ಆ್ಯಪ್ನಗರ

26ರಂದು ರಾಗಿಮುದ್ದೆ ತಿನ್ನುವ ಸ್ಪರ್ಧೆ

26ರಂದು ರಾಗಿಮುದ್ದೆ ತಿನ್ನುವ ಸ್ಪರ್ಧೆ ವಿಕ ಸುದ್ದಿಲೋಕ ಮಂಡ್ಯ ಬೆಂಗಳೂರಿನ ಜಯನಗರ 7ನೇ ಹಂತದ ಯಡಿಯೂರು ಕೆರೆ ಪಕ್ಕದಲ್ಲಿರುವ ಬಿಬಿಎಂಪಿ ಸಮುದಾಯ ಭವನದಲ್ಲಿ ಜೂ...

Vijaya Karnataka 5 Jun 2019, 5:00 am
ಮಂಡ್ಯ : ಬೆಂಗಳೂರಿನ ಜಯನಗರ 7ನೇ ಹಂತದ ಯಡಿಯೂರು ಕೆರೆ ಪಕ್ಕದಲ್ಲಿರುವ ಬಿಬಿಎಂಪಿ ಸಮುದಾಯ ಭವನದಲ್ಲಿ ಜೂ.26ರಂದು ನಾಟಿ ಕೋಳಿ ಸಾಂಬಾರಿನಲ್ಲಿ ರಾಗಿ ಮುದ್ದೆ ನುಂಗುವ ಸ್ಪರ್ಧೆ ಏರ್ಪಡಿಸಲಾಗಿದೆ ಎಂದು ದಶಮುಖ ಸಾಮಾಜಿಕ ಸೇವಾ ಟ್ರಸ್ಟ್‌ನ ಅಧ್ಯಕ್ಷ ಎಚ್‌.ಕೆ.ಬೊಮ್ಮೇಗೌಡ ತಿಳಿಸಿದರು.
Vijaya Karnataka Web on the 26th of the ragi mudee eating contest in mandya
26ರಂದು ರಾಗಿಮುದ್ದೆ ತಿನ್ನುವ ಸ್ಪರ್ಧೆ


''ಅಂದು ಬೆಳಗ್ಗೆ 11ಕ್ಕೆ ಕಾರ್ಯಕ್ರಮದಲ್ಲಿ ರಾಗಿ ಗಂಜಿ ಮತ್ತು ರಾಗಿ ಮುದ್ದೆ ಊಟ ಮಾಡುವುದರಿಂದ ಜನರಿಗೆ ಆರೋಗ್ಯದಲ್ಲಿ ಆಗುವ ಅನುಕೂಲಗಳ ಬಗ್ಗೆ ಖ್ಯಾತ ವೈದ್ಯರು ಹಾಗೂ ನುರಿತ ರಾಗಿ ತಜ್ಞರಿಂದ ವಿಶೇಷ ಉಪನ್ಯಾಸ ಕಾರ‍್ಯಕ್ರಮ ಆಯೋಜಿಸಲಾಗಿದೆ. ಮಧ್ಯಾಹ್ನ 12.30ಕ್ಕೆ ಸ್ಪರ್ಧೆ ಆರಂಭಗೊಳ್ಳಲಿದೆ,'' ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

''ಸ್ಪರ್ಧೆಯಲ್ಲಿ ವಿಜೇತರಾದವರಿಗೆ 15,000ರೂ.(ಪ್ರ), 10,000ರೂ.(ದ್ವಿ), 5000ರೂ.(ತೃ) ನಗದು ಬಹುಮಾನ ವಿತರಿಸಲಾಗುವುದು. ಎಲ್ಲ ಸ್ಪರ್ಧಿಗಳಿಗೆ ಅಭಿನಂದನಾ ಪತ್ರ ನೀಡಲಾಗುವುದು. ಆಸಕ್ತರು ಜೂ.20ರೊಳಗೆ ಹೆಸರು ನೋಂದಣಿ ಮಾಡಿಸಿಕೊಳ್ಳಬಹುದು. ವಿವರಕ್ಕೆ ಮೊ: 9060622286 ಸಂಪರ್ಕಿಸಬಹುದು,'' ಎಂದರು.

ಗೋಷ್ಠಿಯಲ್ಲಿ ಟ್ರಸ್ಟ್‌ನ ರವಿಶಂಕರ್‌, ಮಾದೇಗೌಡ, ಕುಮಾರ್‌, ನೆಲದನಿ ಟ್ರಸ್ಟ್‌ನ ಲಂಕೇಶ್‌, ಪ್ರತಾಪ್‌ ಹಾಜರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ