಗಾಗಿ ಶಾಲೆಗೆ ತಮ್ಮಿಂದ ಆಗುವ ಕೊಡುಗೆ ನೀಡಬೇಕು ಎಂಬ ಉದ್ದೇಶದಿಂದ ಕಂಪ್ಯೂಟರ್‌ಗಳನ್ನು ನೀಡಲಾಗುತ್ತಿದೆ'' ಎಂದು ಹಳೆಯ ವಿದ್ಯಾರ್ಥಿಗಳ ಸಂಘದ ಹೇಮಂತ್‌ಕುಮಾರ್‌ ಹೇಳಿದರು. ನಾವು ಓದುತ್ತಿದ್ದ ಅವಧಿಯಲ್ಲಿ ಶಾಲೆಯಲ್ಲಿ ಕಂಪ್ಯೂಟರ್‌ ಶಿಕ್ಷ ಣ ನೀಡಲು ಸೌಲಭ್ಯ ಇರಲಿಲ್ಲ. ಇದ್ದಿದ್ದರೆ ಇನ್ನೂ ಹೆಚ್ಚಿನ ವಿದ್ಯಾರ್ಹತೆ ಪಡೆದುಕೊಳ್ಳಲು ಸಾಧ್ಯವಾಗುತ್ತಿತ್ತು. ಹೀಗಾಗಿ ಇಂದಿನ ವಿದ್ಯಾರ್ಥಿಗಳಿಗೆ ಅನುಕೂಲವಾಗಲಿ ಎಂಬ ಕಾರಣಕ್ಕೆ ಕಂಪ್ಯೂಟರ್‌ಗಳನ್ನು ಹಳೆಯ ವಿದ್ಯಾರ್ಥಿಗಳ ಸಂಘದಿಂದ ನೀಡಿದ್ದೇವೆ. ಇದನ್ನು ವಿದ್ಯಾರ್ಥಿಗಳು ಸದುಪಯೋಗ ಮಾಡಿಕೊಳ್ಳಬೇಕು. ಈ ಮೂಲಕ ಶೈಕ್ಷಣಿಕ ಸಾಧನೆ ಮಾಡಬೇಕು ಎಂದು ಕಿವಿಮಾತು ಹೇಳಿದರು.

ಸಂಸ್ಥೆಯ ಅಧ್ಯಕ್ಷ ಬಿ.ಎಚ್‌.ತಿಮ್ಮೇಗೌಡ ಅಧ್ಯಕ್ಷ ತೆ ವಹಿಸಿದ್ದರು. ಮುಖ್ಯ ಶಿಕ್ಷ ಕ ನಿಂಗನಾಯಕ್‌, ತಾಲೂಕು ಪಂಚಾಯಿತಿ ಸದಸ್ಯ ನಿಂಗೇಗೌಡ, ಸಂಸ್ಥೆ ಕಾರ್ಯದರ್ಶಿ ರಮೇಶ್‌ಕುಮಾರ್‌, ಗ್ರಾಮ ಪಂಚಾಯಿತಿ ಸದಸ್ಯ ಬಿ.ಎಸ್‌.ಕುಮಾರ್‌, ಶಿಕ್ಷ ಕರಾದ ಕೆ.ಎನ್‌.ಅಣ್ಣಯ್ಯ, ಜಿ.ಸಿ.ಈಶ್ವರರೆಡ್ಡಿ, ರವೀಶ್‌, ಎಂ.ಆರ್‌.ನಾರಾಯಣಸ್ವಾಮಿ, ಎಸ್‌.ತಾರಾ, ಶಿವಕುಮಾರ್‌, ಪ್ರತಾಪ್‌, ಅನುಸೂಯ, ಎ.ಆರ್‌.ವೆಂಕಟೇಶ್‌, ಹಳೆಯ ವಿದ್ಯಾರ್ಥಿಗಳ ಸಂಘದ ಮಹಾದೇವ್‌, ಶಿವಶಂಕರ್‌, ರಂಗೇಗೌಡ, ಆನಂದ್‌, ಎನ್‌.ಪಿ.ರವಿ, ಸಂತೋಷ್‌, ವಿರೂಪಾಕ್ಷ , ಕುಮಾರ್‌ ಇತರರು ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ